ತುಮಕೂರು: ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಅದರ ಅತ್ಯುನ್ನತ ಮೌಲ್ಯವನ್ನು ಸಾಧಿಸುತ್ತದೆ. ಹೊಸ ತಂತ್ರಜ್ಞಾನಗಳು ಸುರಕ್ಷಿತವೂ,ನೈತಿಕವು ಆಗಿರಬೇಕು.ಆಗ ಮಾತ್ರ ಹೆಚ್ಚು ದಿನ ಜನರ ಮದ್ಯ ಉಳಿಯಲು ಸಾಧ್ಯ ಎಂದು ಯುಎಸ್ಎಯ ಪ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಎಸ್.ಎಸ್ ಐಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಸ್.ಐ.ಟಿಯ ಬಿರ್ಲಾ ಸಭಾಂಗಣದಲ್ಲಿ ಎಸ್.ಐ. ಟಿಯ ಕಂಪ್ಯೂಟರ್ ಸೈನ್ ಮತ್ತು ಇನ್ಫಾರಮೇಷನ್ ಸೈನ್ ವಿಭಾಗದಿಂದ ಎಐಸಿಇಟಿ ಸಹಯೋಗದಲ್ಲಿ ಆಯೋಜಿಸಿದ್ದ ಮೂರನೇ ಐಸಿಇಸಿಐಟ-೨೦೨೫ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ಈ ಸಮ್ಮೇಳನವು ಶೈಕ್ಷಣಿಕ ಕ್ಷೇತ್ರದ ಸಂಶೋಧಕರು,ಉದ್ಯಮದ ವೃತ್ತಿಪರರು, ನೀತಿ ನಿರೂಪಕರು ಮತ್ತು ಯುವ ವಿದ್ವಾಂಸರನ್ನು ಒಟ್ಟುಗೂಡಿಸುವ ಮೂಲಕ ಆ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ.ಪ್ರತಿಯೊಬ್ಬರೂ ಮಾಹಿತಿ ತಂತ್ರಜ್ಞಾನಗಳ ಭವಿಷ್ಯಕ್ಕೆ ವಿಶಿಷ್ಟವಾದ ಬೆಳಕನ್ನು ಕೊಡುಗೆ ನೀಡುತ್ತಾರೆ ಎಂದರು. ತ0ತ್ರಜ್ಞಾನದ ಭಾಗವಾಗಿರುವ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರಮೇಷನ್ ಟೆಕ್ನಾಲಜಿಯ ಉದಯೋನ್ಮುಖ ಯುವಜನತೆ ಜಾಗತಿಕ ವೇದಿಕೆಯ ಭಾಗವಾಗಲು ಇಂತಹ ಸಮ್ಮೇಳನಗಳು ವೇದಿಕೆಯಾಗಲಿವೆ.ಈ ರೀತಿಯ ಸಮ್ಮೇಳನಗಳು ಕೇವಲ ಶೈಕ್ಷಣಿಕ ಕೂಟಗಳಲ್ಲ,ವಿಚಾರಗಳ ಜೀವಂತ ಪರಿಸರ ವ್ಯವಸ್ಥೆಗಳು. ಅವು ಸಿದ್ಧಾಂತ ಮತ್ತು…
Author: News Desk Benkiyabale
ಪಾವಗಡ: ತಾಲೂಕಿನ ವೈ.ಈ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ನಶೆ ಮುಕ್ತ ಕರ್ನಾಟಕ’ ಅಭಿಯಾನ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಹಾಗೂ ಪಾವಗಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಮಾತನಾಡಿ, ಇಡೀ ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಮಾದಕ ದ್ರವ್ಯ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಸಮಾಜದಲ್ಲಿ ವ್ಯಸನಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಮಾಹಿತಿ ನೀಡುವವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ‘ನಶೆ ಮುಕ್ತ ಕರ್ನಾಟಕ’ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಆಪ್ ಮೂಲಕವೂ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ.ಎನ್. ಮುರುಳಿಧರ್ ಮಾತನಾಡಿ, ಯುವಕರು ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಬಳಕೆಯು ತೀವ್ರ ಮಾನಸಿಕ, ಸಾಮಾಜಿಕ…
ತುಮಕೂರು: ಎತ್ತಿನ ಹೊಳೆ ಯೋಜನೆಯ ಸುಮಾರು ೨೫೨ ಕಿ.ಮಿ. ನಾಲಾ ಕಾಮಗಾರಿಯಲ್ಲಿ ೨೩೫ ಕಿಮಿ ಕಾಮಗಾರಿ ಪೂರ್ಣಗೊಂಡಿದ್ದು, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿ.ಮಿ.ಅರಣ್ಯ ಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ ಮುಂದಿನ ೨೦೨೬ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಆನಂದ ಸ್ಪಷ್ಟನೆ ನೀಡಿದ್ದಾರೆ. ನಗರದ ಅಮರಜೋತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಎದುರು ಎತ್ತಿನಹೊಳೆ ಯೋಜನೆ ನಮ್ಮದಾಗಲಿ ಎಂಬ ಘೋಷವಾಕ್ಯದೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಎತ್ತಿನಹೊಳೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು,ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ಮಳೆಯ ನೀರನ್ನು ಸಂಗ್ರಹಿಸಿ, ಪೂರ್ವದಲ್ಲಿ ರುವ ಬಯಲು ಸೀಮೆಯ ೭ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇದಾಗಿದೆ ಎಂದರು. ಎತ್ತಿನಹೊಳೆಗೆ ಈ ಯೋಜನೆಯಿಂದ ಒಟ್ಟು ೨೪.೭೮ ಟಿ.ಎಂ.ಸಿ ನೀರು…
ಪಾವಗಡ: ತಲ್ಲೂಕಿನ ನಾಗಲಮಟ್ಟಿ ಹೋಬಳಿ ಇಮಾಮ್ನಳ್ಳಿ ಗ್ರಾಮದ ಸರ್ವೆ ನಂಬರ್ ೩೩.೩೪ ರಲ್ಲಿ ತಿಮ್ಮನಹಳ್ಳಿ ಉಪ್ಪಾರಳ್ಳಿಗೆ ಹೋಗುವ ದಾರಿ ಇದ್ದು ನಕಾಶೆಯಲ್ಲಿ ಎಂಟು ಹೊಡಿ ಜಾಗವಿದ್ದು ಸದರಿ ಸುಮಾರು ೫೦ರಿಂದ ೬೦ ಜನ ರೈತರು ರೈತರುಗಳು ತಮ್ಮ ಜಮೀನುಗಳಿಗೆ ಹೋಗಲು ದಾರಿ ಹಿಂದೆಯೇ ನಿಮ್ಮ ತಾತ ಮುತ್ತಾತ ಇದ್ದಾಗಲಿಂದಲೂ ಇದೇ ರಸ್ತೆ ಬಳಸುತ್ತಿದ್ದೇವೆ. ಆದರೆ ಇದೇ ಗ್ರಾಮದ ವಾಸಿ ಭೋವಿ ಜನಾಂಗದ ಸುಬ್ಬಯ್ಯ ಮತ್ತು ಇತರ ಮಕ್ಕಳು ಅಡ್ಡಿಪಡಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಇವತ್ತೆ ವಿಚಾರವಾಗಿ ಕಳೆದ 4/5 ವರ್ಷಗಳಿಂದ ಇದೇ ಪ್ರಸಿದ್ಧಿ ಉಂಟಾಗಿದೆ ಅದರ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ . ಸಮಸ್ಯೆ ಹೋಗಲ್ಲಾಡಿಸುವವರೆಗೆ ನಾವು ಇಲ್ಲಿಂದ ಕದಲ್ಲೂವುದಿಲ್ಲ ಎಂಬುದಾಗಿ ಪ್ರತಿಭಟ ನೆಕಾರರು ರಸ್ತೆ ಬಿಡಿಸಿ ಇಲ್ಲವಾದರೆ ನಮ್ಮನ್ನು ಸಾಯ್ಲು ಬಿಡಿ. ಸಾಲಪಾಲ ಮಾಡಿ ಜಮೀನಿನಲ್ಲಿ ಕೆಲವು ಬೆಳೆ ಬೆಳದಿದ್ದೇವೆ ಪ್ರತಿದಿನ ಈ ರಸ್ತೆಗೆ ಓಡಾಡಲು ಬರೆ ಇವರದೇ ಕಿರಿಕಿರಿ ಯಾಗಿದೆ ಹಾಗಾಗಿ ನಮಗೆ ಮೊದಲು ಓಡಲು…
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ನಗರದ ಗಂಗಸ0ದ್ರದ ಮಯೂರ ನಗರದ ವಾರ್ಡ್ ಸಂಖ್ಯೆ ೧೧ರ ರಾಜಗಾಲುವೆಯಲ್ಲಿ ಹರಡುತ್ತಿರುವ ವಿಪರೀತ ರಾಸಾಯನಿಕ ವಾಸನೆ ಹಾಗೂ ಮರಳೂರು ಭಾಗದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಯೂರ ನಗರದ ರಾಜಗಾಲುವೆಯಿಂದ ಬರುತ್ತಿರುವ ತೀವ್ರತರದ ಕೆಮಿಕಲ್ ವಾಸನೆಯು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಈ ವಾಸನೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ರಾಜಗಾಲುವೆಗೆ ಕೆಮಿಕಲ್ ಮಿಶ್ರಿತ ನೀರು ಎಲ್ಲಿಂದ ಹರಿದು ಬರುತ್ತಿದೆ ಯುಜಿಡಿ ಸಂಪರ್ಕದ ಮೂಲಕವೇ ಇದು ಸೇರುತ್ತಿದೆಯೇ ಅಥವಾ ಯಾರಾದರೂ ಬೇಕೆಂದೇ ರಾಸಾಯನಿಕ ತ್ಯಾಜ್ಯವನ್ನು ಹರಿಸುತ್ತಿದ್ದಾರೆಯೇ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಸರಕ್ಕೆ ಹಾನಿ ಉಂಟುಮಾಡುವ ಮತ್ತು ಸಾರ್ವಜನಿಕರ ಜೀವಕ್ಕೆ ಧಕ್ಕೆ ತರುವ ರೀತಿಯಲ್ಲಿ ರಾಜಗಾಲುವೆಗೆ…
ತುಮಕೂರು: ಎಲ್ಲಾ ಮುನಿಪಲ್ ಗುತ್ತಿಗೆ / ಹೋರ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂಮಾತಿಗಾಗಿ ,ಖಾಯಂಗೊಳಿಸುವ ತನಕ ನೇರ ಪಾವತಿಯಡಿಯಲ್ಲಿ ಸಮಾನ ಕೇಲಸಕ್ಕೆ ಸಮಾನ ವೇತನ ನೀಡಲು ೨೦೨೬-೨೭ ಸಾಲಿನ ಬಜೆಟ್ನಲ್ಲಿ ಕ್ರಮ ವಹಿಸಲು ಒತ್ತಾಯಿಸಿ ದಿನಾಂಕ; ೧೮-೧೨-೨೦೨೫ ರಂದು ಮಧ್ಯಾನ್ಹ ಧರಣಿ ತುಮಕೂರು ಮಹಾ ನಗರ ಪಾಲಿಕೆ ಕಸದ ವಾಹನ ಚಾಲಕರ ಸಹಾಯಕರು ಲೋರ್ಸ್.&ಕ್ಲೀರ್ಸ ಸಂಘ ರಿ, ಪೌರ ಕಾರ್ಮಿಕರ ಸಂಘ. ರಿ ಸಿಐಟಿಯು ನೇತ್ರೇತ್ವದಲ್ಲಿ ಮಹಾ ನಗರ ನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ಎಲ್ಲಾ ಮುನಿಸಿಪಾಲಿಟಿ,ಮಹಾ ನಗರ ಪಾಲಿಕೆಗಳಲ್ಲಿ ನೇರ ಪಾವತಿ , ಗುತ್ತಿಗೆ ಪೌರಕಾ ರ್ಮಿಕರು, ದಿನಾಗೂಲಿ ಲೋರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲಿರ್ಗಳು, ಒಳಚರಂಡಿ ಸ್ವಚ್ಛತಾ , ಪಾರ್ಕ, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಶೌಚಾಲಯಗಳಲ್ಲಿ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು , ನೀರು ಸರಬರಾಜು ನೌಕರರ, ಕಂಪ್ಯೂಟರ್ ಅಪರೇರ್ಗಳು ನಡುವೆ ತಾರತಮ್ಯ ಮಾಡದೆ ಒಂದೇ ಬಾರಿಗೆ ಖಾಯಂಗೊಳಿಸಲು ಮುನಿಸಿಪಲ್…
ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆವರಣದಲ್ಲಿ ಸೋಆಯೋ ಜಿಸಿದ್ದಂತಹ ಸಾಹೇ ವಿಶ್ವವಿದ್ಯಾಲಯದ ಇಂಟರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಮಾತನಾಡಿ ಕ್ರೀಡೆಯಲ್ಲಿ ಸೋಲುಗೆಲುವ ಮುಖ್ಯವಲ್ಲ ಕ್ರೀಡೆಯಲ್ಲಿ ಪಾಲ್ಗೊ ಳ್ಳುವುದು ಮುಖ್ಯವಾದ್ದು, ಕ್ರೀಡಾಕೂಟಗಳು ಸೋಲು ಗೆಲುವಿನ ಅನುಭವವನ್ನು ನೀಡುತ್ತದೆ. ಗೆಲುವು ಮತ್ತು ಸೋಲು ಸಾಧನೆಯ ಹಾದಿಯಲ್ಲಿ ಮೆಟ್ಟಿಲುಗಳಿದ್ದಂತೆ ಹಾಗಾಗಿ ಸೋಲು ಗೆಲುವುಗ ಳೆರಡನ್ನು ಸಮಾ ನವಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಕ್ರೀಡಾ ಪಟುಗಳಿಗೆ ಕಿವಿಮಾತು ಹೇಳಿದರು. ಪಂದ್ಯಾವಳಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಕುಲಸಚಿವರಾದ…
ಕೊರಟಗೆರೆ: ಕಾಲಭೈರೆವೇಶ್ವರಸ್ವಾಮಿಯನ್ನು ಶ್ರದ್ದಾಭಕ್ತಿ ಹಾಗೂ ನಿಷ್ಠೆಯಿಂದ ಪೂಜಿಸಿದರೆ ಕಾಲಭೈರೇಶ್ವರ ಸ್ವಾಮಿ ಯಾವುದೊರೊಪದಲ್ಲಿ ಬಂದು ಭಕ್ತರ ಕಷ್ಟ ನಿವಾರಣೆ ಮಾಡುವುದರೊಂದಿಗೆ ಇಷ್ಠಾರ್ಥ ನೆರೆವೇರುವುದು ಎಂದು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಗಳು ತಿಳಿಸಿದರು. ಅವರು ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ಹುಲವಂಗಲ ಬಳಿಯ ಜೆ.ಕೆ.ಪಾಳ್ಯ ಗ್ರಾಮದಲ್ಲಿ ಶ್ರೀ ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ೭೦ನೇ ವರ್ಷದ ಶ್ರೀ ಕಾಲಬೈರವಾಷ್ಟಮಿ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ಕಾಲಭೈರವೇಶ್ವರ ದೇವಾಲಯ ಇರುವ ಕಡೆ ಭಕ್ತರು ನಿಷ್ಠೆಯಿಂದ ಪೂಜೆಸಿದರೆರ ಆ ಭಾಗದ ಸುತ್ತಮುತ್ತಲ ಊರುಗಳನ್ನು ರಕ್ಷಣೆ ಮಾಡುವುದರೊಂದಿಗೆ ಭಕ್ತರ ನೋವು ನಲಿವುಗಳ ನಿವಾರಣೆ ಮಾಡಿ ಇಷ್ಠಾರ್ಥಗಳನ್ನು ಈಡೇರಿಸುತ್ತಾರೆ ಎಂದ ಶ್ರೀಗಳು ಕಾಲಭೈರೆವೇಶ್ವರ ಸ್ವಾಮಿ ಸನಾತನ ಕಲಾದಿಂದಲೂ ಇತಿಹಾಸ ಪ್ರಸ್ತಿದ್ದ ದೇವಾಲಯವಾಗಿದ್ದು ರಾಜ್ಯ ಮತ್ತು ರಾಷ್ಟçದ ಪ್ರಬಲ ಸಮುದಾಯಗಳ ಆರಾದ್ಯ ದೈವವಾಗಿದ್ದು ಕಾಲಬೈರವೇಶ್ವರ ಸಮಾಜದಲ್ಲಿ ದುಷ್ಠರ ಸಂಹಾರಮಾಡಿ ಶಿಷ್ಠರನ್ನು…
ತುಮಕೂರು: ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸ ಭಾದ ರಾಷ್ಟಿಯ ಅಧ್ಯಕ್ಷರಾಗಿ ಸಮಾಜದ ಐಕ್ಯತೆಯನ್ನು ಕಾಪಾಡಲು ಜೀವಿತದ ಕೊನೆಯವರೆಗೂ ಶ್ರಮಿಸಿದ ಶ್ಯಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯಿತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಿಸಲು ಹೋರಾಟ ನಡೆಸಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮಕೂರು. ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ ಪರಮೇಶ್ ನುಡಿದರು. ಅವರು ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಏರ್ಪಡಿಸಿದ್ದ ಶ್ಯಾಮನೂರು ಶಿವಶಂಕರಪ್ಪನವರ ಶ್ರದ್ಧಾಂಜಲಿ ಸಭೆ ಯಲ್ಲಿ ನುಡಿ ನಮನ ಸಲ್ಲಿಸಿದರು. ಶ್ಯಾಮನೂರು ಅವರು ವೀರಶೈವ ಲಿಂಗಾಯಿತ ಸಮಾಜಕ್ಕೆ ತಂದೆಯ ಸ್ಥಾನದಲ್ಲಿ ನಿಂತು ಅದನ್ನು ನಿರ್ವಹಿಸಿದವರು. ಅಲ್ಲಿ ಅವರ ಮಾತಿಗೆ ಯಾರೂ ಎದುರುತ್ತರ ಕೊಡುತ್ತಿರಲಿಲ್ಲ ಕಾಂಗ್ರೇಸ್ ಪಕ್ಷದ ರಾಜ್ಯ ಕೋಶಾಧ್ಯಕ್ಷರಾಗಿ ಶಾಸಕರಾಗಿ ಮಂತ್ರಿಗಳಾಗಿ ದುಡಿದವರು ಅವರನ್ನು ಪಕ್ಷ ಬೇಧವಿಲ್ಲದೆ ಎಲ್ಲರೂ ಪ್ರೀತಿಸುತ್ತಿದ್ದರು ತಮಗೆನಿಸಿದ ಸತ್ಯವನ್ನು ನಿರ್ಬಿತೆಯಿಂದ ಹೇಳುವ ಗುಣ ಅವರಲ್ಲಿತ್ತು ಅವರಲ್ಲಿ ಎಷ್ಟೇ ಸಿರಿವಂತಿಕೆ ಇದ್ದರೂ ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು ಅವರ…
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಏರ್ಪಡಿಸಲಾಗಿತ್ತು. ಅಧಿಕೃತ ವೇಳಾಪಟ್ಟಿಯಂತೆ ಬೆಳಿಗ್ಗೆ ೧೦ ಗಂಟೆಯಿ0ದ ಮಧ್ಯಾಹ್ನ ೧೨ ಗಂಟೆಯ ವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪ ಡಿಸಲಾಗಿತ್ತು. ಪ್ರೀತಿ ರಾಘವೇಂದ್ರ ಅವರು ಹೇಮಂತ್ ಅವರನ್ನು ಸೂಚಿಕರಾಗಿ, ಸಿದ್ದೀಕ್ ಅವರ ಅನುಮೋದಕರಾಗಿ ನಾಮಪತ್ರ ಸಲ್ಲಿಸಿ ದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಕಣದಲ್ಲಿ ಅವರೊಬ್ಬರೇ ಉಳಿದರು. ಹೀಗಾಗಿ, ಚುನಾವಣಾಧಿಕಾರಿ ಕೆ. ಪುರಂದರ ಅವರು ಪ್ರೀತಿ ರಾಘವೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದರು. ಈ ಆಯ್ಕೆಯೊಂದಿಗೆ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪಟ್ಟಣದ ಜನರ ಕುತೂಹಲಕ್ಕೆ ತೆರೆ ಬಿದ್ದಿತು. ಈ ಬಾರಿ ಕೂಡ ೩ ಪಕ್ಷದ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಪಕ್ಷದ ಮೂವರು ಸದಸ್ಯರು, ಕಾಂಗ್ರೆಸ್…











