ತುಮಕೂರು: ವಕೀಲರಾಗಿ ವೃತ್ತಿ ಆರಂಭಿಸಿ, ಕ್ಯಾತ್ಸಂದ್ರ್ ಟಿಎಪಿಸಿಎಂಎಸ್‌ನ ಸದಸ್ಯರಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಕೆ.ಎನ್.ರಾಜಣ್ಣ ಸಹಕಾರಿ ಸಚಿವರಾಗಿ ಅಜಾತಶತೃ ಎನಿಸಿಕೊಂಡಿದ್ದಾರೆ. ಇಂದು ನಡೆಯುವ ಅವರ ೭೫ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವಕೀಲರು ಸಮವಸ್ತçದಲ್ಲಿ ಭಾಗವಹಿಸುವಂತೆ ಸಮಾನ ಮನಸ್ಕ ವಕೀಲರ ಬಳಗದ ಪರವಾಗಿ ಹಿರಿಯ ವಕೀಲರಾದ ಪಾತಣ್ಣ ಮನವಿ ಮಾಡಿದ್ದಾರೆ.
ಇಂದು ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾನ ಮನಸ್ಕ ವಕೀಲ ಸಭೆಯಲ್ಲಿ ಮಾತನಾಡಿದ ಅವರು, ೧೯೫೧ರ ಏಪ್ರಿಲ್ ೧೩ ರಂದು ಜನಿಸಿದ ಕೆ.ಎನ್.ರಾಜಣ್ಣ,ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವದ ಗುಣ ಬೆಳೆಸಿಕೊಂಡವರು, ತುಳಿತಕ್ಕೆ ಒಳಗಾದ ಜನರ ಪರವಾಗಿ ದ್ವನಿ ಎತ್ತುವ ನಾಯಕರಲ್ಲಿ ಮೊದಲಿಗರು.ಕರೋನ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ವಕೀಲರಿಗೆ ಶೂನ್ಯ ಬಡ್ಡಿದರದಲ್ಲಿ ಡಿಸಿಸಿ ಬ್ಯಾಂಕಿನಿAದ ಸಾಲ ನೀಡಿ,ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದಾರೆ. ಹಾಗಾಗಿ ಅವರ ಕಾರ್ಯಕ್ರಮದಲ್ಲಿ ವಕೀಲರು ಸ್ವಯಂ ಪ್ರೇರಿತರಾಗಿ ವಕೀಲರ ಧೀರಿಸಿನಲ್ಲಿಯೇ ಪಾಲ್ಗೊಂಡರೆ ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ಕಟ್ಟಿದಂತಾಗುತ್ತದೆ ಎಂದರು.
ವಕೀಲರು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಜಿ.ಲಿಂಗರಾಜು ಮಾತನಾಡಿ,ಜನಪ್ರಿಯ ನಾಯಕರಾಗಿ ಕೆಎನ್‌ಆರ್ ಅವರ ೭೫ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸ್ವತಹಃ ಮುಖ್ಯಮಂತ್ರಿಗಳು,ಉಪಮುಖ್ಯಮAತ್ರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳು ಭಾಗಿಯಾಗುತ್ತಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಜಿ.ಪರಮೇಶ್ವರ್ ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್ ಒಳ್ಳೆಯ ಹೆಸರು ಮಾಡಿದ್ದಾರೆ.ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಬೇಕಾದ ವ್ಯಕ್ತಿಯಾಗಿದ್ದಾರೆ ವಕೀಲ ವಿವಿದೊದ್ದೇಶ ಪತ್ತಿನ ಸಹಕಾರ ಸಂಘಕ್ಕೂ ಕೆ,ಎನ್.ರಾಜಣ್ಣ ಅವರಿಂದ ಸಾಕಷ್ಟು ಅನುಕೂಲಗಳಾಗಿವೆ.ಕೆ.ಎನ್.ಆರ್.ಅವರಿಗೆ ಕೃತಜ್ಞತೆ ಸಲ್ಲಿಸಲು ಇದೊಂದು ಸುವರ್ಣ ಅವಕಾಶ.ಎಲ್ಲಾ ವಕೀಲರು ಪಾಲ್ಗೊಳ್ಳಬೇಕೆಂದರು.
ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಕ್ಯಾತ್ಸಂದ್ರ ವೆಂಕಟೇಶ್ ಮಾತನಾಡಿ,ಅತಿ ಹಿಂದುಳಿದ ಸಮಾಜಕ್ಕೆ ಸೇರಿದ ಕೆ.ಎನ್.ರಾಜಣ್ಣ ಅವರು ಶೋಷಿತರ ಪರವಾಗಿ ಸದಾ ತುಡಿಯುವ ಜೀವವಾಗಿದೆ.ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾತ್ಸಂದ್ರ ವಿ.ಎಸ್.ಎಸ್.ಎನ್.ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಇಂತಹ ವ್ಯಕ್ತಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿಗೌಡ ಮಾತನಾಡಿ, ಕೆ.ಎನ್.ರಾಜಣ್ಣ ಅವರು ಸಹಕಾರ ಕ್ಷೇತ್ರದ ದಿಗ್ಗಜರು.ಬಡವರ ಪರವಾಗಿ ಸದಾ ದ್ವನಿ ಎತ್ತುವ ಕೆ.ಎನ್.ಆರ್. ಜಿಲ್ಲೆಯ ಗಂಡೆದೆಯ ನಾಯಕ.ವಕೀಲರಾಗಿ, ಸಹಕಾರಿ ಕ್ಷೇತ್ರದ ನಾಯಕರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ.ಜಾತ್ಯಾತೀತ, ಪಕ್ಷಾತೀತ ನಾಯಕರಾಗಿರುವ ಸಹಕಾರಿ ಸಚಿವರ ಕಾರ್ಯಕ್ರಮದಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ವಕೀಲರ ವಿವಿದೊದ್ದೇಶ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶಕುಮಾರ್ ಮಾತನಾಡಿ, ೭೫ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಕೆ.ಎನ್.ರಾಜಣ್ಣ ಅವರಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿAದ ವಕೀಲರು ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡುವಂತೆ ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಲೋಕೇಶ್ ಮಾತನಾಡಿ,ತುಮಕೂರು ಜಿಲ್ಲೆಯ ಪ್ರಭಾವಿ ಸಚಿವರಲ್ಲಿ ಕೆ.ಎನ್.ರಾಜಣ್ಣ ಅವರು ಒಬ್ಬರು. ಎಲ್ಲ ವರ್ಗದ ಜನರಿಗೂ ಡಿಸಿಸಿ ಬ್ಯಾಂಕ್ ವತಿಯಿಂದ ತಮ್ಮ ಕೈಲಾದ ಸಹಾಯ ಸಹಕಾರ ನೀಡಿದ್ದಾರೆ.ಹಾಗಾಗಿ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ವಕೀಲರಾದ ರಂಗಧಾಮಯ್ಯ ಮಾತನಾಡಿ,ಕೆ.ಎನ್.ರಾಜಣ್ಣ ಅವರು ಸದನದ ಒಳಗೆ ಮತ್ತು ಹೊರಗೆ ಬಡವರ ಪರವಾಗಿ ದ್ವನಿ ಎತ್ತಿದವರು.ರಾಜ್ಯ ಸರಕಾರದ ಶೂಭಾಗ್ಯ ಮತ್ತು ಕ್ಷೀರ ಭಾಗ್ಯದ ಹಿಂದೆ ಕೆ.ಎನ್.ಆರ್.ಬೆಂಬಲವಿದೆ.ಬೆಳಕಿನ ಶಕ್ತಿ ಯೋಜನೆ, ಗೋಶಾಲೆಗಳಿಗೆ ಬರುವ ರೈತರಿಗೆ ಮಧ್ಯಾಹ್ನದ ಬಿಸಿಯೂಟ ನೀಡಿ ಡಿಸಿಸಿ ಬ್ಯಾಂಕ್ ರೈತರ ಪರ ಎಂಬುದನ್ನು ಸಾಭೀತು ಮಾಡಿದ್ದರು. ಸಾಮಾನ್ಯ ಕ್ಷೇತ್ರದಲ್ಲಿ ಎರಡು ಬಾರಿ ಗೆಲ್ಲುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಭೀತು ಮಾಡಿದ್ದಾರೆ.ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.
ವಕೀಲರಾದ ಕೆ.ಎನ್.ಸ್ವಾಮಿಗೌಡ ಮಾತನಾಡಿ,ದೇವೇಗೌಡ ರೀತಿ, ಕೆ.ಎನ್.ರಾಜಣ್ಣ ಯುವ ನಾಯಕರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ವಕೀಲರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ವಕೀಲ ಪತ್ತಿನ ಸಹಕಾರ ಸಂಘಕ್ಕೆ ನೇರವು ಸೇರಿದಂತೆ ಹಲವು ಪ್ರಯೋಜನಗಳನ್ನು ಮಾಡಿದ್ದಾರೆ. ಕೆ.ಎನ್.ರಾಜಣ್ಣ ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲು ನಾವೆಲ್ಲರೂ ಪಾಲ್ಗೊಳ್ಳಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಸುರೇಶ.ಎನ್., ಹೆಚ್.ಎಸ್.ಕುಮಾರಸ್ವಾಮಿ,ರಾಘವೇಂದ್ರ ಬಾಬು,ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)