ತುರುವೇಕೆರೆ: ತಾಲ್ಲೂಕಿನ ಎನ್.ಡಿ.ಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿದಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ರೈತರು ಅತಂಕ ಪಡುವುದು ಬೇಡ ನಿಮ್ಮ ಜೊತೆ ನಾವು ಸದಾ ಇರುತ್ತೇವೆ. ಜಿಲ್ಲೆಯ ರೈತರ ಹಿತ ದೃಷ್ಟಿಯಿಂದ ಹೋರಾಟ ಅನಿವಾರ್ಯ. ಸಾವಿರಾರು ರೈತರ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಎನ್.ಡಿ.ಎ ಮುಖಂಡರು ಹಾಗೂ ತಾಲೂಕಿನ ರೈತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೂ ಜಿಲ್ಲೆಗೆ ಹೇಮಾವತಿ ನೀರು ಹರಿಸಿದ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಾಲೂಕಿನಲ್ಲಿ ಈ ವರ್ಷ ಮಳೆ ಇಲ್ಲದೆ ಬರಗಾಲ ಆವರಿಸಿದ. ಯಾವ ರೈತರು ರಾಗಿ ಸೇರಿದಂತೆ ಯಾವುದೇ ಬೆಳೆ ಬಿತ್ತನೆ ಮಾಡಿಲ್ಲ. ತಾಲ್ಲೂಕಿನ ಒಂದು ಎಕರೆ ಕೂಡ ಬಿತ್ತನೆ ಹಾಗಿಲ್ಲ. ಕೂಡಲೇ ಸರ್ಕಾರ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಜೊತೆಗೆ ಪ್ರತಿ ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ರೈತರ ಜೀವನಾಡಿಯಾದ ಹೇಮಾವತಿ ನೀರಿಗೆ ಕನ್ನ ಹಾಕಲು ಸರ್ಕಾರ ಮುಂದಾಗಿದೆ. ಅನಧಿಕೃತವಾಗಿ ಮಾಡುತ್ತಿರುವ ಲಿಂಕ್ ಕೆನಾಲ್ ಸ್ಥಗಿತಗೊಳಿಸುವರೆಗೂ ಹೋರಾಟ ನಿರಂತರವಾಗಿ ನೆಡೆಯಲಿದೆ. ನಮಗೆ ಜಿಲ್ಲಾಯ ರೈತರ ಹಿತ ಮುಖ್ಯ ವಾಗಿದೆ. ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಯಲು ನನ್ನ ವಿರೋಧವಿಲ್ಲ. ಕುಣಿಗಲ್ ಗೆ ೩.೮ಟಿ.ಎಂ.ಸಿ ನೀರು ಅಲೋಕೆಟ್ ಹಾಗಿದೆ ಈಗ ಸುಮಾರು ೭.೫ ಟಿ.ಎಂ.ಸಿ. ನೀರು ಹರಿಯುತ್ತಿದೆ. ಇನ್ನು ಹೆಚ್ಚುವರಿ ಒಂದು ಟಿ.ಎಂ.ಸಿ ನೀರು ತೆಗೆದುಕೊಂಡು ಹೋಗಲಿ ನಮ್ಮ ಅಭ್ಯಂತರ ಇಲ್ಲ. ಸರ್ಕಾರ ಲಿಂಕ್ ಕೆನಾಲ್ ಯೋಜನೆ ಕೈಬಿಟ್ಟು. ಜಿಲ್ಲೆಗೆ ಹರಿಯುವ ನಾಲಾ ಸಾಮರ್ಥ್ಯ ವನ್ನು ವೈಡನ್ ಮಾಡಿ ಹೆಚ್ಚಿಸಲಿ ನಂತರ ಹೆಚ್ಚು ನೀರು ಹರಿಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ರಾಜೀವ್, ವೆಂಕಟಾಪುರ ಯೋಗೀಶ್, ತ್ಯಾಗರಾಜು, ರಂಜಿತ್, ಮಧು, ಶರತ್ ಸೇರಿದಂತೆ ಇತರರು ಇದ್ದರು.

(Visited 1 times, 1 visits today)