Author: News Desk Benkiyabale

ಚಿಕ್ಕನಾಯಕನಹಳ್ಳಿ: ಕೊಬ್ಬರಿಗೆ ಉತ್ತಮ ಬೆಲೆ ಬಂದ ಸಮಯದಲ್ಲಿ ಈ ಕೀಟಬಾಧೆ ರೈತರ ನಿದ್ದೆಗೆಡಿಸಿದೆ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದು ಸಂಬAಧ ಪಟ್ಟ ಇಲಾಖೆಯ ಜವಾಬ್ದಾರಿ ಈ ನಿಟ್ಟಿನಲ್ಲಿ ಸಚಿವರನ್ನು ಭೇಟಿ ಮಾಡಿ ತೆಂಗು ಬೆಳೆಯನ್ನು ಕಾಪಾಡಿ ರೈತರನ್ನು ಕಾಪಾಡಿ ಎಂದು ಮನವಿ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ತೀ.ನಂ.ಶ್ರೀ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆಗೆ ತಗುಲಿರುವ ಬಿಳಿ ನೊಣ ಮತ್ತು ಕಪ್ಪು ತಲೆಹುಳುವಿನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಾಣಿಜ್ಯ ಬೆಳೆಯಾದ ತೆಂಗನ್ನು ನಮ್ಮ ಭಾಗದಲ್ಲಿ ಹೆಚ್ಚು ಜನ ರೈತರು ಅವಲಂಬಿಸಿದ್ದು ಈ ಹಿಂದೆಲ್ಲ ಕೊಬ್ಬರಿಗೆ ಸರಿಯಾದ ಬೆಲೆ ಇಲ್ಲದೇ ಪರದಾಡುವಂತಾಗಿತ್ತು ಆದರೆ ತೆಂಗಿನಲ್ಲಿ ಬಿಳಿನೋಣ, ಕಪ್ಪು ತಲೆಹುಳುವಿನ ಕಾರಣದಿಂದ ಇಳುವರಿ ಇಲ್ಲದ ಈ ಅವಧಿಯಲ್ಲಿ ಉತ್ತಮವಾದ ಬೆಲೆ ಇದೆ ಆದರೆ…

Read More

ತಿಪಟೂರು: ತ್ರಿವಿಧ ದಾಸೋಹದ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನರ ಮತ್ತು ಮಕ್ಕಳ ಶೈಕ್ಷಣಿಕ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು ದಣಿವರಿಯದ ದೇವರೆನಿಸಿಕೊಂಡು, ವ್ರತನಿಷ್ಠ ಕಾಯಕಯೋಗಿಗಳಾಗಿ, ಆಧುನಿಕ ಬಸವಣ್ಣನೆನಿಸಿಕೊಂಡು ಶತಾಯುಷಿಗಳಾಗಿ ಆದರ್ಶಪ್ರಾಯವಾದವರೇ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳೆಂದು ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಿದ್ಧಗಂಗಾ ಶ್ರೀಗಳ ಏಳನೇ ಪುಣ್ಯಸ್ಮರಣೆ ಪ್ರಯುಕ್ತ ಏರ್ಪಡಿಸಿ ಕೊಂಡಿದ್ದ ದಾಸೋಹದಿನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು ಸಿದ್ಧಗಂಗಾಶ್ರೀಗಳು ತಮ್ಮ ಗುರುಗಳಾದ ಉದ್ಧಾಮ ಶಿವಯೋ ಗಿಗಳ ಆಶಯದಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಯಾ, ವಾಚಾ, ಮನಸಾ ಜೋಳಿಗೆ ಹಿಡಿದು, ಭಿಕ್ಷಾಟನೆ ಮಾಡುತ್ತಾ, ದಾಸೋಹ ಸೇವೆಮಾಡಿ ಮಕ್ಕಳಹಸಿವನ್ನು ನೀಗಿಸಿದ ದೇವರೆನಿಸಕೊಂಡಿದ್ದರು. ಗುರು, ಲಿಂಗ, ಜಂಗಮಗಳೆAಬ ತ್ರಿವಿಧಗಳ ಮೂಲಕ ತ್ರಿಕರಣ ಪೂರ್ವಕವಾಗಿ ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸವೆಂಬ ನುಡಿಗೆ ಅನ್ವರ್ಥರಾಗಿ ಸೇವೆಮಾಡುತ್ತಾ ನಡೆದಾಡುವ ದೇವರೆನಿಸಿಕೊಂಡಿದ್ದರು. ನಾಡಿನ ಲಕ್ಷಾಂತರ ಮಂದಿಗೆ ಜ್ಞಾನಜ್ಯೋತಿಯನ್ನು, ಸಂಸ್ಕಾರದ ದೀಕ್ಷೆಯನ್ನು, ಸಹಬಾಳ್ವೆಯ ಸಂಕಲ್ಪದ ಭಾವನೆಗಳನ್ನು ಬೆಳೆಸುತ್ತ್ತಾ, ಪ್ರೀತಿ, ವಿಶ್ವಾಸ, ಸಹನೆ, ಕರುಣೆ,…

Read More

ಮಧುಗಿರಿ: ಪ್ರತಿ ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ ೩೦೦ ಮೊಟ್ಟೆ ಜಾಕಿ ಕಟ್ಟಿ ೨೫೦ ಕೆಜಿ ರೇಷ್ಮೆ ಗೂಡು ಬೆಳೆಯಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಶ್ರೀ ಲಕ್ಷ್ಮೀ ನರಸಯ್ಯ ತಿಳಿಸಿದರು. ತಾಲೂಕಿನ ರಂಟವಳಲು ಗ್ರಾಮದಲ್ಲಿ ರೇಷ್ಮೆ ಕೃಷಿ ಬೆಳಗಾರರ ಗುಂಪು ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಪ್ಪು ನೇರಳೆ ಬೇಸಾಯದಲ್ಲಿ ಇಲಾಖೆಯಿಂದ ಶಿಫಾರಸ್ ಆಗಿರುವಂತಹ ಕೀಟನಾಶಕಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು. ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಮುನ್ನ, ಸದರಿ ಖಾಲಿ ನಿವೇಶನವನ್ನು ದಿಶಾಂಕ್ ಆಪ್ ಮೂಲಕ ಖಚಿತಪಡಿಸಿಕೊಂಡ ನಂತರ ಹುಳು ಮನೆ ನಿರ್ಮಾಣ ತಕ್ಕದ್ದು ಎಂದು ಹೇಳಿದರು. ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿ ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ಅಥವಾ ರೇಷ್ಮೆ ಕೃಷಿ ಕೈಗೊಂಡಿರುವ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು, ಒಂದು ಎಕರೆ ಹಿಪ್ಪು ನೇರಳೆ ನಾಟಿ ಮಾಡುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ…

Read More

ಮಧುಗಿರಿ: ರಾಜ್ಯದಲ್ಲಿ ಅನ್ನಬಾಗ್ಯ ಹಸಿವನ್ನು ನೀಗಿಸಿದೆ. ಅನ್ನ ಭಾಗ್ಯ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಇದು ಎಲ್ಲ ಸಮುದಾಯದ ಬಡವರಿಗೆ ಸಲ್ಲುವ ಯೋಜನೆಯಾಗಿದೆ. ಅನ್ನ ಭಾಗ್ಯ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಲ್ಲುತ್ತಿವೆ ಎಂದು ಮಾಜಿ ಸಚಿವ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು. ತಾಲೂಕಿನ ಚಿಕ್ಕಮಾಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಗನಾಡಿ ಕಟ್ಟಡ, ಶುದ್ಧಕುಡಿಯುವ ನೀರಿನ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ೫ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳ ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಮುಖ್ಯ. ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸದೇ ಉತ್ತಮ ಶಿಕ್ಷಣಕೊಡಿಸಿ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು. ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು. ಇಂದು ಆಧಿಕಾರ ಬರಬಹುದು ಹೋಗಬಹುದು. ಆಧಿಕಾರದಲ್ಲಿ ಇದ್ದಾಗ ಅದರ ಲಾಭ ಜನರ ಸೇವೆಗೆ ಮುಡಿಪಾಗಿರಬೇಕು. ನಮ್ಮ ಕೊಡಿಗೇನಹಳ್ಳಿ ಹೋಬಳಿ ಪ್ರತಿ ಚುನಾವಣಿಯಲ್ಲೂ ನನಗೆ ಹೆಚ್ಚು…

Read More

ಚಿಕ್ಕನಾಯಕನಹಳ್ಳಿ: ಚಂಚಲ ಮನಸ್ಸಿನ ಭಾವನೆಗೆ ಕಡಿವಾಣ ಹಾಕುವ ಮೂಲಕ ನೀವು ಅದ್ಯಯನ ಮಾಡಿದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಅದ್ದರಿಂದ ನಿಮ್ಮ ಜೀವನದ ಮುಖ್ಯಘಟ್ಟವಾದ ಈ ಪಿಯುಸಿಯ ಹಂತದಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸರ್ಕಾರದ ಉಚಿತ ಸೀಟ್ಗಳನ್ನು ಪಡೆದು ನಿಮ್ಮ ತಂದೆ ತಾಯಿಗಳ ಹೊರೆಯನ್ನು ಕಡಿಮೆ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಎಸ್.ಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಸಿಇಟಿ, ನೀಟ್, ಹಾಗೂ ಜೆಇಇ ತರಬೇತಿ ಅಂತಿಮ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ವರ್ಷದಲ್ಲಿ ೩೭೬ ವಿದ್ಯಾರ್ಥಿಗಳು ಈ ಉಚಿತ ತರಬೇತಿಯಲ್ಲಿ ತರಬೇತಿ ಪಡೆದು ೯೬ ವಿದ್ಯಾರ್ಥಿ ಗಳು ಸರ್ಕಾರದ ವಿವಿಧ ಕೊರ್ಸ್ ಗಳ ಉಚಿತವಾಗಿ ಸೀಟ್ಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿ ಅವರ ಪೋಷಕರ ಹೊರೆಯನ್ನು ತಗ್ಗಿಸಿದ್ದಾರೆ ಅದ ರಂತೆ ಈ ವರ್ಷ ಕಳೆದ ೨೭ ವಾರಗಳಿಂದ ಪ್ರಥಮ ಪಿಯುಸಿಯವರಿಗೆ ವಿಶೇಷವಾಗಿ…

Read More

ತಿಪಟೂರು : ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಿಂದ ಕಳೆದ ಆರು ದಶಕಗಳಿಂದ ಆ ಚರಣೆ ಮಾಡುತ್ತಾ ಬರುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವು ಈ ಬಾರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜ.೨೪ ರಿಂದ ಫೆ.೧ರವರೆಗೆ ಒಂಬತ್ತು ದಿನಗಳ ಕಾಲ ನೆಡೆಯಲಿದೆ ಎಂದು ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಪಟ್ರೇಹಳ್ಳಿ ನಂಜುಡಪ್ಪ ತಿಳಿಸಿದ್ದಾರೆ. ಒಂಬತ್ತು ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ನಾಡಿನ ರಾಜಕೀಯ ಮುತ್ಸದ್ಥಿಗಳು, ಮಠಾಧೀಶರು, ಸಾಹಿತಿಗಳು, ಭಾಗವಹಿಸಲಿದ್ದು, ಪ್ರತಿ ನಿತ್ಯ ಸಂಜೆ ವೇದಿಕೆ ಕಾರ್ಯಕ್ರಮವು ನಡೆಯಲಿದ್ದು ಇದರ ಸಾನಿಧ್ಯವನ್ನು ಸಿರಿಗೆರೆ ಪ್ರಸ್ತುತ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿಲಿದ್ದಾರೆ ಎಂದು ತಿಳಿಸಿದರು. ಕರ್ನಾಟಕದ ಬಯಲು ಸೀಮೆಯ ಅತಿದೊಡ್ಡ ಸಾಂಸ್ಕೃತಿಕ ಹಬ್ಬವೆಂದರೆ ಅದು ‘ತರಳಬಾಳು ಹುಣ್ಣಿಮೆ’. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ನಡೆಯುವ ಈ ಒಂಬತ್ತು ದಿನಗಳ ಉತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ವಿಚಾರ ಕ್ರಾಂತಿ, ರೈತ ಚೈತನ್ಯ ಮತ್ತು ಶರಣ ಸಂಸ್ಕೃತಿಯ ಜೀವಂತ…

Read More

ಗುಬ್ಬಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯ ಬುದ್ಧಿವಂತನಾಗುತ್ತಿದ್ದಾನೆ, ಆದರೆ ಮಾನವೀ ಯತೆಯನ್ನು ಮರೆಯುತ್ತಿದ್ದಾನೆ ಎಂದು ಉಪನಿರ್ದೇಶಕ ರಘುಚಂದ್ರ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ), ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ), ಗುಬ್ಬಿ ತಾಲ್ಲೂಕು ಘಟಕ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಪುಲೆಯವರ ೧೯೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಾವಿತ್ರಿಬಾಯಿರವರು ಮಹಿಳೆಯರು ಸ್ವಾವಲಂಬಿಗಳಾಗಬೇಕೆ0ದು ಬಯಸಿದ್ದರು. ಇಂದು ಮಹಿಳೆಯರು ಶಿಕ್ಷಣ ಪಡೆದು ಸಮಾಜದ ವಿವಿಧ ಉನ್ನತ ಹುದ್ದೆಗಳಲ್ಲಿದ್ದೇವೆಯೆಂದರೆ ಅದಕ್ಕೆ ಅಂದು ಸಾವಿತ್ರಿಬಾಯಿಯವರು ಹಾಕಿಕೊಟ್ಟ ಭದ್ರಬುನಾದಿಯೇ ಕಾರಣ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂಎಸ್ ನಟರಾಜು ಮಾತನಾಡಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸರ್ಕಾರಿ ಶಾಲೆಯಲ್ಲಿ ಹೆಚ್ಚು…

Read More

ತುಮಕೂರು: ರಾಷ್ಟçದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಸಾಹೇ ವಿವಿಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಕ್ರೀಡೆಗಳ ತರಬೇತಿಗೆ ಅನುಕೂಲವಾಗುವಂತೆ ನೂತನವಾಗಿ ಸುಸಜ್ಜಿತವಾದ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಕ್ರೀಡಾಂಗಣವನ್ನು ಸೋಮವಾರ ಉದ್ಘಾಟನೆಗೊಳಿಸಲಾಯಿತು. ನಗರದ ಸಮೀಪದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾ ರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಜ್ಜುಗೊಳಿಸಲಾದ ನೂತನ ಕ್ರೀಡಾಂಗಣವನ್ನು ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ ಅವರು ಉದ್ಘಾಟನೆ ಮಾಡಿದರು. ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಸಾನಿಕೊಪ್ಪ ಅವರು ಮಾತನಾಡಿ ದೈಹಿಕ ಕಾರ್ಯಕ್ರಮತೆಯನ್ನು ಹೆಚ್ಚಿಸಲು ಕ್ರೀಡೆ ಅವಶ್ಯಕವಾಗಿದೆ. ಸೋಲು ಗೆಲುವುಗಳನ್ನು ಪರಿಗಣಿಸದೆ ನಿರಂತರವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈಜೋಡಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನ ಆಯೋಜಿಸುವ ಮೂಲಕ ಸಹಕಾರ, ಸೌಲಭ್ಯಗಳನ್ನು ನೀಡುತ್ತಿವೆ. ಸಾಹೇ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಸ್ವತಃ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು, ಅವರ ಆಶಯದಂತೆ ವಿದ್ಯಾರ್ಥಿಗಳ ಕ್ರೀಡಾ…

Read More

ತುಮಕೂರು: ಭಾರತ ಸರ್ಕಾರ ಮತ್ತು ಭೂತಾನ್ ಸರ್ಕಾರ ಸಹಭಾಗಿತ್ವದ ಇಂಡಿಯಾ-ಭೂತಾನ್ ಫೌಂಡೇಶನ್ ಪ್ರಾಯೋಜಿತ ಸಂಶೋಧನ ಯೋಜನೆಯನ್ನು ನಗರದ ಯಕ್ಷದೀವಿಗೆ ಸಂಸ್ಥೆಯು ಯಶಸ್ವಿಯಾಗಿ ಪೂರೈಸಿದೆ. ಯೋಜನೆಯ ಅಂಗವಾಗಿ ಎರಡು ವಾರ ಭೂತಾನ್ ದೇಶ ದಲ್ಲಿ ಪ್ರವಾಸ ಮಾಡಿ ‘ಕರ್ನಾಟಕದ ಯಕ್ಷಗಾನ ಮತ್ತು ಭೂತಾನ್‌ನ ಮಾಸ್ಕ್ ಡ್ಯಾನ್ಸ್: ಒಂದು ತೌಲನಿಕ ಸಾಂಸ್ಕೃತಿಕ ಅಧ್ಯಯನ’ ಎಂಬ ಯೋಜ ನೆಯನ್ನು ಅನುಷ್ಠಾನಗೊಳಿಸಿದೆ. ಯಕ್ಷಗಾನ ಹಾಗೂ ಮುಖವಾಡ ನೃತ್ಯದ ನಡುವಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಪ್ರಾಯೋಗಿಕ ಅಧ್ಯಯನಕ್ಕೆ ಒಳಪಡಿಸಿದ ಯಕ್ಷದೀವಿಗೆಯು ಈ ಕುರಿತ ವಿಸ್ತೃತ ವರದಿಯನ್ನು ಸಲ್ಲಿಸಲಿದೆ. ಯಕ್ಷದೀವಿಗೆಯ ಪ್ರತಿನಿಧಿಗಳಾಗಿ ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಡಾ. ಆರತಿ ಪಟ್ರಮೆ, ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಸಹಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಹಾಗೂ ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಸಂವೃತ ಎಸ್.ಪಿ. ಸಂಶೋಧನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. “ಭೂತಾನ್‌ನ ಸಂಸ್ಕೃತಿ ಇಲಾಖೆ, ರಾಜಧಾನಿ ಥಿಂಪುವಿನಲ್ಲಿರುವ ಸಾಂಪ್ರದಾಯಿಕ ಪ್ರದರ್ಶನ ಕಲೆ ಹಾಗೂ ಸಂಗೀತ ವಿಭಾಗ,…

Read More

ಮಧುಗಿರಿ: ಉತ್ತಮವಾದ ಶಿಕ್ಷಣದ ಜೊತೆಗೆ ಶಿಕ್ಷಣದ ಮೌಲ್ಯವನ್ನು ಇಂದಿಗೂ ಈ ಕಾಲೇಜು ಕಾಪಾಡಿಕೊಂಡಿದ್ದು ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಿದೆ ಎಂದು ನಿವೃತ್ತ ಪ್ರಾಂಶುಪಾಲ ಟಿ.ಜಿ.ಗೋವಿಂದರಾಜು ತಿಳಿಸಿದರು. ಪಟ್ಟಣದ ಗೌತಮಬುದ್ಧ ಪದವಿಪೂರ್ವ ಕಾಲೇಜಿನಲ್ಲಿ ೨೦೦೨-೦೪ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ವಾತಾವರಣವಿದ್ದು ಇಂದಿಗೂ ಕೂಡ ಸಾವಿರಾರು ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊ0ಡಿದ್ದಾರೆ. ಗುಣಮಟ್ಟದ ಭೋದನಾ ವ್ಯವಸ್ಥೆಯಿದ್ದು ಇಂದಿಗೂ ಇಲ್ಲಿ ಕಲಿತ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾ ಗಿದ್ದಾರೆ ಎಂದರು. ಅರ್ಥಶಾಸ್ತ್ರದ ಉಪನ್ಯಾಸಕ ಕೃಷ್ಣಾರೆಡ್ಡಿ ಮಾತನಾಡಿ, ತಾಯಿ ಮೊದಲ ಗುರುವಾದರೆ ಅಕ್ಷರ ಕಲಿಸಿದ ಗುರು ಎರಡನೇ ತಾಯಿ. ಭೂ ಮಂಡಲವನ್ನು ಹಾಳೆಯಾಗಿಸಿ ಸಮಸ್ತ ಅರಣ್ಯವನ್ನು ಕುಂಚವಾಗಿಸಿ ಸಪ್ತ ಸಮುದ್ರವನ್ನು ಶಾಹಿಯಾಗಿಸಿ ಬರೆದರೂ ಗುರುಗಳ ಮೌಲ್ಯವನ್ನು ಬರೆಯಲು ಸಾಧ್ಯವಿಲ್ಲ. ಸತ್ಯಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡಿ ಆದರೆ ಸತ್ಯವನ್ನು ಯಾವುದಕ್ಕೂ ತ್ಯಾಗ ಮಾಡಬಾರದು. ಮಗು ಜನಿಸಿದರೆ ತಾಯಿ ಗರ್ವ ಪಡಬೇಕು. ಮಗ…

Read More