ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಹಚ್ಚಮ್ಮನಹಳ್ಳಿ ಸರ್ವೆ ನಂಬರ್ ೮/೧ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮದ ಸಮೀಪ, ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ರೈತನ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವೈ.ಎನ್.ಹೊಸಕೋಟೆ ಗ್ರಾಮದ ರೈತ ಹೆಚ್.ಪಿ. ಕೃಷ್ಣಪ್ಪ (ಗ್ಯಾಸ್ ಕಿಷ್ಟಪ್ಪ) ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು ೬೦ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಮಚ್ಚಿನಿಂದ ಕಡಿದು ನಾಶಪಡಿಸಿದ್ದಾರೆ. ಫಸಲು ನೀಡುವ ಹಂತಕ್ಕೆ ಬಂದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವುದರಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಘಟನೆ ಕುರಿತು ವೈ.ಎನ್.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Author: News Desk Benkiyabale
ತುಮಕೂರು: ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿಯಿಂದ ನಡೆಯಿತು. ಗ್ರಾಮ ಪ್ರದಕ್ಷಿಣೆ, ಗಂಗಾಪೂಜೆ, ವಿಶ್ವಕ್ಷೇನ ಮಹಾಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ ಪುಣ್ಯಾಃ, ರಕ್ಷಾಬಂಧನ, ಆಚಾರ್ಯ ಋತ್ವಿಕ್ ಗ್ವರಣ ಮೃತಿಕಾ ಸಂಗ್ರಹಣ, ಯಾಗಶಾಲಾ ಪ್ರವೇಶ, ಜೀವತತ್ವಾದಿ ಹೋಮ, ಪೂರ್ಣಾಹುತಿ, ಅಂಕುರಾರ್ಪಣೆ, ಪಂಚಗವ್ಯ ಸ್ನಪನ, ಧ್ಯಾನ್ಯಾಧಿವಾಸ, ಪುಷ್ಪಾಧಿವಾಸ, ಮಹಾಮಂಗಳಾರತಿ ನೆರವೇರಿದವು. ಬ್ರಾಹ್ಮೀ ಲಗ್ನದಲ್ಲಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ವಿವಿಧ ಪೂಜೈ ಕೈಂಕರ್ಯಗಳೊAದಿಗೆ ನಡೆಯಿತು. ವಾಸುದೇವ ಪುಣ್ಯಾಃ, ದ್ವಾರಾಧನೆ, ಮಹಾಕುಂಭಾರಾಧನೆ, ಪ್ರಾಣಪ್ರತಿಷ್ಠಾಪನಾ ಹೋಮ, ಪುರುಷಸೂಕ್ತ ಶ್ರೀಸೂಕ್ತ ಹೋಮ, ದುರ್ಗಾ ಸೂಕ್ತ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾ ಪೂರ್ಣಾಹುತಿ, ಕುಂಭ ಉದ್ಘಾಟನೆ ಜರುಗಿತು. ಜತೆಗೆ ಶ್ರೀ ವೀರಾಂಜನೇಯಸ್ವಾಮಿ ದೇವಾಲ ಯದಲ್ಲಿ ಶ್ರೀ ಆಂಜನೇಯ ಮೂಲ ಮಂತ್ರ ಹೋಮ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮರಳೂರಿನ ಸುಮಂಗಲಿಯರು ಆರತಿ ಹೊತ್ತು ಅಮ್ಮನವರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ…
ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಜುಲೈ ೧ ರಿಂದ ಆರಂಭವಾಗಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಸದರಿ ಯೋಜನೆಯ ಮಾಹಿತಿಯನ್ನು ಗ್ರಾಮೀಣ ಭಾಗದ ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಈ ಕರಪತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಕ್ಕೆ ಒಂದು ವರ್ಷದಲ್ಲಿ ೧೨೫ ದಿನಗಳ ಉದ್ಯೋಗ ಮತ್ತು ಒಂದು ಮಾನವ ದಿನಕ್ಕೆ ೩೮೨ ರೂ.ಗಳ ಕೂಲಿಯನ್ನು ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿಯಿAದ ಉಚಿತವಾಗಿ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಅಕುಶಲ ಕೆಲಸ ಬೇಕೆಂದು ಗ್ರಾಮ ಪಂಚಾಯಿತಿಗೆ ನಮೂನೆ ೬ರಲ್ಲಿ…
ಹುಳಿಯಾರು: ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಮಣ್ಣು ಪಾಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಹುಳಿಯಾರು ಹೋಬಳಿಯಲ್ಲಿ ಸಿಇಪಿಎಂಐಝ್ಡ್ ಯೋಜನೆಯಡಿ ಬರೋಬ್ಬರಿ ೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಂಕೆರೆ-ಗೌಡಗೆರೆ-ಕAಪನಹಳ್ಳಿ ಕಾಂಕ್ರೀಟ್ ರಸ್ತೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿ, ಕಳಪೆ ಕಾಮಗಾರಿಯ ನಗ್ನ ಸತ್ಯವನ್ನು ಸಾರುತ್ತಿದೆ. ಯೋಜನೆಯ ವಿವರ ಮತ್ತು ಪ್ರಸ್ತುತ ಸ್ಥಿತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ (ತುಮಕೂರು ಜಿಲ್ಲಾ ಪಂಚಾಯತ್) ವತಿಯಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎನ್ಎಚ್-೨೩೪ ರಿಂದ ಎನ್ಎಚ್-೧೫೦ಎ ವರೆಗಿನ ಮಾರ್ಗ ಕಂಪನಹಳ್ಳಿ, ಗೌಡಗೆರೆ ಕೆಂಕೆರೆ ರಸ್ತೆ ಅಭಿವೃದ್ಧಿಗೆ ರೂ. ೯೦೦.೦೦ ಲಕ್ಷ (೯ ಕೋಟಿ) ಅಂದಾಜು ಮೊತ್ತ ನಿಗದಿಯಾಗಿದೆ. ಹೈದರಾಬಾದ್ ಮೂಲದ ಎಂ.ವೆAಕಟಕಿರಣ್ (ಉಷಾ ಕಿರಣ್ ಕನ್ಸ÷್ಟçಕ್ಷನ್ಸ್) ಎಂಬುವರು ಗುತ್ತಿಗೆ ಪಡೆದಿದ್ದು, ೧೬-೧೨-೨೦೨೪ ರಂದು ಕರಾರು ಆಗಿದ್ದು, ೧೧ ತಿಂಗಳ ಅವಧಿ ನೀಡಲಾಗಿದೆ. ಇಷ್ಟೊತ್ತಿಗೆ…
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ಲುಪಿವೆ. ಆರಂಭದಲ್ಲಿ ಪೂರ್ವ ಮುಂಗಾರು ಬಾರದೆ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಲಾಗದೆ ರೈತರು ಕೈಚೆಲ್ಲಿದ್ದರು. ಈಗ ಮುಂಗಾರು ಕೂಡ ಕೈಕೊಟ್ಟಿದ್ದು, ಬಿದ್ದ ಅಲ್ಪಸ್ವಲ್ಪ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪ್ರಮಾಣ ತೀವ್ರ ಕುಸಿತ ಕಂಡಿದ್ದು, ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಮಳೆ ಪ್ರಮಾಣ: ತಾಲೂಕಿನ ವಾಡಿಕೆ ಮಳೆ ೩೮೨.೩ ಮಿ.ಮೀ. ಆಗಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ವಾಡಿಕೆ ಮಳೆ ೩೮೨.೩ ಮಿಮೀ ಆಗಿದ್ದು ೨೦೨೪ ನೇ ಸಾಲಿನಲ್ಲಿ ಆಗಸ್ಟ್ ಮಾಹೆಯವರೆವಿಗೆ ೬೯೩.೯ ಮಿ.ಮೀ ಮಳೆಯಾಗಿತ್ತು. ೨೦೨೫ ರಲ್ಲಿ ೫೧೬ ಮಿ.ಮೀ ಮಳೆಯಾಗಿತ್ತು. ಆದರೆ ೨೦೨೬ ರಲ್ಲಿ ಕೇವಲ ೨೫೩.೧೧ ಮಿ.ಮೀ ಮಳೆಯಾಗುವ ಮೂಲಕ ವಾಡಿಕೆಗಿಂತಲೂ ತೀವ್ರ ಕೊರತೆ ಎದ್ದು ಕಾಣುತ್ತಿದೆ. ಬೀಜ ವಿತರಣೆಯಲ್ಲಿ ಭಾರೀ ಕುಸಿತ: ೨೦೨೪ ರಲ್ಲಿ ೧೪೯೨.೬ ಕ್ವಿಂಟಲ್…
ಪಾವಗಡ: ಹೆಸರಾಂತ ಮಕ್ಕಳ ನೇತ್ರ ತಜ್ಞರಾದ ಡಾ.ವಸುಧಾ ನರೇಶ್ ರವರು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಿದರು. ಈ ಶಿಬಿರಕ್ಕೆ ಬಹು ದೂರ ದೂರದಿಂದ ಮಕ್ಕಳು ಬಂದಿದ್ದು ವಿಶೇಷತೆಯಾಗಿತ್ತು. ಕಲ್ಯಾಣದುರ್ಗ, ಅನಂತಪುರ, ಹಿಂದೂಪುರ, ಶಿರಾ, ಚಳ್ಳಕೆರೆ, ಮಧುಗಿರಿ ಭಾಗಗಳಿಂದ ಪುಟ್ಟ ಪುಟ್ಟ ಮಕ್ಕಳು ಹಾಗೂ ನವಜಾತ ಶಿಶುಗಳು ಬಂದಿದ್ದನ್ನು ಕಾಣಬಹುದಾಗಿತ್ತು. ಸುಮಾರು ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಲಾಯಿತು. ಆಧುನಿಕ ಯಂತ್ರೋಪಕರಣಗಳು ಹಾಗೂ ಇತ್ತೀಚಿನ ತಂತ್ರಜ್ಞಾನದೊAದಿಗೆ ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ತೃಪ್ತಿಯಾಗುವಂತೆ ತಪಾಸಣೆ ನಡೆಸಿ ಔಷಧೋಪಚಾರಗಳನ್ನು ನೀಡಲಾಯಿತು. ಇದರಲ್ಲಿ ಸರಿಸುಮಾರು ೮ ಮಕ್ಕಳಿಗೆ ಅತಿ ಸೂಕ್ಷಾ÷್ಮತಿಸೂಕ್ಷ÷್ಮವಾದ ಶಸ್ತç ಚಿಕಿತ್ಸೆಗಳಿಗೆ ವ್ಯವಸ್ಥೆ ಮಾಡಲಾಯಿತು. ಈ ಎಲ್ಲ ಕಾರ್ಯಗಳು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ನೀಡಲಾಗುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಾಡಿನ ಹೆಸರಾಂತ ಮಕ್ಕಳ ತಜ್ಞರಾದ ಡಾ.ವಸುಧಾ ನರೇಶ್ ರವರೊಂದಿಗೆ ಹಿರಿಯ ಆಪ್ಟೋಮೆಟ್ರಿಸ್ಟ್ ಆಗಿರುವ ಶ್ರೀ ಅನೀಶ್ ರವರು ಸಹಕಾರ ನೀಡಿ ಪ್ರತಿಯೊಬ್ಬ ಮಗುವಿಗೂ ಪೂರ್ಣ ಪ್ರಮಾಣದ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲು…
ಮಧುಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ (ರಿ) ೨೫ನೇ ವರ್ಷದ ರಜತ ಮಹೋತ್ಸವ, ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ ೬ ರಂದು ಅದ್ಧೂರಿಯಾಗಿ ಆಯೋಜಿಸಲು ಶರವೇಗದ ಸಿದ್ಧತೆಗಳು ನಡೆದಿವೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ,”ಮಾಜಿ ಸಿಎಂ ಡಿ. ದೇವರಾಜ ಅರಸು ಅವರು ಹಾಲನೂರು ಸಮೀಕ್ಷಾ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ನ್ಯಾಯ ಒದಗಿಸಿದ್ದರು. ಅವರ ಹಾದಿಯಲ್ಲೇ ಸಾಗುತ್ತಿರುವ ಸಿದ್ದರಾಮಯ್ಯನವರು ಈ ಸಮುದಾಯಗಳ ಆಶಾಕಿರಣವಾಗಿದ್ದಾರೆ. ಪ್ರಸ್ತುತ ಹಿಂದುಳಿದ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಕಾಂತರಾಜು ಹಾಗೂ ಮಧುಸೂದನ ನಾಯಕ್ ವರದಿಗಳನ್ನು ತಕ್ಷಣ ಅನುಷ್ಠಾನಗೊಳಿಸಬೇಕಿದೆ” ಎಂದು ಪ್ರತಿಪಾದಿಸಿದರು. ಮಾಜಿ ಸದಸ್ಯರು ಹಿಂದುಳಿದ ವರ್ಗಗಳ ಆಯೋಗದ ಜೆ. ಡಿ. ಗೋಪಾಲ್ ಮಾತನಾಡಿ ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗೂ ವರದಿಗಳ…
ತುಮಕೂರು: ಪಿಡಿಎಫ್ ನೋಟ್ಸ್ಗಳಿಗೆ ಸೀಮಿತವಾಗದೆ, ನಿರಂತರವಾಗಿ ಪುಸ್ತಕ ಓದಿ ಜ್ಞಾನ ಸಂಪಾದಿ. ಹೋರಾಟದ ಬದುಕಿನಿಂದ ಭವಿಷ್ಯದ ಜೀವನ ರೂಡಿಸಿಕೊಳ್ಳಿ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿಗಳು ಕರೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಸ್ಎಸ್ಐಬಿಂ ಕಾಲೇಜಿನ ಬಿಕಾಂ ಎಂಕಾA ಮತ್ತು ಎಂ.ಎಸ್.ಡಬ್ಲ್ಯೂ ಪದವಿ ತರಗತಿಗಳ ೨೦೨೬-೨೭ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿದ ವಿರೇಶಾನಂದ ಸರಸ್ವತಿ ಸ್ವಾಮೀಜಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣಭೀಷ್ಮ ಎಂ ಗಂಗಾಧರಯ್ಯ ನವರ ತ್ಯಾಗದ ಫಲವಾಗಿ ಸಮೃದ್ಧಿಯಾದ ಶಿಕ್ಷಣ ಸಂಸ್ಥೆ ನೆಲೆ ನಿಂತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ನೆಲೆಸಿ ಸಂಸ್ಥೆಯನ್ನು ಅಜರಾಮರ ಗೊಳಿಸಿದ್ದಾರೆ. ಇವರೆಲ್ಲರೂ ಕೇವಲ ಆಸೆ ಪಟ್ಟವರಲ್ಲ ಕಠಿಣ ಪರಿಶ್ರಮ ಹಾಕಿ ಗೆಲುವು ಸಾಧಿಸಿದವರು ಎಂದು ಸ್ವಾಮೀಜಿ ಹೇಳಿದರು. ನಿಮ್ಮ ಮೇಲೆ ಋಣ ಸಂದಾಯದ ಭಾರ ಇದೆ. ತಂದೆ-ತಾಯಿ ಮತ್ತು ಸಮಾಜ ದೇಶದ ಒಳಿತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಯೋಚಿಸಿ-ಯೋಜಿಸಿ ಮುನ್ನಡೆದರೆ…
ತುಮಕೂರು: ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಹಜರತ್ ಮುಹಮ್ಮದ್ ಪೈಗಂಬರ್ ಅವರ 1501 ಜನ್ಮ ಜಯಂತಿ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧಾ ಮತ್ತು ಭಕ್ತಿಯಿಂದ ಆಚರಿಸಲಾಯಿತು.ಮೆಕ್ಕಾ ಮಸೀದಿಯ ಅಧ್ಯಕ್ಷರಾದ ಡಾ.ಎಸ್.ಷಪಿ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ಧ ಪ್ರಾರ್ಥನೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ ಅವರುಗಳು ಪಾಲ್ಗೊಂಡು ಈದ್ ಮಿಲಾದ ಹಬ್ಬದ ಶುಭ ಕೋರಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸುಮಾರು 1,500ಕ್ಕೂ ಹೆಚ್ಚು ವರ್ಷಗಳ ಹಿಂದೆ, ನಮ್ಮ ಪ್ರವಾದಿಗಳ ಕಾಲದಲ್ಲಿ ಕೊಲ್ಲಿ,ಅರೇಬಿಯಾ ಪ್ರದೇಶಗಳಲ್ಲಿ ಅಜ್ಞಾನ ಹಾಗೂ ಅನ್ಯಾಯದ ಕತ್ತಲೆ ಇತ್ತು. ಆ ಕಾಲದಲ್ಲಿ ಬಡವರ ಮನೆಯಾಗಿರಲಿ, ಶ್ರೀಮಂತರ ಮನೆಯಾಗಿರಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರನ್ನು ಜೀವಂತವಾಗಿ ಹೂಳುವಂತಹ ಕ್ರೂರ ಪದ್ಧತಿ ಇತ್ತು, ಸಮಾನತೆ ಇರಲಿಲ್ಲ.ಇಂತಹ ಸಂದರ್ಭದಲ್ಲಿ ಪ್ರವಾದಿಗಳು ಜನಿಸಿ, 40 ವರ್ಷಗಳ ಕಾಲ ಸಾಮಾನ್ಯರಂತೆ ಧರ್ಮದ ಹಾದಿಯಲ್ಲಿ ನಡೆದು, ಧರ್ಮದ ಸರಿಯಾದ ಮಾರ್ಗವನ್ನು ಸಾರಿದರು.…
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ನವ ಕರ್ನಾಟಕ ಸಂಘಟನೆ, ತುಮಕೂರು ಇವರ ಸಹಭಾಗಿತ್ವದಲ್ಲಿ ನಡೆದ ಶಿಬಿರದಲ್ಲಿ ನೂರಾರು ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹಗಲು-ರಾತ್ರಿ ಎನ್ನದೆ ದುಡಿಯುವ ಕಟ್ಟಡ ಕಾರ್ಮಿಕರಿಗೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲು ಸಮಯದ ಕೊರತೆ ಇರುವ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿದ ವೈದ್ಯರು, ಆರೋಗ್ಯ ಸಮಸ್ಯೆಗಳ ಕುರಿತು ಕಾರ್ಮಿಕರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕೆಲಸದ ಸಂದರ್ಭದಲ್ಲಿ ಎದುರಾಗುವ ದೈಹಿಕ ಆಯಾಸ, ಆರೋಗ್ಯ ಸಮಸ್ಯೆಗಳು ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮಹತ್ವದ ಬಗ್ಗೆಯೂ ವೈದ್ಯರು ಮಾಹಿತಿ ನೀಡಿದರು. ಆರೋಗ್ಯದ ಬಗ್ಗೆ ನಿರ್ಲಕ್ಷ÷್ಯ ಬೇಡ:…











