Author: News Desk Benkiyabale

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ತೋಟಗಾರಿಗೆ ಇಲಾಖೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸದಿದ್ದರೆ ರೈತ ಸಂಘದಿAದ ತೋಟಗಾರಿಗೆ ಇಲಾಖೆ ಮುಂದೆ ಲೆಕ್ಕ ಕೊಡಿ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ. ಹುಳಿಯಾರು ರೈತ ಸಂಪರ್ಕ ಕೇಂದ್ರದ ಬಳಿ ತೋಟಗಾರಿಗೆ ಹಾಗೂ ಕೃಷಿ ಇಲಾಖೆಯ ವಿರುದ್ಧ ಹೊಸಹಳ್ಳಿ ಚಂದ್ರಣ್ಣ ಬಣ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತೆಂಗಿಗೆ ಬಿಳಿ ಕೀಟದ ಕಾಟ ಹೆಚ್ಚಾಗಿ ತೆಂಗನ್ನೇ ನಂಬಿದ್ದ ಸಾವಿರಾರು ರೈತರು ಚಿಂತಾಕ್ರಾAತರಾಗಿದ್ದಾರೆ. ಅಧಿಕಾರಿಗಳು ಕಛೇರಿ ಬಿಟ್ಟು ರೈತರ ತೋಟಗಳಿಗೆ ಭೇಟಿ ನೀಡಿ ಕೀಟ ಹತೋಟಿಗೆ ಮಾರ್ಗೋಪಾಯ ಹೇಳುತ್ತಿಲ್ಲ. ಸರ್ಕಾರಕ್ಕೆ ವರದಿ ಕಳುಹಿಸಿ ಉಚಿತ ಔಷಧಿ ಹಾಗೂ ಪರಿಹಾರ ತರಿಸುತ್ತಿಲ್ಲ ಎಂದು ಆರೋಪಿಸಿದರು. ಹೊಸದಾಗಿ ತೆಂಗು, ಬಾಳೆ, ಮಾವು, ಪಪ್ಪಾಯಿ ದಾಳಿಂಬೆ, ಗೋಡಂಬಿ, ಸೀಬೆ, ಹಲಸು, ಸಪೋಟ ಹೀಗೆ ತೋಟಗಾರಿಗೆ ಬೆಳೆಗಳ ನಾಟಿ ಮಾಡಲು ಸಹಾಯಧನ…

Read More

ತುಮಕೂರು: ಜಿಲ್ಲೆಯಲ್ಲಿ ಅನ್ನಭಾಗ್ಯ, ಶಕ್ತಿ, ಗೃಹಲಕ್ಷಿö್ಮ, ಯುವನಿಧಿ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಸಮ ರ್ಪಕ ಅನುಷ್ಠಾನಕ್ಕಾಗಿ ಸಂಪೂರ್ಣವಾಗಿ ಸಹಕರಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಪ್ರಗತಿ ಮಾಹಿತಿ ನೀಡಿದ ನಂತರ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳ ಪ್ರಗತಿಯ ಬಗ್ಗೆ ಪ್ರತಿ ತಿಂಗಳು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜು ಸಮಯದಲ್ಲಿ ಸೂಕ್ತ ಬಸ್ ಸೇವೆ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿನಿಯರು ಶಕ್ತಿ ಯೋಜನೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾ…

Read More

ತುಮಕೂರು: ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷರಾದ ಎ.ಮಹಾಲಿಂಗಯ್ಯ ನವರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂಕೂಡ ಕುರುಬಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರವನ್ನು ದಿನಾಂಕ:೧೫-೦೬-೨೦೨೫ರ ಭಾನುವಾರ ಬೆಳಿಗ್ಗೆ ೧೦-೦೦ ಗಂಟೆಗೆ ಸರಿಯಾಗಿ ತುಮಕೂರು ಶಿರಾಗೇಟ್ ಕಾಳಿದಾಸ ಜೂನಿಯರ್ ಕಾಲೇಜ್ ಆವರಣದ ಸಂಗೋಳ್ಳಿರಾಯಣ್ಣ ಸಭಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಅರ್ಜಿಸಲ್ಲಿಸಿರುವ ಕುರುಬ ಸಮಾಜದ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಬಂದುಸನ್ಮಾನ ಸ್ವೀಕರಿಸುವುದು. ಶೇ% ೮೫ರಷ್ಟು ಅಧಿಕ ಅಂಕ ಪಡೆದಿರುವವರಿಗೆ ಶಾಲು, ಹಾರ, ನೆನಪಿನಕಾಣಿಕೆ, ಅಭಿನಂದನಾಪತ್ರ, ಫಲತಾಂಬೂಲ, ಗೌರವಧನ ನೀಡಿ ಪ್ರೀತಿಪೂರ್ವಕವಾಗಿ ಗೌರವಿಸಲಾಗುವುದು.(ವಿದ್ಯಾರ್ಥಿಗಳು ಬಾರದಿದಲ್ಲಿ ಆ ವಿದ್ಯಾರ್ಥಿಯ ಪೋಷಕರಿಗೆ ಕಡ್ಡಾಯವಾಗಿ ಗೌರವಿಸುವುದಿಲ್ಲ) ಈ ಸಮಾರಂಭದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಪರಮಪೂಜ್ಯ ಶ್ರೀ.ಶ್ರೀ.ಈಶ್ವರಾನಂದಪುರಿ ಮಾಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಡಿ.ಎಂ ಪಾಳ್ಯದ ಶ್ರೀ.ರೇವಣಸಿದ್ದೇಶ್ವರ ಗುರುಮಠದ ಶ್ರೀ ಬಿಂದುಶೇಖರ್‌ಒಡೆಯರ್,ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದÀ ಶಾಸಕ ಸಿ.ಬಿ ಸುರೇಶ್‌ಬಾಬು ಕಾರ್ಯಕ್ರಮ ಉದ್ಘಾಟಿಸಿದರೆ, ಭಾರತ ಸೇವಾ ರತ್ನ ರಾಷ್ಟçಪ್ರಶಸ್ತಿಪುರಸ್ಕೃತರು ಹಾಗೂ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ…

Read More

ಹುಳಿಯಾರು: ಹುಳಿಯಾರು ಸಮೀಪದ ಹಂದನಕೆರೆ ಹೋಬಳಿ ರಂಗಾಪುರ ಗ್ರಾಮದಲ್ಲಿ ಚಿಕ್ಕನಾಯಕನಹಳ್ಳಿಯ ನವೋದಯ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಲ್ಲಿ ಚಿಕ್ಕನಾಯಕನಹಳ್ಳಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಆರೋಗ್ಯ ಶಿಬಿರ ಮತ್ತು ಕರುಣಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಂಗಾಪುರ ಗ್ರಾಮದಲ್ಲಿ ಬೆಳಗ್ಗೆ ೮ ಗಂಟೆಗೆ ಕರುಗಳಿಗೊಸ್ಕರ “ಕರುಣಾ” ಎಂಬ ಕಾರ್ಯ ಕ್ರಮವನ್ನು ನಡೆಸಿಕೊಡಲಾಯಿತು. ಗ್ರಾಮದ ೨೫ ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಯಿತು. ಜಂತುನಾಶಕ ಔಷಧಿಯನ್ನು ಕುಡಿಸಿ, ಆರೋಗ್ಯ ಬೆಳವಣಿಗೆಗೆ ಪೂರಕವಾದ ಟಾನಿಕ್ ಚುಚ್ಚುಮದ್ದುಗಳನ್ನು ನೀಡಲಾಯಿತು. ೧೦೦ ರಾಸುಗಳಿಗೆ ಜಂತು ನಾಶಕ ಔಷಧಿ ಕುಡಿಸಿ ಆರೋಗ್ಯ ವರ್ಧನೆಗೆ ಚುಚ್ಚುಮದ್ದು ಮತ್ತು ಲವಣ /ಖನಿಜ ಮಿಶ್ರಣ ಪಾಕೇಟ್‌ಗಳನ್ನು ನೀಡಲಾಯಿತು. ಅಲ್ಲದೆ ಪ್ರತಿ ಕರುವಿಗೆ ಬೆಳವಣಿಗೆಗೆ ಪೂರಕ ವಾದ ಮಾತ್ರೆಗಳು ಮತ್ತು ಟಾನಿಕ್‌ಗಳನ್ನು ನೀಡಲಾಯಿತು. ಕರುಗಳ ಲಾಲನೆ ಪಾಲನೆ, ಒಂದು ವರ್ಷದ ಒಳಗೆ ಕರು ಬೆದೆಗೆ ಬರುವಂತೆ ಮಾಡಲು ಅಳವಡಿಸಬೇಕಾದ ಅಂಶಗಳು, ಕೃತಕ ಗರ್ಭಧಾರಣೆ ಮಹತ್ವ, ಗರ್ಭಧರಿಸಿದ ರಾಸುಗಳ ಪಾಲನೆ, ಮೇವಿನ ಬೆಳೆಗಳ ಮಹತ್ವ,…

Read More

ತುಮಕೂರು: ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾನವೀಯತೆ ಮೆರೆದಿದ್ದಾರೆ. ತಾನೇ ಕೈಯಾರೇ ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿದ ಶಾಸಕ ರಂಗನಾಥ್ ಮಾನವೀಯತೆ ಮೆರೆದರು. ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಚಿಕಿತ್ಸೆ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರುವೇಕೆರೆ ತಾಲೂಕಿನ ಬಾಣಸಂದ್ರ ಗ್ರಾಮದ ಪ್ರಭಾಕರ್ ಎಂಬ ವ್ಯಕ್ತಿ ಬುದ್ಧಿಮಾಂದ್ಯನಾಗಿದ್ದು, ಹಲವು ದಿನಗಳಿಂದ ಕುಣಿಗಲ್ ತಾಲ್ಲೂಕು ಆಸ್ಪತ್ರೆ ಬಳಿ ಅನಾರೋಗ್ಯಕ್ಕೆ ಒಳಗಾಗಿ ಮಲಗುತ್ತಿದ್ದ. ಆಸ್ಪತ್ರೆಗೆ ಭೇಟಿ ಕೊಟ್ಟ ವೇಳೆ ಈತನನ್ನ ಕಂಡ ಕುಣಿಗಲ್ ಶಾಸಕ ರಂಗನಾಥ್. ಕೂಡಲೇ ಆತನ ಬಳಿ ಹೋಗಿ ಆತನಿಗೆ ಸ್ನಾನ ಮಾಡಿಸಿ, ಹೊಸ ಪ್ಯಾಂಟ್ ಶರ್ಟ್ ತೊಡಿಸಿ, ಚಿಕಿತ್ಸೆ ಕೊಡಿಸಿದರು. ಬಳಿಕ ಆತನನ್ನ ಅನಾಥಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದರು. ಶಾಸಕ ಡಾ.ರಂಗನಾಥ್ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Read More

ತುಮಕೂರು: ಹೇಮಾವತಿ ನೀರಾವರಿ ಹೋರಾಟದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾ ಗಿದ್ದ ರೈತರನ್ನು ಬಿಡುಗಡೆಗೊಳಿಸಿ ಸ್ವಾಗತಿಸಿ ಕರೆ ತಂದ ಶಾಸಕ ಬಿ. ಸುರೇಶ್ ಗೌಡ. ಭೋವಿಪಾಳ್ಯ ಜೈಲುಖಾನೆ ಬಳಿ ಶಾಸಕರಾದ ಬಿ. ಸುರೇಶಗೌಡರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕ ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ರೈತರು ಸೇರಿ ಬಂದನಕ್ಕೆ ಒಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚೇತನ್, ರೈತ ಆನಂದ್, ಗುಬ್ಬಿಯ ಚೇತನ್ ಹಾಗೂ ಲೋಕೇಶ್ ಅವರನ್ನು ಬಿಡುಗಡೆಗೊಳಿಸಿ ಜೈಲಿನಿಂದ ಕರೆ ತಂದರು. ಈ ಸಂದರ್ಭದಲ್ಲಿ ತುಮಕೂರು ಬಂದಿಖಾನೆ ಗೇಟ್ ಬಳಿ ಮಾತನಾಡಿದ ಶಾಸಕ ಬಿ ಸುರೇಶ್ ಗೌಡ, ಬಂಧನಕ್ಕೆ ಒಳಗಾಗಿದ್ದ ನಾಲ್ಕು ಜನರು ಯಾವುದೇ ಆರೋಪಕ್ಕೆ ಒಳಗಾಗಿ ಬಂಧನಕ್ಕೆ ಒಳಗಾಗಿದ್ದು ಅಲ್ಲ. ಜಿಲ್ಲೆಯ ಅಸ್ತಿತ್ವಕ್ಕಾಗಿ ಹಾಗೂ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಜಿಲ್ಲೆಯ ರೈತರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಬಂಧನಕ್ಕೆ ಒಳಗಾಗಿದ್ದ ತಾವೆಲ್ಲರೂ ಅಭಿನಂದನಾರ್ಹರು. ತಾವ್ಯಾರು…

Read More

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ‘ಇಂಪ್ರೆಶನ್-೨೦೨೫’ ರಾಜ್ಯಮಟ್ಟದ ಮಾಧ್ಯಮ ಹಬ್ಬವನ್ನು ಜೂನ್ ೨೬ ಹಾಗೂ ೨೭ರಂದು ಹಮ್ಮಿಕೊಳ್ಳಲಾಗಿದೆ. ಮಾಧ್ಯಮ ಹಬ್ಬದ ಭಿತ್ತಿಪತ್ರವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜûಮ್ ಜûಮ್ ಬುಧವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕೌಶಲಗಳೇ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲವಿದು. ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬವು ಯುವಜನರನ್ನು ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವಲ್ಲಿ ಉತ್ತಮ ವೇದಿಕೆಯಾಗಲಿ ಎಂದು ಹಾರೈಸಿದರು. ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ., ಮಾಧ್ಯಮ ಹಬ್ಬವು ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನಕ್ಕೆ ಉತ್ತಮ ಅವಕಾಶ ಒದಗಿಸಲಿದೆ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕಲೆ, ವಾಣಿಜ್ಯ, ವಿಜ್ಞಾನ ವಿಷಯಗಳನ್ನೊಳಗೊಂಡAತೆ ಎಲ್ಲ ಹಿನ್ನೆಲೆಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದರು. ಮಾಧ್ಯಮ…

Read More

ಕೊರಟಗೆರೆ: ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ಜಿಲ್ಲೆಯ ಹತ್ತು ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಬುಧವಾರ ದಿಢೀರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ತುಮಕೂರು, ಸೇರಿದಂತೆ ಹತ್ತು ತಾಲ್ಲೂಕಿನ ತಹ ಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಶಿರಸ್ತೆ ದಾರ್, ಕೇಸ್ ವರ್ಕರ್‌ಗಳ ನಿದ್ದೆ ಕೆಡಿಸಿದ್ದಾರೆ. ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ: ಲೋಕಾ ಯುಕ್ತ ನ್ಯಾಯಾಧೀಶರ ಆದೇಶದನ್ವಯ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹತ್ತು ತಂಡಗಳನ್ನು ರೂಪಿಸಿಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಂದಾಯ ಇಲಾಖೆ ಏಕಾಕಾಲದ ಬೆ.೧೦:೪೫ಕ್ಕೆ ಧೀಡಿರ್ ಭೇಟಿ ನೀಡಿದ್ದು, ಮೇಲೆ ಏಕಕಾಲದ ದಿಡೀರ್ ಭೇಟಿ ನೀಡಿದ್ದು, ಬೆಳಗ್ಗೆ ೧೦:೪೫ಕ್ಕೆ ಲೋಕಾಯುಕ್ತ ಪೋಲಿಸರು ಕೊರಟಗೆರೆಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿದ ವೇಳೆ ಕಚೇರಿ ಶೌಚಾಲಯ, ಮೀಟಿಂಗ್ ಹಾಲ್, ಸಕಾಲ ಕೇಂದ್ರ, ಪಹಣಿ ವಿತರಣಾ ಕೇಂದ್ರ, ಭೂಮಿ…

Read More

ತುಮಕೂರು: ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು. ಈಲ್ಲೆಯಲ್ಲಿ ೧೦ ಸಾವಿರ ಗಿಡಗಳನ್ನು ನೆಡಬೇಕೆಂಬ ಆದೇಶವಿದ್ದು, ಎಲ್ಲಾತಾಲೂಕು ನ್ಯಾಯಾಲಯಗಳ ಸಹಕಾರದೊಂದಿಗೆ ಈ ಗುರಿಯನ್ನುತಲುಪಲು ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದೆ ಎಂದುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ. ನಗರದ ಸಪ್ತಗಿರಿ ಬಡಾವಣೆಯಗಾರೆನರಸಯ್ಯಕಟ್ಟೆ ಸಮೀಪ ಮಹಾನಗರಪಾಲಿಕೆವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದಗಿಡ ನೆಡುವಕಾರ್ಯಕ್ರಮಕ್ಕೆ ಪರಿಸರ ದಿನಾಚರಣೆಯ ಪ್ರತಿಜ್ಞಾವಧಿ ಭೋಧಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದಅವರು, ಜೂನ್ ೦೫ ರಿಂದಲೇ ಈ ಗುರಿತಲುಪಲುಕಾರ್ಯೋನ್ಮುಖವಾಗಿದ್ದೇವೆಎಂದರು. ಅಭಿವೃದ್ದಿ ಹೆಸರಿನಲ್ಲಿಕಾಂಕ್ರಿಟ್ ಕಾಡುಗಳು ನಿರ್ಮಾಣವಾಗಿ, ಹಸಿರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನುಕಾಣಬಹುದು.ಇದರಿAದ ಮುಕ್ತಿ ಹೊಂದಲುಇರುವ ಏಕೈಕ ಮಾರ್ಗವೆಂದರೆ ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸುವುದು.ಹಾಗಾಗಿ ಅನಿವಾರ್ಯವಾಗಿಒಂದು ಮರಕಡಿದರೆ,ಅದಕ್ಕೆ ಬದಲಾಗಿ ಮತ್ತೊಂದುಗಿಡವನ್ನು ನೆಟ್ಟು ಮರವಾಗಿ ಬೆಳೆಸುವ ಗುರುತರಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಒಂದುಗಿಡ ಮರವಾಗಲು ಹತ್ತಾರು ವರ್ಷಗಳು ಬೇಕು.ಇದನ್ನು ನಾವೆಲ್ಲರೂ ಮನಗಾಣಬೇಕಿದೆ. ಈ ವರ್ಷದ ಪರಿಸರ ದಿನಾಚರಣೆಯ ಮುಖ್ಯಉದ್ದೇಶ ಪ್ಲಾಸ್ಟಿಕ್ ಮುಕ್ತ ಪರಿಸರ.ಪ್ಲಾಸ್ಟಿಕ್…

Read More

ತುರುವೇಕೆರೆ: ಪಟ್ಟಣಕ್ಕೆ ರೈಲ್ವೆ ಯೋಜನೆ ತರುವಂತಹ ಪ್ರಯತ್ನ ಮಾಡುವುದಾಗಿ ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಪಟ್ಟಣದ ಚೌದ್ರಿ ಕನ್ವೆಂಷನ್ ಆವರಣದಲ್ಲಿ ಜೆಡಿಎಸ್ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ೭೫ ನೇ ವರ್ಷದ ಹುಟ್ಟು ಹಬ್ಬ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸ ಸೌಲಬ್ಯ ಕಾರ್ಯಕ್ರದಲ್ಲಿ ಭಾಗವಹಿಸಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿದ ತಾಲೂಕಿನ ಜನತೆಯ ಋಣ ತಿರಿಸಬೇಕು. ಅದರಿಂದ ಪಟ್ಟಣಕ್ಕೆ ರೈಲ್ವೆ ಯೋಜನೆ ತರಲು ಚಂತಿಸಿದ್ದೇನೆ ರೈತರು ಭೂಮಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಂತ್ರಿ ಭಾಗ್ಯ ಸಿಗಲಿ: ಎಂ.ಟಿ.ಕೃಷ್ಣಪ್ಪ ಬಡವರ ದೀನ ದಲಿತರ, ರೈತರ ಪರವಾಗಿ ಸದಾ ಹೋರಾಟ ಮಾಡುತ್ತಾ ಚಟುವಟಿಕೆಗಳಿಂದ ಇರುವ ನೇರ ನುಢಿಗಾರರು, ಜನಪರವಾದ ಕಾಳಜಿ ಹೊಂದಿದ್ದು ಸುಮಾರು ವರ್ಷಗಳಿಂದ ನನಗೆ ಸ್ನೇಹಿತರು. ಅವರಿಗೆ ೭೫…

Read More