ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಗೌಡನಕಟ್ಟೆಯ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಬೆಳಕು ಚಾರಿಟಬಲ್ ಟ್ರಸ್ಟ್ವತಿಯಿಂದ ಶಾಲೆಯ ನವೀಕರಣ ಹಾಗೂ ಎಲ್ಲಾ ಕಟ್ಟಡಗಳಿಗೆ ಬಣ್ಣ ಲೇಪನ ಮಾಡಿ ಅಭಿವೃದ್ದಿ ಕಾರ್ಯಕೊಳ್ಳಲಾಯಿತು, ಸರ್ಕಾರಿ ಶಾಲೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ವೆಚ್ಚ ಮಾಡಿ, ಕಟ್ಟಡಕ್ಕೆ ಸುಣ್ಣ-ಬಣ್ಣ ಲೇಪನ, ಗೋಡೆ ಬರಹ ಮತ್ತು ಕಲಾತ್ಮಕ ಚಿತ್ರಗಳು ಕನ್ನಡಾಂಬೆಯ ಚಿತ್ರ, ಭಾರತ-ಕರ್ನಾಟಕ, ಗಣಿತ-ವಿಜ್ಞಾನ ಶಿಕ್ಷಣಾತ್ಮಕ ಚಿತ್ರಗಳು, ಸಾಲುಮರದ ತಿಮ್ಮಕ್ಕನ ಸ್ಮರಣಾರ್ಥ ಮರದ ಕಲಾಕೃತಿ, ಶಾಲೆ ಆವರಣದಲ್ಲಿ ವೈಜ್ಞಾನಿಕ ಸಸಿ ನೆಡುವಿಕೆ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಕಟ್ಟಡಕ್ಕೆ ಬಣ್ಣ ಲೇಪನ ಮಾಡಿದ ನಂತರ ತಂಡ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಊರಿನ ಬೀದಿಗಳಲ್ಲಿ ಕನ್ನಡಾಂಬೆ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಟ್ರಸ್ಟ್ ಮುಖ್ಯಸ್ಥ ಶಿವು ಮಾತನಾಡಿ ಮೂಕ ಪ್ರಾಣಿಗಳ ರಕ್ಷಣೆ, ಗೋಶಾಲೆಗಳಿಗೆ ಮೇವು ವಿತರಣೆ, ರಸ್ತೆಗಳಿಗೆ ಸೂಚನಾ ಫಲಕಗಳ ಅಳವಡಿಕೆ ಮುಂತಾದ ಅನೇಕ ಜನೋಪಯೋಗಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ವಿಶೇಷವಾಗಿ, ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳ ಉಳಿವಿಗಾಗಿ, ಅವುಗಳಿಗೆ…
Author: News Desk Benkiyabale
ಶಿರಾ: ತಾಲ್ಲೂಕಿನ ಜೀವ ನಾಡಿ ಮದಲೂರು ಕೆರೆ ಭರ್ತಿಯಾಗಿ ಸತತ ಕೊಡಿ ಬಿದ್ದ ಕಾರಣ ವಿಜೃಂಭಣೆಯ ತೆಪ್ಪೋತ್ಸವ ನೆಡೆಸಲು ರೈತ ಮತ್ತು ಜಯಚಂದ್ದ ಅಭಿಮಾನಿಗಳ ಬಳಗ ನಿರ್ಧರಿಸಿದ್ದು, ಕಾರ್ಯಕ್ರಮ ಆಯೋಜಿಸುವ ಮದಲೂರು ಕೆರೆಗೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಡಿ. ಸಿ. ಅಶೋಕ್ ಶಿರಾ ತಾಲ್ಲೂಕ್ಕಿನ ಕುಡಿಯುವ ನೀರಿನ ಬರ ನೀಗಿಸಲು ಕಳೆದ ೨೩ ವರ್ಷಗಳಿಂದ ಹೋರಾಟ ಮಾಡಿ ಸತತವಾಗಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಿ ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ, ಮದಲೂರು ಕೆರೆ ಸೇರಿದಂತೆ ೧೧ ಕೆರೆಗಳನ್ನು ಭರ್ತಿ ಮಾಡಿ ಬರದ ನಾಡಿನ ಬರವನ್ನು ನೀಗಿಸಿ, ಶಿರಾ ಜನತೆಯ ಕುಡಿಯುವ ನೀರಿನ ದಾಹ ನೀಗಿಸಿದ ನಿಜವಾದ ಭಗೀರಥ ಟಿಬಿ ಜಯಚಂದ್ರರವರು ಎಂದು ಹೇಳಿದರು. ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ, ಡಿ. ೬ ಐತಿಹಾಸಿಕ ದಿನವನ್ನಾಗಿ ಮಾಡುವ ನಿಟ್ಟಿನಲ್ಲಿ ಮದಲೂರು ಕೆರೆಯಲ್ಲಿ ತೆಪ್ಪೋತ್ಸವನ್ನು ಏರ್ಪಡಿಸಿದ್ದು , ಪೂರ್ಣಿಕುಂಭದೊ0ದಿಗೆ ಶ್ರೀ ದುರ್ಗಮ್ಮ…
ತುಮಕೂರು: ಹಲವು,ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳಿಂದ ಕೂಡಿದ್ದ ಭಾರತದ ಸಮಗ್ರ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ರಚನೆ ಮಾಡಿಕೊಟ್ಟ ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖ ರಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮ ರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿ ತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂವಿಧಾನ ಪೀಠಿಕೆ ಬೋಧಿಸಿ,ಮಾತನಾಡುತಿದ್ದ ಅವರು, ಭಾರತದ ಸಂವಿಧಾನ ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ರಚಿಸಿದಲ್ಲ. ಭಾರತದಲ್ಲಿರುವ ಎಲ್ಲಾ ವರ್ಗಗಳ ಜನರ ಶ್ರಯೋಭಿವೃದ್ದಿ ಉದ್ದೇಶದಿಂದಲೇ ರಚನೆ ಯಾಗಿದೆ. ಕಾಡುಗೊಲ್ಲ ಬುಡಕಟ್ಟು ಸಮುದಾ ಯದ ಸೇರಿದ ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾಗಿರುವುದೇ ಜೀವಂತ ಸಾಕ್ಷಿ ಎಂದರು. ಏಕ ದೇಶ, ಭಾಷೆ, ಸಂಸ್ಕೃತಿ, ಆ ಚರಣೆ ಯನ್ನು ಪ್ರತಿಪಾದಿಸುವ ಆರ್.ಎಸ್.ಎಸ್, ವಿಹೆಚ್ಪಿ,ಬಜರಂಗದಳ,ಶ್ರೀರಾಮ ಸೇನೆ ಯಂತಹ ಸಂಘಟನೆಗಳು,ಅAಬೇಡ್ಕರ್ ಬರೆದ ಸಂವಿದಾನದ ಅಡಿಯಲ್ಲಿ ಬಡವರು,…
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಕುರಿತು ಚರ್ಚೆಗಳು ನಡೆಯುತ್ತಿದ್ದು, ಇದುವರೆಗೂ ಮುಖ್ಯಮಂತ್ರಿ ಗಾಧಿಯಿಂದ ವಂಚಿತವಾಗಿರುವ ದಲಿತ ಸಮುದಾಯಕ್ಕೆ ಈ ಬಾರಿದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರುಗಳು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ. ನಗರದ ಟೌನ್ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ಅವರ ಪ್ರತಿಮೆಗೆ ಪಾಲಾರ್ಪಣೆ ಮಾಡಿದ ನಂತರದಲಿತ ಮುಖ್ಯಮಂತ್ರಿಯಾಗಿ ೮ ವರ್ಷಗಳ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆತಂದ, ಗೃಹ ಮಂತ್ರಿಯಾಗಿ, ಹಲವಾರು ಮಂತ್ರಿ ಪದವಿಗಳ ಜವಾಬ್ದಾರಿ ನಿರ್ವಹಿಸಿರುವ ಡಾ.ಜಿ.ಪರಮೇಶ್ವರ್ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮುಖಂಡರುಗಳು ಆಗ್ರಹಿಸಿದರು. ದಲಿತ ಮುಖಂಡರಾದ ಟಿ.ಸಿ.ರಾಮಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ೭೮ ವರ್ಷ ಕಳೆದರೂ ದಲಿತರಿಗೆ ಮುಖ್ಯಮಂತ್ರಿಗಾಧಿ ಸಿಕ್ಕಿಲ್ಲ. ಸಣ್ಣ ಸಣ್ಣ ಸಮುದಾಯಗಳ ಮುಖಂಡರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆರಾ ಜ್ಯದಲ್ಲಿ ೧.೧೦ ಕೋಟಿ ಜನಸಂಖ್ಯೆ ಹೊಂದಿರುವ, ಸದಾಕಾಂಗ್ರೆಸ್ ಪಕ್ಷಕ್ಕಾಗಿಯೇ ದುಡಿಯವ ದಲಿತ ಸಮುದಾಯದ ವ್ಯಕ್ತಿಗಳನ್ನು ಮುಖ್ಯಮಂತ್ರಿಯಾಗಿಆಯ್ಕೆ ಮಾಡಿಲ್ಲ. ಪ್ರತಿ ಬಾರಿಅಧಿಕಾರ ಹಂಚಿಕೆ ವಿಚಾರ ಬಂದಾಗಲೂ ದಲಿತ ಮುಖ್ಯಮಂತ್ರಿ ವಿಚಾರವನ್ನು ಮುನ್ನೆಲೆಗೆ ತರುವಕಾಂಗ್ರೆಸ್ ಮುಖಂಡರು,…
ಶಿರಾ: ತಾಲೂಕು ಬುಕ್ಕಾಪಟ್ಟಣ ಹೋಬಳಿ ಮಂಗನಹಳ್ಳಿ ಗ್ರಾಮದಲ್ಲಿ ೨೦ನೇ ವರ್ಷದ ಅಯ್ಯಪ್ಪ ಸ್ವಾಮಿಯವರ ಪಡಿಪೂಜೆ ಹಾಗೂ ಇರುಮುಡಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಗ್ರಾಮದ ೩೫ಕ್ಕೂ ಹೆಚ್ಚು ಜನ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿಯವರ ದೇಗುಲದ ಪ್ರತಿಕೃತಿ ತಯಾರಿಸಿ ೧೮ ಮೆಟ್ಟಿಲುಗಳನ್ನು ಪೂಜಿಸಿ ಪಡಿಪೂಜೆಯನ್ನು ನೆರವೇರಿಸಿದರು. ಸೋಮವಾರ ೩೫ ಜನ ಮಾಲಾಧಾರಿಗಳಿಗೆ ಇರುಮುಡಿ ಶಬರಿಮಲೆಗೆ ಬಿಳ್ಕೊಡಲಾಯಿತು. ಗ್ರಾಮದ ಹಾಗೂ ಸುತ್ತಮು ತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಭಕ್ತಿ ಭಾವಗಳಿಂದ ದೇವರಿಗೆ ನಮಿಸಿ ಕೃತಾರ್ಥರಾದರು, ಕಾರ್ಯಕ್ರಮದಲ್ಲಿ ಜಗದೀಶ್, ರಾಘವೇಂದ್ರ, ಕಾಂತರಾಜು, ರವಿಕುಮಾರ್, ಅರುಣ್ ಕುಮಾರ್, ಮಹಾಲಿಂಗಪ್ಪ, ರೇವಣ್ಣ, ವರುಣ್ ಎಂ ಸಿ, ಅರುಣ್, ವೇಣು ಗೋಪಾಲ್, ಪಾಯಿಂಟ್ ಗಂಗಾಧರ್, ರಂಗನಾಥ್ ಜೆ, ಕಾಮರಾಜು, ಜಯರಂಗಪ್ಪ, ಸೇರಿದಂತೆ ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿ ಗಳು ಸಾರ್ವ ಜನಿಕರು ಅಕ್ಕಪಕ್ಕದ ಅಯ್ಯಪ್ಪ ಸ್ವಾಮಿ ಮಂಡ ಳಿಗಳ ಸದಸ್ಯರು ಹಾಜರಿದ್ದರು.
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಆಯೋಜಿಸಲಾಗಿರುವ ಸರ್ವ ದಾರ್ಶನಿಕರ ಜಯಂತ್ಯುತ್ಸವವು ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಮತ್ತು ಪುರಸಭೆ ಚುನಾವಣೆಗಳ ಪೂರ್ವಸಿದ್ಧತಾ ಕಾರ್ಯಕ್ರಮವಾಗಿದೆ. ಅಲ್ಲದೆ, ಸಂವಿಧಾನ ಸಮರ್ಪಣಾ ದಿನದಂದು ಜಾತಿ ವ್ಯವಸ್ಥೆಯನ್ನು ಮಾಡಿ, ದಾರ್ಶನಿಕರ ಬಗ್ಗೆ ನುಡಿಯಲು ಆಯಾ ಜಾತಿಯ ಸ್ವಾಮೀಜಿಗಳನ್ನು ಆಹ್ವಾನಿಸಿರುವುದು ಸಂವಿಧಾನಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಆರೋಪಿಸಿದ್ದಾರೆ. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾರ್ಶನಿಕರ ಬಗ್ಗೆ ತಮಗೂ ಗೌರವವಿದೆ.ಈ ಹಿಂದೆ, ೨೦೧೬ ಲ್ಲಿ ತಾಲ್ಲೂಕಿನಲ್ಲಿ ಶಾಸಕರ ವಿರುದ್ಧ ‘ಅಭಿವೃದ್ಧಿಯಲ್ಲಿ ಶೂನ್ಯ’ ಎಂಬ ವಿರೋಧಿ ಅಲೆಗಳು ಕೇಳಿ ಬಂದಾಗ ಖಾಸಗಿಯಾಗಿ ಸರ್ವಧ ರ್ಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮ ಮೇಲಿನ ಆರೋಪಗಳಿಗೆ ಧನಾತ್ಮಕ ಪರಿಣಾಮ ಬೀರಲು ಯತ್ನಿಸಿದ್ದರು. ಪ್ರಸ್ತುತ, ಶಾಸಕರಿಗೆ ತಾಲ್ಲೂಕಿಗೆ ಅನುದಾನ ತರಲು ಅರ್ಹತೆ ಇಲ್ಲದ ಕಾರಣ, ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕಾರ್ಯಕ್ರಮದ ಕರಪತ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ ಚಿತ್ರಗಳು ಬಿಟ್ಟರೆ, ಸರ್ವದಾರ್ಶನಿಕರ…
ಗುಬ್ಬಿ: ಶ್ರೀ ಸಿದ್ದರಾಮೇಶ್ವರರು ತಪಸ್ಸು ಮಾಡಿರುವಂತಹ ಪುಣ್ಯ ಭೂಮಿ ಇದಾಗಿದ್ದು ಇಂತಹ ಸುಕ್ಷೇತ್ರಗಳು ಅಭಿವೃದ್ಧಿ ಮಾಡುವುದಕ್ಕೆ ತಾವೆಲ್ಲರೂ ಮುಂದಾಗಬೇಕು ಎಂದು ಕಾರೆ ಕುರ್ಚಿ ಸಿದ್ದರಾಮೇಶ್ವರ ತಪೋವನ ಕ್ಷೇತ್ರದ ಅಧ್ಯಕ್ಷರಾದ ಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು. ತಿಪಟೂರು ಹಾಗೂ ಗುಬ್ಬಿ ತಾಲೂಕಿನ ಗಡಿಭಾಗವಾದ ಶ್ರೀ ಸಿದ್ದರಾಮೇಶ್ವರರ ತಪೋವನದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಹಳ ಇತಿಹಾಸ ಪೂರ್ವ ದೇವಾಲಯವಾಗಿದ್ದು ಇದರ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಇಲ್ಲಿ ಸಾಗುತ್ತಿದೆ ಶ್ರೀ ಸಿದ್ದರಾಮೇಶ್ವರರು ಇಲ್ಲಿ ತಪಸ್ಸು ಮಾಡಿರುವಂತಹ ಪುಣ್ಯಭೂಮಿಯಾಗಿದ್ದು ಅನಾದಿಕಾಲದಿಂದಲೂ ತನ್ನದೇ ಆದ ಶರಣರ ಪರಂಪರೆಯನ್ನು ನಡೆಸಿಕೊಂಡು ಬಂದಿದೆ. ಯಾತ್ರಿ ನಿವಾಸ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ದೇವಾಲಯದಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು. ಕರಡಿ ಗವಿ ಮಠದ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿಗಳು ಮಾತನಾಡಿ ಶ್ರೀ ಸಿದ್ದರಾಮೇಶ್ವರರು ನಾಡಿನಾದ್ಯಂತ ಸಂಚಾರವನ್ನು ಮಾಡುವ ಮೂಲಕ ಸಾಮಾಜಿಕವಾಗಿ ಧಾರ್ಮಿಕವಾಗಿ ಸಾಕಷ್ಟು ಕೆಲಸವನ್ನು ಮಾಡಿದಂತಹ ಮಹಾಪುರುಷರಾಗಿದ್ದರು. ಕೆರೆ ಕಟ್ಟೆ ಅರಣ್ಯ ದೇವಾಲಯ ಹೀಗೆ ನಾನಾ ರೀತಿಯಲ್ಲಿ ಕೆಲಸ ಮಾಡಿ ದೊಡ್ಡ ಶರಣ…
ಕುಣಿಗಲ್: ತಾಲ್ಲೂಕಿನ ಸಂತೆಪೇಟೆ ಗ್ರಾಮದ ಬಳಿ ಇರುವ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಭಾನುವಾರ ತಡರಾತ್ರಿ ಬಿಯರ್ ಖರೀದಿಸಲು ಬಂದಿದ್ದ ಇಬ್ಬರು ಆಸಾಮಿಗಳು ಬಿಯರ್ ಪಡೆದು ನಂತರ ಹಣ ಕೇಳಿದ ಬಾರ್ ಕ್ಯಾಶಿಯರ್ ಗುರುಮೂರ್ತಿ ಎಂಬುವವರಿಗೆ ಕಾರಿನಲ್ಲಿದ್ದ ಮುಚ್ಚು ಲಾಂಗ್ ತಂದು ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಭಯದ ವಾತವರಣ ನಿರ್ಮಿಸೆಕ ಸ್ಥಳದಿಂದ ಕಾಲ್ಕಿತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಕುಣಿಗಲ್ ಪೊಲೀಸರು ಕೆಲವೆ ಗಂಟೆಗಳಲ್ಲಿ ಬಂಧಿಸಿದ್ದಾರೆ ಕೆಂಪನಹಳ್ಳಿ ಗ್ರಾಮದ ಮಂಜುನಾಥ್ (೨೮) ಹಾಗೂ ನಿಟ್ಟೂರು ಗ್ರಾಮದ ಮನೋಜ್ ಅಲಿಯಾಸ್ ಸಣ್ಣ (೨೪) ಬಂಧಿತ ಆರೋಪಿಗಳು ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಸಿಪಿಐ ಮಾಧ್ಯನಾಯಕ್ ಪಿಎಸ್ಐ ಅಮೂಲ್ ಅಭಯ್ ಹಾಗೂ ವಿಧಿವಿಜ್ಙಾನ ಪಯೋಗಲಾಯ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಘಟನೆ ಸಂಬ0ಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
ಚಿಕ್ಕನಾಯಕನಹಳ್ಳಿ: ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನರು ಸೇರಿದಂತೆ ಸಮಾಜದಲ್ಲಿ ಜಾತಿ ಹೆಸರಿನ ಮನಸ್ಥಿತಿಯಲ್ಲಿ ಜನರಿದ್ದಾರೆ. ಊರಿನಲ್ಲಿ ಜಾತ್ರೆಗಳು, ಹಬ್ಬ-ಹರಿದಿನವೆಂದಾಗ ನಾವೆಲ್ಲರೂ ಒಂದಾಗಿ ಹೋಗುತ್ತೇವೆ. ಪ್ರತಿ ಮನೆಗಳಲ್ಲಿ ಹಬ್ಬವಾದರೆ ಅಕ್ಕಪಕ್ಕದಲ್ಲಿ, ಪರಿಚಯಸ್ಥರಲ್ಲಿ ಯಾವದೇ ಜಾತಿಯಾದರೂ ಹೋಗುತ್ತೇವೆ, ಕರೆದು ಉಪಚರಿಸುತ್ತೇವೆ. ಅಂತಹ ಸಂಪ್ರದಾಯವನ್ನು ಎಲ್ಲರಿಗೂ ತಿಳಿದಿದೆ ಆದರೆ ಆ ಸಂಪ್ರದಾಯಕ್ಕೆ ತಾಲ್ಲೂಕಿನ ಮೂಲಕ ಮುನ್ನುಡಿ ಬರೆಯಲು ಈಗ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊರಟಿದೆ. ಇಡೀ ರಾಜ್ಯದ ಎಲ್ಲಾ ಸಮುದಾಯದ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ನವಂಬರ್ ೨೬ ರಂದು ಭಾಗಿಯಾಗಿ ಸಾಕ್ಷಿಯಾಗಲಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ವಧರ್ಮ ದಾರ್ಶನಿಕರ ಜಯಂತ್ಯೋತ್ಸವ ಕಾರ್ಯಕ್ರಮದ ಹೆಸರಿನಲ್ಲಿ ರಾಜ್ಯದಲ್ಲಿರುವ ಇಡೀ ಎಲ್ಲಾ ಸಮುದಾಯದ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಸಿಗಲಿದ್ದಾರೆ. ಈ ಸಮಾರಂಭದ ಮೂಲಕ ಇಡೀ ರಾಜ್ಯಕ್ಕೆ ನಾವೆಲ್ಲರೂ ಒಂದೇ, ನಾಮ ಹಲವು ದೇವರೊಬ್ಬನೆ ಎಂಬ0ತೆ, ನೂರಾರು ಜಾತಿಗಳಿದ್ದರೂ ನಾವೆಲ್ಲರೂ ಒಂದೇ ಜಾತಿ ಮನುಷ್ಯ ಜಾತಿ ಎಂಬ ಸಂದೇಶ ರವಾನೆಯಾಗಲಿದೆ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರಾದ ಶಾಸಕ ಸಿ.ಬಿ.ಸುರೇಶ್ ಬಾಬು. ಹಿಂದು, ಮುಸ್ಲಿಂ,…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬಡಕೆಗುಡ್ಲು ಗ್ರಾಮದ ಎ.ಕೆ.ಕಾಲೋನಿಯಲ್ಲಿ ನೀರಿನ ಸಮಸ್ಯೆ ನೀಗಿಸುವಂತೆ ನಿವಾಸಿಗರು ಒತ್ತಾಯಿಸಿದ್ದಾರೆ. ಬಡಕೆಗುಡ್ಲು ಗ್ರಾಮ ಹಿಂದುಳಿದ ಪ್ರದೇಶವಾಗಿದೆ. ಈ ಗ್ರಾಮದ ಎ.ಕೆ. ಕಾಲೋನಿಯಲ್ಲಿ ಸುಮಾರು ೨೫ ಬಡಕುಟುಂಬಗಳು ವಾಸಿಸುತ್ತಿದೆ. ಕೂಲಿ ಮಾಡಿಕೊಂಡು ಜೀವಿಸುತ್ತಿರುವ ಈ ಕಾಲೋ ನಿಯಲ್ಲಿ ವೃದ್ದರು, ಬಾಣಂತಿಯರು ಹಾಗೂ ಚಿಕ್ಕ ಮಕ್ಕಳಿದ್ದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ಎರಡು ವರ್ಷದಿಂದ ಕಾಡುತ್ತಿದೆ, ಇದಲ್ಲದೆ ಉತ್ತಮ ರಸ್ತೆಯಾಗಲಿ, ಚರಂಡಿ ವ್ಯವಸ್ಥೆಯಾಗಲಿ ಈ ಕಾಲೋನಿಗಿಲ್ಲದೆ ಅನೈರ್ಮಲ್ಯದ ವಾತಾವರಣದಲ್ಲಿ ಬದುಕುತ್ತಿ ದ್ದಾರೆ. ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದ್ದರೂ ಅಧಿಕಾರಿಗಳಾಗಲಿ, ಜನ ಪ್ರತಿನಿಧಿ ಗಳಾಗಲಿ ಗಮನಹರಿಸಿಲ್ಲ, ಪಂಚಾಯಿತಿ ಅಭಿ ವೃದ್ದಿ ಅಧಿಕಾರಿ ಎರಡು ದಿನದಲ್ಲಿ ಸಮಸ್ಯೆ ನಿವಾ ರಣೆ ಮಾಡಲಾಗುತ್ತದೆ ಎಂದು ಹೇಳಿ ಹೋಗಿ ತಿಂಗಳಾದರೂ ಈ ಕಡೆ ತಿರುಗಿ ನೋಡಿಲ್ಲ ಎಂದು ಗ್ರಾಮದ ಮಹಿಳೆಯರು ಹಾಗೂ ಸ್ಥಳೀಯರು ಪಂಚಾಯಿತಿ ಕಾರ್ಯಾಲಯದ ಮುಂದೆ ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಹಕ್ಕುಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ನಿವಾಸಿಗಳು ಎಚ್ಚರಿಸಿದ್ದಾರೆ.











