ತುಮಕೂರು: ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ಸ್ಲಂ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಜಿಲ್ಲೆಯಲ್ಲಿ ಕಳೆದ ೬ ತಿಂಗಳಿನಿAದ ಸ್ಲಂ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸದೆ ಎಲ್ಲಾ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿ ಎಸ್‌ಐಆರ್ ಮತ ಪರಿಷ್ಕರಣೆ ನೆಪದಲ್ಲಿ ಸ್ಲಂಜನರನ್ನು ನಿರ್ಲಕ್ಷಿಸಲಾಗುತ್ತಿದೆ. ನಿವೇಶನ ರಹಿತರ ಬೇಡಿಕೆಗಳು, ಮಳೆ ಬಂದರೇ ಅತಂತ್ರ ವ್ಯವಸ್ಥೆಗೆ ಸಿಲುಕುವ ಸ್ಲಂಗಳಿಗೆ ತಡೆಗೋಡೆ ನಿರ್ಮಾಣ, ಬಾಕಿ ಉಳಿದಿರುವ ೧೨೫೦ ಹಕ್ಕುಪತ್ರ ಹಂಚಿಕೆ ಹಾಗೂ ಭೂಮಿ ಹಸ್ತಾಂತರವಾಗಿದಿರುವುದು, ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಜಾತಿ ಆದಾಯ ಪ್ರಮಾಣಪತ್ರ ವಿತರಣೆ ನಿವೇಶನ ಹಂಚಿಕೆಯಲ್ಲಿ ವಿಳಂಭ ಧೋರಣೆ ಕಾಣುತ್ತಿವೆ. ಎಸ್‌ಐಆರ್ ಪ್ರಕ್ರಿಯೆಯಿಂದ ಆಗುತ್ತಿರುವ ಲೋಪದೋಷಗಳು ಕುರಿತು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಇದೇ ಆಗಸ್ಟ್ ೧೩ ರಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಕಾರ್ಯಕಾರಿ ಸಮಿತಿ ತೀರ್ಮಾನಿಸಲಾಗಿದೆ. ಮತ್ತು ಜಿಲ್ಲೆಯ ಜಿಲ್ಲಾ ಉಸ್ತುವಾರಿಗಳು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರಿಗೆ ಜಿಲ್ಲೆಯ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಸಭೆ ಕರೆಯಬೇಕೆಂದು ಒತ್ತಾಯಿಸಿ ಆಗಸ್ಟ್ ೧೫ ರಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸುಲಾಗುವುದು ಎಂದರು.
ನAತರ ಕಾರ್ಯದರ್ಶಿ ಅರುಣ್ ಮತ್ತು ಜಾಬೀರ್ ಖಾನ್ ಮಾತನಾಡಿದರು.
ಈ ಕಾರ್ಯಕಾರಿಣಿ ಸಭೆಯಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಚಾಲಕರಾದ ಅನುಪಮಾ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಭಾರತಿ ನಗರದ ಶಾರದಮ್ಮ, ಗಂಗಾ, ಕೆಂಪಣ್ಣ, ಶಾಬುದ್ದೀನ್, ಕೋಡಿಹಳ್ಳ ಸ್ಲಂ ಶಾಖೆಯ ಮಂಜುನಾಥ್, ವೆಂಕಟೇಶ್, ಎಸ್.ಎನ್ ಪಾಳ್ಯದ ಗುಲ್ನಾಜ್, ಸಲ್ಮಾ, ಫೀರ್‌ಸಾಬ್, ಮರಳೂರು ದಿಣ್ಣೆ ಶಾಖೆಯ ಅಬೀಬುನ್ನಿಸಾ, ಪರ್ಜಾನ, ಮುಬಾರಕ್, ಸಲೀಂ, ನಿವೇಶನ ಹೋರಾಟ ಸಮಿತಿಯ ಹನುಮಕ್ಕ, ಇಂದ್ರಮ್ಮ, ಶಾಂತಮ್ಮ, ಗೀತಾ, ದಿಬ್ಬೂರುದೆ ಸ ಬಡಾವಣೆಯ ರಾಜು, ಇಮ್ತಿಯಾಜ್ ಖಾನ್, ಬಿದರು ಮಳೆತೋಟದ ಮಣಿ, ಇಸ್ಮಾಯಿಲ್ ನಗರದ ಗೋವಿಂದಪ್ಪ, ಎನ್.ಆರ್ ಕಾಲೋನಿ ಮೋಹನ್, ಶಾಂತ ಕುಮಾರ್, ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)