ತುರುವೇಕೆರೆ: ಲಿಂಕ್ ಕೆನಾಲ್ ವಿರೋದಿ ಹೋರಾಟಗಾರರು ಹಾಗೂ ಸ್ವಾಮೀಜಿಗಳು, ರೈತರ ಮೇಲೆ ಸರ್ಕಾರ ಕೇಸ್ ಹಾಕಿ ಬೆದರಿಸಿದರೆ ರೈತರ ಹಾಗೂ ನಮ್ಮ ಸಂಘಟನೆಯ ಶಕ್ತಿಯನ್ನು ಕುಗ್ಗಿಸಲು ಸಾದ್ಯವಿಲ್ಲ ಶಾಸಕ ಎಂ ಟಿ ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಲಿಂಕ್ ಕೆನಾಲ್ ವಿರೋದಿಸಿ ಹಲವು ಬಾರಿ ಹೋರಾಟ ಮಾಡಿ ನಿಲ್ಲಿಸಿದ್ದು ಸರ್ಕಾರ ಮತ್ತೆ ಪ್ರಾರಂಬಿಸಿದ್ದು ೩೧ ರಂದು ಸಾವಿರಾರು ರೊಚ್ಚಿಗೆದ್ದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ಹಾಗೂ ರೈತರು ಸೇರಿ ಹೋರಾಟ ಮಾಡಲಾಗಿ ಸದ್ಯಕ್ಕೆ ಜಿಲ್ಲಾಡಳಿತ ಕಾಮಗಾರಿ ಸ್ಥಗಿತಗೊಳಿಸಿದೆ. ಮತ್ತೆ ಕಾಮಗಾರಿ ಪ್ರಾರಂಬಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೋರಾಟದಲ್ಲಿ ಭಾಗಿಯಾಗಿದ್ದ ನಮ್ಮ ಮೇಲೆ ಹಾಗೂ ಮಠಾಧೀಶರು ರೈತರ ಮೇಲೆ ರಾಜ್ಯ ಸರ್ಕಾರ ಕೇಸು ದಾಖಲಿಸಿ ಹೆದರಿಸುವ ಕೆಲಸ ಮಾಡುತ್ತಿದೆ. ಇಂತಹ ನೂರು ಕೇಸ್ ದಾಖಲಾದರೂ ನಾವು ಹೆದರುವುದಿಲ್ಲ. ನಮ್ಮ ಜೀವದ ಜೊತೆ ಚೆಲ್ಲಾಟವಾಡುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ವಿರುದ್ಧ ದಾಖಲಿಸಿರುವ ಕೇಸುಗಳನ್ನು ಗುಬ್ಬಿ ತಾಲೂಕಿನ ವಕೀಲರ ಸಂಘ ಉಚಿತವಾಗಿ ನೆಡೆಸುವುದಾಗಿ ಹೇಳಿದ್ದು ಅದನ್ನು ಸ್ವಾಗತಿಸುತ್ತೇನೆ ಹಾಘೂ ಪ್ರತಿಭಟನೆಯಲ್ಲಿ ಬಾಗವಹಿಸಿದ್ದ ಎಲ್ಲ ರೈತ ಬಾಂದವರಿಗೂ ದನ್ಯವಾದಗಳನ್ನು ತಿಳಿಸಿತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗ.ಪರಮೇಶ್ವರ್ ನಮ್ಮ ಜಿಲ್ಲೆಯ ಹಿತ ಕಾಪಾಡವಲ್ಲಿ ವಿಪಲರಾಗಿದ್ದಾರೆ. ಅವರ ಹೇಳಿಕೆಯಿಂದ ಜಿಲ್ಲೆಯ ಜನತೆಗೆ ಬೇಜಾರಿದೆ. ಈ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ ಎಂಬ ಹೇಳಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಎಸ್ ಪಿ ಕಚೇರಿಯ ಮುಂದೆ ಧರಣಿ : ರೈತರ ಮಠಾಧೀಶರು ಮತ್ತು ಸಾರ್ವಜನಿಕರ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ತೆಗೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ದುರಾಡಳಿತದ ವಿರುದ್ಧ ಎಸ್.ಪಿ. ಕಚೇರಿಯ ಮುಂಭಾಗ ಸಾವಿರಾರು ರೈತರೊಂದಿಗೆ ಧರಣಿ ನಡೆಸುತ್ತೇನೆ. ಸರಕಾರ ಪೊಲೀಸ್ ಇಲಾಖೆಯನ್ನ ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕುತ್ತಿರುವುದು ಖಂಡನೀಯ ನಾವು ಯಾವುದೇ ಸಂದರ್ಭದಲ್ಲಿಯೂ ಸಹ ಹೋರಾಟ ನಿಲ್ಲಿಸುವುದಿಲ್ಲ ಹೋರಾಟ ಮಾಡುತ್ತೇವೆ. ಈ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಕಾಂಗ್ರೆಸ್ ನಾಯಕರಿಗೆ ನಾನು ಹೇಳುವುದು ಇಷ್ಟೇ ಅಧಿಕಾರ ಶಾಶ್ವತ ಅಲ್ಲ. ನಮ್ಮ ಜಿಲ್ಲೆಗೆ ಅನ್ಯಾಯವಾದಾಗ ತಾವೆಲ್ಲರೂ ಖಂಡಿಸಬೇಕು ಹೋರಾಟದಲ್ಲಿ ಭಾಗವಹಿಸಬೇಕು. ನೀವು ಕೂಡ ಹೋರಾಟಕ್ಕೆ ಕೈಜೋಡಿಸಿ ಎಂದು ಕಾಂಗ್ರೇಸ್ ಶಾಸಕರಿಗೆ ಕರೆ ನೀಡಿದರು.
ಗೋಷ್ಟಿಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಮಾಜಿ ಸದಸ್ಯ ವಿಜಯೇಂದ್ರ, ವಕ್ತಾರ ವೆಂಕಟಾಪುರ ಯೋಗೇಶ್, ಭುವನಹಳ್ಳಿದೇವರಾಜ್, ಮುಖಂಡರಾದ ಕಾಂತರಾಜು, ಹೊನ್ನೇನಳ್ಳಿ ಕೃಷ್ಣಪ್ಪ, ಶಶಿಧರ್, ಬೋರೇಗೌಡ, ಇಂದ್ರಕುಮಾರ್, ದೇವರಾಜ್, ವೀರಣ್ಣನಗುಡಿರಾಮು, ರಾಘವೇಂದ್ರ ಸೇರಿದಂತೆ ಇತರರು ಇದ್ದರು.

(Visited 1 times, 1 visits today)