ಹುಳಿಯಾರು: ಚೆನ್ನಾಗಿದ್ದ ಡಾಂಬಾರ್ ರಸ್ತೆ ಮೇಲೆ ಮಣ್ಣು ಹಾಕಿ ಕೆಸರು ಗದ್ದೆಯಾಗುವಂತೆ ಮಾಡಿ ಸುಗಮ ಸಂಚಾರಕ್ಕೆ ತೊಡಕು ಮಾಡಿದ್ದಾರೆ ಎಂದು ಹೋಬಳಿಯ ಕಲ್ಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿಕ್ಕಬಿದರೆ ಗ್ರಾಮದಿಂದ ನಂದಿಹಳ್ಳಿಗೆ ಡಾಂಬರು ರಸ್ತೆಯಿದ್ದು ಕಲ್ಲಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಗ್ರಾಮದಲ್ಲಿ ಡಾಂಬರು ರಸ್ತೆಯ ಎರಡು ಕಡೆ ನೀರು ಹರಿದು ಹೋಗಲು ೬ ತಿಂಗಳ ಹಿಂದೆ ಚರಂಡಿ ನಿರ್ಮಿಸಿದ್ದರು. ಈಗ ಈ ಚರಂಡಿ ಪಕ್ಕಕ್ಕೆ ಸಮತಟ್ಟು ಮಾಡಲು ಮಣ್ಣು ಹಾಕಿದ್ದಾರೆ. ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡುವಾಗ ಡಾಂಬಾರ್ ರಸ್ತೆಯ ಮೇಲೆಲ್ಲ ಮಣ್ಣು ಬಿದ್ದಿದೆ.
ಇದನ್ನು ಗಮನಿಸಿದ ಸ್ಥಳೀಯರು ಡಾಂಬರ್ ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವಂತೆ ಗುತ್ತಿಗೆದಾರರನ್ನು ಕೇಳಿಕೊಂಡರು ತೆಗೆಯದೆ ನಿರ್ಲಕ್ಷಿö್ಯಸಿದ್ದಾರೆ. ಪರಿಣಾಮ ಮಳೆ ಬಿದ್ದಾಗ ಕೆಸರು ಗದ್ದೆಯಾಗಿಗೂ, ಬೇಸಿಗೆಯಲ್ಲಿ ಧೂಳಿನ ರಸ್ತೆಯಾಗಿಯೂ ಪರಿವರ್ತನೆಯಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಚರಂಡಿಯನ್ನೂ ಸಹ ಅನಾವಶ್ಯಕವಾಗಿ ಮಾಡಿದ್ದಾರಲ್ಲದೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲೇ ನಿಲ್ಲುವಂತೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರಿಂದ ಇತ್ತ ಚರಂಡಿಯೂ ಉಪಯೋಗಕ್ಕೆ ಬಾರದೆ ರಸ್ತೆಯಲ್ಲೂ ಸಹ ಸಗಮ ಸಂಚಾರ ಮಾಡದಂತಾಗಿದೆ. ಡಾಂಬರ್ ರಸ್ತೆ ಮೇಲೆ ಕೆಸರು ಮಣ್ಣು ಅಂಟಿರುವ ಕಾರಣ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಬೈಕ್ ಸಾವಾರರು ಜಾರಿ ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಇನ್ನಾದರೂ ಸಂಬAಧಪಟ್ಟವರು ಇತ್ತ ಗಮನಹರಿಸಿ ಡಾಂಬರ್ ರಸ್ತೆಯ ಮೇಲಿನ ಮಣ್ಣನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಡಾಂಬರ್ ರಸ್ತೆ ಈಗ ಕೆಸರು ಗದ್ದೆಯಾಗಿದ್ದು ಬೈಕ್ ಸವಾರರು ಬೀಳುತ್ತಿದ್ದಾರೆ. ಪಾದಚಾರಿಗಳು ಕೆಸರು ಮಣ್ಣು ಸಿಡಿಸಿಕೊಂಡು ಓಡಾಡುವಂತೆ ಆಗಿದೆ. ಇತ್ತಿಚೆಗಷ್ಟೆ ನಾನು ಜಾರಿ ಬಿದ್ದು ತರಚು ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಪ್ರಾಣಾಪಾಯಗಳು ಸಂಭವಿಸುವ ಮೊದಲು ಮಣ್ಣು ತೆರವು ಮಾಡಿ.
ರಂಗಸ್ವಾಮಿ, ಗ್ರಾಮಸ್ಥ

ಅವಶ್ಯಕತೆ ಇಲ್ಲದ ಕಡೆ ಚರಂಡಿ ಮಾಡಿರುವುದೂ ಅಲ್ಲದೆ ಡಾಂಬರು ರಸ್ತೆ ಮೇಲೆ ಮಣ್ಣು ಚೆಲ್ಲಾಡಿ ಹೋಗಿದ್ದಾರೆ. ಮಣ್ಣು ತೆಗೆಸುವಂತೆ ಸಂಬAಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಮಳೆ ಬರುತ್ತಿದ್ದು ಓಡಾಟಕ್ಕೆ ತೊಂದರೆಯಾಗಿದೆ.
ಕೆ.ಟಿ. ಮಂಜುನಾಥ್, ಗ್ರಾಮಸ್ಥ

 

(Visited 1 times, 1 visits today)
FacebookTwitterInstagramFacebook MessengerEmailSMSTelegramWhatsapp