ತುಮಕೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ನೆಪದಲ್ಲಿ ವಸೂಲಿಗಿಳಿದ ಪೋಲೀಸರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ, ಪೂಜೆಯ ಹೆಸರಿನಲ್ಲಿ ಲಕ್ಷಗಟ್ಟಲೆ ವಸೂಲಿಗಿಳಿದ ಕೆಲವು ಪೋಲೀಸರ ವರ್ತನೆ ನೋಡಲಾಗುತ್ತಿಲ್ಲ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರದ ಡಿವೈಎಸ್ಪಿ ಮತ್ತು ಕ್ಯಾತ್ಸಂದ್ರ ವೃತ್ತ ನಿರೀಕ್ಷಕರು ಆಯುಧ ಪೂಜೆಯ ಹೆಸರಿನಲ್ಲಿ ಹಣ ವಸೂಲಿ ಮಾಡದಂತೆ ಲಿಖಿತವಾಗಿ ಮೆಮೋ ಹಾಕಿದ್ದರೂ ಸಹ ಕ್ಯಾತ್ಸಂದ್ರ ಕಾನೂನು ಸುವ್ಯವಸ್ಥೆಯ ಸಬ್ ಇನ್ಸ್ಪೆಕ್ಟರ್ ಚೇತನ್ ರವರು ಹಿರಿಯ ಅಧಿಕಾರಿಗಳ ಆ ದೇಶವನ್ನು ಧಿಕ್ಕರಿಸಿ ತಮ್ಮ ಠಾಣೆಯ ಎಎಸ್ಐ ಸೇರಿದಂತೆ ಒಟ್ಟು ನಾಲ್ವರು ಸಿಬ್ಬಂದಿ ಗಳಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡಿದ್ದಾರೆ, ಮತ್ತು ಮತ್ತೆ ವಸೂಲಿಯನ್ನು ಮುಂದು ವರಿಸುತ್ತಿದ್ದಾರೆ, ಅಕ್ರಮ ಅಡ್ಡೆಗಳು,ಧಂದೆಕೋರರು, ಮೈಮಾರಿ ಜೀವನ ನೆಡೆಸುವವರು. ಅಕ್ರಮ ಮಸಾಜ್ ಪಾರ್ಲರ್ಗಳು ಸೇರಿ ದಂತೆ ವಿವಿಧ ಕಂಪನಿಗಳು ಅಂಗಡಿಗಳು ವಾಹನ ಮಾಲಿಕರು ಕ್ರಷ್ಷರ್ ಮಾಲಿಕರು ಗ್ರಾನೈಟ್ ಮಾಲಿಕರು ಸೇರಿದಂತೆ ಅಕ್ರಮ ಮತ್ತು ಸಕ್ರಮವಾಗಿ ನೆಡೆಸುವ ಎಲ್ಲಾ ವ್ಯವಹಾರಸ್ಥರು ಜೂಜು ಅಡ್ಡೆಗಳು ಹಾಗೂ ಇನ್ನಿತರೆ ಕಡೆಗಳಲ್ಲಿ…
Author: News Desk Benkiyabale
ತುಮಕೂರು ೨೦೨೩ರ ಅಕ್ಟೋಬರ್ ಮಾಹೆಯ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಸಾಲ ಮತ್ತು ಸಬ್ಸಿಡಿ ಮಂಜೂರಾತಿ ಅರ್ಜಿಗಳನ್ನು ಕಡ್ಡಾಯವಾಗಿ ಇತ್ಯರ್ಥಪಡಿಸದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಎಸ್ಎಲ್ಬಿಸಿ(ರಾಜ್ಯ ಮಟ್ಟದ ಬ್ಯಾಂರ್ಸ್ಗಳ ಸಮಿತಿ) ಹಾಗೂ ಆರ್ಬಿಐಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಹೇಳಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನೆ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಯೋಜನೆಗಳು, ಕಳೆದ ತ್ರೈಮಾಸಿಕದÀಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಶೇಕಡಾವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು, ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎAವೈ), ಎನ್.ಎಲ್.ಎಂ, ಪಿಎಂಇಜಿಪಿ, ಉದ್ಯೋಗಿನಿ, ಪಿಎಂಎವೈ, ಎಪಿವೈ, ಪಿ.ಎಂ ಸ್ವನಿಧಿ ಮತ್ತು ವಸತಿ ಯೋಜನೆ ಮೊದಲಾದ ಯೋಜನೆಗಳಡಿ ವಿವಿಧ ಇಲಾಖೆಗಳಿಂದ ಬ್ಯಾಂಕುಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಸಮಾಜದ ಬಡ ಹಾಗೂ ಅಶಕ್ತ…
ತುಮಕೂರು ಸ್ಮಾರ್ಟ್ಸಿಟಿ ಯೋಜನೆಯಡಿ ನವೀ ಕೃತಗೊಂಡಿರುವ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆಯನ್ನು ವಹಿಸಿ ಕೊಳ್ಳುವಂತೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಇಂದಿಲ್ಲಿ ತಿಳಿಸಿದರು. ಸ್ಮಾರ್ಟ್ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ನವೀಕೃತ ಗೊಂಡಿರುವ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ನಿರ್ವಹಣೆ ಇಲ್ಲದೆ ಸೊರಗುವ ಹಂತಕ್ಕೆ ತಲುಪಿತ್ತು. ಕ್ರೀಡಾಂಗಣದ ನಿರ್ವಹಣೆಯ ಜವಾಬ್ದಾರಿ ಹೊರಲು ಯಾವ ಇಲಾಖೆಯು ಮುಂದೆ ಬರದ ಕಾರಣ ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು ಕ್ರೀಡಾಂಗಣ ಸಮರ್ಪಕ ನಿರ್ವಹಣೆಗೆ ಜಿಲ್ಲಾಡಳಿತ ಸೇರಿದಂತೆ ಶಾಸಕರು, ಸಚಿವರುಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು, ಕ್ರೀಡಾಂಗಣ ಹಾಗೂ ಜಿಮ್ ಕೇಂದ್ರ ನಿರ್ವಹಣೆ ಕುರಿತಂತೆ ಸೈಟ್ ಮ್ಯಾನೇಜರ್ ಗುರು ಅವರಿಂದ ಮಾಹಿತಿ ಪಡೆದು, ಶೀಘ್ರವೇ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.…
ತುಮಕೂರು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ನೀಡುವುದು ಭಾರತೀಯ ಸನಾತನ ಧರ್ಮದ ಪ್ರಮುಖ ದ್ಯೇಯ ಎಂದು ಪಾವಗಡದ ರಾಮಕೃಷ್ಣ ಆಶ್ರಮದ ಡಾ.ಜಪಾನಂದ ಜೀ ತಿಳಿಸಿದ್ದಾರೆ. ನಗರದ ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಅವರ ಸ್ಥಳೀಯ ಪ್ರದೇಶಾಭಿವೃದ್ದಿ ನಧಿಯಿಂದ ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭÀದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು,ಇಡೀ ದೇಶದಲ್ಲಿಯೇ ವಿಶ್ವವಿದ್ಯಾಲಯವೊಂದು ತನ್ನಲ್ಲಿ ಕಲಿಯುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ತುಮಕೂರು ವಿಶ್ವವಿದ್ಯಾಲಯ ಮಾತ್ರ. ಇತ್ತೀಚಗೆ ಲಂಡನ್ ವಿಶ್ವವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಭಾರತೀಯ ಮಕ್ಕಳಿಗಾಗಿ ಇಸ್ಕಾನ್ ಸಂಸ್ಥೆ ಮದ್ಯಾಹ್ನದ ಬಿಸಿಯೂಟ ಆರಂಭಿಸಿದ್ದು,ಇದು ಕೂಡ ಭಾರತೀಯ ಸನಾತನ ಧರ್ಮದ ದ್ಯೋತಕವಾಗಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಬರ ಆರಂಭಗೊAಡಿದೆ.ನಗರದ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಗ್ರಾಮೀಣ ಭಾಗದಿಂದ ಸಾವಿರಾರು ಮಕ್ಕಳು ಬರುತ್ತಾರೆ.ಅವರಿಗೂ ಸಹ ಸಾರ್ವಜನಿಕರು ಮತ್ತು ದಾನಿಗಳ ಸಹಾಯದಿಂದ ಮದ್ಯಾಹ್ನದ ಬಿಸಿಯೂಟ ನೀಡಲು ಅಗತ್ಯ ತಯಾರಿಯನ್ನು…
ತುಮಕೂರು ನಗರ ದಸರಾ ಸಮಿತಿವತಿಯಿಂದ ೩೩ನೇ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನಾಡಹಬ್ಬವಾಗಿರುವ ದಸರಾ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು,ಜಿಲ್ಲೆಯ ಸಮಸ್ತ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು. ಅಕ್ಟೋಬರ್ ೨೧ರ ಶನಿವಾರದಂದು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ೪ ಕಲ್ಯಾಣೋತ್ಸವದೊಂದಿಗೆ ೨೦೨೩ನೇ ಸಾಲಿನ ದಸರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದು,ಬೆAಗಳೂರಿನ ಶ್ರೀವಾನಿ ಫೌಂಡೇಶನ್ ವತಿಯಿಂದ ‘ಶ್ರೀ ಶ್ರೀನಿವಾಸ ಕಲಶೋತ್ಸವ ವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದ ಪೂರ್ವದಲ್ಲಿ ಕೊಸಗಿ ಗುರುರಾಜ್ ಮತ್ತು ತಂಡದವರಿAದ ನಾದೋಪಾಸನೆಯ ಅಂಗವಾಗಿ ಶ್ರೀವಾರಿ ಕೀರ್ತನೆಗಳನ್ನು ಸಮರ್ಪಿಸುತ್ತಿದ್ದಾರೆ. ಕಲ್ಯಾಣೋತ್ಸವದ ನಂತರ ಸ್ವಾಮಿಯ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ. ಅಕ್ಟೋಬರ್ ೨೨ರ ಭಾನುವಾರದಂದು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಗೆ ಯೋಗ ದಸರಾ ಕಾರ್ಯಕ್ರಮ ನಡೆಯಲಿದ್ದು, ಶ್ರೀವಚನಾನಂದ ಶ್ರೀಗಳು ನಡೆಸಿಕೊಡಲಿದ್ದಾರೆ. ಸಂಜೆ…
ತುಮಕೂರು: ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಉಜ್ವಲ ಭವಿಷ್ಯವಿದ್ದು,ಸೋಲು,ಗೆಲುವಿನ ಜೊತೆಗೆ ತಮ್ಮ ಕೆರಿಯರ್ ಗಟ್ಟಿ ಮಾಡಿಕೊಳ್ಳುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಕ್ರೀಡಾಪಟುಗಳಿಗೆ ಸಲಹೆ ನೀಡಿದ್ದಾರೆ. ತುಮಕೂರಿನ ವಿಜಯನಗರದಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ, ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ೧೪ ಮತ್ತು ೧೭ನೇ ವರ್ಷದೊಳಗಿನ ಶಾಲಾ ಮಕ್ಕಳ ಖೋ-ಖೋ ಕ್ರೀಡಾಕೂಟವನ್ನು ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರೂ ಶಕ್ತಿ ಮೀರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದರು. ಇAತಹ ಕ್ರೀಡಾಕೂಟವನ್ನು ಸರಕಾರ ನಡೆಸುವುದು ಕಷ್ಟ. ಹಾಗಾಗಿ ಶಿಕ್ಷಕರೇ ಕಟ್ಟಿದ ಸರ್ವೋದಯ ಶಿಕ್ಷಣ ಸಂಸ್ಥೆ, ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಿ ಅನುಭವ ಇರುವ ಕಾರಣವ,ಅವರ ಸಹಯೋಗ ಪಡೆಯಲಾಗಿದೆ. ರಾಷ್ಟçಮಟ್ಟದ ಕ್ರೀಡಾಕೂಟಗಳನ್ನು ನಡೆಸಿ ಅನುಭವ ಇರುವ ಸರ್ವೋದಯ ಶಿಕ್ಷಣ ಸಂಸ್ಥೆ,ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆ ನಮ್ಮದು.ಎಲ್ಲರಿಗೂ ಒಳ್ಳೆಯದಾಗಲಿ…
ಪಾವಗಡ ದೀಪದ ಕೆಳಗೆ ಕತ್ತಲು ಎಂಬ೦ತೆ ಪಾವಗಡ ರೈತರು ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಏಷ್ಯಾದ ೨ನೆ ಅತೀ ದೊಡ್ಡ ಸೋಲಾರ್ ಪಾರ್ಕ್ ಇದ್ದರೂ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಜೆಡಿಎಸ್ ಪಕ್ಷದಿಂದ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸೋಮವಾರ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಆರ್.ಸಿ.ಅಂಜಿನಪ್ಪ, ಪಾವಗಡ ತಾಲ್ಲೂಕಿನಲ್ಲಿ ೨೩೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಆದರೆ, ತಾಲ್ಲೂಕಿನ ಸಮರ್ಪಕವಾಗಿ ವಿದ್ಯುತ್ ಪೂರೈಸದ ಕಾರಣ ಬೆಸ್ಕಾಂ ಇಲಾಖೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಿದ್ದೇವೆ. ರೈತರಿಗೆ ಬೇಕಾಗುವ ಸುಮಾರು ೨೦೦ ಮೆಗಾ ವ್ಯಾಟ್ ವಿದ್ಯುತ್ ನ್ನು ಮೊದಲು ತಾಲ್ಲೂಕಿಗೆ ಬಳಸಿಕೊಂಡು ಉಳಿದ ವಿದ್ಯುತ್ ನ್ನು ಬೇರೆ ಕಡೆ ಪೂರೈಸಬೇಕೆಂದು ಒತ್ತಾಯಿಸಿದರು. ಬೆಳಗಿನ ಸಮಯದಲ್ಲಿ ವಿದ್ಯುತ್ ನೀಡಬೇಕೆಂದು ಈ ಹಿಂದೆ ೭ ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದರು ಈಗ ಬೆಳಿಗ್ಗೆ ೨ ತಾಸು ಮತ್ತು ಉಳಿಕೆ ವಿದ್ಯುತ್ನ್ನು…
ತುಮಕೂರು ಅಮೆರಿಕದ ಸ್ಟಾö್ಯನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ಎಚ್. ನಾಗಭೂಷಣ ಮತ್ತು ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಡಿ. ಈ ಹಿರಿಮೆಗೆ ಪಾತ್ರರಾಗಿರುವವರು. ಅಂತರಾಷ್ಟಿçÃಯವಾಗಿ ಪ್ರಕಟವಾದ ಸಂಶೋಧನ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತು ಎಚ್-ಇಂಡೆಕ್ಸ್ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ. ೨ ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟಾö್ಯನ್ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಸೇರಿರುವುದು ವಿಶೇಷವಾಗಿದೆ. ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾದ ಸ್ಟಾö್ಯನ್ಫೋರ್ಡ್ ವಿಶ್ವವಿದ್ಯಾನಿಲಯದ ಪಟ್ಟಿಯು ವಿಜ್ಞಾನಿಗಳನ್ನು ೨೨ ವೈಜ್ಞಾನಿಕ ಕ್ಷೇತ್ರಗಳು ಮತ್ತು ೧೭೪ ಉಪಕ್ಷೇತ್ರಗಳಾಗಿ ವರ್ಗೀಕರಿಸುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ತಮ್ಮ ಸಂಶೋಧನ ಸಾಧನೆಗಳ ಆಧಾರದಲ್ಲಿ ಇದರಲ್ಲಿ ಗುರುತಿಸಿಕೊಳ್ಳುತ್ತಾರೆ. ಇದರೊಂದಿಗೆ, ಎಡಿ ಸೈಂಟಿಫಿಕ್ ಇಂಡೆಕ್ಸ್ ಬಿಡುಗಡೆ ಮಾಡಿರುವ ವಿಜ್ಞಾನಿಗಳ ರ್ಯಾಂಕಿAಗ್ ಪಟ್ಟಿಯಲ್ಲಿಯೂ ತುಮಕೂರು ವಿವಿಯ ಹಲವು ಪ್ರಾಧ್ಯಾಪಕರು…
ಪಾವಗಡ ಪಟ್ಟಣದ ಹಳೇ ಸಂತೆ ಮೈಧಾನದಲ್ಲಿ ಅಕ್ರಮವಾಗಿ ಮೆಕಾನಿಕ್ ಷಾಪ್ ಕಳೆದ ೧ ತಿಂಗಳ ಹಿಂದೆ ತಲೆ ಎತ್ತಿದ್ದು ಅಕ್ರಮವಾಗಿ ಈ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾದ್ಯಮಗಳಲ್ಲಿ ವರದಿಯಾದರೂ ಸಹ ಈ ಬಗ್ಗೆ ಪುರಸಭೆ ಅಧಿಕಾರಿಗಳು ಈ ಶೇಡ್ ನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲಾ ಇದರಿಂದ ಪಟ್ಟಣದ ಪುರಜನರು ಪುರಸಭೆಯ ವಿರುದ್ದ ತಮ್ಮ ತೀವ್ರತರಹದ ಆಕ್ರೋಶ ಹೊರಹಾಕುತ್ತಿದ್ದಾರೆ. ಹಳೇ ಸಂತೆ ಮೈಧಾನ ಸುಮಾರು ಎರಡು ಎಕರೆ ಜಾಗ ಇದ್ದು, ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ೧೦ ವರ್ಷಗಳ ಹಿಂದೆ ಸ್ಥಳಾಂತರವಾಗಿದ್ದು, ಅಂದಿನಿAದ ಇಲ್ಲಿಯವರೆಗೂ ಈ ಸ್ಥಳ ಖಾಲಿ ಇದೆ, ಅದರೆ ಪುರಸಭೆ ಈ ಸ್ಥಳವನ್ನು ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದ್ದು, ಇದೆ ಸಂತೆ ಮೈಧಾನದಲ್ಲಿ ೧೦ ರಿಂದ ೨೦ ತರಕಾರಿ ಅಂಗಡಿಗಳನ್ನು ಪುರಸಭೆಯಿಂದ ಬಾಡಿಗೆಗೆ ನೀಡಲಾಗಿದೆ, ಉಳಿದ ಸ್ಥಳ ಖಾಲಿ ಇದ್ದು ಈ ಸ್ಥಳವನ್ನು ಸಾರ್ವಜನೀಕರು ಬೇಕಾಬಿಟ್ಟಿ ಉಪಯೋಗಿಸಿಕೊಳ್ಳುತ್ತಿದ್ದಾರೆ, ಸಂಜೆ ಹೊತ್ತು ಕುಡುಕರ…
ತುಮಕೂರು ಸಾಮಾಜಿಕ ಕಳಕಳಿಯ ಬದ್ಧತೆಯನ್ನು ಹೊತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ ಜನಾಗ್ರಹ ಚಳಿವಳಿ ಅ. ೭ ರಂದು ಪ್ರತಿಭಟನೆ ಮತ್ತು ಮೆರವಣಿಗೆಯನ್ನು ನಡೆಸಲಿದೆ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ಅಕ್ಟೋಬರ್ ೭ರಂದು ಬೆಳಗ್ಗೆ ೧೧:೦೦ ಟೌನ್ ಹಾಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಗಳ ವರೆಗೆ ಮೆರವಣಿಗೆಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಿಂದಿನ ೪೦% ಪರ್ಸೆಂಟ್ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತು. ಬದಲಾವಣೆ ಬಯಸಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದಾರೆ. ಬಹುಮತದಿಂದ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವ ಬರದಲ್ಲಿ ಬೆಲೆ ಏರಿಕೆ ಮತ್ತು ತೆರಿಗೆ ಹೊರೆ ಮಾಡಿ ಜನರಿಗೆ ಬೇಸರ ತಂದಿದೆ. ಸಿದ್ದರಾಮಯ್ಯ ಮತ್ತು ಡಿ ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ಆರು ಗ್ಯಾರಂಟಿಗಳನ್ನು ಕೊಟ್ಟಿದ್ದು ಅವುಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ತಾತ್ಕಾಲಿಕವಾದ…