ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ರಕ್ತ ನಾಳ ಶಸ್ತçಚಿಕಿತ್ಸಾ ತಜ್ಞ ಡಾ.ರಾಹುಲ್ .ಎನ್.ಎಸ್. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಧುಮೇಹ,ಬಿ.ಪಿ ಇದ್ದವರಿಗೆ ರಕ್ತನಾಳಗಳಲ್ಲಿ ಸರಾಗವಾಗಿ ರಕ್ತ ಹರಿಯದೆ ನೋವು, ನಂತರ ಗಂಟು ಕಾಣಿಸಿಕೊಳ್ಳುತ್ತದೆ. ಈ ವೇಳೆ ನಿರ್ಲಕ್ಷ ಮಾಡಿದರೆ ಅದು ಮುಂದೆ ಕಾಲನ್ನೇ ತೆಗೆಯಬೇಕಾದ ಅನಿರ್ವಾಯತೆ ಉಂಟಾಗುತ್ತದೆ. ಹಾಗಾಗಿ ನೋವು ಬಂದಾಗಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ, ಮಾರ್ಗದರ್ಶನ ಪಡೆದರೆ ಕಾಲು ಗ್ರಾಂಗ್ ರಿನ್ ಆಗಿ ಕಾಲ ತೆಗೆಯುವುದರಿಂದ ತಪ್ಪಿಸಿಕೊಳ್ಳಬಹುದು ಎಂದರು.
ಬೆAಗಳೂರಿನ ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ವ್ಯಾಸುಕುಲರ್ ಸರ್ಜರಿಗೆ ನುರಿತ ತಜ್ಞ ವೈದ್ಯಕೀಯ ತಂಡವಿದ್ದು, ಸಣ್ಣ ಶಸ್ತç ಚಿಕಿತ್ಸೆಯ ಮೂಲಕ ಬ್ಲಾಕ್ ಆಗಿರುವ ರಕ್ತ ನಾಳಕ್ಕೆ ಸ್ಟಂಟ್ ಅಳವಡಿಸುವ ಮೂಲಕ ಸರಾಗವಾಗಿ ರಕ್ತ ಹರಿಯುವಂತೆ ಮಾಡುವ ಮೂಲಕ ಕಾಲು ಉಳಿಸಬಹುದು ಎಂದು ಡಾ.ರಾಹುಲ್ ಎನ್.ಎಸ್. ತಿಳಿಸಿದರು.
ದೇಶದಲ್ಲಿ ಒಂದು ವರ್ಷದಲ್ಲಿ ಮಧುಮೇಹದಿಂದ ಕಾಲಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳು ಬ್ಲಾಕ್ ಆಗಿ, ಕಾಯಿಲೆ ಉಲ್ಬಣಗೊಂಡು, ಗ್ಯಾಂಗ್ರಿನ್ ಆಗಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ.ಕರ್ನಾಟಕದಲ್ಲಿ ಪ್ರತಿ ವರ್ಷ ೬-೭ ಸಾವಿರ ಜನರು ಅಂಗವಿಕಲರಾಗುತ್ತಿದ್ದು, ದಿನಕ್ಕೆ ೨೦ ಕಾಲುಗಳನ್ನು ತೆಗೆದು ಹಾಕಲಾಗುತ್ತಿದೆ.ಮನುಷ್ಯನಿಗೆ ಜೀವನ ಎಷ್ಟು ಮುಖ್ಯವೋ ಕಾಲು ಅಷ್ಟೇ ಮುಖ್ಯ. ಹಾಗಾಗಿ ಕಾಲುಗಳ ರಕ್ಷಣೆಗೂ ನಾವು ಒತ್ತು ನೀಡಬೇಕಾಗಿದೆ ಎಂದು ಡಾ.ರಾಹುಲ್ , ಒಂದು ಬೆರಳಿಗಿಂತ ಕಾಲು ಮುಖ್ಯ, ಕಾಲಿಗಿಂತ ಜೀವ ಮುಖ್ಯ.ಜೀವಕ್ಕಿಂತ ಜೀವನ ಮುಖ್ಯ ಎಂದು ನಾವೆಲ್ಲರೂ ಅರಿತುಕೊಂಡು ಕೆಲಸ ಮಾಡಿದರೆ, ಮಧುಮೇಹದಿಂದಾಗಿ ಅಂಗವಿಕಲತೆಯಿAದ ದೂರ ಉಳಿಯಬಹುದು ಎಂದರು.
ನಮ್ಮ ಪಾದಗಳಲ್ಲಿ ಇರುವ ರಕ್ತನಾಳಗಳು ಅತ್ಯಂತ ಸೂಕ್ಷ÷್ಮ,ಒಮ್ಮೆ ಅವುಗಳು ಬ್ಲಾಕ್ ಆದರೆ ಹಲವಾರು ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನೋವು ಕಾಣಿಸಿಕೊಂಡಾಗಲೇ ಎಚ್ಚೇತ್ತುಕೊಂಡರೆ, ರೋಗದಿಂದ ಮುಕ್ತಿ ಪಡೆಯಬಹುದು. ಕಡಿಮೆ ಶಸ್ತçಚಿಕಿತ್ಸೆ ಯಿಂದ ಸುಧಾರಿತ ವ್ಯಾಸ್ಕ÷್ಯಲರ್ ವಿಧಾನಗಳಿಂದ ಮಧುಮೇಹಿ ರೋಗಿಗಳಲ್ಲಿ ಕಾಲಿನ ನೋವಿಗೆ ಬದಲಾವಣೆ ಕಂಡುಕೊಳ್ಳಬಹುದು. ಅಂಜಿಯೋಪ್ಲಾಸ್ಟ್ ನ ಮೂಲಕ ರಕ್ತನಾಳಗಳಲ್ಲಿನ ಬ್ಲಾಕೇಜ್ ಕ್ಲಿಯರ್ ಮಾಡಲು ಸಾಧ್ಯವಿದೆ. ಇದರೊಂದಿಗೆ ಪ್ಲಾಂಟಾರ ಆಟರಿ ಅಂಜಿಯೋಪ್ಲಾಸ್ಟ್ ಮೂಲಕವೂ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಪುನಃ ಸ್ಥಾಪಿಸಬಹುದಾಗಿದೆ ಎಂದು ಡಾ. ರಾಹುಲ್ ಎನ್.ಎಸ್. ಸ್ಪಷ್ಟ ಪಡಿಸಿದರು.
(Visited 1 times, 1 visits today)





