
ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಬಹಳಷ್ಟು ಜನರಿಗೆ ಉಪಯೋಗವಾದರೂ, ಅದರಲ್ಲೂ ಕೆಲ ಲೋಪಗಳಿಂದ ಸಾಕಷ್ಟು ಜನರಿಗೆ ಬಸ್ ದೊರೆಯದೇ ಪ್ರಯಾಣಕ್ಕಾಗಿ ಇನ್ನೊಂದು ಮತ್ತೊಂದು ಪರ್ಯಾಯ ವ್ಯವಸ್ಥೆಗೆ ಮೊರೆಹೋಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದ್ಯಮ ಹಾಗೂ ಬಡಜನತೆ ದೂರದ ಪ್ರಯಾಣಕ್ಕೆ ರೈಲ್ವೇ ಉತ್ತಮವೆಂದು, ಹಾಗೂ ಕಡಿಮೆ ವೆಚ್ಚದ ಪರಿಣಾಮ ಅತಿ ಹೆಚ್ಚು ಜನರು ಪ್ರಯಾಣ ಬೆಳೆಸುತ್ತಿದ್ದಾರೆ. ಶ್ರೀಮಂತರು ಹೇಗೋ ಎಸಿ, ಟಯಾರ್೧,೨೩ ಹೀಗೆ ರಿಸರ್ವೇಷನ್ ಮಾಡಿಸಿ ಆರಾಮದಾಯಕವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ ಮದ್ಯಮ ವರ್ಗದವರು ಹಾಗೂ ಬಡವರಿಗೆ ಮೀಸಲಾದ ಜೆನರಲ್ ಭೋಗಿಗಳಂತೂ ಕುರಿ ತುಂಬಿದ ಹಾಗೇ ತುಂಬಿಸಿ, ಸತ್ರೂ ಕ್ಯಾರೆ ಎನ್ನದ ರೀತಿ ಪ್ರಯಾಣಿಸುತ್ತಿರುವುದು ನೋಡಿ ದಂಗಾದ ಪರಿಸ್ಥಿತಿಯುಂಟು. ಅದರಲ್ಲೂ ನಮ್ಮ ಹಿಂದುಳಿದ ಭಾಗಗಳೆಂದೇ ಗುರುತಿಸಿರುವ ಯಾದಗಿರಿ ರಾಯಚೂರು ಜಿಲ್ಲೆಯ ಜನತೆ ಬೆಂಗಳೂರು ಮೈಸೂರಿಗೆ ಪ್ರಯಾಣಿಸಬೇಂಕೆAದರೇ ಅದರಲ್ಲೂ ಜೆನರಲ್ ಭೋಗಿಗಳಲ್ಲಿ ನರಕಯಾತನೆ ಉಂಟಾಗುವುದ ಸಾಮಾನ್ಯ., ಜಿಲ್ಲೆಗೆ ಅಷ್ಟು ರೈಲುಗಳನ್ನು ತಂದೆ, ಇಷ್ಟು ರೈಲುಗಳನ್ನು ತಂದೆ ಎಂದು ಬೀಗುತ್ತಿರುವವರು ಒಮ್ಮೆಯಾದರು ರಾಯಚೂರು ಮಾರ್ಗವಾಗಿ ತೆರಳುವ ಉದ್ಯಾನ್ ಎಕ್ಸೆ÷್ಪçಸ್, ಲಿಂಕ್ ಎಕ್ಸೆ÷್ಪçÃಸ್, ನಾಂದೇಡ್ ಎಕ್ಸೆ÷್ಪçಸ್, ಬಸವ ಎಕ್ಸೆ÷್ಪçಸ್ನ ಜೆನರಲ್ ಭೋಗಿಗಳಲ್ಲಿ ಪ್ರಯಾಣಿಸಿ ನೋಡಿ ಅರ್ಥವಾಗುತ್ತೇ ನಮ್ಮ ಜಿಲ್ಲೆಯ ಜನರು ಇನ್ನೂ ಎಷ್ಟು ಹಿಂದುಳಿದ್ದಿದ್ದಾರೆ, ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎಂದು.
ಇಷ್ಟರ ಮಟ್ಟಿಗೆ ರಾಜಕೀಯ ಬೆಳೆದರೂ ಯಾದಗಿರಿ ಹಾಗೂ ರಾಯಚೂರಿನಿಂದ ರಾಜಧಾನಿಗೆ ಒಂದು ರೈಲು ( ಪ್ಯಾಸೆಂಜರ್ ರೀತಿಯ ರೈಲು ಸಹ) ಸೃಷ್ಟಿಸಲಾರದೇ ಇದದ್ದು ಮಾತ್ರ ನಾಚಿಕೆಗೇಡಿನ ಸಂಗತಿ. ಇಲ್ಲಿಯವರೆಗೆ ದುರಾದೃಷ್ಟವಶ ನೇಮಕಾತಿಗಳೇ ಆಗಿಲ್ಲ,, ಇನ್ನೂ ಮುಂದೆಯಾದರೂ ಆದಾಗ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ದೂರದ ಊರಿಗೆ ಹೋಗುವ ಸಂದರ್ಭ ಬಂದಾಗ, ನೆಮ್ಮದಿಯಾಗಿ ಹೋಗಲು ಹೆಚ್ಚಿನ ಸಂಖ್ಯೆಯ ರೈಲುಗಳ ಅಗತ್ಯವಿದೆ.. ಕೇಂದ್ರ ಸರ್ಕಾರಗಳಾಗಲಿ, ರಾಜ್ಯ ಸರ್ಕಾರ ಗಳಾಗಲಿ ಜನಪರ ಯೋಜನೆ ಕೈಗೊಳ್ಳಬೇಕೇ ವಿನಹ ಜನರು ಪರದಾಡುವ ಯೋಜನೆಗಳು ಶೋಭೆಯಲ್ಲ,
ಮುಂಬೈ – ಬೆಂಗಳೂರು ರೈಲ್ವೇ ಮಾರ್ಗವಾಗಿ ಹೋಗುವಾಗ ರಾಯಚೂರು, ಯಾದಗಿರಿ ಜಿಲ್ಲೆಗಳ ಮೂಲಕವೇ ಸಾಗಬೇಕು ಎಂಬುದು ತಿಳಿದಿದ್ದರು. ಕೇವಲ ೨ ಅಥವಾ ೪ ಜೆನೆರಲ್ ಭೋಗಿಗಳು ಎಕ್ಸ್ಪ್ರೆಸ್ ರೈಲುಗಳಿಗೆ ಸೇರಿಸಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಹೊಂದೆಡೆಯಾದರೆ, ಕೆಲವೇ ಕ್ಷಣದಲ್ಲಿ ಬೂಕಿಂಗ್ ಮಾಡಬಹುದು ಎಂದು ಕನ್ಫರ್ಮ ಟಿಕೆಟ್ ಎಂಬ ಆಪ್ ಜಾಹೀರಾತು ಸೃಷ್ಟಿಸಿ ಒಂದು ತಿಂಗಳಿAದ ಚೆಕ್ ಮಾಡಿದರೂ ಫುಲ್ ಎಂದೇ ತೋರಿಸುತ್ತದೆ. ಆದರೇ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ದುಡ್ಡು ಕೊಟ್ಟು ಕನ್ಫರ್ಮ ಮಾಡಿಸಲು ಖಾಸಗಿ ಮೂಲದ ಟಿಕೆಟ್ ಬೂಕಿಂಗ್ಗಳಲ್ಲಿ ತೆರಳಿದರೇ, ಖಾಸಗಿ ಮದ್ಯವರ್ತೀಗಳಿಗೆ ಮಾತ್ರ ಟಿಕೆಟ್ ದೊರೆಯುತ್ತವೆ. ಇದು ಹೇಗೆ ಸಾದ್ಯ ,ರೈಲ್ವೇ ಅಧಿಕಾರಿಗಳು ಮತ್ತು ಖಾಸಗಿ ಮಧ್ಯವರ್ತಿಗಳ ನಡುವಿನ ಸಂಬAಧ ಗಟ್ಟಿಯಾಗಿಯೇ ಇರಬೇಕು ಎನ್ನುವ ಸಂಶಯ ಮೂಡುತ್ತದೆ. ದೇಶದಲ್ಲಿ ಅತಿಹೆಚ್ಚು ಸಾರಿಗೆ ಮೂಲಕ ಆದಾಯ ಗಳಿಸುತ್ತಿರುವ ಸೆಕ್ಟ್ರ್ಗಳಲ್ಲಿ ರೈಲ್ವೇ ಸೆಕ್ಟರ್ ಪ್ರಥಮ ಸ್ಥಾನ ಆದರೆ ಅದು ಗೂಡ್ಸ್ಗಳ ಮುಖಾಂತರ, ಆದರೂ ಅತಿ ಹೆಚು ಪ್ರಯಾಣಿಕರು ಪ್ರಯಾಣಿಸುವುದು ಮಾತ್ರ ರೈಲುಗಳಲ್ಲಿ ಈ ಪ್ರಯಾಣಿಕರಿಗೆ ಸುಲಭವಾಗಿ, ಸುರಕ್ಷತೆಯಾಗಿ ಪ್ರಯಾಣಿಸುವಂತೆ ಹಾಗೂ ಕುಂತು ಹೋಗಲು ಸೀಟುಗಳು ದೊರೆಕುವಂತೆ ಮಾಡಲು ಮಾತ್ರ ಸಾಧ್ಯವಾಗಿತ್ತಿಲ್ಲ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಒಂದೆಡೆಯಾದರೆ, ಹೆಚ್ಚು ಕಮ್ಮಿ ನಮ್ಮಷ್ಟೆ ಜನಸಂಖ್ಯೆ ಹೊಂದಿರುವ ದೇಶ ಚೀನಾ. ತಂತ್ರಜ್ಞಾನದಲ್ಲಿ ನಮ್ಮನ್ನು ಹಿಂದಕ್ಕಿ ೨೦-೩೦ ವರ್ಷ ಮುಂದಕ್ಕೆ ಹೋಗಿರುವ ಚೀನಾ ದೇಶವೇ ನಮಗೆ ಮಾದರಿ. ಹೌದು ಕೇವಲ ಜನಸಂಖ್ಯೆ ಒಂದೇ ಕಾರಣ ಹೇಳಿ ಅಭಿವೃದ್ಧಿಯಲ್ಲಿ ಹಿಂದಕ್ಕೆ ಉಳಿದಿರುವ ನಮ್ಮ ಭಾರತದಲ್ಲಿ, ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲೇ ವಿಫಲವಾಗುತ್ತಿದ್ದೇವೆಯೇ ಎಂದು ನಮ್ಮಲ್ಲೆ ನಾವು ಪ್ರಶ್ನಿಸುವ ನೀಚ ವ್ಯವಸ್ಥೆಯಲ್ಲಿದ್ದೇವೆ. ಇನ್ನು ಮುಂದೆಯಾದರೂ ಸಾರಿಗೆ ವ್ಯವಸ್ಥೆಗಳ ಬಗ್ಗೆ ಸರ್ಕಾರ ಎಚ್ಚರವಹಿಸಲಿ.
ಗಣೇಶ್ ಕರ್ಲಿ
ಹವ್ಯಾಸಿ ಬರಗಾರರು
ಮೊ.ಸಂ ೭೨೫೯೧೮೮೨೨೧

