ತುಮಕೂರು: ಸರಕಾರದಿಂದ ದಲಿತ ಕುಟುಂಬವೊAದಕ್ಕೆ ಮಂಜೂರಾಗಿದ್ದ ಜಾಗಕ್ಕೆ ಅರಣ್ಯ ಇಲಾಖೆಯವರು ಅತಿಕ್ರಮ ಪ್ರವೇಶ ಮಾಡಿ, ಗಿಡ ನೆಟ್ಟು,ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ನಮ್ಮ ಭೂಮಿಯನ್ನು ನಮಗೆ ಉಳಿಸಿಕೊಡುವಂತೆ ಚಿಕ್ಕನಾಯಕನಹಳ್ಳಿಒ ತಾಲೂಕು ಹಂದನಕೆರೆ ಹೋಬಳಿ ಗಾಂಧಿ ನಗರ ನಿವಾಸಿ ಕೃಷ್ಣಯ್ಯ ಬಿನ್ ಕರಿಯಪ್ಪ ಎಂಬುವವರು ಇಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಮ್ಮ ಕುಟುಂಬದೊAದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಅವರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ನಿಟ್ಟೂರು ರಂಗಸ್ವಾಮಿ ಅವರೊಂದಿಗೆ ತೆರಳಿ ಎಡಿಸಿ ಅವರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕು, ಹಂದನಕೆರೆ ಹೋಬಳಿ, ಮತ್ತಿಘಟ್ಟ ಗ್ರಾಮದ ಸರ್ವೆ ನಂ. ೧೧೪/೨ ರಲ್ಲಿ ೪-೦೦ ಎಕರೆ ಜಮೀನು ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಯ್ಯ ಬಿನ್ ಕರಿಯಪ್ಪ ಅವರಿಗೆ ೧೯೮೨-೮೩ರಲ್ಲಿ ಮಂಜೂರಾಗಿರುತ್ತದೆ.ಇದೇ ಸರ್ವೆ ನಂಬರನಲ್ಲಿ ಸುಮಾರು ೨೯ ಜನರಿಗೆ ಭೂಮಿ ಮಂಜೂರಾಗಿದ್ದು, ಪ್ರಸ್ತುತ ಮಂಜೂರುದಾರರ ಹೆಸರಿನಲ್ಲಿಯೇ ಪಹಣಿಯಿದೆ.ಕೆಲ ವರ್ಷಗಳಿಂದ ಕುಟುಂಬದ ಹಿರಿಯರ ಅನಾರೋಗ್ಯದಿಂದ ಜಮೀನಿನಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಅರಣ್ಯ ಇಲಾಖೆಯವರು ನೀಲಿಗಿರಿ ಗಿಡಗಳನ್ನು ನೆಟ್ಟು, ಇದು ನಮ್ಮ ಜಾಗ ಬರಬೇಡಿ ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕೃಷ್ಣಯ್ಯ ಬಿನ್ ಕರಿಯಪ್ಪ ದೂರಿದರು.
ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ನಮ್ಮ ಹೊಲದ ಬಳಿ ಹೋಗಿ ನೋಡಿದಾಗ ಅರಣ್ಯ ಇಲಾಖೆಯವರು ಗಿಡ ನೆಟ್ಟಿರುವುದು ಕಂಡು ಬಂದಿದೆ.ನಮ್ಮ ಜೊತೆಯಲ್ಲಿ ಮಂಜೂರಾದ ಇತರೆಯವರು ಸಹ ಭೂಮಿಯನ್ನು ಉಳುಮೆ ಮಾಡುತ್ತಲೇ ಬರುತ್ತಿದ್ದಾರೆ.ಆದರೆ ನಾವು ಹೋಗಿ ಜಮೀನಿನ ಗೇಮೆ ಮಾಡಲು ಹೊದರೆ ಅರಣ್ಯ ಇಲಾಖೆಯವರು ದೌರ್ಜನ್ಯ ನಡೆಸುತಿದ್ದಾರೆ.ನಮ್ಮಗಳನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ,ಭೂಮಿಯೊಳಗೆ ಕಾಲಿಡದಂತೆ ಬೆದರಿಕೆ ಒಡ್ಡುತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು, ನಮ್ಮ ಜಮೀನನ್ನು ನಮಗೆ ಬಿಡಿಸಿ, ವ್ಯವಸಾಯ ಮಾಡಿ ಜೀವನ ನಡಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ನಿಟ್ಟೂರು ರಂಗಸ್ವಾಮಿ ಮಾತನಾಡಿ,ಸಂತ್ರಸ್ಥರಾದ ಕೃಷ್ಣಯ್ಯ ಬಿನ್ ಕರಿಯಪ್ಪಪ ಅವರಿಗೆ ಅನಾರೋಗ್ಯದ ಕಾರಣದಿಂದ ಜಮೀನಿನ ಕಡೆ ಹೋಗಲಾಗಿಲ್ಲ. ಇದನ್ನೇ ನೆಪ ಮಾಡಿ ಅರಣ್ಯ ಇಲಾಖೆಯವರು ಅವರ ಬಳಿ iÀiÁವ ದಾಖಲೆಗಳು ಇಲ್ಲದಿದ್ದರು ಇದು ನಮಗೆ ಸೇರಿದ ಜಮೀನು ಎಂದು ದೌರ್ಜನ್ಯ ನಡೆಸುತ್ತಿದ್ದಾರೆ.ನೀವಿಲ್ಲಿ ಬಂದರೆ ನಿಮ್ಮಗಳ ಮೇಲೆ ಕೇಸ್ ದಾಖಲಾಗಿಸುವುದಾಗಿ ನಮಗೆೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ, ಹೆದರಿಸಿರುತ್ತಾರೆ. ನಮಗೆ ಪಹಣಿ, ಮಂಜೂರು ಚೀಟಿ, ಎಲ್ಲಾ ದಾಖಲಾತಿಗಳು ನಮ್ಮಂತೆಯೇ ಇದ್ದು, ಬ್ಯಾಂಕ್‌ನಲ್ಲಿ ಸಹ ಪಹಣಿಯ ಮೇಲೆ ಸಾಲವನ್ನು ಪಡೆದಿದ್ದಾರೆ.ಇದೇ ಜಮೀನಿಗೆ ಸೇರಿದ ಪಹಣಿಯ ಮೇಲೆ ನಿರಂತವಾಗಿ ಬೆಳೆ ಸಾಲವನ್ನು ಪಡೆಯಲಾಗಿದೆ.ಹಾಗಾಗಿ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಲಿತರಾದ ನಮಗೆ ನ್ಯಾಯ ಮತ್ತು ರಕ್ಷಣೆ ಕೊಡಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಮನವಿ ಸ್ವೀಕರಿಸಿದ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಅವರು ಈ ಸಂಬAಧ ಸೂಕ್ತ ಕ್ರಮಕ್ಕಾಗಿ ಚಿಕ್ಕನಾಯಕನಹಳ್ಳಿ ತಹಶೀಲ್ದಾರರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ವೇಳೆ ಕೃಷ್ಣಯ್ಯ ಬಿನ್ ಕರಿಯಪ್ಪ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹರೀಶಗೌಡ,ಪಾವಗಡ ತಾಲೂಕು ಸಂಚಾಲಕ ಪೆದ್ದಣ್ಣ, ತಿಪಟೂರು ತಾಲೂಕು ಸಂಚಾಲಕ ಮೋಹನ್, ಮಹಿಳಾ ಸಂಚಾಲಕಿ ಕವಿತ ಮಹೇಶ್,ತಿಪಟೂರು ನಗರ ಸಂಚಾಲಕ ಸತೀಶ್ ಮತ್ತಿತರರು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

 

(Visited 1 times, 1 visits today)