ತುಮಕೂರು: ತಳ ಸಮುದಾಯಗಳು ಸಮಾಜದಲ್ಲಿ ಗುರುತಿಸಿ ಕೊಳ್ಳುತ್ತಿದ್ದರೆ, ಅದಕ್ಕೆ ಕಾರಣ ಅವರಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್.ಎನ್ ಛಲವಾದಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಮುದಿಮಡು ಇವರು ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಂದುಕೊಡುವ ಅರೆ, ಉರುಮೆ, ಕಹಳೆ ಇನ್ನಿತರ ಚರ್ಮ ವಾದ್ಯಗಳು ಇಂದಿಗೂ ತಳ ಸಮುದಾಯಗಳ ಕಲೆಯಾಗಿಯೇ ಉಳಿದಿವೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸಲು ಇಲಾಖೆಯೂ ಸಿದ್ದವಿದೆ ಎಂದರು.
ಬಾಬಾ ಸಾಹೇಬರು ಬರೆದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕುತಿದ್ದೇವೆ. ತಳ ಸಮುದಾಯಗಳಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ತಳ ಸಮುದಾಯಗಳು ಸಂಘಟಿತರಾಗಿ ಮುನ್ನೆಡೆದರೆ, ಅದಕ್ಕೆ ನಮ್ಮ ಸಾಂಸ್ಕೃತಿಕ ಹಿರಿಮೆಗಳು ಜೊತೆಗೂಡಿದರೆ ಇಡೀ ವಿಶ್ವವೇ ನಮ್ಮತ್ತ ತಿರುಗಲಿದೆ. ಹಾಗಾಗಿ ಅರೆ, ಉರುವೆ ಕಳಹೆ ಕಲಾವಿದರು ಆಸಕ್ತರಿಗೆ ತಮ್ಮ ಕಲೆಯನ್ನು ಧಾರೆ ಎರೆದು ಅದು ಮುಂದಿನ ಪೀಳಿಗೆಗೆ ತಲುಪವಂತೆ ಮಾಡಬೇಕೆಂದು ಅಶೋಕ್.ಎನ್ ಛಲವಾದಿ ತಿಳಿಸಿದರು.
ಸಮಾಜ ಸೇವಕರಾದ ಗೌತಮ್ ಮಾತನಾಡಿ, ಅಳಿವಿನ ಹಂಚಿನಲ್ಲಿರುವ ಜಾನಪದ ಕಲೆಗಳು ನೂರಾರು ವರ್ಷಗಳ ಕಾಲ ಉಳಿಯಬೇಕೆಂದರೆ ಕಲಾ ಪ್ರೋತ್ಸಾಹಕರ ಅಗತ್ಯವಿದೆ. ಈ ಕೆಲಸವನ್ನು ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಸುರೇಶ ಅವರು ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ದೆಹಲಿಯಲ್ಲಿ ಅರೆ, ತಮಟೆ,ನಗಾರಿ, ಕಹಳೆ ಕಲೆಗಳ ಪ್ರದರ್ಶನ ನೀಡುವ ಮೂಲಕ ಇಂದಿಗೂ ಆ ಕಲೆಗಳು ಜೀವಂತವಿರುವAತೆ ಮಾಡಿದ್ದಾರೆ. ಮತ್ತಷ್ಟು ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿದರು.
ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಭವನದಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾದರೆ ಕನಿಷ್ಠ ಒಂದೆರಡು ಕಾರ್ಯಕ್ರಮಗಳನ್ನಾದರೂ ವೀಕ್ಷಿಸುವುದು ಮೊದಲಿನಿಂದಲೂ ರೂಢಿಸಿ ಕೊಂಡಿದ್ದೇನೆ. ಕಲೆಗೆ ಸಾವಿಲ್ಲ. ಹಾಗೆಯೇ ಕಲೆಗೆ ಬೆಲೆ ಕಟ್ಟಲಾಗದು. ನಿಸ್ವಾರ್ಥದಿಂದ ಕಲೆಯ ಸೇವೆ ಮಾಡುವವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಬAಧಪಟ್ಟ ಇಲಾಖೆಗಳು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅರೆ, ಉರುಮೆ, ಕಹಳೆಯಂತಹ ಕಲೆಗಳನ್ನು ಚಿತ್ರ ಗಳಲ್ಲಷ್ಟೇ ನೋಡಬೇಕಾದ ಕಾಲ ಬರಬಹುದು ಎಂದರು.
ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ ಮಾತನಾಡಿದರು.
ಕಾರ್ಯಕ್ರಮವನ್ನು ಸೌಭಾಗ್ಯ ಲಕ್ಷಿö್ಮÃಪತಿ ಉದ್ಘಾಟಿಸಿದರು. ವೇದಿಕೆಯಲ್ಲಿ ಚಿಟ್ಟಿಮೇಳ, ವೀರಗಾಸೆ, ಅರೆವಾದ್ಯ, ಪೂಜಾ ಕುಣಿತ, ತಮಟೆ ವಾದ್ಯದ ಪ್ರದರ್ಶನ ಹಾಗೂ ಜಾನಪದ ಗೀತೆಗಳ ಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ ಕುಮಾರ್, ಅಂತರರಾಷ್ಟಿçÃಯ ತಮಟೆ ಕಲಾವಿದ ಕುಂತೂರು ಕುಮಾರ್, ಡಿಸಿ ಕಚೇರಿ ಅಡಳಿತಾಧಿಕಾರಿ ಎಲ್.ಮುರುಳೀಧರ್, ವಕೀಲರಾದ ಹಾಲೇನಹಳ್ಳಿ ಮಂಜುನಾಥ್, ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷರಾದ ನರಸಿಂಹರಾಜು, ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.

(Visited 1 times, 1 visits today)