ತುಮಕೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭಾಷೆಯ ಮೇಲೆ ಹಿಡಿತ ಮತ್ತು ತಾಂತ್ರಿಕ ಕೌಶಲ್ಯ ಇದ್ದರೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳು ಓದುವುದರ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಯಬೇಕು ಎಂದು ಉಪನ್ಯಾಸಕ ಮತ್ತು ಪತ್ರಕರ್ತರಾದ ಹಾರೋಗೆರೆ ಶಂಕರಪ್ಪ ಎಚ್.ಎನ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೪-೨೫ ಸಾಲಿನ ಎನ್.ಎಸ್.ಎಸ್ ಶಿಬಿರದಲ್ಲಿ ಮಾತನಾಡುತ್ತಾ ಪತ್ರಿಕೋದ್ಯಮ ಕ್ಷೇತ್ರ ಇಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು ಸಾವಿರಾರು ಜನರಿಗೆ ಈ ಕ್ಷೇತ್ರದಲ್ಲಿ ಉದ್ಯೋಗವಿದೆ,ಕೌಶಲ್ಯ ಮತ್ತು ತಾತಾಂತ್ರಿಕವಾಗಿ ನೈಪುಣ್ಯತೆ ಹೊಂದಿ ರಬೇಕು. ಪತ್ರಿಕಾ ಕ್ಷೇತ್ರ ಇಂದು ಡಿಜಿಟಲ್ ಮಾಧ್ಯಮವಾಗಿ ಬೆಳೆಯುತ್ತಿದ್ದು, ದೃಶ್ಯ ಮಾಧ್ಯಮ ,ಪ್ರಿಂಟ್ ಮೀಡಿಯಾ, ರೇಡಿಯೋ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ತಾಂತ್ರಿಕವಾಗಿ ನೈಪುಣ್ಯತೆ ಹೊಂದಿರುವವರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತಿವೆ. ಪತ್ರಿಕೆಗಳು ಸದಾ ಸಮಾಜದ ಮತ್ತು ಜನರ ಕ್ಷೆಯೋಭಿವೃದ್ಧಿಯ ಗುರಿಯಾಗಿರಿಸಿಕೊಂಡು ಸುದ್ದಿಗಳನ್ನು ಬಿತ್ತರಿಸುತ್ತೇವೆ ಎಂದರು.
ಸAಗೀತ ಗಾಯಕ ದಿಬ್ಬೂರು ಮಂಜಣ್ಣ ಮಾತನಾಡಿ ವಿದ್ಯಾರ್ಥಿಗಳು ಇಂತಹ ಶಿಬಿರದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಮುಖೇನ ಮುಂದಿನ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ವಿದ್ಯಾರ್ಥಿ ಜೀವನದ ಮುಗಿದ ನಂತರ ನಿಮ್ಮ ನಿಜವಾದ ಜೀವನ ಪ್ರಾರಂಭವಾಗುತ್ತದೆ ಉದ್ಯೋಗವನ್ನು ದೊರೆಯ ಬೇಕಾದರೆ ಇಂದು ಓದಿನ ಜೊತೆಗೆ ಕೌಶಲ್ಯ ಮುಖ್ಯ, ಎನ್ ಎಸ್ ಎಸ್ ,ಎನ್ ಸಿ ಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಶಿಬಿರಗಳು ವಿದ್ಯಾರ್ಥಿ ವ್ಯಕ್ತಿತ್ವ ರೂಪಿಸುವ ಶಿಬಿರಗಳಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಎನ್ ಎಸ್ ಎಸ್ ಶಿಭಿರಾಧಿಕಾರಿ ಡಾ. ರಾಜಶೇಖರ್.ಎ.ಎಸ್ ಮಾತನಾಡಿ ಇಂದು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾನಿಲಯದ ಬಿದರನಕಟ್ಟೆ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಈ ಸಸ್ಯಕಾಶಿ ಮುಂದಿನ ದಿನಗಳಲ್ಲಿ ಬಿದರಕಟ್ಟೆ ಕ್ಯಾಂಪಸ್ ಅಚ್ಚ ಹಸಿರಿನಿಂದ ಕಂಗೊಳಿಸುವAತೆ ಮಾಡುತ್ತದೆ, ನಿಮ್ಮ ಈ ಕಾರ್ಯ ಶಾಶ್ವತವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಗೀತ ಗಾಯಕ ದಿಬ್ಬುರ್ ಮಂಜಣ್ಣ ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಅವರ ವಿವಿಧ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ದಿಬ್ಬೂ ರು ಉಮೇಶ್,ಉಪನ್ಯಾಕರಾದ ರಂಗದಮಯ್ಯ, ಮಧು ಶಾಲಿನಿ .ಜಿ.ಆರ್,ಡಾ,ಮನು ಡಿ.ಕೆ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(Visited 1 times, 1 visits today)