ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆವರಣದಲ್ಲಿ ಸೋಆಯೋ ಜಿಸಿದ್ದಂತಹ ಸಾಹೇ ವಿಶ್ವವಿದ್ಯಾಲಯದ ಇಂಟರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಮಾತನಾಡಿ ಕ್ರೀಡೆಯಲ್ಲಿ ಸೋಲುಗೆಲುವ ಮುಖ್ಯವಲ್ಲ ಕ್ರೀಡೆಯಲ್ಲಿ ಪಾಲ್ಗೊ ಳ್ಳುವುದು ಮುಖ್ಯವಾದ್ದು, ಕ್ರೀಡಾಕೂಟಗಳು ಸೋಲು ಗೆಲುವಿನ ಅನುಭವವನ್ನು ನೀಡುತ್ತದೆ. ಗೆಲುವು ಮತ್ತು ಸೋಲು ಸಾಧನೆಯ ಹಾದಿಯಲ್ಲಿ ಮೆಟ್ಟಿಲುಗಳಿದ್ದಂತೆ ಹಾಗಾಗಿ ಸೋಲು ಗೆಲುವುಗ ಳೆರಡನ್ನು ಸಮಾ ನವಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಕ್ರೀಡಾ ಪಟುಗಳಿಗೆ ಕಿವಿಮಾತು ಹೇಳಿದರು. ಪಂದ್ಯಾವಳಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಕುಲಸಚಿವರಾದ…
Author: News Desk Benkiyabale
ಕೊರಟಗೆರೆ: ಕಾಲಭೈರೆವೇಶ್ವರಸ್ವಾಮಿಯನ್ನು ಶ್ರದ್ದಾಭಕ್ತಿ ಹಾಗೂ ನಿಷ್ಠೆಯಿಂದ ಪೂಜಿಸಿದರೆ ಕಾಲಭೈರೇಶ್ವರ ಸ್ವಾಮಿ ಯಾವುದೊರೊಪದಲ್ಲಿ ಬಂದು ಭಕ್ತರ ಕಷ್ಟ ನಿವಾರಣೆ ಮಾಡುವುದರೊಂದಿಗೆ ಇಷ್ಠಾರ್ಥ ನೆರೆವೇರುವುದು ಎಂದು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಗಳು ತಿಳಿಸಿದರು. ಅವರು ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ಹುಲವಂಗಲ ಬಳಿಯ ಜೆ.ಕೆ.ಪಾಳ್ಯ ಗ್ರಾಮದಲ್ಲಿ ಶ್ರೀ ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ೭೦ನೇ ವರ್ಷದ ಶ್ರೀ ಕಾಲಬೈರವಾಷ್ಟಮಿ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ಕಾಲಭೈರವೇಶ್ವರ ದೇವಾಲಯ ಇರುವ ಕಡೆ ಭಕ್ತರು ನಿಷ್ಠೆಯಿಂದ ಪೂಜೆಸಿದರೆರ ಆ ಭಾಗದ ಸುತ್ತಮುತ್ತಲ ಊರುಗಳನ್ನು ರಕ್ಷಣೆ ಮಾಡುವುದರೊಂದಿಗೆ ಭಕ್ತರ ನೋವು ನಲಿವುಗಳ ನಿವಾರಣೆ ಮಾಡಿ ಇಷ್ಠಾರ್ಥಗಳನ್ನು ಈಡೇರಿಸುತ್ತಾರೆ ಎಂದ ಶ್ರೀಗಳು ಕಾಲಭೈರೆವೇಶ್ವರ ಸ್ವಾಮಿ ಸನಾತನ ಕಲಾದಿಂದಲೂ ಇತಿಹಾಸ ಪ್ರಸ್ತಿದ್ದ ದೇವಾಲಯವಾಗಿದ್ದು ರಾಜ್ಯ ಮತ್ತು ರಾಷ್ಟçದ ಪ್ರಬಲ ಸಮುದಾಯಗಳ ಆರಾದ್ಯ ದೈವವಾಗಿದ್ದು ಕಾಲಬೈರವೇಶ್ವರ ಸಮಾಜದಲ್ಲಿ ದುಷ್ಠರ ಸಂಹಾರಮಾಡಿ ಶಿಷ್ಠರನ್ನು…
ತುಮಕೂರು: ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸ ಭಾದ ರಾಷ್ಟಿಯ ಅಧ್ಯಕ್ಷರಾಗಿ ಸಮಾಜದ ಐಕ್ಯತೆಯನ್ನು ಕಾಪಾಡಲು ಜೀವಿತದ ಕೊನೆಯವರೆಗೂ ಶ್ರಮಿಸಿದ ಶ್ಯಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯಿತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಿಸಲು ಹೋರಾಟ ನಡೆಸಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮಕೂರು. ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ ಪರಮೇಶ್ ನುಡಿದರು. ಅವರು ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಏರ್ಪಡಿಸಿದ್ದ ಶ್ಯಾಮನೂರು ಶಿವಶಂಕರಪ್ಪನವರ ಶ್ರದ್ಧಾಂಜಲಿ ಸಭೆ ಯಲ್ಲಿ ನುಡಿ ನಮನ ಸಲ್ಲಿಸಿದರು. ಶ್ಯಾಮನೂರು ಅವರು ವೀರಶೈವ ಲಿಂಗಾಯಿತ ಸಮಾಜಕ್ಕೆ ತಂದೆಯ ಸ್ಥಾನದಲ್ಲಿ ನಿಂತು ಅದನ್ನು ನಿರ್ವಹಿಸಿದವರು. ಅಲ್ಲಿ ಅವರ ಮಾತಿಗೆ ಯಾರೂ ಎದುರುತ್ತರ ಕೊಡುತ್ತಿರಲಿಲ್ಲ ಕಾಂಗ್ರೇಸ್ ಪಕ್ಷದ ರಾಜ್ಯ ಕೋಶಾಧ್ಯಕ್ಷರಾಗಿ ಶಾಸಕರಾಗಿ ಮಂತ್ರಿಗಳಾಗಿ ದುಡಿದವರು ಅವರನ್ನು ಪಕ್ಷ ಬೇಧವಿಲ್ಲದೆ ಎಲ್ಲರೂ ಪ್ರೀತಿಸುತ್ತಿದ್ದರು ತಮಗೆನಿಸಿದ ಸತ್ಯವನ್ನು ನಿರ್ಬಿತೆಯಿಂದ ಹೇಳುವ ಗುಣ ಅವರಲ್ಲಿತ್ತು ಅವರಲ್ಲಿ ಎಷ್ಟೇ ಸಿರಿವಂತಿಕೆ ಇದ್ದರೂ ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು ಅವರ…
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಏರ್ಪಡಿಸಲಾಗಿತ್ತು. ಅಧಿಕೃತ ವೇಳಾಪಟ್ಟಿಯಂತೆ ಬೆಳಿಗ್ಗೆ ೧೦ ಗಂಟೆಯಿ0ದ ಮಧ್ಯಾಹ್ನ ೧೨ ಗಂಟೆಯ ವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪ ಡಿಸಲಾಗಿತ್ತು. ಪ್ರೀತಿ ರಾಘವೇಂದ್ರ ಅವರು ಹೇಮಂತ್ ಅವರನ್ನು ಸೂಚಿಕರಾಗಿ, ಸಿದ್ದೀಕ್ ಅವರ ಅನುಮೋದಕರಾಗಿ ನಾಮಪತ್ರ ಸಲ್ಲಿಸಿ ದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಕಣದಲ್ಲಿ ಅವರೊಬ್ಬರೇ ಉಳಿದರು. ಹೀಗಾಗಿ, ಚುನಾವಣಾಧಿಕಾರಿ ಕೆ. ಪುರಂದರ ಅವರು ಪ್ರೀತಿ ರಾಘವೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದರು. ಈ ಆಯ್ಕೆಯೊಂದಿಗೆ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪಟ್ಟಣದ ಜನರ ಕುತೂಹಲಕ್ಕೆ ತೆರೆ ಬಿದ್ದಿತು. ಈ ಬಾರಿ ಕೂಡ ೩ ಪಕ್ಷದ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಪಕ್ಷದ ಮೂವರು ಸದಸ್ಯರು, ಕಾಂಗ್ರೆಸ್…
ತುಮಕೂರು: ಸಾಂಸ್ಕೃತಿಕ ಸ್ಪರ್ಧೆ ಗಳ ಕಾರ್ಯಕ್ರಮಗಳಲ್ಲಿ ಗೆಲುವು-ಸೋಲಿನ ನಿರಾಶೆಗಿಂ ತಲೂ ಮಾನವೀಯತೆಯ ಮೌಲ್ಯ ತುಂಬುವುದು ಮುಖ್ಯ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಸೋಮವಾರ ನಗರದ ಎಂಪ್ರೆಸ್ ಬಾಲಕಿ ಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ನಾವು ಚರಿತ್ರೆಯನ್ನು ತಿರುಚಿದ ರೀತಿಯಲ್ಲಿ ತಿಳಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪ ಡಿಸಿದ ಅವರು, ಸಾಮಾಜಿಕ ಜಾಲತಾಣ ಎಲ್ಲವೂ ಕೂಡ ಮಕ್ಕಳಿಗೆ ಸುಳ್ಳಿನ ಚರಿತ್ರೆಯನ್ನು ನೀಡುತ್ತಿದೆ. ಮಕ್ಕಳು ಈ ಸುಳ್ಳಿನ ಚರಿತ್ರೆಯೇ ನಿಜ ಎಂಬ0ತೆ ವಿಕಲ್ಪಕ್ಕೆ ಒಳಗಾಗಿ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಖ್ಯವಾಗಿ ಪಾತ್ರ ವಹಿಸಬೇಕಾಗಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳು ವಿಫಲವಾಗಿವೆಯೇನೋ ಎನ್ನುವಂತಹ ನಿರಾಶೆ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದೆ. ಇಂತಹ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯ…
ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಗೆ ಹೊಂದಿಕೊ0ಡ0ತಿರುವ ವಾಣಿಜ್ಯ ಸಂಕೀರ್ಣ ದಲ್ಲಿ ಇಂದು ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(DSS)ಯ ತಾಲೂಕು ಶಾಖೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ಉದ್ಘಾಟಿಸಿದರು. ಈ ಶಾಖೆಯು ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರಕುಮಾರ್, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್ ರವರ ನೇತೃತ್ವದಲ್ಲಿ ಉದ್ಘಾ ಟನೆಗೊಂಡಿದ್ದು, ಇದೇ ವೇಳೆ ತಾಲೂಕು ಶಾಖೆ ಉದ್ಘಾಟಿಸಿದ ಅನಂತರಾಜು ಮಾತನಾಡಿ, ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಇಂದಿನಿ0ದ ಆರಂಭ ಗೊಂಡಿದ್ದು, ಇದರಿಂದಾಗಿ ನೊಂದವರಿಗೆ ಸಾಮಾಜಿಕವಾಗಿ ದೀನದಲಿತರಿಗೆ ಸರ್ವ ಜನಾಂಗದವರಿಗೂ ಆರೋಗ್ಯಕರ ಹೋರಾಟ ಮಾಡುವುದರ ಮೂಲಕ ನ್ಯಾಯ ದೊರಕಿಸಿ ಕೊಡುವಂತಹ ಕಾರ್ಯ ನಿರ್ವಹಿಸಬೇಕು, ನೊಂದವರ ಪಾಲಿಗೆ ದಾರಿ ದೀಪವಾಗಿ ಈ ಸಂಘಟನೆ ಕಾರ್ಯ ನಿರ್ವಹಿಸಿ ನ್ಯಾಯ ದೊರಕಿಸಿ ಕೊಡಬೇಕು, ಇದರ ಜೊತೆಗೆ ನಾನು ಕೂಡ ಒಬ್ಬ ಅಧಿಕಾರಿಯಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು. ನ0ತರ ಜಿಲ್ಲಾ ಸಂಚಾಲಕರಾದ…
ಹುಳಿಯಾರು: ಹುಳಿಯಾರು ಸಮೀಪದ ಶಿಡ್ಲಕಟ್ಟೆ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಮೂಲಕ 2023-24ನೇ ಸಾಲಿನಲ್ಲಿ ಮಂಜೂರಾದ ಸಿಮೆಂಟ್ ರಸ್ತೆ ಕಾಮಗಾರಿ, ಸರ್ಕಾ ರದ ಅಧಿಕೃತ ಅಂದಾಜು ಪತ್ರಿಕೆ ಗೆ ವಿರುದ್ಧವಾಗಿ ಕಳಪೆ ಹಾಗೂ ಅವೈ ಜ್ಞಾನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೆಆರ್ಐಡಿಎಲ್ ಸಿರಾ ಉಪವಿಭಾಗದಿಂದ ತಯಾರಿಸಿದ ಅಂದಾಜು ಪತ್ರಿಕೆಯ ಪ್ರಕಾರ, ಪೋಚಕಟ್ಟೆ ಮುಖ್ಯ ರಸ್ತೆ ಇಂದ ಶಿಡ್ಲಕಟ್ಟೆ ಪರಿಶಿ ಷ್ಟರ ಕಾಲೋನಿಗೆ ಸಂಪರ್ಕಿಸುವ ಸುಮಾರು 342 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 0.15 ಮೀಟರ್ ದಪ್ಪದ ಸಿಮೆಂಟ್ ರಸ್ತೆ ನಿರ್ಮಿಸಬೇಕಾಗಿದೆ. ಈ ಕಾಮಗಾರಿಯಲ್ಲಿ ನೆಲ ವನ್ನು ಸಡಿಲಗೊಳಿಸಿ ಸಮಮಾಡುವುದು, ಜಲ್ಲಿ ಮತ್ತು ಮಣ್ಣನ್ನು ಹಾಕಿ ರೋಲರ್ ಮೂಲಕ ಬಿಗಿ ಮಾಡುವುದು, ನಂತರ ವೆಟ್ ಮಿಕ್ಸ್ ಮ್ಯಾಕಡಂ ಹಾಕಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಜಲ್ಲಿ ಹಾಕಬೇಕಾದ ಸ್ಥಳದಲ್ಲಿ ಜಲ್ಲಿಯನ್ನು ಬಳಸದೇ ಒ–Sಚಿಟಿಜ ಮತ್ತು ಅರ್ಧ ಇಂಚಿನ…
ಬೆಳಗಾವಿ/ತುಮಕೂರು: ಬೆಳಗಾವಿಯಲ್ಲಿ ತುಮ ಕೂರು ಗ್ರಾಮಾಂತರದ ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದ ತುಮ ಕೂರು ಗ್ರಾಮಾಮತರ ಶಾಸಕ ಸುರೇಶ್ ಗೌಡ. ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ನಿರೀಕ್ಷಿತವಾಗಿರುವ 25 ಕೋಟಿ ರೂಪಾಯಿ ನಿಧಿ ಸಂಬ0ಧಿಸಿದ0ತೆ ಬೆಳಗಾವಿಯ ವಸತಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಯಿತು. ಮುಂದಿನ ಅಧಿವೇಶನವನ್ನು ಗಮನದಲ್ಲಿಟ್ಟು ಕೊಂಡು, ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು ಅಗತ್ಯ ಅನುದಾನ ಬಿಡುಗಡೆಗೆ ಸಿದ್ಧತೆ ನಡೆಸಲಾಯಿತು. ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ, ಜನೋಪಯೋಗಿ ಯೋಜನೆಗಳು ಹಾಗೂ ಸಾರ್ವಜನಿಕ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳನ್ನು ಕ್ರಿಯಾ ಯೋಜನೆಯಲ್ಲಿ ಒಳಗೊಂಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರಭಾ ಕರ್ ಅವರು ಉಪಸ್ಥಿತರಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ವಿಶೇಷ ಅನುದಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪ ಡಿಸಿದರು. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾದ ಬಳಿಕ ಯೋಜನೆಗಳನ್ನು ತ್ವರಿತವಾಗಿ ಜಾರಿಗೆ…
ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊ ಳಿಸುವ ನಿಟ್ಟಿನಲ್ಲಿ, ತಮ್ಮಗೆ ನಿಯೋಜಿಸಲಾದ ಕಾರ್ಯಗಳನ್ನು ಅಚ್ಚುಕ ಟ್ಟಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಹಾಗೂ 30ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗ ಳನ್ನು ಕೈಗೊಳ್ಳಲು 14 ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯ ಪ್ರತಿ ತಾಲೂಕಿನಿಂದ ಒಂದೊ0ದು ಕಲಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊ0ದಿಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯನ್ನು ನಗರದ ಮಹಾನಗರ ಪಾಲಿಕೆ ಮುಂಭಾ ಗದಿಂದ ಎಂ.ಜಿ. ರಸ್ತೆ, ಗುಂಚಿ ಚೌಕ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಗಾಜಿನ ಮನೆಯವರೆಗೂ ಆಯೋಜಿ ಸಲಾಗುತ್ತದೆ ಎಂದು ಅವರು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ ವ್ಯಾಪಕವಾದ ಪ್ರಚಾರಗೊಳಿಸಿ…
ಚಿಕ್ಕನಾಯಕನಹಳ್ಳಿ: ರೈತರು ಪೌತಿ ಖಾತೆ ಸಂಬAಧ ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು, ಡಿಸೆಂಬರ್ ೨೯ರಂದು ಚಿಕ್ಕನಾಯ ಕನಹಳ್ಳಿ ಪಟ್ಟಣದ ತೀ. ನಂ. ಶ್ರೀ ಭವನದಲ್ಲಿ ಪೌತಿ ಖಾತೆ ಆಂದೋಲನವನ್ನು ಆಯೋಜಿಸಲಾಗಿದೆ ಎಂದು ಶಾಸಕ ಸುರೇಶ್ ಬಾಬು ಸೋಮವಾರ ತಿಳಿಸಿದ್ದಾರೆ. ಈ ಆಂದೋಲನದ ಮೂಲಕ ಪೌತಿ ಖಾತೆ ಸಂಬ0ಧಿತ ಗೊಂದಲಗಳಿಗೆ ಪರಿಹಾರ ಒದಗಿಸುವ ಉದ್ದೇಶವಿದ್ದು, ರೈತರು ಇದರ ಸಂಪೂರ್ಣ ಸದು ಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಪೌತಿ ಖಾತೆ ಪ್ರಕ್ರಿಯೆಯಲ್ಲಿ ರೈತರಿಗೆ ಎದುರಾಗುತ್ತಿರುವ ಅಡಚಣೆಗಳನ್ನು ನಿವಾ ರಿಸಲು ಸಂಬ0ಧಪಟ್ಟ ಅಧಿಕಾರಿಗಳ ಸಹಕಾರ ದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆಂದೋಲನದಲ್ಲಿ ಭಾಗವಹಿಸುವ ರೈತರು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು ಎಂದು ಶಾಸಕ ಸುರೇಶ್ ಬಾಬು ಸೂಚಿಸಿದರು. ಮೃತರ ಹೆಸರಿನಲ್ಲಿ ಇರುವ ಪಹಣಿ ದಾಖಲೆಗಳು, ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಸೇರಿದಂತೆ ಸಂಬ0ಧಪಟ್ಟ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಿದರೆ ಪೌತಿ ಖಾತೆ ಪ್ರಕ್ರಿಯೆ ಸುಲಭಗೊಳ್ಳಲಿದೆ ಎಂದು ಹೇಳಿದರು.…











