ಹುಳಿಯಾರು: ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ದಶಕಗಳಿಂದ ಸೂರಲ್ಲದೆ ಪರದಾಡುತ್ತಿರುವ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ವಸತಿ ಕಲ್ಪಿಸಲು ಕಂಪನಹಳ್ಳಿ ಬಳಿ ನಿವೇಶನ ನೀಡಿರುವುದು ಸ್ವಾಗತಾರ್ಹ. ಇಲ್ಲಿ ಮನೆ ಕಟ್ಟಿಕೊಳ್ಳಲು ಗಣಿ ಹಣ ನೀಡುವಂತೆ ಅಲೆಮಾರಿಗಳು ಶಾಸಕ ಸಿ.ಬಿ.ಸುರೇಶ್‌ಬಾಬು ಅವರಿಗೆ ಮನವಿ ಮಾಡಿದರು.
ಶಾಸಕರ ಜನಸ್ಪಂದನಾ ಸಭೆಗೆ ತೆರಳಿದ ಅಲೆಮಾರಿಗಳು ಐದಾರು ವರ್ಷಗಳ ಹಿಂದೆ ಹುಳಿಯಾರು ಕೆರೆ ದಡದಲ್ಲಿದ್ದ ಅಲೆಮಾರಿಗಳಿಗೆ ಕಂಪನಹಳ್ಳಿ ಬಳಿ ನಿವೇಶನ ನೀಡಲಾಗಿದೆ. ಆದರೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡಿಲ್ಲ. ಪರಿಣಾಮ ಮಳೆ-ಗಾಳಿಗೆ ತೂರೇರಿ ಹೋಗುವ ತಾತ್ಕಾಲಿಕ ಶೆಡ್‌ಗಳಲ್ಲೇ ಕಾಲ ಕಳೆಯುವಂತಾಗಿದೆ. ಈಗ ಮತ್ತೆ ಇಪ್ಪತ್ತೆöÊದಕ್ಕೂ ಹೆಚ್ಚು ಮಂದಿಗೆ ನಿವೇಶನ ನೀಡಲಾಗಿದೆ. ಆದರೆ ಅವರಿಗೂ ಮನೆ ಕಟ್ಟಿಕೊಳ್ಳಲು ಹಣ ನೀಡಿಲ್ಲ ಎಂದು ಆರೋಪಿಸಿದರು.
ಗ್ರಾ.ಪಂ. ಮೂಲಕ ಆಯ್ಕೆ ಮಾಡಿದರೆ ಒಂದೆರಡು ಮನೆಗಳು ಮಾತ್ರ ಸಿಗುತ್ತವೆ. ಗ್ರಾಮ ಪಂಚಾಯಿತಿಯಿAದ ನೀಡುವ ಅಲ್ಪಸ್ವಲ್ಪ ವಸತಿ ಅನುದಾನದಲ್ಲಿ ಅಲೆಮಾರಿಗಳು ಗುಣಮಟ್ಟದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿರುವವರಾರೂ ಮನೆ ಕಟ್ಟಿಕೊಳ್ಳುವಷ್ಟು ಆರ್ಥಿಕ ಸದೃಢರಲ್ಲ. ಅಲೆಮಾರಿಗಳಿಗೆ ಯಾರೂ ಸಾಲ ಕೊಡುವುದಿಲ್ಲ. ಇದರಿಂದ ಇಡೀ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಚೀಫ್ ಸೆಕ್ರೆಟರಿಗೆ ಈಗಾಗಲೇ ಮನವಿ ನೀಡಲಾಗಿದೆ. ಹಾಗಾಗಿ ಕ್ಷೇತ್ರದಲ್ಲೂ ಶಾಸಕರು ವಿಶೇಷ ಗಮನ ಹರಿಸಿ ಗಣಿ ಬಾಧಿತ ಪ್ರದೇಶದ ವಿಶೇಷ ಅನುದಾನದಡಿ ಅಲೆಮಾರಿ ಸಮುದಾಯಕ್ಕೆ ಮನೆ ಕಟ್ಟಿಕೊಡಬೇಕು ಎಂದು ಕೋರಿದರು.
ಮನವಿ ಆಲಿಸಿ ಧನಾತ್ಮಕವಾಗಿ ಸ್ಪಂದಿಸಿದ ಶಾಸಕ ಸಿ.ಬಿ. ಸುರೇಶ್ ಬಾಬು, ನಮ್ಮ ಕ್ಷೇತ್ರದಾದ್ಯಂತ ಇರುವ ಅಲೆಮಾರಿ ಕುಟುಂಬಗಳ ಸ್ಥಿತಿಗತಿ ಹಾಗೂ ಅವರ ಅಗತ್ಯಗಳ ಬಗ್ಗೆ ಸಂಪೂರ್ಣ ಅರಿವಿದೆ. ಅಲೆಮಾರಿಗಳು ಸಾಲದ ಸುಳಿಯಲ್ಲಿ ಸಿಲುಕದೆ, ಸ್ವಂತ ಖರ್ಚಿಲ್ಲದೆ ನೆಮ್ಮದಿಯಿಂದ ವಾಸಿಸಲು ಅನುಕೂಲವಾಗುವಂತೆ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗುವುದು. ಸಮುದಾಯದ ಪ್ರತಿಯೊಬ್ಬರಿಗೂ ವಸತಿ ದೊರೆಯುವಂತೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ, ಅಲೆಮಾರಿ ಸಂಘದ ಮುಖಂಡರಾದ ರಾಜಣ್ಣ ಸೇರಿದಂತೆ, ಅಲೆಮಾರಿ ಮಹಿಳೆಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)