Author: News Desk Benkiyabale

ಚಿಕ್ಕನಾಯಕನಹಳ್ಳಿ: ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡವನ್ನು ಕೆಆರ್‌ಎಸ್‌ಪಕ್ಷದ ಹೋರಾಟದ ಫಲವೆಂಬ0ತೆ ಜೆಸಿಬಿ ಮೂಲಕ ಕಟ್ಟಡವನ್ನು ಕೆಡವಿ ಹಾಕಿದ ವಿನೂತನ ಘಟನೆ ತಾಲ್ಲೂಕಿನ ಲಕ್ಕಸಂದ್ರದಲ್ಲಿ ನಡೆದಿದೆ. ತಾಲ್ಲೂಕಿನ ಹೊಯ್ಸಳಕಟ್ಟೆ ಪಂಚಾಯಿತಿ ಲಕ್ಕೇನಹಳ್ಳಿ ಗ್ರಾಮ ಅತ್ಯಂತ ಹಿಂದುಳಿದ ಪ್ರದೇಶವೆನಿಸಿದ್ದು, ಈ ಗ್ರಾಮದಲ್ಲಿ ವಿವೇಕ ಯೋಜನೆಯಡಿ ಹೊಸದಾಗಿ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ತಳಪಾಯವಿಲ್ಲದೆ ಕಟ್ಟಡ ಕಟ್ಟಲಾಗುತ್ತಿದೆ ಎಂಬ ದೂರಿನ ಮೇಲೆ ಕೆಆರ್ ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ತಮ್ಮ ತಂಡದೊ0ದಿಗೆ ಸ್ಥಳಕ್ಕೆ ತೆರಳಿ ತಳಪಾಯವಿಲ್ಲದೆ, ಕಬ್ಬಿಣ ಹಾಗೂ ಸಿಮೆಂಟ್ ಗಳನ್ನು ನಿಯಮದಂತೆ ಬಳಸದೆ, ಕಳಪೆ ಮಟ್ಟದ ಇಟ್ಟಿಗೆ ಬಳಸಿ ಕಟ್ಟಡ ನಿರ್ಮಿಸುತ್ತಿರುವುದನ್ನು ಬೆಳಕಿಗೆ ತಂದರು. ಜಿಲ್ಲಾ ಪಂಚಾಯಿತ್ ಇಂಜಿನಿಯರ್ ಇಲಾಖೆಯಡಿ ಗುತ್ತಿಗೆದಾರ ಕಟ್ಟಡವನ್ನು ನಿರ್ಮಿಸುತ್ತಿದ್ದು, ಸದರಿ ಕಟ್ಟಡ ನಿರ್ಮಾಣದ ಹಂತದಲ್ಲಿ ಸಂಬ0ಧಿಸಿದ ಇಂಜಿನಿಯರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಸ್ಥಳ ಪರಿಶೀಲನೆ ಮಾಡದ ಬಗ್ಗೆ ಆಕ್ಷೇಪಿಸಿ, ಮಕ್ಕಳ ಆಯೋಗಕ್ಕೂ ದೂರು ನೀಡಿದ್ದರು. ಈ ಸಂಬ0ಧ ಮಕ್ಕಳ ಆಯೋಗ ಸ್ಥಳಕ್ಕೆ ಭೇಟಿ…

Read More

ಪಾವಗಡ: ನಿಡಗಲ್ಲು ಹೋಬಳಿಯ ಕೋಟಗುಡ್ಡ ಗ್ರಾಮದಲ್ಲಿ ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಮುಖ್ಯ ಬೀದಿಗಳಲ್ಲಿ ಭಕ್ತರು ಭಜನೆ, ನಾದಸ್ವರ, ಧ್ವಜಮೆರವಣಿಗೆಗಳೊಂದಿಗೆ ಉತ್ಸವದ ವಾತಾವರಣ ನರ‍್ಮಿಸಿದರು. ಕರ‍್ಯಕ್ರಮಕ್ಕೆ ಚಾಲನೆ ನೀಡಿದ ಅಖಿಲ ರ‍್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀ ಪಾಳೇಗಾರ ಲೋಕೇಶ್ ಅವರು ಮಾತನಾಡಿ, “ಜಗತ್ತಿಗೆ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯರನ್ನು ಪರಿಚಯಿಸಿದ ಶ್ರೇಷ್ಠತೆ ಮರ‍್ಷಿ ವಾಲ್ಮೀಕಿಯವರದು. ಅವರು ಬರೆದ ರಾಮಾಯಣವು ಕೇವಲ ಕಥೆ ಅಲ್ಲ — ಅದು ಸತ್ಯ, ರ‍್ಮ, ನೈತಿಕತೆ ಮತ್ತು ಸಮಾನತೆಯ ಪಾಠ ನೀಡುವ ಶಾಶ್ವತ ಗ್ರಂಥ. ಸರ‍್ಯ ಚಂದ್ರ ಇರುವವರೆಗೂ ವಾಲ್ಮೀಕಿಯವರ ಕೃತಿ ಅಮರವಾಗಿರುತ್ತದೆ,” ಎಂದು ಹೇಳಿದರು. ಕರ‍್ಯಕ್ರಮದಲ್ಲಿ ಕೆಎಂಎಫ್ ನರ‍್ದೇಶಕ ಅಂಜಪ್ಪ, ಮುಖಂಡರಾದ ರಂಗಪ್ಪ, ಹನುಮಂತರಾಯಪ್ಪ, ಮಾಜಿ ಅಧ್ಯಕ್ಷ ರಾಜು, ವ್ಯವಸಾಯ ಸೇವಾ ಸಹಕಾರ ಸಂಘದ ಕರ‍್ಯರ‍್ಶಿ ರಂಗನಾಥ, ಹಾಲು ಉತ್ಪಾದಕರ ಸಹಕಾರ ಸಂಘದ ಕರ‍್ಯರ‍್ಶಿ ರಮೇಶ್, ಗ್ರಾಮದ ಯುವ ಮುಖಂಡ ವೆಂಕಟೇಶ್, ಅಖಿಲ ರ‍್ನಾಟಕ…

Read More

ಶಿರಾ: ವಿದ್ಯೆಯಿಂದ ಮಾತ್ರ ಶೈಕ್ಷಣಿಕ, ಸಾಮಾಜಿಕ ಹಾಗೂ ರ‍್ಥಿಕವಾಗಿ ಸಮುದಾಯ ಸದೃಢರಾಗಲು ಸಾಧ್ಯ ಎಂದು ಸಹಕಾರಿ ಮಾಜಿ ಸಚಿವ ಹಾಗೂ ಶಾಸಕ ಕೆ ಎನ್ ರಾಜಣ್ಣ ಹೇಳಿದರು. ಅವರು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಮಟ್ಟದ ಹನುಮಂತನಗರ (ದೊಡ್ಡಲಾದಮರ) ದಲ್ಲಿ ಮದಕರಿ ನಾಯಕ ಪತ್ತಿನ ಸಾಕಾರ ಸಂಘದ ಸಹಯೋಗದೊಂದಿಗೆ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ವಿದ್ಯೆ ಕಲಿಸಿ ಶೈಕ್ಷಣಿಕವಾಗಿ ಬಲ ಹೊಂದುವಂತೆ ಮಾಡುವ ರ‍್ತವ್ಯ ಪೋಷಕರದ್ದು, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ವಿದ್ಯೆ ಸೋಮಾರಿಗಳ ಸ್ವತ್ತಲ್ಲ, ಸಾಧಕರ ಸ್ವತ್ತು, ಇತ್ತೀಚಿನ ದಿನಮಾನಗಳಲ್ಲಿ ಜನಸಂಖ್ಯೆ ಸ್ಫೋಟ ಅತೀಯಾಗುತ್ತಿದ್ದು, ಉಳುಮೆ ಮಾಡುವ ಭೂಮಿಯ ವಿಸ್ತರ‍್ಣ ಕ್ಷೀಣಿಸುತ್ತಿದ್ದೆ, ಭೂಮಿ ನಂಬಿ ಬಧುಕು ಸಾಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನರ‍್ಮಾಣವಾಗಿದೆ, ವಿದ್ಯೆಯಿಂದ ಮಾತ್ರ ಬಧುಕು ಕಟ್ಟಿಕೊಳ್ಳಲು ಸಾಧ್ಯ, ವಿದ್ಯೆ ಕಲಿತವನು ಎಲ್ಲಿಯಾದರೂ ಹೋಗಿ ಜೀವನ ಕಟ್ಟಿಕೊಳ್ಳಬಲ್ಲನು, ರಾಜ್ಯದಲ್ಲಿ ನಡೆಯುತ್ತಿರುವ ರ‍್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಯಕ ಸಮುದಾಯದ ಪ್ರತಿಯೊಬ್ಬ ಬಂಧುಗಳು ಜಾತಿ…

Read More

ತುಮಕೂರು:  ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ದೇಶದ ಆಸ್ತಿಯಾಗಬೇಕು ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಕರೆ ನೀಡಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿವೇಕಾನಂದ ಕ್ರೀಡಾ ಸಂಸ್ಥೆ ಹಾಗೂ ರಾಜ್ಯ ಖೋ ಖೋ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಆರೋಗ್ಯವಂತ ಯುವಕರಿಂದ ದೇಶದ ಮತ್ತಷ್ಟು ಬಲಿಷ್ಠವಾಗುತ್ತದೆ. ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ದೇಶ ವಿಶ್ವದಲ್ಲೇ ನಂ. ೧ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಲಕ್ಷ, ಕೋಟಿ ಇದ್ದರೂ ಆರೋಗ್ಯ ಸಂಪಾದನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಕ್ರೀಡೆಯಲ್ಲಿ ತೊಡಗಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ದಿನಗಳಲ್ಲಿ ದೇಶೀಯ ಕ್ರೀಡೆಗಳ ಬಗ್ಗೆ ಯುವಕರ ಆಸಕ್ತಿ ಕಡಿಮೆಯಾಗಿದೆ. ಮೊಬೈಲ್ ವ್ಯಾಮೋಹ ಜಾಸ್ತಿಯಾಗಿದೆ.…

Read More

ಹುಳಿಯಾರು: ವಾರದ ಸಂತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದ ವತಿಯಿಂದ ಹುಳಿಯಾರು ಪಟ್ಟಣದಲ್ಲಿ ತೆರಿಗೆ ನಿರಾಕರಣೆ ಚಳುವಳಿಗೆ ಗುರುವಾರ ಚಾಲನೆ ನೀಡಲಾಯಿತು. ಕಳೆದ ಎರಡ್ಮೂರು ದಶಕಗಳಿಂದಲೂ ಸುಂಕ ವಸೂಲಿ ಮಾಡುವ ಪಟ್ಟಣ ಪಂಚಾಯ್ತಿ ನೀರು, ನೆರಳು, ಶೌಚಾಲಯ ನೀಡುವಂತೆ ಕೇಳಿಕೊಂಡು ಬಂದಿದ್ದೇವೆ. ತಿಂಗಳಿ0ದ ೨ ಹಂತದ ಚಳುವಳಿ ಮಾಡಿದ್ದೇವೆ. ಆದರೂ ಪಂಚಾಯ್ತಿ  ಧೋರಣೆ ತಾಳಿದ್ದು ತಮ್ಮ ಬೇಡಿಕೆಗಳು ಈಡೇರು ವವರೆಗೂ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ೩ ನೇ ಹಂತದ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಚಂದ್ರಪ್ಪ ತಾವು ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದರೂ ಪಟ್ಟಣ ಪಂಚಾಯಿತಿಯು ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಪಟ್ಟಣದ ಬೆಳಗಿನ ರೈತ ಸಂತೆ, ವಾರದಸಂತೆ, ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿಗೆ ಸಂತೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಬೇಕು ಎಂದು…

Read More

ತುರುವೇಕೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿರಿಯ ವಕೀಲನೊಬ್ಬ ಶೂ ಎಸೆದಿದ್ದು ಇದು ಸಂವಿಧಾನಕ್ಕೆ ಮಾಡಿದಂತ ಅಪಚಾರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ತಾಲೂಕು ಘಟಕದ ಅಧ್ಯಕ್ಷ ಬಾಣಸಂದ್ರ ಕೃಷ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆ ಯೊಂದಿಗೆ ಮಾತನಾಡಿ ಅವರು ದಿನಾಂಕ ೧೩.೧೦:೨೫ ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ಪ್ರವಾಸಿ ಮಂದಿರದಿ0ದ ತಾಲೂಕು ಕಚೇರಿ ವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಇದೊಂದು ಘೋರ ಕೃತ್ಯ ಖಂಡನೀಯವಾಗಿದ್ದು ಇದು ಸಮ ಸಮಾಜ ತಲೆ ತಗ್ಗಿಸುವಂತಹ ಹಾಗೂ ಸಂವಿಧಾನದ ಮೇಲೆ ಆದಂತಹ ದಾಳಿಯಾಗಿದ್ದು ೧೪೪ ಕೋಟಿ ಭಾರತೀಯರ ಮೇಲೆ ಆ ದಂತಹ ಅಪಮಾನ.ಸೂರ್ಯನ ಬೆಳಕು ಎಲ್ಲೆಲ್ಲಿ ಬೀಳುತ್ತದೆಯೋ ಅಲ್ಲಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಕಾನೂನು ಪ್ರಚಲಿತದಲ್ಲಿದೆ ಇಡೀ ಪ್ರಪಂಚದಲ್ಲಿಯೇ ಅತ್ಯುನ್ನತವಾದ ಸಂವಿಧಾನ ನಮ್ಮದು.…

Read More

ತುಮಕೂರು: ನಗರದಲ್ಲಿ ಅಕ್ಟೋಬರ್ ೨೪ ಮತ್ತು ೨೫ರಂದು ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಅವರಿಗೆ ಸೂಚಿಸಿದರು. ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಜಿಲ್ಲಾ ಪಂಚಾಯತಿಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಭಾವಂತ ಯುವಕರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಬಾರಿ ಯುವಜನೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು. ಯುವಜನೋತ್ಸವದಲ್ಲಿ ಜನಪದ ನೃತ್ಯ, ಜನಪದ ಗೀತೆ, ಭಾಷಣ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ವಿಜ್ಞಾನ ಮಾದರಿ ಸೇರಿದಂತೆ ಒಟ್ಟು ೯ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪ್ರತಿ ಸ್ಪರ್ಧೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ತಾಲೂಕಿನ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜು…

Read More

ತುಮಕೂರು: ಇತ್ತೀಚೆಗೆ ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬ0ಧಿಸಿದ0ತೆ ಭಾರತದಾದ್ಯಂತ ಸಾರ್ವಜನಿಕವಾಗಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಜೊತೆಗೆ ಸಾರ್ವಜನಿಕ ಅವಮಾನ ಮತ್ತು ಭದ್ರತಾ ಉಲ್ಲಂಘನೆ ಆಗಿರುವುದು ಸಹ ಕಂಡು ಬಂದಿದೆ ಆ ಪ್ರಯುಕ್ತ ತುಮಕೂರು ನಗರದ ಬಿಜಿಎಸ್ ವೃತ್ತ (ಟೌನ್ ಹಾಲ್ ವೃತ್ತ)ದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಕರ್ನಾಟಕ ಭೀಮ್ ಸೇನೆ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿಯನ್ನು ಮಾಡಲಾಯಿತು. ಪ್ರಕರಣದ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಕೃತ ಘಟನೆಯೊಂದು ಜರುಗಿದೆ, ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ಮತಾಂಧ…

Read More

ಹುಳಿಯಾರು: ಬ್ಯಾಂಕುಗಳಲ್ಲಿ ವ್ಯವಹರಿಸಲೆಂದು ಉಳಿತಾಯ ಖಾತೆ ತೆರೆದಿರುವ ಕೆಲವು ಗ್ರಾಹಕರು, ಖಾತೆಗಳಿಗೆ ಹಣ ಕಟ್ಟುವುದಾಗಲಿ ತೆಗೆಯುವುದಾಗಲಿ ಮಾಡದೇ ಇದ್ದಲ್ಲಿ ಆ ಉಳಿತಾಯ ಖಾತೆಯು ನಿಸ್ಕಿçಯವಾಗುತ್ತದೆ, ಆದ್ದರಿಂದ ಗ್ರಾಹಕರು ಕೆವೈಸಿ ದಾಖಲೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾವಣೆಯಾದಲ್ಲಿ ವಿವರಗಳನ್ನು ಬ್ಯಾಂಕಿಗೆ ನೇರವಾಗಿ ಒದಗಿಸಿ ಆ ಖಾತೆಗಳನ್ನು ಸಕ್ರಿಯ ಮಾಡಿಕೊಳ್ಳಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ತುಮಕೂರು ಪ್ರಾದೇಶಿಕ ಕಚೇರಿಯ ಆರ್ಥಿಕ ಸೇರ್ಪಡೆ ವಿಭಾಗದ ವ್ಯವಸ್ಥಾಪಕರಾದ ದಿವ್ಯಶ್ರೀ ತಿಳಿಸಿದರು. ಹುಳಿಯಾರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಮಟ್ಟದ ವಿನಾಯಕ ಸಂಜೀವಿನಿ ಒಕ್ಕೂಟ ಜಂಟಿಯಾಗಿ ತಿಮ್ಲಾಪುರ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಎನ್.ಆರ್.ಎಲ್.ಎಮ್ ಒಕ್ಕೂಟದ ಮೆನೇಜರ್ ಕಿಶೋರ್ ಮಾತನಾಡುತ್ತಾ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ…

Read More

ಹುಳಿಯಾರು: ವಾರದ ಸಂತೆಗೆ ಮೂಲ ಸೌಕರ್ಯ ಕೊಡುವವರೆವಿಗೂ ಸುಂಕ ಸಂಗ್ರಹಿಸಬಾರದೆAದು ತಿಳಿಸಿದ್ದರೂ ಸಹ ದೌರ್ಜನ್ಯದಿಂದ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ಸ್ಥಳದಿಂದ ರೈತರು ವಾರದ ಸಂತೆಗೆ ತೆರಳಿ ವಸೂಲಿಗಾರ ಶಿವಣ್ಣನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಘಟನೆ ಗುರುವಾರ ನಡೆಯಿತು. ಕಳೆದ ವಾರ ಅಹೋರಾತ್ರಿ ಧರಣಿ ನಡೆಸುತ್ತಿದ್ದಾಗ ತಹಸೀಲ್ದಾರ್ ಕೆ.ಪುರಂದರ ಹಾಗೂ ಪೌರಾಡಳಿತ ಇಲಾಖೆಯ ಪಿಡಿ ಯೋಗಾನಂದ ಅವರು ಮುಂದಿನ ವಾರ ನೀರಿನ ವ್ಯವಸ್ಥೆ, ನಂತರ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮತ್ತು ಸಂತೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದರು. ಆಗ ಧರಣಿ ಹಿಂಪಡೆಯುವಾಗಲೂ ಸಹ ಮೂಲ ಸೌಕರ್ಯ ಕಲ್ಪಿಸದಿದ್ದರೆ ಸುಂಕ ಕಟ್ಟುವುದಿಲ್ಲ ವೆಂದು ತಿಳಿಸಿದ್ದೇವೆ. ಅವರೂ ಸಹ ಒಪ್ಪಿದ್ದರು. ಆದರೆ ಈಗ ಏಕಾಏಕಿ ಬಲವಂತದಿAದ ಸುಂಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಸುಂಕ ಸಂಗ್ರಹ ಗುತ್ತಿಗೆದಾರ ಶಿವಣ್ಣ ನಾನು ಹರಾಜು ಕೂಗಿಕೊಂಡಿದ್ದು ಪಂಚಾಯ್ತಿಗೆ ಮುಂಗಡ ಹಣ ಕಟ್ಟಿದ್ದೇನೆ. ನನ್ನ ಹಣ ವಾಪಸ್ ಕೊಡಿಸಿ ಇಲ್ಲ ವಸೂಲಿಗೆ ಅವಕಾಶ ಕೊಡಿ ಎಂದು ರೈತರನ್ನು…

Read More