ತಿಪಟೂರು: ಹವಾಮಾನ ವೈಪರೀತ್ಯದಿಂದ ಆಗಿರುವ ತೆಂಗು ಬೆಳೆ ನಷ್ಟವನ್ನು ಸರ್ಕಾರಗಳು ತುಂಬಿಕೊಡಬೇಕೆAದು ಹಾಗೂ “ಹವಮಾನ ಆಧಾರಿತ ಬೆಳೆ ವಿಮೆಯನ್ನು ತೆಂಗು ಬೆಳೆಗೂ ವಿಸ್ತರಿಸಬೇಕೆಂದು ಹಾಗೂ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿಯನ್ನು ತಿಪಟೂರಿನಲ್ಲಿ ತೆರೆಯಬೇಕೆಂದು ಕೋರಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ರೈತರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಪ್ರತಿ ವರ್ಷ ತಾಪಮಾನ ಜಾಗತಿಕವಾಗಿ ಸಾಕಷ್ಟು ಹೆಚ್ಚಳವಾಗಿದ್ದು, ೧೯೮೮ ರ ರಾಷ್ಟ್ರೀಯ ಅರಣ್ಯ ನೀತಿಯು ಬೌಗೋಳಿಕ ಪ್ರದೇಶದ ೩೩ % ರಷ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಈಗ ಕೇವಲ ಶೇಕಡ ೨೦% ಅರಣ್ಯ ಪ್ರದೇಶವನ್ನು ಹೊಂದಿದೆ ನಾವು ಮುಂದಿನ ದಿನಗಳಲ್ಲಿ ೩೩ % ಗುರಿಯನ್ನು ಸಾಧಿಸುತ್ತೇವೆ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ೨೦೨೩ರ ಸೆಪ್ಟಂಬರ್೩೦ ರಲ್ಲಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆಯ ಆಧಾರವನ್ನು ಇಟ್ಟುಕೊಂಡು ನೋಡಿದರೆ ಹವಮಾನ ವೈಪರೀತ್ಯದಿಂದ ಶೇಕಡ ೩೩ ರಷ್ಟು ಅರಣ್ಯ ಪ್ರದೇಶದ ಗುರಿಯನ್ನು ಸಾಧಿಸುವುದರ ಬದಲಾಗಿ ಅದು ಕುಸಿಯುತ್ತಿರುವುದು ಕಂಡು ಬರುತ್ತಿರುತ್ತದೆ. ಮತ್ತು ಕೃಷಿ ಎಷ್ಟೆಲ್ಲಾ ನಷ್ಟವನ್ನು ಅನುಭವಿಸುತ್ತಿದೆ ಎಂಬುದನ್ನು ಗಮನಹರಿಸಿ ಮನಗಾಣಬೇಕಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ಮತ್ತು ತೆಂಗು ಎಳನೀರಿನ ಬೆಲೆ ಗಗನಕ್ಕೇರಿದ್ದು, ರೈತನ ಬಳಿ ಉತ್ಪನ್ನ ಕುಸಿದಿದೆ ಇದರ ವಿಚಾರವಾಗಿ ಕೇಂದ್ರ ಅಥವಾ ರಾಜ್ಯದ ಯಾವುದೇ ರಾಜಕಾರಣಿಗಳು ಗಮನಹರಿಸುತ್ತಿಲ್ಲ ದರ ಸಿಕ್ಕಿತು ರೈತ ಸಂತಸದಲ್ಲಿದ್ದಾನೆ ಎಂದು ಭಾವಿಸಿದ್ದಾರೆ. ಬೆಳೆ ಇದ್ದರಲ್ಲವೇ ರೈತ ಸಂತಸದಿAದ ಇರುವುದು, ಬೆಳೆಯೇ ಕಡಿಮೆ ಇದ್ದ ಮೇಲೆ ಅದಕ್ಕೆ ಇನ್ನೆಷ್ಟು ಬೆಲೆ ಸಿಗಬಹುದೆಂದು ಮತ್ತು ರೈತ ಕಡಿಮೆ ಬೆಳೆಯಿಂದ ಹೇಗೆ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ಆಲೋಚಿಸಬೇಕಿದೆ.
ಪ್ರಸ್ತುತ ತೆಂಗನ್ನು ಬೆಳೆಯಲು ೩೦ ರಿಂದ ೩೫ ಡಿಗ್ರಿ ತಾಪಮಾನ ಇರಬೇಕು ಆದರೆ ವರ್ಷಗಳು ಕಳೆಯುತ್ತಿದ್ದಂತೆ ೪೧ ಡಿಗ್ರಿ ಗಡಿ ದಾಟುತ್ತಿದೆ. ಈ ತಾಪಮಾನದ ಏರಿಳಿತದಿಂದ ತೆಂಗಿನ ಉತ್ಪನ್ನ ಬಹುತೇಕ ಕುಸಿದಿದೆ. ರೈತರ ಉತ್ಪನ್ನದ ನಷ್ಟಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ವತಿಯಿಂದ ರೈತರಿಗೆ ಆರ್ಥಿಕ ಸಂಕಷ್ಟದ ಪರಿಹಾರವನ್ನು ಘೋಷಿಸಿ ಹವಮಾನ ಆಧಾರಿತ ಬೆಳೆ ವಿಮೆಯನ್ನು ತೆಂಗು ಬೆಳೆಗೂ ವಿಸ್ತರಿಸಿ ಜಾರಿ ಮಾಡಬೇಕೆಂದು ತೆಂಗು ಬೆಳೆಗಾರರ ಪರವಾಗಿ ಒತ್ತಾಯಿಸುತ್ತಿದ್ದೇವೆ.
ತೆಂಗು ಬೆಳೆಗಾರರ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ತಿಪಟೂರಿನ ತೆಂಗಿಗೆ ಜಿ.ಐ ಟ್ಯಾಗ್ ಮತ್ತು ಟೆಕ್ ಪಾರ್ಕ್ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿ ಮತ್ತು ತೆಂಗಿನ ಉತ್ಪನ್ನಗಳನ್ನು ಮೌಲ್ಯವರ್ದನೆ ಮಾಡಿ ಮತ್ತಷ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಾಗಿದ್ದು
ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿಯನ್ನು ತಿಪಟೂರಿನಲ್ಲಿ ತೆರೆದು ರೈತರ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಲು ಅವಕಾಶ ಮಾಡಿಕೊಡಬೇಕಾಗಿ ಕೋರುತ್ತೇವೆ. ತೆಂಗಿನ ಬೆಳೆಗೆ ಕಾನೂನು ಬದ್ದ ಸ್ವಾಮಿನಾಥನ್ ವರದಿಯ ಎಂ.ಎಸ್.ಪಿಯನ್ನು ಜಾರಿ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತರಾದ ನವೀನ್, ನಾಗೇಶ್.ಆರ್.ಎಸ್, ಗಾಡಿ ಮಂಜುನಾಥ್, ನಟರಾಜು, ಶಿವಣ್ಣ ಮತ್ತಿತ್ತರು ಹಾಜರಿದ್ದರು.
ನಗರದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ರೈತರು ಹವಮಾನ ಆಧಾರಿತ ಬೆಳೆ ವಿಮೆಯನ್ನು ತೆಂಗು ಬೆಳೆಗೂ ವಿಸ್ತರಿಸಿ ಎಂದು ಮನವಿ ಮಾಡುತ್ತಿರುವುದು.

(Visited 1 times, 1 visits today)