ಗುಬ್ಬಿ: ಪ್ರತಿ ಮನೆಗಳಲ್ಲಿ ಮನಗಳಲ್ಲಿ ಪ್ರತಿ ಗ್ರಾಮ, ರಾಜ್ಯ ದೇಶದಲ್ಲೇಡೆ ನಾವೆಲ್ಲರೂ ಹಿಂದು ನಾವೆಲ್ಲ ಒಂದು ಎಂದು ಅರ್ಥ ಮಾಡಿಕೊಂಡು ನಮ್ಮ ಹಿಂದೂ ಧರ್ಮವನ್ನು ಕಾಪಾ ಡಿಕೊಳ್ಳಬಹುದು ಎಂದು ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಗುಬ್ಬಿಯ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಹಿಂದೂ ಸಮಾಜ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪುರಾತನ ಇತಿಹಾ ಸವುಳ್ಳ ಹಿಂದೂ ಧರ್ಮ, ನಮ್ಮ ಸಂಸ್ಕೃತಿ ಸಂಸ್ಕಾರ ಪರಂಪರೆಯನ್ನು ಉಳಿಸುವಂತಹ ಕೆಲಸವನ್ನು ಪ್ರತಿಯೊ ಬ್ಬರೂ ಮಾಡಲೇಬೇಕಿದೆ. ನಮ್ಮ ದೇಶವನ್ನ ಶಾಂತಿ ಸಮೃದ್ಧಿ ಮಾನವೀಯ ಮೌಲ್ಯಗಳನ್ನ ಉಳಿಸಿಕೊಂಡು ನಾವೆಲ್ಲರೂ ಒಟ್ಟಾಗಿ ಬದುಕಬೇಕು ಎಂದರೆ ಹಿಂದೂ ಧರ್ಮ ದೇಶದಲ್ಲಿ ಉಳಿಯ ಲೇಬೇಕು, ಮತ್ತು ಅದನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನ ಪ್ರತಿಯೊಬ್ಬರೂ ಮಾಡಬೇಕಾಗಿದೆ. ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ನೀಡಿದ ಭೂಮಿಗೆ ನಾವು ಯಾವತ್ತೂ ಚಿರಋಣಿಯಾಗಿರಬೇಕು. ಎರಡು ನಮಗೆ ಸ್ವರ್ಗ ಹಾಗಾಗಿ ನಾವೆಲ್ಲರೂ ಸಹ ನಮ್ಮ ಧರ್ಮವನ್ನು ನಮ್ಮ ಹಿಂದುತ್ವವನ್ನ ಬೇ ಳಸುವಂತಹ ಉಳಿಸುವಂತಹ…
Author: News Desk Benkiyabale
ತುಮಕೂರು: ಸೌಹಾರ್ದ ಕರ್ನಾಟಕ ತುಮಕೂರು ಇವರ ವತಿಯಿಂದ ೨೦೨೬ ಜನವರಿ ೧೫ ರ ಗುರುವಾರ ಸಂಜೆ ೦೪:೦೦ ಗಂಟೆಗೆ ತುಮಕೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೌಹಾರ್ದ ಸಂಕ್ರಾ0ತಿ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕರಾದ0ತಹ ಪ್ರೊಫೆಸರ್ ಕೆ ದೊರೆರಾಜ್.ರವರು ಭಗವಹಿಸಿ ಮಕರ ಸಂಕ್ರಾ0ತಿ ಭಾರತದಲ್ಲಿ ಸಂತೋಷ ಮತ್ತು ಸಂಭ್ರಮದಿ0ದ ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಚಳಿಗಾಲ ನಿಧಾನವಾಗಿ ಮುಕ್ತಾಯಗೊಂಡು ಹೊಸ ಕೃಷಿ ಋತು ಆರಂಭವಾಗುವುದನ್ನು ಈ ಹಬ್ಬ ಸೂಚಿಸುತ್ತದೆ. ೨೦೨೬ ರಲ್ಲಿ ಮಕರ ಸಂಕ್ರಾ0ತಿ ಜನವರಿ ೧೪ರಂದು ಆಚರಿಸಲಾಗುತ್ತದೆ. ಈ ದಿನವು ಹೊಸ ಆರಂಭ, ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಎಂದು ತಿಳಿಸಿದರು. ರಂಗಭೂಮಿ ಕಲಾವಿದರಾದಂತಹ ಡಾ.ಲಕ್ಷ್ಮಣ್ದಾಸ್ ರವರು ಹಿಂದೂ, ಮುಸ್ಲಿಂ, ಕ್ರೈಸ್ತ ಭಾವೈಕ್ಯತೆಯನ್ನ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಸೌಹಾರ್ದ ಸಂಕ್ರಾ0ತಿಯನ್ನು ಸಂತೋಷ ಮತ್ತು ಸಂಭ್ರಮದಿ0ದ ಸ್ವಾಗತಿಸೋಣ ಎಂದರು. ಸಾಹಿತಿಗಳಾದಂತ ಗೋವಿಂದರಾಜು, ಕೊಳಗೇರಿ…
ಶಿರಾ: ತುಮಕೂರು ಜಿಲ್ಲೆಯಲ್ಲಿಯೇ ಶಿರಾ ನಗರ ದಿನೇ ದಿನೆ ಅತಿ ವೇಗದಲ್ಲಿ ಬೆಳವಣಿಗೆಯಾಗುತ್ತಿದ್ದು, ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಕಸದ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ನಾನು ಪ್ರತಿನಿಧಿಸುವ ವಾರ್ಡ್ ನಂಬರ್ ೯ಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಕಸ ಸಂಗ್ರಹಿಸುವ ವಾಹನವನ್ನು ಕೊಡುಗೆಯಾಗಿ ನೀಡಿದ್ದೇನೆ. ವಾರ್ಡಿನ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ಎಂ.ಕೃಷ್ಣಪ್ಪ ಹೇಳಿದರು. ಅವರು ಗುರುವಾರ ನಗರದ ೯ನೇ ವಾರ್ಡಿನಲ್ಲಿ ನಗರಸಭಾ ಸದಸ್ಯ ಎಂ.ಕೃಷ್ಣಪ್ಪ ಅವರ ಸ್ವಂತ ಹಣದಿಂದ ಕೊಡುಗೆಯಾಗಿರುವ ನೀಡಿರುವ ಕಸ ಸಂಗ್ರಹಣೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿರಾ ಉತ್ತಮ ಆದಾಯ ಬರುತ್ತಿದೆ. ಪ್ರತಿ ವಾರ್ಡಿಗೆ ಕಸ ಸಂಗ್ರಹಿಸುವ ಒಂದೊ0ದು ವಾಹನ ಹಾಗೂ ೫ ಮಂದಿ ಪೌರ ಕಾರ್ಮಿಕ ಸಿಬ್ಬಂದಿಗಳು ಅವಶ್ಯಕ. ಶಿರಾ ನಗರಸಭೆಯಲ್ಲಿ ಪ್ರಸ್ತುತ ಕೇವಲ ೧೧ ಕಸ ಸಂಗ್ರಹಿಸುವ ವಾಹನಗಳಿವೆ. ಇದೇ ವಾಹನಗಳು ಮೂರು ದಿನಕ್ಕೊಮ್ಮೆ ಕಸ ಸಂಗ್ರಹಿಸಲು ವಾರ್ಡಿಗೆ ಹೋಗುತ್ತಿವೆ. ದಿನ ನಿತ್ಯ ಸಂಗ್ರಹಣೆ ಮಾಡುವುದರಿಂದ ನೈರ್ಮಲ್ಯ ಕಾಪಾಡಬಹುದು.…
ತುಮಕೂರು: ಭಾರತೀಯ ಸೇನೆಯ ನಿವೃತ್ತ ಯೋಧ ರಿಗೆ ಭೂಮಿ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಲ್ಲಿರುವ ಎನ್ಸಿಸಿ-೪ರ ಬೆಟಾಲಿಯನ್ನಲ್ಲಿ ನಡೆದ ಸೇನಾ ದಿವಸ್, ಮಾಜಿ ಯೋಧನ ದಿವಸ್, ರಕ್ತದಾನ ಶಿಬಿರ ಹಾಗೂ ಸಂಕ್ರಾAತಿ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತ ಯೋಧರಿಗೆ ನಿರ್ದೇಶನಾಲಯದ ಮೂಲಕ ಸಹಾಯ ಮಾಡುವ ಕೆಲಸ ನಡೆಯುತ್ತಿದೆ. ನಿವೃತ್ತ ಯೋಧರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ಸಂಬ0ಧ ಈ ಕುರಿತು ಪ್ರತ್ಯೇಕವಾಗಿ ನಿವೃತ್ತ ಸೇನಾನಿಗಳ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು. ನಿವೃತ್ತ ಸೈನಿಕರು ಈ ಇಲಾಖೆ ನಿರ್ದೇಶನಾಲಯ ನಮ್ಮ ಜತೆಯಲ್ಲೇ ಇದೆ. ನಿವೃತ್ತರಾದ ಮೇಲೆ ಕೃಷಿ ಮಾಡುವವರಿಗೆ ಭೂಮಿ ಕೊಡಬೇಕು, ಬ್ಯುಸಿನೆಸ್ ಮಾಡುವವರಿಗೆ ಸಹಾಯ ಮಾಡಬೇಕು ಎಂದು ಪ್ರತಿಯೊಂದು ರಾಜ್ಯದಲ್ಲೂ ಒಂದೊ0ದು ನಿರ್ದೇಶನಾಲ ಯವನ್ನು ಸ್ಥಾಪಿಸಲಾಗಿದೆ ಎಂದರು.…
ತುಮಕೂರು: ತಾಲ್ಲೂಕಿನ ಚಿಕ್ಕತೊಟ್ಲುಕೆರೆಯ ಶ್ರೀ ಅಟವೀ ಸುಕ್ಷೇತ್ರದಲ್ಲಿ ಗುರುವಾರ ಮಕರ ಸಂಕ್ರಾ0ತಿಯ ಉತ್ತರಾಯಣ ಪುಣ್ಯಕಾಲದ ಜಾತ್ರಾಮಹೋತ್ಸವ ಹಾಗೂ ಲಿಂಗೈಕ್ಯ ಅಟವೀ ಸಿದ್ಧಲಿಂಗ ಸ್ವಾಮೀಜಿಗಳ ೭೬ನೇ ಪುಣ್ಯ ಸ್ಮರಣೋತ್ಸವ ಭಕ್ತಿ ಸಡಗರದಿಂದ ನೆರವೇರಿತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಆಗಮಿಸಿ ಶ್ರೀಕ್ಷೇತ್ರದ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಆಗಮಿಸಿದ್ದ ಎಲ್ಲಾ ಭಕ್ತರಿಗೂ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿ, ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರೇಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಎಳ್ಳು, ಬೆಲ್ಲ ಹಂಚಿ ಆಶೀರ್ವಾದ ಮಾಡಿದರು. ಅಟವೀ ಕ್ಷೇತ್ರದ ಶಿವಲಿಂಗ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಬೆಳಿಗ್ಗೆ ೬.೩೦ರಿಂದ ಓಂಕಾ ರೇಶ್ವರ ಮಹಾಶಿವಯೋಗಿಗಳು, ಜಡೆಶಾಂತ ಬಸವ ಮಹಾ ಶಿವಯೋಗಿಗಳು, ಅಟವೀ ಮಹಾಶಿವಯೋ ಗಿಗಳು, ಅಟವೀ ಸಿದ್ಧಲಿಂಗ ಮಹಾಸ್ವಾಮಿಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ನಂತರ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸುಮಂಗಲೆಯರ ಕಳಸ ಕನ್ನಡ ಆರತಿಯೊಂದಿಗೆ ಓಂಕಾರ ಶಿವಯೋಗಿಗಳವರ ಹಾಗು ಅಟವೀ ಮಹಾಶಿವಯೋಗಿಗಳ ಉತ್ಸವವು ವೈಭವದಿಂದ ನಡೆಯಿತು.…
ಕುಣಿಗಲ್/ಕೆ.ಜಿ. ದೇವಪಟ್ಟಣ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪ ಟ್ಟಣದ (ಹಂಗರಹಳ್ಳಿ) ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಇಂದು ಅದ್ಧೂರಿ ‘ವರ್ಧಂತಿ ಮಹೋತ್ಸವ’ ಜರುಗಲಿದ್ದು, ಕಾರ್ಯಕ್ರಮದ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆಯಲಾಗಿದೆ. ಶೃಂಗೇರಿ ಶ್ರೀಗಳ ಅನುಗ್ರಹ: ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ ನವರ ವರ್ಧಂತಿ ಮಹೋತ್ಸವದ ಪ್ರಯುಕ್ತ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಶ್ರೀ ಬಾಲ ಮಂಜುನಾಥ ಸ್ವಾಮೀಜಿರವರು ಜಗದ್ಗುರುಗಳಾದ ಶ್ರೀ ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಗದ್ಗುರುಗಳು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ಶ್ರೀಮಠದ ವತಿ ಯಿಂದ ಪವಿತ್ರ ವಸ್ತ್ರವನ್ನು ಸಮರ್ಪಣೆ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಹರಸಿದರು. ಧಾರ್ಮಿಕ ಕಾರ್ಯಕ್ರಮಗಳ ವಿವರ (ಜ. ೭ ರಿಂದ ಜ. ೧೭ ರವರೆಗೆ) ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ…
ಶಿರಾ: ಜನಸಾಮಾನ್ಯರು ಜನಪ್ರತಿನಿಧಿಗಳಿಂದ ಬಯಸೋದು ಒಂದೇ ಅದುವೇ ಅಭಿವೃದ್ಧಿ ಕೆಲಸ ಕಾರ್ಯಗಳು, ನಮಗೆ ಆಶೀರ್ವದಿಸಿ ಸಮಾಜದಲ್ಲಿ ಗೌರವ ನೀಡಿರುವಂತಹ ಜನತೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ಏನಾದರು ಅಭಿವೃದ್ಧಿಯ ಕೆಲಸ ಮಾಡಿಯೇ ಅವರ ಋಣ ತಿರುಸುವಂತಹ ಕೆಲಸಗಳನ್ನು ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ವಿ. ಪ. ಸದಸ್ಯ ಹಾಗೂ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಚಿದಾನಂದ್ ಎಂ. ಗೌಡ ಹೇಳುದರು. ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಶ್ರೀರಾಮ ದೇವಾಲಯಕ್ಕೆ ಗ್ರಾಮಸ್ಥರ ಒತ್ತಾಸೆಯಂತೆ ಸರ್ಕಾರದ ಅನುದಾನಕ್ಕೆ ಕಾಯದೆ, ಸ್ವಂತ ನಿಧಿ ಯಿಂದ ಸೋಲಾರ್ ಹೈಮಾಸ್ಟ್ ದೀಪವನ್ನು ಕೊಡುಗೆ ನೀಡಿ ಲೋಕಾರ್ಪಣೆಗೊಳಿಸಿ ಮಾತ ನಾಡಿದರು. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಸಿ. ಎಂ. ಜಿ. ಸೂರ್ಯ ಬಿಂಬ ಯೋಜನೆಯಡಿಯಲ್ಲಿ ಸೋಲಾರ್ ಬೆಳಕಿನ ದೀಪ ಅಳವಡಿಸುವ ನನ್ನ ಸಂಕಲ್ಪ ಈಡೇರುತ್ತಿದೆ,ಇದರ ಮುಂದುವರೆದ ಭಾಗವಾಗಿ ಇಂದು ಸಂಕ್ರಾ0ತಿ ಹಬ್ಬದ ದಿನದಂ ದು ಲಕ್ಷೀಸಾಗರ ಗ್ರಾಮದಲ್ಲಿ ಶ್ರೀರಾಮ ದೇವಾ ಲಯದ ಆವರಣಕ್ಕೆ ಸೋಲಾರ್ ಬೆಳಕಿನ ದೀಪವನ್ನು ಅಳವಡಿಸಿರುವುದು ಸಂತಸತ0ದಿದೆ, ಗ್ರಾಮಸ್ಥರೆಲ್ಲ ಒಗ್ಗೂಡಿ ನನ್ನ ಹೆಸರಿನಲ್ಲಿ…
ಕೊರಟಗೆರೆ: ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂಬ ಸದಾಶಯದೊಂದಿಗೆ, ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಭಾನುವಾರ ಪಟ್ಟಣದ ಗಿರಿನಗರದಲ್ಲಿರುವ ಸ್ಲಂ ಬೋರ್ಡ್ ಸಮುದಾಯ ಭವನದಲ್ಲಿ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು. ಪ.ಪಂ ಮಾಜಿ ಉಪಾಧ್ಯಕ್ಷ ನಯಾಜ್ ಅಹಮದ್, ಮಾಜಿ ಸದಸ್ಯೆ ನೂರ್ ಜಾನ್ ಸೈಯದ್ ದಾವುದ್ ಹಾಗೂ ಸಮಾಜ ಸೇವಕ ಸದಾನಂದ ಎಸ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಧರ್ಮಾತೀತತೆ, ಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ಸಾರಲಾಯಿತು. ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮ ಗುರುಗಳಾದ ಸುರೇಶ್ ಪಾದ್ರಿ, ಜಾಮಿಯಾ ಮಸೀದಿಯ ಮುತ್ತುವಲ್ಲಿ ಇದಾಯಿತ್ ಉಲ್ಲಾ ಶರೀಫ್, ಫಯಾಜ್ ಅಹಮದ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಭಾಗವಹಿಸಿ, ಡಾ. ಜಿ. ಪರಮೇಶ್ವರವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜ್ಯಕ್ಕೆ ಸಮರ್ಪಿತ ಸೇವೆ ಮಾಡುವ ಶಕ್ತಿ ದೊರೆಯಲೆಂದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ.ಪಂ ಮಾಜಿ ಉಪಾಧ್ಯಕ್ಷ ನಯಾಜ್ ಅಹಮದ್,ಡಾ. ಜಿ. ಪರಮೇಶ್ವರವರು ಸಾಮಾಜಿಕ ನ್ಯಾಯ,…
ಶಿರಾ: ಯಂತ್ರಗಳಿ0ದ ಅನ್ನ ಸೃಷ್ಟಿಸಲು ಸಾಧ್ಯವಿಲ್ಲ ಭೂಮಿ ಉತ್ತಿ ರೈತರು ಬೆಳೆದರೆ ಮಾತ್ರ ಜಗತ್ತು ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯ ಅದರೂ ಅಳುವ ಸರ್ಕಾರಗಳು ರೈತರಿಗೆ ಕನ್ನಡಿಗಂಟು ತೋರಿಸಿ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ಬಿಡಬೇಕಿದೆ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು. ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ೨೩ ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು. ಕೃಷಿ ಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿದರೆ ಯುವಜನರು ಕೂಡ ಅಸಕ್ತರಾಗಿ ಬದುಕು ಕಟ್ಟಿಕೊಳ್ಳುತ್ತಾರೆ ,ಶಿರಾ ತಾಲ್ಲೂಕಿನ ಜನರು ಗುಳೆ ಹೊರಡುವ ಪರಿಸ್ಥಿತಿಯಲ್ಲಿ ಶಾಸಕ ಜಯಚಂದ್ರ ಅವರು ಕಾನೂನಿನ ಸವಾಲುಗಳನ್ನು ಎದುರಿಸಿ ಹೇಮಾವತಿ ಹರಿಸಿದ ಫಲವನ್ನು ಇಂದು ಕಾಣಬಹುದಾಗಿದೆ. ನೀರಾವರಿ ವಿಚಾರದಲ್ಲಿ ಅಪಾರ ಅನುಭವ ಇರುವ, ೫೦ ವರ್ಷಗಳ ಸುದೀರ್ಘ ರಾಜಕೀಯದ ಹಿರಿತನ ಜೊತೆಗೆ ಸರ್ಕಾರ ಮುನ್ನಡೆಸಿ ಯಶಸ್ವಿ ಯೋಜನೆಗಳಿಗೆ ಕಾರಣರಾಗುವಂತಹ ಎಲ್ಲಾ…
ತುಮಕೂರು: ಗ್ರಾಮಾಂತರ ಕ್ಷೇತ್ರದ ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಪುರದಲ್ಲಿ ಭಾನು ವಾರ ಶಾಸಕ ಬಿ.ಸುರೇಶ್ಗೌಡರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಶಾಲೆಗಾಗಿ ಟೂಡಾದಿಂದ ಮಂಜೂರಾಗಿರುವ ಅರ್ಧ ಎಕರೆ ಜಾಗದಲ್ಲಿ ಕಟ್ಟಡ ಕಟ್ಟಲು ಇನ್ಕ್ಯಾಪ್ ಕಂಪನಿಯವರು ಒಂದು ಕೋಟಿ ರೂ. ಸಿಎಸ್ಆರ್ ಅನುದಾನ ನೀಡಿದ್ದಾರೆ, ಜೊತೆಗೆ ತಮ್ಮ ಶಾಸಕರ ಅನುದಾನದ ೫೦ ಲಕ್ಷ ಸೇರಿಸಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು. ಈ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತಿಸಲು ಹಾಗೂ ಎಲ್ಕೆಜಿ, ಯುಕೆಜಿ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ ಅವರು, ಮೇ ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು. ಈ ವೇಳೆ ಗ್ರಂಥಾಲಯ ಉದ್ಧಾಟನೆ ಮಾಡಿದ ಶಾಸಕರು, ಉತ್ತಮವಾದ ಗ್ರಂಥಾಲಯವಿದೆ, ಗ್ರಂಥಾಲಯಕ್ಕೆ ತಾವು ಶಾಸಕರ ಅನುದಾನದಲ್ಲಿ ೩ ಲಕ್ಷ ರೂ. ಗಳ ಪುಸ್ತಕ ಕೊಡಿ ಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಶಾಸಕರು…











