ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದು ೭೮ ವರ್ಷ ಕಳೆದರು ಸಂವಿಧಾನದ ಅರ್ಟಿಕಲ್ ೨೧(ಎ)ಅಡಿಯಲ್ಲಿ ದೇಶದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗದೆ ಸರಕಾರಗಳ ವಿರುದ್ದ ಹಾಗೂ ಕೆ.ಪಿ.ಎಸ್ ಮ್ಯಾಗ್ನೇಟ್ ಶಾಲೆಯ ಹೆಸರಿನಲ್ಲಿ ೪೧ ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರಕಾರದ ಕ್ರಮವನ್ನು ಖಂಡಿಸಿ, ಜನವರಿ ೨೬ರ ಗಣರಾಜೋತ್ಸವ ದಿನದೊಂದು ಕರ್ನಾಟಕ ರಾಜ್ಯ ರೈತ ಹಾಗೂ ಎಸ್.ಡಿ.ಎಂ.ಸಿ ಸಂಘದವತಿಯಿAದ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ಬಿ.ಆರ್.ಯೋಗೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಕ್ಷಣದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಉಳ್ಳವರಿಗೆ ಒಂದು ರೀತಿ ಶಿಕ್ಷಣ, ಇಲ್ಲದವರಿಗೆ ಒಂದು ರೀತಿಯ ಶಿಕ್ಷಣ ಎಂಬುವ0ತಾಗಿದೆ.ಇದಕ್ಕೆ ಸರಕಾರದ ನೀತಿಗಳೇ ಕಾರಣವಾಗಿದ್ದು, ಸರಕಾರ ಎಚ್ಚೆತ್ತುಕೊಂಡು,ಎಲ್ಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಖಚಿತ ಪಡಿಸದಿದ್ದಲ್ಲಿ, ೨೦೨೬ರ ಜನವರಿ ೨೬ರ ಗಣರಾಜೋತ್ಸವ ದಿನದಂದು ರೈತ ಸಂಘದ ಕಾರ್ಯಕರ್ತರು ಹಾಗೂ ಎಸ್.ಡಿ.ಎಂ.ಸಿ ಸಂಘದ ಸದಸ್ಯರುಗಳು ಬಲಗೈಯಲ್ಲಿ ತ್ರಿವರ್ಣ ದ್ವಜ ಹಾಗೂ ಎಡಗೈಯಲ್ಲಿ ಕಪ್ಪು ಬಾವುಟ ಹಿಡಿದು ರಾಜ್ಯದ ಎಲ್ಲಾ…
Author: News Desk Benkiyabale
ತುಮಕೂರು: ವಿದ್ಯಾರ್ಥಿಗಳು ಇತಿಹಾಸದಲ್ಲಿ ಭೀಮ ಕೋರೆಂಗಾವ್ ನಂತಹ ಚರಿತ್ರೆಗಳನ್ನು ತಿಳಿದುಕೊಳ್ಳುತ್ತ ತಮ್ಮ ಅರಿವನ್ನ ಎಚ್ಚರಗೊಳಿಸಬೇಕು. ಅಸಮಾನತೆ ಎನ್ನುವುದು ವ್ಯವಸ್ಥೆಯ ಕಣ ಕಣದಲ್ಲೂ ಅಡಗಿದೆ ಅದನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಬಯಲು ರಂಗಮ0ದಿರದಲ್ಲಿ ಡಿಸೆಂಬರ್ ೩೧ರಂದು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಚಾರಿತ್ರಿಕ ಭೀಮ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಪರಿವರ್ತನಾ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಸವರಾಜು ಈ ದಿನವನ್ನು ಶೌರ್ಯದ ದಿನ, ಸಮಾನತೆಯ ಹೋರಾಟದ ದಿನ, ಒಗ್ಗಟ್ಟಿನ ದಿನ ಎಂದು ಆಚರಿಸಬೇಕು. ಯಾವುದೇ ಶೋಷಣೆಯಿರಲಿ ಅದನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೆ ಎದುರಿಸಬೇಕು. ನಿರಂತರವಾಗಿ ನಡೆಯುವ ಶೋಷಣೆಯ ಹಂತ ಮೀರಿದರೆ ಹೇಗೆ ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ ಎಂಬುದಕ್ಕೆ ೧೮೧೮ ರಲ್ಲಿ ಪೇಶ್ವೆಗಳ ವಿರುದ್ಧ ನಡೆದ ಭೀಮ ಕೋರೆಂಗಾವ್ ಯುದ್ಧವೇ…
ಮಧುಗಿರಿ: ಅಸ್ಪೃಶ್ಯರ ಸ್ವಾಭಿಮಾನಕ್ಕಾಗಿ ಶೂರರಾದ ಮಹಾರರು ಸಿದ್ದನಾಕ ಮುಖಂಡತ್ವದಲ್ಲಿ ೧೮೧೮ ಜನವರಿ ೧ ರಂದು ಭೀಮಾಕೋರೆಗಾಂವ್ ಯುದ್ದದಲ್ಲಿ ಬಾಜಿರಾವ್ ಪೇಶ್ವೆಯ ೩೦ ಸಾವಿರ ಸೈನಿಕರ ವಿರುದ್ದ ಜಯಭೇರಿ ಬಾರಿಸಿದರು ಯುದ್ದದಲ್ಲಿ ಮಡಿದ ೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ ಎಂದು ದ.ಸಂ.ಸ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಲ್ಲದಮಡು ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಜನವರಿ ೧೮೧೮ ರ ಭೀಮಾಕೋರೆಗಾಂವ್ ಯುದ್ದದಲ್ಲಿ ಮಹಾರ್ ಸ್ವಾಭಿಮಾನಿ ವೀರಯೋದರ ವಿಜಯೋತ್ಸವದ ನೆನಪಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ರವರು ಬ್ರಿಟಿಷ್ ರ ಮತ್ತು ಮಹಾರರ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಲು ಅಧ್ಯಯನ ಮಾಡುವಾಗ ಮಹಾರ್ ಯುದ್ಧದ ಪರಿಚಯ ವಾಯಿತು ಇಲ್ಲವಾದರೆ ಚರಿತ್ರೆಯಲ್ಲಿ ಮುಚ್ಚಿಹೋಗಿದ್ದ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ ಎಂದರು.ಈ ದೇಶದಲ್ಲಿ ಯಾವುದೇ ತರಹದ ಸಮಸ್ಯೆಗಳನ್ನು ಕೊನೆಗಾಣಿಸಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಸತ್ಯವನ್ನು ಬರೆದು ಸಮಾಜಕ್ಕೆ ಕಣ್ಣಾಗಬೇಕು ಅನ್ಯಾಯದ…
ಮಧುಗಿರಿ: ಜನವರಿ ೧ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರ ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಚರಿತ್ರೆಯನ್ನು ಜನರಿಗೆ ತಿಳಿಸಬೇಕು ಎಂದು ದ.ಸಂ.ಸ ಜಿಲ್ಲಾ ಸಂಚಾ ಲಕ ದೊಡ್ಡೇರಿ ಕಣಿಮಯ್ಯ ತಿಳಿಸಿದರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಬಳಿ ಸಮಾಜಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ ಭೀಮಾ ನದಿ ದಡದಲ್ಲಿ ಪೇಶ್ವೆ ಸೇನೆ ಹಾಗೂ ಮಹಾರ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ ಮಹರ್ ಸೈನಿಕರು ಶೌರ್ಯ ಮೆರೆದಿದ್ದಾರೆ ೩೦ ಸಾವಿರ ಪೇಶ್ವೆಗಳನ್ನು ೫೦೦ ಮಹಾರ್ ಸೈನಿ ಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು…
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಕರ್ನಾಟಕ ಬ್ಯಾಂಕ್, ವಿವೇಕಾನಂದ ರಸ್ತೆ ಶಾಖೆಯಲ್ಲಿ ಉತ್ತಮ ಆಡಳಿತ ವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಅಭಿಯಾನ ವ್ಯವಸ್ಥಾಪಕ ದೊಡ್ಡವಲಪ್ಪ ಮಾತನಾಡಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿ.ಎಂ. ಸ್ವ-ನಿಧಿ) ಯೋಜನೆಯನ್ನು ೨೦೨೦ರಲ್ಲಿ ಕರೋನ ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಗೊಳಿಸಿತ್ತು. ಬೀದಿ ವ್ಯಾಪಾರಿಗಳು ಬ್ಯಾಂಕ್ ಮೂಲಕ ಮೊದಲನೇ ಹಂತದಲ್ಲಿ ರೂ.೧೦,೦೦೦/- ಸಾಲ ಪಡೆದು ಒಂದು ವರ್ಷದೊಳಗೆ ಮರುಪಾವತಿ ಮಾಡಿದ ನಂತರ ಎರಡನೇ ಹಂತದಲ್ಲಿ ರೂ.೨೦,೦೦೦/- ಸಾಲ ಪಡೆಯಬ ಹುದು, ಎರಡನೇ ಹಂತದ ಸಾಲವನ್ನು ಹದಿನೆಂಟು ತಿಂಗಳಲ್ಲಿ ಮರುಪಾವತಿ ಮಾಡಿ ಮೂರನೇ ಹಂತದಲ್ಲಿ ರೂ.೫೦೦೦೦/- ಸಾಲ ಪಡೆಯಬಹುದು, ಶೇ.೭ ರಷ್ಟು ಬಡ್ಡಿ ಸಹಾಯಧನ ಹಾಗೂ ಡಿಜಿಟಲ್ ವ್ಯವಹಾರ ಮಾಡಿದರೆ ಪ್ರತಿ ತಿಂಗಳೂ ಪ್ರತ್ಸಾಹ ಧನ ರೂ.೧೦೦/- ರವರೆಗೆ ಪಡೆಯಬಹುದಾಗಿದೆ. ಪ್ರಸ್ತುತ ಡಿಸೆಂಬರ್ ೨೦೨೪ಕ್ಕೆ ಯೋಜನೆ ಮುಕ್ತಾಯವಾಗಿತ್ತು. ಪ್ರಸ್ತುತ…
ತುಮಕೂರಿನ: ಸಿದ್ದಾರ್ಥ ಪ್ರಥಮ ದರ್ಜೆ ವಾಣಿಜ್ಯ ವಿಭಾಗದ ವತಿ ಯಿಂದ ಆಯೋಜಿಸಲಾದ ಯುವ ಸಿದ್ದಾರ್ಥ-೨೫ ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ನಂತರ ತುಮಕೂರು ಜಿಲ್ಲೆಯ ಪಿಯು ಉಪ ನಿರ್ದೇಶಕರಾದ ಡಾ. ಬಾಲ ಗುರುಮೂರ್ತಿ ರವರು ವಾಣಿಜ್ಯ ವಿದ್ಯಾರ್ಥಿ ಗಳಿಗೆ ಶಿಕ್ಷಣದ ಗುಣಮಟ್ಟದ ಜೊತೆ ಕೌಶಲ್ಯ ಜ್ಞಾನ ಹೆಚ್ಚಿಸಲು ಉತ್ತಮ ವೇದಿಕೆಯಾಗಿದ್ದು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮ ಅತ್ಯಂತ ಅಗತ್ಯ ಎಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಬಿ. ನಂಜು0ಡಪ್ಪ ರವರು ಮಾತನಾಡುತ್ತಾ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಸದಾ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ಸದಾ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಪಿಯು ಉಪ ನಿರ್ದೇ ಶಕರಾದ ಡಾ. ಬಾಲ ಗುರುಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತಾ,…
ಮಧುಗಿರಿ: ಸ್ನೇಹ ಸಮ್ಮಿಲನ ಸಮಾರಂಭಗಳು ನಮಗೆ ಶಾಲೆಯ ಬಗ್ಗೆ ಗೌರವ ಹೆಚ್ಚುವಂತೆ ಮಾಡುತ್ತದೆ. ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಿ. ರಾಮಕೃಷ್ಣಪ್ಪ ಅಭಿಪ್ರಾಯ ಪಟ್ಟರು. ತಾಲೂಕಿನ ದೊಡ್ಡೇರಿ ಹೋಬಳಿ ದಬ್ಬೇಗಟ್ಟ ಸರ್ಕಾರಿ ಫ್ರೌಢಶಾ ಲೆಯಲ್ಲಿ ೨೦೦೨- ೦೩ ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ೧೯೯೩ ರಲ್ಲಿ ಈ ಶಾಲೆಯು ಆರಂಭವಾಯಿತು, ಕೊಠಡಿಗಳ ಕೊರತೆಯಿಂದ ಗುಡಿಸಿಲಿನಲ್ಲಿ ಪಾಠಮಾಡುತ್ತಿದ್ದೆವು. ಶಾಲೆ ಆರಂಭವಾದಾಗಿನಿ0ದ ೨೧ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆಸಲ್ಲಿಸಿದ್ದೇನೆ. ಈ ಶಾಲೆಯ ನೆನಪುಗಳು ಎಂದಿಗೂ ನನ್ನಿಂದ ಅಳಿಸಲಾಗುವುದಿಲ್ಲ, ಅಂದಿನ ಕಾಲದಲ್ಲಿ ನಮ್ಮ ಶಾಲೆಗೆ ಪ್ರವೇಶಾತಿ ಪಡೆಯಲು ಪೈಪೋಟಿ ಇತ್ತು, ಕಾರಣ ಇಲ್ಲಿನ ಎಲ್ಲಾ ಸಿಬ್ಬಂದಿಗಳು ಪೈಪೋಟಿಯಿಂದ ಪಾಠ ಮಾಡುತ್ತಿದ್ದರು. ಮುಂದೆಯೂ ದಬ್ಬೇಗಟ್ಟ ಶಾಲೆಯ ಒಳ್ಳೆಯ ಹೆಸರು ಉಳಿಯಬೇಕು ಎಂದರು. ಗಣಿತ ಶಿಕ್ಷಕ ಗುರುಪ್ರಸಾದ್ ಮಾತನಾಡಿ ನನ್ನ ವೃತ್ತಿ ಜೀವನದಲ್ಲೊಂದು ನನಗೆ ಹೆಗ್ಗುರುತು ನೀಡಿದ ಶಾಲೆ ಎಂದರೆ…
ಮಧುಗಿರಿ: ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೃಕುಂಠ ಏಕಾದಶಿ ಪ್ರಯುಕ್ತ ಏರ್ಪಡಿಸಿದ್ದ ದ್ವಾರದರ್ಶನ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿ0ದ ನೆರವೇರಿತು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ದಂಪತಿ, ಎಂಎಲ್ಸಿಆರ್ ರಾಜೇಂದ್ರ ,ಹಿರಿಯ ಐಎಎಸ್ ಅಧಿಕಾರಿ ಉಮಾಶಂಕರ್ ,ಐಎಎಸ್ ಅಧಿಕಾರಿ ಮಧುಗಿರಿ ತಾಲೂಕಿನ ಗೋವಿಂದರಾಜು,ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ ಪಿ ಅಶೋಕ್ ಕೆ ವಿ ಜಿ.ಪಂ ಸಿಇಒ ಪ್ರಭು, ಮಾಜಿ ಶಾಸಕ ಎಂ.ವಿ .ವೀರಭದ್ರಯ್ಯ, ಉಪವಿಭಾಗಿಧಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಎಚ್ ಶ್ರೀನಿವಾಸ್ ,ತಾ.ಪಂ ಇ ಓ ಲಕ್ಷ್ಮಣ್, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹನುಮಂತ ರಾವ್, ಕೊರಟಗೆರೆಯ ಎಚ್. ಮಹದೇವ್ ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಭಾನುವಾರ ಸಂಜೆ ದೇವರಿಗೆ ಅಭಿಷೇಕ ನಡೆಯಿತು. ಸೋಮವಾರ ಮುಂಜಾನೆ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೂರು ಬಾರಿ ಪ್ರಕಾರೋತ್ಸವ ಮಾಡಿ…
ವೈ.ಎನ್.ಹೊಸಕೋಟೆ: ಒಂಟಿ ಮಹಿಳೆಯರಿಗೆ ಬೈಕ್ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಆರೋಪಿ ಯನ್ನು ಬಂಧಿಸಿ, ಆತನಿಂದ ರೂ. ೩.೨೦ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೈಕನ್ನು ಪೋಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಯು ಆಂಧ್ರಪ್ರದೇಶ ಅನಂತಪುರ0 ಪಟ್ಟಣ ಸಮೀಪದ ಸೋಮಲದೊಡ್ಡಿ ಗ್ರಾಮದ ಬಂಡಿ ಸುಬ್ರಮಣ್ಯಂ ಆಗಿದ್ದು ಹಣ ಗಳಿಕೆಗೆ ಈ ದರೋಡೆ ಮಾರ್ಗವನ್ನು ಅನುಸರಿಸಿರುವುದು ತಿಳಿದು ಬಂದಿದೆ. ದಿನಾಂಕ ೨೩-೧೧-೨೦೨೫ ರಂದು ಸೂಲನಾಯಕನಹಳ್ಳಿ ಗೇಟ್ನಿಂದ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಎಂಬಾಕೆಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಬೈಕಿನಲ್ಲಿ ಹತ್ತಿಸಿಕೊಂಡು ರಸ್ತೆ ಪಕ್ಕದ ಜಮೀನಿನೊಳಗೆ ಬೈಕನ್ನು ಓಡಿಸಿಕೊಂಡು ಹೋಗಿ, ಆಕೆಯ ಚಿನ್ನದ ವಡವೆಗಳನ್ನು ಬಿಚ್ಚಿ ಕೊಡುವಂತೆ ಹೆದರಿಸಿ, ನಿರಾಕರಿಸಿದಾಗ ಕಿವಿಯಲ್ಲಿನ ಓಲೆಗಳನ್ನು ಕಿತ್ತು ರಕ್ತ ಗಾಯಪಡಿಸಿ ಪರಾರಿಯಾಗಿದ್ದನು. ಅದರಂತೆ ದಿನಾಂಕ ೦೮-೧೨-೨೦೨೫ ರಂದು ಪಳವಳ್ಳಿ ಕಟ್ಟೆಯ ಮೇಲೆ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ಎಂಬುವರನ್ನು ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಕೂರಿಸಿಕೊಂಡು ರಸ್ತೆ…
ಹುಳಿಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸೋರಲಮಾವು ಶ್ರೀ ಈಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಚಿಕ್ಕನಾಯಕನಹಳ್ಳಿ ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮನುಷ್ಯನಿಗೆ ಬದುಕಿ ಬಾಳ ಬೇಕಾದರೆ ಧರ್ಮದ ಆಚರಣೆಗೆ ಧರ್ಮದ ಅವಶ್ಯಕತೆ ಬಹಳಷ್ಟು ಇದೆ ಅದನ್ನು ಆಚರಣೆಗೆ ತರಬೇಕು. ನಾವು ಧರ್ಮವನ್ನು ರಕ್ಷಣೆ ಮಾಡಿದರೆ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತದೆ ಎಲ್ಲೂ ಕೈ ಬಿಡಲ್ಲ. ಆದುನಿಕ ಯುಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಯೋಜನೆ ದಾರಿ ದೀಪವಾಗುತ್ತಿದೆ ಎಂದರು. ಗ್ರಾಪಂ ಸದಸ್ಯರಾದ ಸಿದ್ದಲಿಂಗಸ್ವಾಮಿ ಮಾತನಾಡಿ ಧರ್ಮಸ್ಥಳ ಸಂಸ್ಥೆ ಮಾಡದ ಕೆಲಸ ಇಲ್ಲ. ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವಲ್ಲಿ ನೇರವಾಗಿದೆ. ಆರ್ಥಿಕ ಸ್ವಾವಲಂಬನೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಆರ್ಥಿಕ ಶಿಸ್ತು ಕಲ್ಪಿಸಿ ಕೊಟ್ಟಿದೆ ಎಂದು ತಿಳಿಸಿದರು. ಗ್ರಾ.ಪಂ ಅಧ್ಯಕ್ಷರಾದ ಚಂದ್ರಮ್ಮ,…










