ಕೊರಟಗೆರೆ: ಸಾರಿಗೆ ಬಸ್ ನಿರಂತರ ಸಮಸ್ಯೆಗೆ ಬೇಸೆತ್ತ ಪ್ರಯಾಣಿಕರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ತಡೆದು ಸಾರಿಗೆ ಅಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಗೃಹ ಸಚಿವರ ಕ್ಷೇತ್ರದಲ್ಲಿಯೇ ಬಸ್ಗಾಗಿ ಪರದಾಡುತ್ತವಂತಹ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆ.೪ರಿಂದಲೂ ಕಾಯುತ್ತಿದ್ದೇವೆ, ಬಸ್ ಬಂದರೂ ನಿಲ್ಲಿಸಲ್ಲಾ, ಕೆಲವು ಬಸ್ಗಳು ನಗರಕ್ಕೆ ಬರದೇ ಬೈಪಾಸ್ ಮೂಲಕ ಹೋಗುತ್ತಿದೆ. ಇದು ಕೇವಲ ಒಂದು ದಿನದ ಸಮಸ್ಯೆಯಲ್ಲಾ ಪ್ರತಿನಿತ್ಯದ ಸಮಸ್ಯೆ ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಸ್ ತಡೆದು ಆಕ್ರೋಶ ಹೊರಹಾಕುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೋಲಿಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ ತುಮಕೂರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿ, ಪ್ರಯಾಣಿಕರ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ, ಪ್ರಯಾಣಿಕರು ತಡೆಹಿಡಿದ ೧೦ಕ್ಕೂ ಹೆಚ್ಚಿನ ಬಸ್ಗಳಿಂದ ಉಂಟಾಗಿದ್ದ ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಸರ್ಕಾರಿ ಬಸ್ ತೊರೆದು ಖಾಸಗಿ ಬಸ್ನಲ್ಲಿ ಪ್ರಯಾಣ: ಪಾವಗಡ ಮತ್ತು ಮಧುಗಿರಿ ಕಡೆಯಿಂದ ಬಂದAತಹ ಸಾರಿಗೆ ಬಸ್ಗಳ ಪ್ರಯಾಣಿಕರ ಸಂಖೈ ಹೆಚ್ಚಳವಾದ ಕಾರಣ ಕೊರಟಗೆರೆ ನಗರದಲ್ಲಿ ತಡೆಹಿಡಿದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದರು. ಸಮಯದ ಅಭಾವದಿಂದ ಕೆಲ ಪ್ರಯಾಣಿಕರು ಆಸ್ಪತ್ರೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಕಂಪನಿಗಳಿಗೆ, ಕೂಲಿ ಕೆಲಸಕ್ಕೆ ತೆರಳ ಬೇಕಾಗಿದ್ದವರು ಸರ್ಕಾರಿ ಬಸ್ ತೊರೆದು ಖಾಸಗಿ ಬಸ್ ಹಿಡಿದು ಪ್ರಯಾಣಿಸಿದ್ದು ಕಂಡುಬ0ದಿತ್ತು.
ಪ್ರಯಾಣಿಕರ ಮನವಿ ಸ್ವೀಕರಿಸಿದ ಪಿಎಸ್ಐ ತೀರ್ಥೇಶ್: ಕೊರಟಗೆರೆ ನಗರದಲ್ಲಿ ಸೋಮವಾರ ಕಂಡು ಬಂದ ಬಸ್ ಸಮಸ್ಯೆಗೆ ಆಕ್ರೋಶ ಹೊರ ಹಾಕುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ ನಗರ ಪೋಲಿಸ್ ಇಲಾಖೆ ಪಿಎಸ್ಐ ತೀರ್ಥೇಶ್ ತುಮಕೂರು ಕೆಎಸ್ಆರ್ಟಿಸಿ ಡಿಪೋ ಹಾಗೂ ಸಂಬAಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರವೇ ಬಸ್ ಬಿಡುವಂತೆ ತಿಳಿಸಿ ಪ್ರಯಾಣಿಕರ ಮನವಿಯನ್ನು ಸ್ವೀಕರಿಸಿದರು.
ಪಾವಗಡ, ಮಧುಗಿರಿ ಕಡೆಯಿಂದ ಬರುತ್ತಿದ್ದ ಬಸ್ಗಳಲ್ಲಿ ಪ್ರಯಾಣಿಕರ ಭರ್ತಿಯಿಂದ ಬೈಪಾಸ್ ಮೂಲಕ ಬೆಂಗಳೂರಿಗೆ ಹೋಗುತ್ತಿದೆ. ಪ್ರತಿನಿತ್ಯ ಆಸ್ಪತ್ರೆಗಳಿಗೆ, ಶಾಲೆಗಳಿಗೆ, ಕೆಲಸಗಳಿಗೆ ಹೋಗುವವರ ಪಾಡೇನು. ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮವಹಿಸಿದೆ ಬೇಜವಬ್ದಾರಿ ವಹಿಸಿದ್ದಾರೆ. ಬಸ್ ತಡೆದು ಸಮಸ್ಯೆ ಬಗೆಹರಿಸುವಂತೆ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ನಾಗೇಶ್,
ಬೆಂಗಳೂರಿಗೆ ಹೋಗಲು ಬೆ.೪:೩೦ಕ್ಕೆ ಬಸ್ಟಾಂಡ್ಗೆ ಬಂದರು ಬಸ್ಗಳು ನಿಲ್ಲಿಸುತ್ತಿಲ್ಲಾ, ಕೆಲವು ಬಸ್ಗಳು ಬೈಪಾಸ್ ಮೂಲಕ ಹೋಗುತ್ತಿವೆ. ಬಸ್ಗೆ ಅಡ್ಡ ಹೋದ ಪ್ರಯಾಣಿಕರ ಮೇಲೆಯೇ ಬಸ್ ಬಿಡಲು ಹೋಗುತ್ತಾರೆ. ಬಸ್ನ ಅನಾನುಕೂಲದಿಂದ ಕೆಲಸಗಳಿಗೆ ಹೋಗಲು ಆಗುತ್ತಿಲ್ಲಾ, ಹಾಸನ ಸೇರಿ ಇತರೆ ಭಾಗದ ಬಸ್ಗಳು ಖಾಲಿ ಖಾಲಿ ಇರುತ್ತವೆ. ನಿರಂತರ ಸಮಸ್ಯೆಗೆ ಬೇಸೆತ್ತು ಬಸ್ ತಡೆದು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ.
ಕೋಮಲ, ಪ್ರಯಾಣಿಕರು.