ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನಿರ್ದೇಶನ ನೀಡಿದರು. ನಗರದಲ್ಲಿ ಸೋಮವಾರ ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ನೇತೃತ್ವದ ನಿಯೋಗವು ಜಿಲ್ಲೆಯ ಗ್ರಾಮೀಣಭಾಗದ ಕಾರ್ಯನಿರತ ಪತ್ರಕರ್ತರಿಗೆ ಆಶ್ರಯ ಯೋಜನೆ ಅಡಿ ನಿವೇಶನ ಹಂಚುವ ವೇಳೆ ಪರಿಗಣಿ ಸಬೇಕೆಂಬ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವ್ಯಾಪ್ತಿಗೆ ಒಳಪಡುವ ಸದಸ್ಯರಿದ್ದು, ಅವರನ್ನು ಗುರುತಿಸಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಸೂಚಿಸಿದರು. ಸಂಘವು ಒದಗಿಸುವ ತಾಲೂಕುವಾರು ಪತ್ರಕರ್ತರ ಪಟ್ಟಿಯನ್ನು ಜಿಲ್ಲಾಡಳಿತ ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ನಿವೇಶನ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡಲು ಸಾಧ್ಯವಿಲ್ಲ. ಹಾಗಾಗಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪತ್ರಕರ್ತರ ಹೆಸರನ್ನು ಗ್ರಾಮಸಭೆ ಮುಂದಿಡುವ ಪಟ್ಟಿಯಲ್ಲಿ ಸೇರಿಸಿ ಕ್ರಮವಹಿಸಲು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಜಯನುಡಿ ಜಯಣ್ಣ,…
Author: News Desk Benkiyabale
ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಹಬ್ಬಗಳ ಆಚರಣಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ರಾಷ್ಟçಧ್ವ ಜಾರೋಹಣ ನೆರವೇರಿಸಿ ಧ್ವಜಾ ವಂದನೆಯನ್ನು ಸ್ವೀಕರಿಸಿ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ಹೋರಾಟ ನಡೆಸಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿಯ ಆಡಳಿತಕ್ಕೆ ಅಗತ್ಯವಾದ ನಿಯಮಗಳನ್ನು ರೂಪಿಸಿ ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಿಸಿಬೇಕು. ೧೯೪೯ರ ನವೆಂಬರ್ ೨೬ರಂದು ಅಂಗೀಕಾರಗೊ0ಡು ೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಸಂವಿಧಾನವೇ ಭಾರತದ ಆಡಳಿತದ ಅಡಿಪಾಯವಾಗಿದೆ. ಸಂವಿಧಾನವು ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿರ್ದಿಷ್ಟಪಡಿಸಿದ್ದು, ಭಾರತದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದರು. ಇ0ದು ಭಾರತ ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಯೋಗ, ಅಧ್ಯಾತ್ಮ, ಸಂಸ್ಕೃತಿ, ಆರೋಗ್ಯ, ರಕ್ಷಣೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದು, ಜಗತ್ತೇ ಭಾರತದತ್ತ ಗಮನ…
ಪಾವಗಡ: ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ, ಈ ಮಲತಾಯಿ ಧೋರಣೆಯಿಂದ ರಾಜ್ಯಗಳಿಗೆ ಅನಾನುಕೂಲವಾಗುತ್ತಿದೆ ಎಂದು ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ತಿಳಿಸಿದರು. ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ೧೯೫೦ ಜನವರಿ ೨೬ ರಂದು ಭಾರತದ ಸಂವಿಧಾನವು ಜಾರಿಗೆ ಬಂದಿದ್ದನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಮತ್ತು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು. “ನಾವೆಲ್ಲರೂ ಭಾರತೀಯರು” ಎಂಬ ಭಾವನೆಯೊಂದಿಗೆ, ಯಾವುದೇ ತಾರತಮ್ಯವಿಲ್ಲದ, ಸಮಾನತೆಯ ಭಾರತವನ್ನು ಕಟ್ಟುವುದು ಇಂದಿನ ತುರ್ತು ಅಗತ್ಯವಾಗಿದೆ.ಸಂವಿಧಾನ ಜಾರಿಯಾಗುವ ಮುನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಎಲ್ಲಾ ಸೌಕರ್ಯಗಳಿಂದ ವಂಚಿತರಾಗಿದ್ದರು, ಸಂವಿಧಾನ ಜಾರಿಯಾದ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾರೆ…
ತಿಪಟೂರು: ನಗರದ ಕಾಸ್ಮೋಪಾಲಿಟನ್ ಕ್ಲಬ್ವತಿ ಯಿಂದ ೭೭ನೇ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಭಾರತೀಯ ಸೇನೆಯಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಯೋಧರಾದ ಮಾಚಕಟ್ಟೆ ತಾಂಡ್ಯದ ತುಳಸಿರಾಮ್ ನಾಯಕ್ ಹಾಗೂ ತಿಪಟೂರು ನಗರದ ಟಿ. ಆರ್. ಚಿದಾನಂದ ಅವರನ್ನು ಕ್ಲಬ್ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷ ಗಂಗಾಧರಯ್ಯ ಮಾತನಾಡಿ ದೇಶರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಯೋಧರ ಸೇವೆ ಅಮೂಲ್ಯ ವಾಗಿದ್ದು, ಇಂತಹ ಸನ್ಮಾನಗಳು ಯುವ ಪೀಳಿಗೆಗೆ ದೇಶಭಕ್ತಿಯ ಪ್ರೇರಣೆಯಾಗ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯದರ್ಶಿ ಮಾದಿಹಳ್ಳಿ ಸಿದ್ದರಾಮಣ್ಣ ಮಾತನಾಡಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ದೂರ ದೃಷ್ಟಿ ಮತ್ತು ಅಪಾರ ಬೌದ್ಧಿಕ ಶ್ರಮದಿಂದ ರಚಿಸಿ ೧೯೫೦ರ ಜನವರಿ ೨೬ರಂದು ಭಾರತವು ತನ್ನದೇ ಆದ ಸಂವಿಧಾನದ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ತತ್ವವನ್ನು ಅಧಿಕೃ ತವಾಗಿ ಅಂಗೀಕರಿಸಿದ್ದು, ಸಂವಿಧಾನವು ಕೇವಲ ಹಕ್ಕುಗ ಳನ್ನು ಮಾತ್ರವಲ್ಲದೆ ಕರ್ತವ್ಯಗಳ ಹೊಣೆಗಾರಿಕೆಯನ್ನು ಸಹ ನಾಗರೀಕರಿಗೆ ನೀಡಿದೆ. ಸ್ವಾತಂತ್ರ್ಯವು ಭಗತ್ಸಿಂಗ್, ಸುಭಾಷ್…
ತುಮಕೂರು: ವಾರಕ್ಕೆ ಐದು ದಿನಗಳ ಬ್ಯಾಂಕಿ0ಗ್ ಸೇವೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ರಾಷ್ಟಾçದ್ಯಂತ ೮ ಲಕ್ಷಕ್ಕೂ ಹೆಚ್ಚು ಜನ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ತುಮಕೂರಿನಲ್ಲೂ ಸಹ ಯುಎಫ್ಬಿಯು ಸಂಘಟನೆ ಪ್ರತಿಭಟನೆ ನಡೆಸಿದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ವಾರದಲ್ಲಿ ೫ ದಿನಗಳ ಬ್ಯಾಂಕಿ0ಗ್ ಸೇವೆಗೆ ಅನುಮೋದನೆಯನ್ನು ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಇಂದಿನ ಮುಷ್ಕರಕ್ಕೆ ಎಡೆಮಾಡಿಕೊಟ್ಟಿದೆ ಎಂದು ಯುಎಫ್ಬಿಯು ಸಂಚಾಲಕ ಕೆ.ಎನ್. ವಾದಿರಾಜ ಹೇಳಿದರು. ಏನಿದು ವಿವಾದ.? ಬ್ಯಾಂಕಿ0ಗ್ ಕ್ಷೇತ್ರದಲ್ಲಿ ೨೦೧೫ರಲ್ಲಿ ವಾರಕ್ಕೆ ಆರು ದಿನ ಕೆಲಸ ನಿರ್ವಹಿಸಲಾಗುತ್ತಿದ್ದರು. ಆಗಲೇ ವಾರಕ್ಕೆ ೫ ದಿನಗಳ ಸೇವೆಯನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಷ್ಕರಣೆ ಮಾಡಿ ೨೦೧೮ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕಿ0ಗ್ ಗೆ ರಜೆಯನ್ನು ನೀಡಿ ಉಳಿದ ಶನಿವಾರಗಳಂದು ಸಂಪೂರ್ಣ ಸೇವೆಯನ್ನು ಒದಗಿಸುವಂತೆ ಅನುಮೋದಿಸಲಾಗಿತ್ತು. ಇದುವರೆವಿಗೂ ಅದರ ಪ್ರಕಾರವೇ ಬ್ಯಾಂಕಿ0ಗ್ ಕೆಲಸ ನಿರ್ವಹಿಸುತ್ತಿದ್ದು, ಈ ಮಧ್ಯೆ ಉಳಿದ ಶನಿವಾರಗಳನ್ನೂ…
ಚಿಕ್ಕನಾಯಕನಹಳ್ಳಿ: ಕೊಬ್ಬರಿಗೆ ಉತ್ತಮ ಬೆಲೆ ಬಂದ ಸಮಯದಲ್ಲಿ ಈ ಕೀಟಬಾಧೆ ರೈತರ ನಿದ್ದೆಗೆಡಿಸಿದೆ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದು ಸಂಬAಧ ಪಟ್ಟ ಇಲಾಖೆಯ ಜವಾಬ್ದಾರಿ ಈ ನಿಟ್ಟಿನಲ್ಲಿ ಸಚಿವರನ್ನು ಭೇಟಿ ಮಾಡಿ ತೆಂಗು ಬೆಳೆಯನ್ನು ಕಾಪಾಡಿ ರೈತರನ್ನು ಕಾಪಾಡಿ ಎಂದು ಮನವಿ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ತೀ.ನಂ.ಶ್ರೀ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆಗೆ ತಗುಲಿರುವ ಬಿಳಿ ನೊಣ ಮತ್ತು ಕಪ್ಪು ತಲೆಹುಳುವಿನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಾಣಿಜ್ಯ ಬೆಳೆಯಾದ ತೆಂಗನ್ನು ನಮ್ಮ ಭಾಗದಲ್ಲಿ ಹೆಚ್ಚು ಜನ ರೈತರು ಅವಲಂಬಿಸಿದ್ದು ಈ ಹಿಂದೆಲ್ಲ ಕೊಬ್ಬರಿಗೆ ಸರಿಯಾದ ಬೆಲೆ ಇಲ್ಲದೇ ಪರದಾಡುವಂತಾಗಿತ್ತು ಆದರೆ ತೆಂಗಿನಲ್ಲಿ ಬಿಳಿನೋಣ, ಕಪ್ಪು ತಲೆಹುಳುವಿನ ಕಾರಣದಿಂದ ಇಳುವರಿ ಇಲ್ಲದ ಈ ಅವಧಿಯಲ್ಲಿ ಉತ್ತಮವಾದ ಬೆಲೆ ಇದೆ ಆದರೆ…
ತಿಪಟೂರು: ತ್ರಿವಿಧ ದಾಸೋಹದ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನರ ಮತ್ತು ಮಕ್ಕಳ ಶೈಕ್ಷಣಿಕ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು ದಣಿವರಿಯದ ದೇವರೆನಿಸಿಕೊಂಡು, ವ್ರತನಿಷ್ಠ ಕಾಯಕಯೋಗಿಗಳಾಗಿ, ಆಧುನಿಕ ಬಸವಣ್ಣನೆನಿಸಿಕೊಂಡು ಶತಾಯುಷಿಗಳಾಗಿ ಆದರ್ಶಪ್ರಾಯವಾದವರೇ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳೆಂದು ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಿದ್ಧಗಂಗಾ ಶ್ರೀಗಳ ಏಳನೇ ಪುಣ್ಯಸ್ಮರಣೆ ಪ್ರಯುಕ್ತ ಏರ್ಪಡಿಸಿ ಕೊಂಡಿದ್ದ ದಾಸೋಹದಿನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು ಸಿದ್ಧಗಂಗಾಶ್ರೀಗಳು ತಮ್ಮ ಗುರುಗಳಾದ ಉದ್ಧಾಮ ಶಿವಯೋ ಗಿಗಳ ಆಶಯದಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಯಾ, ವಾಚಾ, ಮನಸಾ ಜೋಳಿಗೆ ಹಿಡಿದು, ಭಿಕ್ಷಾಟನೆ ಮಾಡುತ್ತಾ, ದಾಸೋಹ ಸೇವೆಮಾಡಿ ಮಕ್ಕಳಹಸಿವನ್ನು ನೀಗಿಸಿದ ದೇವರೆನಿಸಕೊಂಡಿದ್ದರು. ಗುರು, ಲಿಂಗ, ಜಂಗಮಗಳೆAಬ ತ್ರಿವಿಧಗಳ ಮೂಲಕ ತ್ರಿಕರಣ ಪೂರ್ವಕವಾಗಿ ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸವೆಂಬ ನುಡಿಗೆ ಅನ್ವರ್ಥರಾಗಿ ಸೇವೆಮಾಡುತ್ತಾ ನಡೆದಾಡುವ ದೇವರೆನಿಸಿಕೊಂಡಿದ್ದರು. ನಾಡಿನ ಲಕ್ಷಾಂತರ ಮಂದಿಗೆ ಜ್ಞಾನಜ್ಯೋತಿಯನ್ನು, ಸಂಸ್ಕಾರದ ದೀಕ್ಷೆಯನ್ನು, ಸಹಬಾಳ್ವೆಯ ಸಂಕಲ್ಪದ ಭಾವನೆಗಳನ್ನು ಬೆಳೆಸುತ್ತ್ತಾ, ಪ್ರೀತಿ, ವಿಶ್ವಾಸ, ಸಹನೆ, ಕರುಣೆ,…
ಮಧುಗಿರಿ: ಪ್ರತಿ ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ ೩೦೦ ಮೊಟ್ಟೆ ಜಾಕಿ ಕಟ್ಟಿ ೨೫೦ ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಶ್ರೀ ಲಕ್ಷ್ಮೀ ನರಸಯ್ಯ ತಿಳಿಸಿದರು. ತಾಲೂಕಿನ ರಂಟವಳಲು ಗ್ರಾಮದಲ್ಲಿ ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಪ್ಪು ನೇರಳೆ ಬೇಸಾಯದಲ್ಲಿ ಇಲಾಖೆಯಿಂದ ಶಿಫಾರಸ್ ಆಗಿರುವಂತಹ ಕೀಟನಾಶಕಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು. ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಮುನ್ನ, ಸದರಿ ಖಾಲಿ ನಿವೇಶನವನ್ನು ದಿಶಾಂಕ್ ಆಪ್ ಮೂಲಕ ಖಚಿತಪಡಿಸಿಕೊಂಡ ನಂತರ ಹುಳು ಮನೆ ನಿರ್ಮಾಣ ತಕ್ಕದ್ದು ಎಂದು ಹೇಳಿದರು. ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿ ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಅಥವಾ ರೇಷ್ಮೆ ಕೃಷಿ ಕೈಗೊಂಡಿರುವ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು, ಒಂದು ಎಕರೆ ಹಿಪ್ಪು ನೇರಳೆ ನಾಟಿ ಮಾಡುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ…
ಮಧುಗಿರಿ: ರಾಜ್ಯದಲ್ಲಿ ಅನ್ನಬಾಗ್ಯ ಹಸಿವನ್ನು ನೀಗಿಸಿದೆ. ಅನ್ನ ಭಾಗ್ಯ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಇದು ಎಲ್ಲ ಸಮುದಾಯದ ಬಡವರಿಗೆ ಸಲ್ಲುವ ಯೋಜನೆಯಾಗಿದೆ. ಅನ್ನ ಭಾಗ್ಯ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಲ್ಲುತ್ತಿವೆ ಎಂದು ಮಾಜಿ ಸಚಿವ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು. ತಾಲೂಕಿನ ಚಿಕ್ಕಮಾಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಗನಾಡಿ ಕಟ್ಟಡ, ಶುದ್ಧಕುಡಿಯುವ ನೀರಿನ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ೫ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳ ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಮುಖ್ಯ. ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸದೇ ಉತ್ತಮ ಶಿಕ್ಷಣಕೊಡಿಸಿ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು. ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು. ಇಂದು ಆಧಿಕಾರ ಬರಬಹುದು ಹೋಗಬಹುದು. ಆಧಿಕಾರದಲ್ಲಿ ಇದ್ದಾಗ ಅದರ ಲಾಭ ಜನರ ಸೇವೆಗೆ ಮುಡಿಪಾಗಿರಬೇಕು. ನಮ್ಮ ಕೊಡಿಗೇನಹಳ್ಳಿ ಹೋಬಳಿ ಪ್ರತಿ ಚುನಾವಣಿಯಲ್ಲೂ ನನಗೆ ಹೆಚ್ಚು…
ಚಿಕ್ಕನಾಯಕನಹಳ್ಳಿ: ಚಂಚಲ ಮನಸ್ಸಿನ ಭಾವನೆಗೆ ಕಡಿವಾಣ ಹಾಕುವ ಮೂಲಕ ನೀವು ಅದ್ಯಯನ ಮಾಡಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಅದ್ದರಿಂದ ನಿಮ್ಮ ಜೀವನದ ಮುಖ್ಯಘಟ್ಟವಾದ ಈ ಪಿಯುಸಿಯ ಹಂತದಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸರ್ಕಾರದ ಉಚಿತ ಸೀಟ್ಗಳನ್ನು ಪಡೆದು ನಿಮ್ಮ ತಂದೆ ತಾಯಿಗಳ ಹೊರೆಯನ್ನು ಕಡಿಮೆ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಎಸ್.ಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಸಿಇಟಿ, ನೀಟ್, ಹಾಗೂ ಜೆಇಇ ತರಬೇತಿ ಅಂತಿಮ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ವರ್ಷದಲ್ಲಿ ೩೭೬ ವಿದ್ಯಾರ್ಥಿಗಳು ಈ ಉಚಿತ ತರಬೇತಿಯಲ್ಲಿ ತರಬೇತಿ ಪಡೆದು ೯೬ ವಿದ್ಯಾರ್ಥಿ ಗಳು ಸರ್ಕಾರದ ವಿವಿಧ ಕೊರ್ಸ್ ಗಳ ಉಚಿತವಾಗಿ ಸೀಟ್ಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿ ಅವರ ಪೋಷಕರ ಹೊರೆಯನ್ನು ತಗ್ಗಿಸಿದ್ದಾರೆ ಅದ ರಂತೆ ಈ ವರ್ಷ ಕಳೆದ ೨೭ ವಾರಗಳಿಂದ ಪ್ರಥಮ ಪಿಯುಸಿಯವರಿಗೆ ವಿಶೇಷವಾಗಿ…










