ಹುಳಿಯಾರು: ಹುಳಿಯಾರು ಕಸ ವಿಲೇವಾರಿ ಘಟಕವನ್ನು ಎಚ್.ಮೇಲನಹಳ್ಳಿ ಬಳಿ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ. ಹುಳಿಯಾರು ಸಮೀಪದಲ್ಲೇ ಸಾಕಷ್ಟು ಸರ್ಕಾರಿ ಭೂಮಿ ಇರುವಾಗ ೨೦ ಕಿ.ಮೀ. ದೂರದ ಎಚ್.ಮೇಲನಹಳ್ಳಿಯ ಭೂಮಿಯ ಮೇಲೆ ಕಣ್ಣೇಕೆ? ಎಂದು ಸ್ಥಳೀಯರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದ ಘಟನೆ ಶನಿವಾರ ನಡೆದಿದೆ. ಹುಳಿಯಾರಿನ ಕಸ ವಿಲೇವಾರಿ ಘಟಕ ನಿರ್ಮಿಸಲು ಎಚ್.ಮೇಲ ನಹಳ್ಳಿ ಸರ್ವೆ ನಂಬರ್ ೬೯ ಹಾಗೂ ೬೯/೩ ರಲ್ಲಿ ಈ ಹಿಂದಿನ ತಹಸೀಲ್ದಾರ್ ಕೆ.ಪುರಂದರ ಅವರು ಸ್ಥಳ ಗುರುತಿಸಿದ್ದು ನೂತನÀ ತಹಸೀಲ್ದಾರ್ ಎಂ.ಮಮತ ಅವರು ಶನಿವಾರ ಸ್ಥಳ ವೀಕ್ಷಣೆಗೆ ಆಗಮಿ ಸಿದ್ದರು. ಈ ಸಂದರ್ಭದಲ್ಲಿ ಘಟಕ ನಿರ್ಮಾಣ ಸ್ಥಳಕ್ಕೆ ಹೋ ಗದೆ ಗ್ರಾಮದಲ್ಲೇ ಸ್ಥಳೀಯರು ಕಾರಿಗೆ ಮುತ್ತಿಗೆ ಹಾಕಿ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಹಿಂದಿನ ತಹಸೀಲ್ದಾರ್ ಅವರ ನಡೆಯನ್ನು ತೀರ್ವವಾಗಿ ಖಂಡಿಸಿದರು. ಎಚ್.ಮೇಲನಹಳ್ಳಿ ಗ್ರಾಮದಲ್ಲೇ ೧೮೦೦ ರಿಂದ ೨೦೦೦ ಸಾವಿರ ಜನಸಂಖ್ಯೆ ಇದೆ. ಅಲ್ಲದೆ ಊರಿಗೆ ಹೊಂದಿಕೊAಡAತೆ ಹನುಮ ದಾಸಯ್ಯನಪಾಳ್ಯ, ಜಯಸುವರ್ಣಪುರ, ಲಂಬಾಣಿತಾAಡ್ಯ ಹಾಗೂ ತೋಟದ…
Author: News Desk Benkiyabale
ತುಮಕೂರು: ಜಿಲ್ಲೆಯ ನಿರಾಶ್ರಿತರು, ಬಡವರು ನಿರ್ಗತಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಸತಿ ನಿವೇಶನದ ಜಾಗಗಳನ್ನು ಗುರುತಿಸಿದ್ದು ಅಲೆಮಾರಿ, ಅರೆ ಅಲೆಮಾರಿ ಅಕ್ಕಿ ಪಿಕ್ಕಿ ಹಂದಿ ಜೋಗಿ ಸಮುದಾಯಗಳಿಗೆ ನಿವೇಶನ ಕಲ್ಪಿಸಲು ತುಮಕೂರು ಹೊರವ ಲಯದ ಕೇಂದ್ರೀಯ ವಿದ್ಯಾಲಯದ ಬಳಿ ಅಮಲಾಪುರದ ಸರ್ವೆ ನಂ. ೩೧ ರಲ್ಲಿ ಈಗಾಗಲೇ ಒಂದು ಎಕ್ಕರೆ ಜಮೀನು ನೀಡಿದ್ದು ಆದರೆ ಇಲ್ಲಿಗೆ ಮೂಲ ಭೂತ ಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾ ಆಡಳಿತದ ಅಧಿಕಾರಿಗಳು ವಿಫಲವಾಗಿದ್ದು ಕೂಡಲೇ ಮೂಲಭೂತ ಸೌಕರ್ಯ ಕಲ್ಪಿಸಿ ಹಕ್ಕುಪತ್ರ ನೀಡದೆ ಹೋದರೆ ಜನವರಿ ೧೦ ರಿಂದ ಇಲ್ಲಿ ಅನಿರ್ದಿಷ್ಟ ಅವಧಿ ಹೋರಾಟ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಎಮ್.ಸಂದೇಶ್ ಅವರು ತಿಳಿಸಿದರು. ತುಮಕೂರು ನಗರ ಹೊರವಲಯದ ಅಮಲಾಪುರ ಕೇಂದ್ರೀಯ ವಿದ್ಯಾಲಯದ ಬಳಿ ಇರುವ ಹಂದಿ ಜ್ಯೋಗಿಗಳ ವಾಸಸ್ಥಾನಕ್ಕೆ ಭೇಟಿ ಸುದ್ದಿಗಾರರ ಬಳಿ ಮಾತನಾಡಿದರು ತುಮಕೂರು ಜಿಲ್ಲೆಯ ಸುಮಾರು ೫೦ಕ್ಕೂ ಹೆಚ್ಚು ನಿರ್ಗತಿಕರು ಅಲೆಮಾರಿಗಳಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಒಂದು…
ತುಮಕೂರು: ತುರುವೇಕೆರೆ ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ ಮುಂದಿನ ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ತಿಳಿಸಿದರು. ಸೋಮವಾರ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಆಹಾರ ಅದಾಲತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗಾಗಿ ಒಟ್ಟು ೨,೦೯೪ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ೧೬೫೪ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ ೪೪೨ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಅನ್ನ ಸುವಿಧ ಯೋಜನೆ ಯಡಿ ೭೫ ವರ್ಷ ಮೇಲ್ಪಟ್ಟ ಏಕ ಸದಸ್ಯರಾಗಿರುವ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ವಯೋವೃದ್ಧರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ…
ತುಮಕೂರು: ಸಾಮಾಜಿಕ ಕಳಕಳಿ ಹೊಂದಿರುದ ದಿನಪತ್ರಿಕೆಗಳನ್ನು ರೂಪಿಸುವ ಹೊಣೆ ಹೊತ್ತಿರುವ ಸಂಪಾದಕರು ದಿನನಿತ್ಯ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ಕಾರ್ಯಭಾರದಲ್ಲಿ ಅವರು ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುವಷ್ಟು ಒತ್ತಡ ಬರಬಹುದು. ಎಷ್ಟೇ ಕಾರ್ಯ ಒತ್ತಡದ ನಡುವೆಯೂ ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟು ಅವರೊಂದಿಗೆ ಬೆರೆತು ಕುಟುಂಬದ ಕಲ್ಯಾಣಕ್ಕೆ ಪ್ರಯತ್ನಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿ0ದ ಹಮ್ಮಿಕೊಂಡಿದ್ದ ರಾಷ್ಟಿçಯ ಪತ್ರಿಕಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಮ್ಮ ಹಾಲಪ್ಪ ಪ್ರತಿಷ್ಠಾನದಡಿ ಚಿನ್ನದ ಪದಕ ನೀಡಲಾಗುತ್ತಿದೆ. ಇದೇ ರೀತಿ ಪತ್ರಕರ್ತರ ಕಲ್ಯಾಣ ಹಾಗೂ ಪ್ರೋತ್ಸಾಹಕ್ಕಾಗಿ ಸಾಧ್ಯವಾದಷ್ಟು ದತ್ತಿ ಹಣ ಮೀಸಲಿಡುವ ಮೂಲಕ ಅವರ ವೃತ್ತಿ ಬದುಕಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುವುದಾಗಿ ಹೇಳಿದರು.…
ತುಮಕೂರು: ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಅದರ ಅತ್ಯುನ್ನತ ಮೌಲ್ಯವನ್ನು ಸಾಧಿಸುತ್ತದೆ. ಹೊಸ ತಂತ್ರಜ್ಞಾನಗಳು ಸುರಕ್ಷಿತವೂ,ನೈತಿಕವು ಆಗಿರಬೇಕು.ಆಗ ಮಾತ್ರ ಹೆಚ್ಚು ದಿನ ಜನರ ಮದ್ಯ ಉಳಿಯಲು ಸಾಧ್ಯ ಎಂದು ಯುಎಸ್ಎಯ ಪ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಎಸ್.ಎಸ್ ಐಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಸ್.ಐ.ಟಿಯ ಬಿರ್ಲಾ ಸಭಾಂಗಣದಲ್ಲಿ ಎಸ್.ಐ. ಟಿಯ ಕಂಪ್ಯೂಟರ್ ಸೈನ್ ಮತ್ತು ಇನ್ಫಾರಮೇಷನ್ ಸೈನ್ ವಿಭಾಗದಿಂದ ಎಐಸಿಇಟಿ ಸಹಯೋಗದಲ್ಲಿ ಆಯೋಜಿಸಿದ್ದ ಮೂರನೇ ಐಸಿಇಸಿಐಟ-೨೦೨೫ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ಈ ಸಮ್ಮೇಳನವು ಶೈಕ್ಷಣಿಕ ಕ್ಷೇತ್ರದ ಸಂಶೋಧಕರು,ಉದ್ಯಮದ ವೃತ್ತಿಪರರು, ನೀತಿ ನಿರೂಪಕರು ಮತ್ತು ಯುವ ವಿದ್ವಾಂಸರನ್ನು ಒಟ್ಟುಗೂಡಿಸುವ ಮೂಲಕ ಆ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ.ಪ್ರತಿಯೊಬ್ಬರೂ ಮಾಹಿತಿ ತಂತ್ರಜ್ಞಾನಗಳ ಭವಿಷ್ಯಕ್ಕೆ ವಿಶಿಷ್ಟವಾದ ಬೆಳಕನ್ನು ಕೊಡುಗೆ ನೀಡುತ್ತಾರೆ ಎಂದರು. ತ0ತ್ರಜ್ಞಾನದ ಭಾಗವಾಗಿರುವ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರಮೇಷನ್ ಟೆಕ್ನಾಲಜಿಯ ಉದಯೋನ್ಮುಖ ಯುವಜನತೆ ಜಾಗತಿಕ ವೇದಿಕೆಯ ಭಾಗವಾಗಲು ಇಂತಹ ಸಮ್ಮೇಳನಗಳು ವೇದಿಕೆಯಾಗಲಿವೆ.ಈ ರೀತಿಯ ಸಮ್ಮೇಳನಗಳು ಕೇವಲ ಶೈಕ್ಷಣಿಕ ಕೂಟಗಳಲ್ಲ,ವಿಚಾರಗಳ ಜೀವಂತ ಪರಿಸರ ವ್ಯವಸ್ಥೆಗಳು. ಅವು ಸಿದ್ಧಾಂತ ಮತ್ತು…
ಪಾವಗಡ: ತಾಲೂಕಿನ ವೈ.ಈ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ನಶೆ ಮುಕ್ತ ಕರ್ನಾಟಕ’ ಅಭಿಯಾನ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಹಾಗೂ ಪಾವಗಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಮಾತನಾಡಿ, ಇಡೀ ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಮಾದಕ ದ್ರವ್ಯ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಸಮಾಜದಲ್ಲಿ ವ್ಯಸನಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಮಾಹಿತಿ ನೀಡುವವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ‘ನಶೆ ಮುಕ್ತ ಕರ್ನಾಟಕ’ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಆಪ್ ಮೂಲಕವೂ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ.ಎನ್. ಮುರುಳಿಧರ್ ಮಾತನಾಡಿ, ಯುವಕರು ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಬಳಕೆಯು ತೀವ್ರ ಮಾನಸಿಕ, ಸಾಮಾಜಿಕ…
ತುಮಕೂರು: ಎತ್ತಿನ ಹೊಳೆ ಯೋಜನೆಯ ಸುಮಾರು ೨೫೨ ಕಿ.ಮಿ. ನಾಲಾ ಕಾಮಗಾರಿಯಲ್ಲಿ ೨೩೫ ಕಿಮಿ ಕಾಮಗಾರಿ ಪೂರ್ಣಗೊಂಡಿದ್ದು, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿ.ಮಿ.ಅರಣ್ಯ ಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ ಮುಂದಿನ ೨೦೨೬ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಆನಂದ ಸ್ಪಷ್ಟನೆ ನೀಡಿದ್ದಾರೆ. ನಗರದ ಅಮರಜೋತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಎದುರು ಎತ್ತಿನಹೊಳೆ ಯೋಜನೆ ನಮ್ಮದಾಗಲಿ ಎಂಬ ಘೋಷವಾಕ್ಯದೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಎತ್ತಿನಹೊಳೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು,ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ಮಳೆಯ ನೀರನ್ನು ಸಂಗ್ರಹಿಸಿ, ಪೂರ್ವದಲ್ಲಿ ರುವ ಬಯಲು ಸೀಮೆಯ ೭ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇದಾಗಿದೆ ಎಂದರು. ಎತ್ತಿನಹೊಳೆಗೆ ಈ ಯೋಜನೆಯಿಂದ ಒಟ್ಟು ೨೪.೭೮ ಟಿ.ಎಂ.ಸಿ ನೀರು…
ಪಾವಗಡ: ತಲ್ಲೂಕಿನ ನಾಗಲಮಟ್ಟಿ ಹೋಬಳಿ ಇಮಾಮ್ನಳ್ಳಿ ಗ್ರಾಮದ ಸರ್ವೆ ನಂಬರ್ ೩೩.೩೪ ರಲ್ಲಿ ತಿಮ್ಮನಹಳ್ಳಿ ಉಪ್ಪಾರಳ್ಳಿಗೆ ಹೋಗುವ ದಾರಿ ಇದ್ದು ನಕಾಶೆಯಲ್ಲಿ ಎಂಟು ಹೊಡಿ ಜಾಗವಿದ್ದು ಸದರಿ ಸುಮಾರು ೫೦ರಿಂದ ೬೦ ಜನ ರೈತರು ರೈತರುಗಳು ತಮ್ಮ ಜಮೀನುಗಳಿಗೆ ಹೋಗಲು ದಾರಿ ಹಿಂದೆಯೇ ನಿಮ್ಮ ತಾತ ಮುತ್ತಾತ ಇದ್ದಾಗಲಿಂದಲೂ ಇದೇ ರಸ್ತೆ ಬಳಸುತ್ತಿದ್ದೇವೆ. ಆದರೆ ಇದೇ ಗ್ರಾಮದ ವಾಸಿ ಭೋವಿ ಜನಾಂಗದ ಸುಬ್ಬಯ್ಯ ಮತ್ತು ಇತರ ಮಕ್ಕಳು ಅಡ್ಡಿಪಡಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಇವತ್ತೆ ವಿಚಾರವಾಗಿ ಕಳೆದ 4/5 ವರ್ಷಗಳಿಂದ ಇದೇ ಪ್ರಸಿದ್ಧಿ ಉಂಟಾಗಿದೆ ಅದರ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ . ಸಮಸ್ಯೆ ಹೋಗಲ್ಲಾಡಿಸುವವರೆಗೆ ನಾವು ಇಲ್ಲಿಂದ ಕದಲ್ಲೂವುದಿಲ್ಲ ಎಂಬುದಾಗಿ ಪ್ರತಿಭಟ ನೆಕಾರರು ರಸ್ತೆ ಬಿಡಿಸಿ ಇಲ್ಲವಾದರೆ ನಮ್ಮನ್ನು ಸಾಯ್ಲು ಬಿಡಿ. ಸಾಲಪಾಲ ಮಾಡಿ ಜಮೀನಿನಲ್ಲಿ ಕೆಲವು ಬೆಳೆ ಬೆಳದಿದ್ದೇವೆ ಪ್ರತಿದಿನ ಈ ರಸ್ತೆಗೆ ಓಡಾಡಲು ಬರೆ ಇವರದೇ ಕಿರಿಕಿರಿ ಯಾಗಿದೆ ಹಾಗಾಗಿ ನಮಗೆ ಮೊದಲು ಓಡಲು…
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ನಗರದ ಗಂಗಸ0ದ್ರದ ಮಯೂರ ನಗರದ ವಾರ್ಡ್ ಸಂಖ್ಯೆ ೧೧ರ ರಾಜಗಾಲುವೆಯಲ್ಲಿ ಹರಡುತ್ತಿರುವ ವಿಪರೀತ ರಾಸಾಯನಿಕ ವಾಸನೆ ಹಾಗೂ ಮರಳೂರು ಭಾಗದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಯೂರ ನಗರದ ರಾಜಗಾಲುವೆಯಿಂದ ಬರುತ್ತಿರುವ ತೀವ್ರತರದ ಕೆಮಿಕಲ್ ವಾಸನೆಯು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಈ ವಾಸನೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ರಾಜಗಾಲುವೆಗೆ ಕೆಮಿಕಲ್ ಮಿಶ್ರಿತ ನೀರು ಎಲ್ಲಿಂದ ಹರಿದು ಬರುತ್ತಿದೆ ಯುಜಿಡಿ ಸಂಪರ್ಕದ ಮೂಲಕವೇ ಇದು ಸೇರುತ್ತಿದೆಯೇ ಅಥವಾ ಯಾರಾದರೂ ಬೇಕೆಂದೇ ರಾಸಾಯನಿಕ ತ್ಯಾಜ್ಯವನ್ನು ಹರಿಸುತ್ತಿದ್ದಾರೆಯೇ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಸರಕ್ಕೆ ಹಾನಿ ಉಂಟುಮಾಡುವ ಮತ್ತು ಸಾರ್ವಜನಿಕರ ಜೀವಕ್ಕೆ ಧಕ್ಕೆ ತರುವ ರೀತಿಯಲ್ಲಿ ರಾಜಗಾಲುವೆಗೆ…
ತುಮಕೂರು: ಎಲ್ಲಾ ಮುನಿಪಲ್ ಗುತ್ತಿಗೆ / ಹೋರ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂಮಾತಿಗಾಗಿ ,ಖಾಯಂಗೊಳಿಸುವ ತನಕ ನೇರ ಪಾವತಿಯಡಿಯಲ್ಲಿ ಸಮಾನ ಕೇಲಸಕ್ಕೆ ಸಮಾನ ವೇತನ ನೀಡಲು ೨೦೨೬-೨೭ ಸಾಲಿನ ಬಜೆಟ್ನಲ್ಲಿ ಕ್ರಮ ವಹಿಸಲು ಒತ್ತಾಯಿಸಿ ದಿನಾಂಕ; ೧೮-೧೨-೨೦೨೫ ರಂದು ಮಧ್ಯಾನ್ಹ ಧರಣಿ ತುಮಕೂರು ಮಹಾ ನಗರ ಪಾಲಿಕೆ ಕಸದ ವಾಹನ ಚಾಲಕರ ಸಹಾಯಕರು ಲೋರ್ಸ್.&ಕ್ಲೀರ್ಸ ಸಂಘ ರಿ, ಪೌರ ಕಾರ್ಮಿಕರ ಸಂಘ. ರಿ ಸಿಐಟಿಯು ನೇತ್ರೇತ್ವದಲ್ಲಿ ಮಹಾ ನಗರ ನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ಎಲ್ಲಾ ಮುನಿಸಿಪಾಲಿಟಿ,ಮಹಾ ನಗರ ಪಾಲಿಕೆಗಳಲ್ಲಿ ನೇರ ಪಾವತಿ , ಗುತ್ತಿಗೆ ಪೌರಕಾ ರ್ಮಿಕರು, ದಿನಾಗೂಲಿ ಲೋರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲಿರ್ಗಳು, ಒಳಚರಂಡಿ ಸ್ವಚ್ಛತಾ , ಪಾರ್ಕ, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಶೌಚಾಲಯಗಳಲ್ಲಿ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು , ನೀರು ಸರಬರಾಜು ನೌಕರರ, ಕಂಪ್ಯೂಟರ್ ಅಪರೇರ್ಗಳು ನಡುವೆ ತಾರತಮ್ಯ ಮಾಡದೆ ಒಂದೇ ಬಾರಿಗೆ ಖಾಯಂಗೊಳಿಸಲು ಮುನಿಸಿಪಲ್…











