ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮದ್ಯಪಾನಪಿಡುಗು ಹೆಚ್ಚಾಗುತ್ತಿರುವ ಕಾರಣ ಮದ್ಯಪಾನ ಮಾರಾಟವನ್ನು ಗ್ರಾಮದಲ್ಲಿ ನಿಷೇದಿಸಿ ಎಂದು ಪಂಚಾಯತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮನೆಮನೆಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದ್ದು, ಇದರಿಂದ ಮನೆಯ ಗಂಡಸರು ಕುಡಿತದ ಚಟಕ್ಕೆ ಸಿಲುಕಿದ್ದಾರೆ. ಇದರಿಂದ ಕೂಲಿಮಾಡಿ ಬದುಕು ಸಾಗಿಸುತ್ತಿದ್ದ ನಮ್ಮಂತಹ ಹಲವು ಕುಟುಂಬಗಳು ಬೀದಿಪಾಲುಗುವ ಸ್ಥಿತಿ ಬಂದಿದೆ. ಮನೆಯಲ್ಲಿ ನೆಮ್ಮದಿ ಇಲ್ಲದಾಗಿದೆ, ನಾವು ಕೂಲಿನಾಲಿ ಮಾಡಿ ಗಳಿಸಿದ ಹಣವನ್ನು ಕಸಿದು ಕುಡಿತಕ್ಕೆ ಸುರಿಯುತ್ತಿದ್ದಾರೆ. ಕುಡುಕರಾಗುತ್ತಿರುವ ಗಂಡಸರೂ ದುಡಿಯದೆ ಮನೆ, ಆಸ್ತಿಗಳೂಸಹ ಮಾರುವ ಪರಿಸ್ಥಿತಿಗೆ ತರುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸರ್ಕಾರಿ ಶಾಲಾ ಸಮೀಪದಲ್ಲಿಯೇ ಮದ್ಯ ಮಾರಾಟವಾಗುತ್ತಿದ್ದರು ಕಂಡೂ ಕಾಣದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇದ್ದಾರೆ. ಈ ಕೂಡಲೇ ಅಕ್ರಮ ಮದ್ಯಮಾರಾಟಕ್ಕೆ ತಡೆ ಒಡ್ಡಬೇಕೆಂದು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಮನಹಳ್ಳಿ ಗ್ರಾಮದಲ್ಲಿ…
Author: News Desk Benkiyabale
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾದಿಹಳ್ಳಿ ಗ್ರಾಮಕ್ಕೆ ರೈತ ಸಂಘದ ಮನವಿಯ ಮೇರೆಗೆ ೭೬ವರ್ಷಗಳ ನಂತರ ಸರ್ಕಾರಿ ಬಸ್ ಸೌಲಭ್ಯ ದೊರೆತಿದೆ. ಮಾದಿಹಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿರುವ ಗ್ರಾಮವಾಗಿದೆ ಇಲ್ಲಿ ಶರಣರ ಮಠವೂಸಹ ಇದ್ದು, ಗ್ರಾಮದ ಸುತ್ತಮುತ್ತ ಹಲವು ಸಣ್ಣಪುಟ್ಟ ಹಳ್ಳಿಗಳಿದ್ದು ಸ್ವಾತಂತ್ರö್ಯ ಬಂದಾಗಿನಿAದಲೂ ಈ ಭಾಗಕ್ಕೆ ಸಾರಿಗೆ ಸೌಲಭ್ಯವಿರಲಿದ ಕಾರಣ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡು ಹಾಗೂ ಬೈಕ್ ಹಾಗೂ ಇನ್ನಿತರ ವಾಹನಗಳಲ್ಲಿ ಪ್ರಯಾಣಿಸಬೇಕಿತ್ತು. ಹಲವಾರು ವರ್ಷಗಳಿಂದ ಸಾರಿಗೆ ಸೌಲಭ್ಯಕ್ಕಾಗಿ ಮಾಡಿದ ಮನವಿಗೆ ಸ್ಪಂದನೆ ದೊರೆತಿರಲಿಲ್ಲ. ರೈತಸಂಘ ಹಾಗೂ ಹಸಿರು ಸೇನೆಯಿಂದ ಈ ಭಾಗಕ್ಕೆ ಸಾರಿಗೆ ಸೌಲಭ್ಯ ನೀಡುವಂತೆ ತುಮಕೂರು ಸಾರಿಗೆ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ತಿಪಟೂರಿನಿಂದ ಹಾಗೂ ಚಿಕ್ಕನಾಯಕನಹಳ್ಳಿಯಂದ ಎರಡು ಬಸ್ಗಳನ್ನು ಈ ಮಾರ್ಗದಲ್ಲಿ ಬಿಡಲಾಗಿದೆ. ತಮ್ಮ ಮನವಿಗೆ ಸ್ಪಂಧಿಸಿ ಸಾರಿಗೆ ಸೌಲಭ್ಯಕಲ್ಪಿಸಿದ ಸಾರಿಗೆ ವಿಭಾಗಕ್ಕೆ ರೈತ ಸಂಘದ ಅಧ್ಯಕ್ಷ ಸಿ.ಬಿ.ಲಿಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್, ಉಪಾಧ್ಯಕ್ಷ ಕೆ.ರೇವಣ್ಣ, ವಿರುಪಾಕ್ಷಯ್ಯ, ಪುಟ್ಟಯ್ಯ, ನಟರಾಜು, ಬಸವರಾಜು,…
ತುಮಕೂರು: ಸರಕಾರ ದಲಿತ, ಹಿಂದುಳಿದ ಸಮುದಾಯಗಳ ದಾರ್ಶಾನಿಕರ ಜಯಂತಿಗಳನ್ನು ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಎಲ್ಲರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಅವಕಾಶ ಕಲ್ಪಿಸಿದರೆ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಹ ಗಮನಹರಿಸಬೇಕಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಸ್ಪೂರ್ತಿ ಡೆವಲಪ್ರ್ಸ್ನ ಚಿದಾನಂದ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನ ಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ(ರಿ) ತುಮಕೂರು ಅಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ೨೯೯ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾಡಿನ ಸಣ್ಣ ಸಣ್ಣ ಜನಾಂಗಗಳಿಗೆ ಆ ಸಮುದಾಯದ ದಾರ್ಶಾನಿಕರ ಜಯಂತಿಗಳನ್ನು ಸರಕಾರಿ ಕಾರ್ಯಕ್ರಮ ವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ.ಆದರೆ ಇಂತಹ ದಾರ್ಶಾನಿಕರು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಾಗಿ, ಮೈಕ್ರೋ ಮೈನಾರಿಟಿ ಸಮುದಾಯಗಳ ನಡುವೆ ಒಗ್ಗಟ್ಟೇ ಇಲ್ಲದಂತಾಗಿದೆ.ಹಾಗಾಗಿ ಎಲ್ಲರ ಜಯಂತಿಗಳು…
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಕೆಲವೆಡೆ ಬುಧವಾರ ರಾತ್ರಿ ಬೀಸಿದ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮತ್ತು ಮರ ಗಿಡಗಳು ಧರೆಗುರುಳಿವೆ. ನಿನ್ನೆ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಕೆಲ ನಿಮಿಷಗಳ ವರೆಗೆ ಸೋನೆ ಮಳೆ ಬಂದರೆ; ಇನ್ನೂ ಕೆಲವೆಡೆ ರಸ್ತೆಯ ನೀರು ಹರಿಯುವಂತೆ ಮಳೆ ಬಿದ್ದಿರುವುದಾಗಿ ತಿಳಿದು ಬಂದಿದೆ. ತಾಲ್ಲೂಕಿನ ಹೆಡಿಗೇಹಳ್ಳಿ, ಅರೆಮಲ್ಲೇನಹಳ್ಳಿ, ಹುಲಿಕಲ್ ನಾಲೆ, ಬೆಂಡೇಕೆರೆ, ಅಬುಕನಹಳ್ಳಿ, ಕಡೇಹಳ್ಳಿ, ತಂಗಡ, ಬ್ರಹ್ಮದೇವರಹಳ್ಳಿ, ಸೋಪ್ ನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತೆಂಗು ಹಾಗು ಇನ್ನಿತರ ಮರಗಳ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು ೧೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗು ಲೈನ್ ಗಳು ತುಂಡರಿಸಿವೆ. ಹುಲಿಕಲ್ ಹೇಮಾವತಿ ನಾಲೆ ಸಮೀಪ ಒಂದು ವಿದ್ಯುತ್ ಪರಿವರ್ತಕ ಬಿದ್ದು ಹಾಳಾಗಿದೆ. ಅದೇ ರೀತಿ ಬಡಗರಹಳ್ಳಿಯ ದೊಡ್ಡಯ್ಯ ಹಂದಿಜೋಗಿ ಕಾಲೋನಿಯ ನಿವಾಸಿ ಗಂಗಯ್ಯ ಅವರ ಮನೆಯ ಶೀಟು ಮತ್ತು ಹೆಂಚುಗಳು ಗಾಳಿಗೆ ತರಗೆಲೆಗಳಂತೆ ತೂರಿ ಹೋಗಿದ್ದು ಇದರಿಂದ ಮಳೆಯ ಹನಿಗೆ ಮನೆಯ ವಸ್ತುಗಳು…
ತುಮಕೂರು: ಋಷಿಮುನಿಗಳು ನೀಡುತ್ತಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಹೊಂದಿಕೊAಡಿರುವ ಶಿಕ್ಷಣ ವ್ಯವಸ್ಥೆಯಡಿ ನೀಡುತ್ತಿರುವ ತಂತ್ರಜ್ಞಾನದ ಶಿಕ್ಷಣವು ಮೌಲ್ಯ ಯುತ, ಸಂಸ್ಕಾರಯುತವಾಗಿರಬೇಕು ಆಗಾ ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಮರಿಯಪ್ಪ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ವಿವೇಕ ವಾಣಿ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಾನವನಿಗೆ ಸಂಸ್ಕಾರಯುತ ಶಿಕ್ಷಣ ಬಹಳ ಮುಖ್ಯವಾಗಿದ್ದು ಮಗುವಿನ ನಡೆ ನುಡಿ ಬಗ್ಗೆ ಪೋಷಕರು ಗಮನ ಹರಿಸಬೇಕು ಕೆಲಸದ ಒತ್ತಡದ ನಡುವೆ ಮಕ್ಕಳು ಕಲಿಯುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದಾಗ ಮಕ್ಕಳು ಅತ್ಯುತ್ತಮವಾಗಿ ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಾರೆ, ಬದಲಾಗುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆ ಗಳಿಂದಾಗಿ ಪೋಷಕರೇ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ. ಎಸ್…
ಚಿಕ್ಕನಾಯಕನಹಳ್ಳಿ: ಹೆಣ್ಣು ಮಕ್ಕಳೆಂದರೆ ಶೋಷಣೆ ಎಂದಿಗೂ ಆಗಬಾರದು ಮಹಿಳೆಯ ದಿಟ್ಟತನದ ಆತ್ಮಸ್ಥೈರ್ಯದ ಮೂಲಕ ದೇಶದ ಪ್ರಗತಿ ಕೂಡ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ್ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಟಿ ಸತೀಶ್ ಹೇಳಿದರು ನಗರದ ರೋಟರಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ಮತ್ತು ವಕೀಲರ ಸಂಘದ ಸಂ ಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಾರ್ಚ್ ೮ರಂದೆ ಕಾರ್ಯಕ್ರಮ ಮಾಡಬೇಕಿತ್ತು ನ್ಯಾಯಾಲಯದಲ್ಲಿ ಲೋಕ ಅಗಲ ಇದ್ದ ಕಾರಣ ಸಾಧ್ಯವಾಗಲಿಲ್ಲ ಪ್ರತಿ ಮಹಿಳೆಗೂ ನಾನಾ ರೀತಿಯ ಅಡಚಣೆಗಳು ಸರ್ವೆ ಸಾಮಾನ್ಯವಾಗಿವೆ ಮಹಿಳೆಯ ಅಸಮಾ ನತೆಯಿಂದ ದೌರ್ಜನ್ಯಕ್ಕೆ ಹೆಚ್ಚು ಒಳಗಾಗಿರುವುದು ಇಲ್ಲಿ ಪುರುಷ ಮತ್ತು ಮಹಿಳೆ ಎಂಬ ಯಾರಿಗೂ ಕೀಳರಿಮೆ ಇರಬಾರದು ದಿನನಿತ್ಯದ ಜೀವನ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಅತ್ಯವಶ್ಯಕ…
ಹುಳಿಯಾರು: ಮೊಬಿಲಿಟಿ ಇಂಡಿಯಾ ಸಂಸ್ಥೆಯು ಸಿರಾ ಮತ್ತು ತುರುವೇಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಶಾಲೆಗಳಲ್ಲಿ ವಿಕಲಚೇತನ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಶಾಲಾವಧಿಯ ನಂತರ ಕಾರ್ಯನಿರ್ವಹಿಸುತ್ತಿರುವ ೨೦ ಸಮುದಾಯ ಶಿಕ್ಷಣ ಕೇಂದ್ರದ ಬೋಧಕರಿಗೆ ವಿಜ್ಞಾನ ಸಂಬAಧಿತ ಕಲಿಕಾ ಮತ್ತು ಬೋಧನ ಉಪಕರಣಗಳ ತಯಾರಿ ಕುರಿತು ಒಂದು ದಿನದ ಕಾರ್ಯಗಾರವನ್ನು ಹುಳಿಯಾರಿನ ವಾಸವಿ ಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು. ವಿಜ್ಞಾನ ಶಿಕ್ಷಕರಾದ ಜಯಣ್ಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹಲವಾರು ಪ್ರಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಅವುಗಳಲ್ಲಿ ಪ್ರಮುಖವಾಗಿ ವಿದ್ಯುತ್ ಮಂಡಲ, ವಿದ್ಯುತ್ ವಾಹಕ ಮತ್ತು ಅವಾಹಕ, ಗಾಳಿಗೆ ಸರ್ವತೋಮುಖ ಒತ್ತಡವಿದೆ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಸೂರ್ಯಗ್ರಹಣ ಚಂದ್ರಗ್ರಹಣ ಉಂಟಾಗುವ ರೀತಿ, ಭೂಮಿಯ ಚಲನೆಯಿಂದ ಹಗಲು ರಾತ್ರಿ ಉಂಟಾಗುವಿಕೆ, ಸತ್ಯ ಪ್ರತಿಬಿಂಬ, ಶಾಖದ ವರ್ಗಾವಣೆ, ಬೆಳಕಿನ ಪ್ರತಿಫಲನ ಹಾಗೂ ನ್ಯೂಟಾನಿನ ಚಕ್ರ ಮುಂತಾದ ಪ್ರಯೋಗಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಜಣ್ಣ, ಸ್ವಯಂಸೇವಕರಾದ…
ಹುಳಿಯಾರು: ದೇಶದಲ್ಲಿ ನಿರುದ್ಯೋಗವಿದೆ. ಕಂಪನಿಗಳಲ್ಲಿ ಕೆಲಸಗಾರರು ೧೦ ರಿಂದ ೧೨ ಗಂಟೆ ಕೆಲಸ ಮಾಡುವಂತಹ ನಿಯಮಗಳು ಬರುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ವಉದ್ಯೋಗ ಮಾಡುವುದು ಅವಶ್ಯಕ. ಆದ್ದರಿಂದ ನೀವೆಲ್ಲರ ಉದ್ಯಮಿಗಳಾಗಿ ಹಣ ಸಂಪಾದಿಸಿ ಒಳ್ಳಯ ಜೀವನವನ್ನು ಪಡೆಯಿರಿ ಎಂದು ಮಾಸ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣಪ್ಪ ಸಲಹೆ ನೀಡಿದವರು. ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ಕಳ್ಳಂಬೆಳ್ಳದ ನವ್ಯ ದಿಶಾ ಸಂಸ್ಥೆ ಹಾಗೂ ಚಿಕ್ಕನಾಯಕನಹಳ್ಳಿ ಸೃಜನಾ ಮಹಿಳಾ ಸಂಘಟನೆ ಆಯೋಜಿಸಿದ್ದ ಯುವ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಮಗೆ ಅನೇಕ ಕೌಶಲಗಳ ಬಗ್ಗೆ ತಿಳಿದಿದೆ, ಅನೇಕ ಉದ್ಯೋಗಗಳ ಬಗ್ಗೆ ಪರಿಚಯವಿದೆ, ಆದರೆ ಅದನ್ನು ಕಾರ್ಯಗತ ಮಾಡಲು ಮಹಿಳೆಯರಿಗೆ ಮನೆಯಲ್ಲಿ ಅನೇಕ ಅಡ್ಡಿ ಆತಂಕಗಳಿವೆ. ಅವುಗಳಿಂದ ಆಚೆ ತರುವುದು ಈ ತರಬೇತಿಯ ಮುಖ್ಯ ಉದ್ದೇಶ. ಮಹಿಳೆಯರನ್ನು ಸ್ವತಂತ್ರ ಉದ್ಯಮಿಗಳನ್ನಾಗಿ ಮಾಡಲು ಅಗತ್ಯ ಮಾರ್ಗದರ್ಶನವನ್ನು ತರಬೇತಿ ಪಡೆಯುವವರಿಗೆ ನೀಡಲಾಗುವುದು ಎಂದು ಹೇಳಿದವರು. ಮುಖ್ಯ ತರಬೇತಿರಾದ ಕೆಂಪಣ್ಣ, ಸಂಪನ್ಮೂಲ ವ್ಯಕ್ತಿಗಳಾದ…
ಪಾವಗಡ: ತಾಲೂಕಿನ ಬ್ಯಾಡನೂರು ವಡ್ಡರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರಾದ ಚೇತನ್ ಕುಮಾರ್ ರವರು ಮಾತನಾಡಿ, ಗೊಲ್ಲರ ಹಟ್ಟಿಯಲ್ಲಿ ಆಚರಿಸುವ ಅನಿಷ್ಟ ಪದ್ಧತಿಗಳು ಬಾಲ್ಯವಿವಾಹ ಹದಿ ಹರೆಯದ ಗರ್ಬಿಣಿ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು ನಂತರ ಜಿಲ್ಲಾ ನಿರೂಪಣಾಧಿಕಾರಿಗಳಾದ ದಿನೇಶ್ ರವರು ಮಾತನಾಡಿ ಮಗುವಿನ ಆರೈಕೆ, ಪೋಷಣ್ ಅಭಿಯಾನ ಯೋಜನೆ ಬಾಣಂತಿ ಆರೈಕೆ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲಾಖಾ ಯೋಜನೆಗಳ ಬಗ್ಗೆ ಪಾತ್ರಾಭಿ ನಯದ ಮೂಲಕ ವ್ಯಕ್ತ ಪಡಿಸಿದರು ಕರಡಿ ಕುಣಿತ ಕೋಲಾಟ ಸೋಬಾನೆ ಪದ ಪುಟ್ಟ ಮಕ್ಕಳ ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ ಸುನಿತಾ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ್, ರಾಜಾನಾಯ್ಕ, ಶಶಿಧರ,ಮೇಲ್ವಿಚಾರ ಕಿಯರು, ಸಮುದಾಯದ ಮುಖಂಡರು, ಮಹಿಳಾ…
ಹುಳಿಯಾರು: ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು. ಚಮಚದಿಂದ ನಾಣ್ಯ ಜೋಡಿಸುವ ಆಟದಲ್ಲಿ ಎಚ್.ಎಸ್.ಸುಲೋಚನ ಪ್ರಥಮ, ಗೌರಮ್ಮ ದ್ವಿತೀಯ, ಸುಶೀಲಮ್ಮ ತೃತೀಯ, ಕಪ್ ಜೋಡಿಸುವ ಆಟದಲ್ಲಿ ಸುಶೀಲಮ್ಮ ಪ್ರಥಮ, ಪ್ರೇಮ ದ್ವಿತೀಯ, ಭಾಗ್ಯಮ್ಮ ತೃತೀಯ, ಬಕೇಟ್ ಇನ್ದ ಬಾಲ್ನಲ್ಲಿ ಶುಧಕ್ಕ ಪ್ರಥಮ, ಸುಜಾತಮ್ಮ ದ್ವಿತೀಯ, ಭಾಗ್ಯಮ್ಮ ತೃತೀಯ ಬಹುಮಾನ ಪಡೆದುಕೊಂಡರು. ಚಮಚಗೋಲಿ ಆಟದಲ್ಲಿ ರೇಖಾ ಪ್ರಥಮ, ಅರ್ಪಿತಾ ದ್ವಿತೀಯ, ಲಕ್ಷಿö್ಮÃ ತೃತೀಯ, ಜೋಡಿ ಆಟದಲ್ಲಿ ಸುಶ್ರಾವ್ಯ ಪ್ರಥಮ, ಲಾವಣ್ಯ ದ್ವಿತೀಯ, ಕವಿತಾ ತೃತೀಯ, ಬಾಲ್ ಪಾಸಿಂಗ್ನಲ್ಲಿ ಅಪೂರ್ವ ಪ್ರಥಮ, ಸುಶ್ರಾವ್ಯ ದ್ವಿತೀಯ, ಯಶೋಧಮ್ಮ ತೃತೀಯ ಬಹುಮಾನ ಪಡೆದು ಕೊಂಡರು. ವಿಜೇತರಿಗೆ ಆಧ್ಯಾತ್ಮ ಶಿಕ್ಷಕಿ ಗೀತಕ್ಕ, ಸಿಆರ್ಪಿ ಕವಿತಾ, ಪ್ರಭುಕುಮಾರ್, ಸುಜಾತ, ಪೂರ್ಣಿಮ, ಸನತ್ ಕುಮಾರ್, ಎಸ್.ಎನ್.ಲಾವಣ್ಯ ಮತ್ತಿತರರು ಬಹುಮಾನ ವಿತರಿಸಿದರು. ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು.