ತುಮಕೂರು: ರಾಜಕೀಯ ಇತಿಹಾಸಕ್ಕಿಂತ, ಸಾಂಸ್ಕೃತಿಕ ಇತಿಹಾಸ ಆಯಾಯ ಕಾಲಘಟ್ಟದ ಜನಜೀವನ, ಅವರ ಜೀವನ ಕ್ರಮಗಳ ಕುರಿತಂತೆ ಮಹತ್ವದ ದಾಖಲೆಯಾಗುತ್ತದೆ. ಹಾಗಾಗಿ ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಕಲ್ಪಹಾಸ, ಸಂಪುಟ-೦೨ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ ಎಂದು ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರ ಕೊಂಡಾರೆಡ್ಡಿ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಹಾಗೂ ಸುಹಾಸ್ ಗ್ರಾಫ್ರಿಕ್ಸ್ ಬೆಂಗ ಳೂರು ಇವರ ಸಹಯೋಗದಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಕಲ್ಪಹಾಸ, ಸಂಪುಟ ೧ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತಿದ್ದ ಅವರು, ಡಾ.ಡಿ.ಎನ್.ಯೋಗೀಶ್ವರಪ್ಪ ಅವರಿಗಿಂತಲೂ ಮೊದಲು ಸಿ.ಎನ್.ಭಾಸ್ಕರಪ್ಪ ಸೇರಿದಂತೆ ಹಲವರು ತುಮಕೂರು ಜಿಲ್ಲೆಯ ಇತಿಹಾಸದ ಕುರಿತು ಕೃತಿಗಳನ್ನು ಹೊರತರಲು ಪ್ರಯತ್ನಿಸಿದ್ದಾರೆ. ಆದರೆ ಇಡೀ ಸಮಗ್ರ ಇತಿಹಾಸವನ್ನು ತಿಳಿಸುವ ಕಲ್ಪಹಾಸ ಮಹತ್ವದ ಕೃತಿಯಾಗಿದೆ ಎಂದರು.
ಗAಗರ ನಂತರ ಬಂದ ನೊಳಂಬರು ತಮಿಳು ನಾಡಿನ ಧರ್ಮಪುರಿಯಿಂದ ಹೆಂಜಾರು ಹೇಮಾವತಿವರೆಗಿನ ರಾಜ್ಯ ವಿಸ್ತರಣೆಯನ್ನು ಕಾಣಬಹುದು.ನಿಡಗಲ್ಲು ಜೋಳರು, ಕರಿಕಾಳ ಜೋಳರು, ನೊಳಂಬ ಪಲ್ಲವರು, ಅಮರನಾಯಕತ್ವ, ಅಮರ ಮಾಗಣೆ ಇವುಗಳಿಗೆ ತುಮಕೂರು ಪ್ರಮುಖ ಸ್ಥಳವಾಗಿದೆ.ಸ್ಥಳೀಯ ಇತಿ ಹಾಸವನ್ನು ತಿಳಿಸುವ ಮತ್ತಷ್ಟು ಇಂತಹ ಪುಸ್ತಕಗಳು ಒದುಗರ ಕೈ ಸೇರುವಂತಾಗಲಿ ಎಂದು ಡಾ.ದೇವರ ಕೊಂಡಾರೆಡ್ಡಿ ನುಡಿದರು.
ಬೆಂಗಳೂರು ವಿವಿ ಚಿರಿತ್ರೆ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ಗತವೇ ಬೇರೆ, ಚರಿತ್ರೆಯೇ ಬೇರೆ. ಗತದ ಎಲ್ಲಾ ಘಟನೆಗಳನ್ನು ಚರಿತ್ರೆಯಲ್ಲಿ ಅಡಕ ಮಾಡಲು ಸಾಧ್ಯವಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ,ಇತಿಹಾಸ ಎಂದರೆ ಕಥೆ ಎಂದುಕೊAಡಿದ್ದ ನನ್ನಂತಹ ಸಾಹಿತ್ಯದ ವಿದ್ಯಾರ್ಥಿಗೆ, ಇತಿಹಾಸವೆಂದರೆ ಸಂಶೋಧನೆ, ವಿಮರ್ಶೆ ಎಂದು ತೋರಿಸಿಕೊಟ್ಟಿದ್ದು ಡಾ.ಡಿ.ಎನ್.ಯೋಗೀಶ್ವರಪ್ಪ. ಈಗಾ ಗಲೇ ಅವರು ತುಮಕೂರು ಜಿಲ್ಲೆಯ ಸಾಹಿತ್ಯ ಚರಿತ್ರೆ, ತುಮಕೂರು ಜಿಲ್ಲೆಯ ಇತಿಹಾಸ ಚರಿತ್ರೆಯನ್ನು ನೀಡಿದ್ದಾರೆ. ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುವ ಮೂಲಕ ಮತ್ತಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಲಿ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃತಿಕಾರರಾದ ಡಾ. ಡಿ.ಎನ್.ಯೋಗೀಶ್ವರಪ್ಪ,ಸುಮಾರು ೨೦ ವರ್ಷಗಳದ ಅಧ್ಯಯನ ಇಂದು ಕಲ್ಪಹಾಸ ಕೃತಿಯಾಗಿ ನಿಮ್ಮಗಳ ಕೈ ಸೇರಿದೆ ಎಂದರು.
ವೇದಿಕೆಯಲ್ಲಿ ಬಸವ ಸಾಹಿತ್ಯ ವೇದಿಕೆಯ ಡಾ.ಅರವಿಂದ ಜತ್ತಿ, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ತುಮಕೂರು ವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್, ಸುಹಾಸ್ ಗ್ರಾಫಿಕ್‌ನ ಮೇಲುಕೋಟೆ ಮುರುಳೀಧರ, ಡಾ.ಬಿ.ಆರ್.ಚಂದ್ರಶೇಖರಯ್ಯ, ಸೋಮಶೇಖರ್.ಎಲ್,ಆರ್. ಮತ್ತಿತರರು ಉಪಸ್ಥಿತರಿದ್ದರು.

 

(Visited 1 times, 1 visits today)