ತುಮಕೂರು: ಇತಿಹಾಸ ಕಾಲಘಟ್ಟದಲ್ಲಿ ಸಾಮಂತರಾಗಿ ಸ್ಥಳೀಯವಾಗಿ ಆಳ್ವಿಕೆ ಮಾಸುತ್ತಿದ್ದ ನಾಡಪ್ರಭುಗಳನ್ನು ಪ್ರಬಲ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ಅವರನ್ನು ಸಾಮ್ರಾಟರಾಜರಂತೆ ವೈಭವೀಕರಿಸುತ್ತಿರುವುದು ಇತಿಹಾಸಕ್ಕೆ ಮಾಡುತ್ತಿರುವ ಅಪಚಾರ ಈ ಪ್ರವೃತ್ತಿ ಎಲ್ಲಾ ಸಮುದಾಯಗಳಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕನ್ನಡ ವಿ.ವಿ.ಯ ಇತಿಹಾಸ ಪ್ರಾಧ್ಯಾಪಕ ಡಾ. ಚನ್ನಸ್ವಾಮಿ ಸೋಸಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನ ಸುಹಾಸ್‌ಗ್ರಾಫಿಕ್ಸ್ ಪ್ರಕಟಿಸಿರುವ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸಂಶೋಧಿಸಿ ರಚಿಸಿರುವ ಕಲ್ಪಹಾಸ ಕೃತಿಯನ್ನು ಶ್ರೀ ಸಿದ್ಧಗಂಗಾ ಕಾಲೇಜಿನ ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬಿಡುಗಡೆಯಾದ ಕೃತಿಯನ್ನು ಕುರಿತು ಮಾತನಾಡಿದರು.
ಒಂದು ಜಿಲ್ಲೆಗೆ ಸೀಮಿತವಾದಂತಹ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವುದು ಸುಲಭದ ಮಾತಲ್ಲ. ಇಂತಹ ಇತಿಹಾಸ ರಚನೆಯಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸವಾಲಾಗಿ ಸ್ವೀಕರಿಸಿ ಮೌಖಿಕ ಮತ್ತು ಚಾರಿತ್ರಿಕ ದಾಖಲೆಗಳನ್ನು ಸಮಚಿತ್ತದಿಂದ ಪೂರ್ವಾಗ್ರಹವಿಲ್ಲದೆ ಅಧ್ಯಯನಮಾಡಿ ಪರಾಮರ್ಶಿಸಿ ಕಲ್ಪಹಾಸ ಕೃತಿಯನ್ನು ರಚಿಸಿದ್ದಾರೆ. ಈ ಜಿಲ್ಲೆಯ ೧೮೦೦ ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಈ ಕೃತಿ ಈ ಜಿಲ್ಲೆಯ ಇತಿಹಾಸಕ್ಕೆ ಕೊಟ್ಟ ಅಪೂರ್ವ ಕೊಡುಗೆಯಾಗಿದೆ. ಜಿಲ್ಲೆಯ ಚರಿತ್ರೆಯ ಬರಹಗಾರಿಗೆ ಇದೊಂದು ಮಾದರಿ ಕೃತಿಯಾಗಿ ಹೊರಹೊಮ್ಮಿದೆ ಎಂದರು.
ಕಲ್ಪಹಾಸ ಸಂಪುಟ-೦೧ ಕೃತಿಯನ್ನು ಬಿಡುಗಡೆಮಾಡಿ ಮಾತನಾಡಿದ ನಾಡಿನ ಹೆಸರಾಂತ ಸಂಶೋಧಕರೂ ಶಾಸನ ತಜ್ಞರಾದ ಡಾ. ದೇವರಕೊಂಡಾರೆಡ್ಡಿಯವರು ಮಾತನಾಡಿ ಸ್ಥಳೀಯ ಚರಿತ್ರೆಯ ರಚನೆಗೆ ಆಕರಗಳ ಕೊರತೆ ಇದ್ದರೂ ಈ ಕೃತಿಯ ಲೇಖಕರು ಬಹಳ ಶ್ರಮವಹಿಸಿ ಕ್ಷೇತ್ರಕರ‍್ಯದ ಮೂಲಕ ಹಲವಾರು ವಿಧದ ಮಾಹಿತಿಗಳನ್ನು ಸಂಗ್ರಹಿಸಿ ತುಲನಾತ್ಮಕ ಅಧ್ಯಯನಮಾಡಿ ಇತಿಹಾಸದ ಸತ್ಯ ಸಂಗತಿಗಳಿಗೆ ಲೋಪವಾಗದಂತೆ ಈ ಜಿಲ್ಲೆಯ ಇತಿಹಾಸವನ್ನು ರಚಿಸಿದ್ದಾರೆ. ಇಂತಹ ಪಠ್ಯಕ್ರಮಗಳನ್ನು ಈ ಜಿಲ್ಲೆಯ ವಿಶ್ವವಿದ್ಯಾನಿಲಯ ಪದವಿ ತರಗತಿಗಳಿಗೆ ಅಳವಡಿಸಿದರೆ ಜಿಲ್ಲೆಯ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರ ಮೂಲಕ ಹೆಚ್ಚಿನ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ರಾಜಕೀಯ ಇತಿಹಾಸವೇ ಇಂದಿನ ಪಠ್ಯಕ್ರಮಗಳಲ್ಲಿ ವಿಜೃಂಭಿಸಿತ್ತಿದೆ. ಇಂದು ಜನರ ಬದುಕಿಗೆ ಹತ್ತಿರವಾಗಿರುವ ಸಾಂಸ್ಕೃತಿಕ ಇತಿಹಾಸದ ಅಧ್ಯಯನವನ್ನು ಮಾಡಬೇಕಿದೆ. ಈ ಕೃತಿಯಲ್ಲಿ ಎರಡೂ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಪ್ರಶಂಸನೀಯವಾಗಿದೆ ಎಂದರಲ್ಲದೆ ಈ ಕೃತಿಯ ಮುಂದುವರಿದ ಭಾಗ ಕ್ರಿ.ಶ. ೧೮೦೦ ರಿಂದ ೨೦೦೦ ವರೆಗಿನ ಇತಿಹಾಸವನ್ನು ಅವರು ಶೀಘ್ರವಾಗಿ ರಚಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ವಿ.ವಿ. ಚರಿತ್ರೆ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಅಶ್ವತ್ಥನಾರಾಯಣ ಮಾತನಾಡಿ ಗತಕಾಲದ ಸಂಗತಿಗಳೇ ಇತಿಹಾಸವಲ್ಲ. ಆ ಸಂಗತಿಗಳನ್ನು ಅಂತರAಗದ ಒಳಗಣ್ಣುಗಳಿಂದ ನೋಡಿ ನಿರೂಪಿಸಬೇಕು ಆಗ ಸತ್ಯದ ಅನಾವರಣವಾಗುತ್ತದೆ. ಇಂತಹ ಸತ್ಯದ ಅನಾವರಣವನ್ನು ಈ ಕೃತಿ ಮಾಡಿಕೊಡುತ್ತದೆ ಎಂದರು.
      ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಕೆ.ನಂಜುAಡಪ್ಪನವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್ ಸಿದ್ದಲಿಂಗಪ್ಪ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ತುಮಕೂರು ವಿ.ವಿ ಚರಿತ್ರೆ ಪ್ರಾಧ್ಯಾಪಕ ಡಾ. ಎಂ.ಕೊಟ್ರೇಶ್, ಈ ಕೃತಿಯ ಪ್ರಕಾಶಕರಾದ ಬೆಂಗಳೂರು ಸುಹಾಸ್ ಗ್ರಾಫಿಕ್ಸ್ನ ಮೇಲುಕೋಟೆ ಮುರುಳೀಧರ್, ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪ, ಐ.ಸಿ.ಹಚ್.ಆರ್‌ನ ಉಪನಿರ್ದೇಶಕಿ ಡಾ. ಅರುಣಿ ಇತರರಿದ್ದರು.
ಕಲ್ಪಹಾಸ ಕೃತಿಯ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪನವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಇತಿಹಾಸ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ವಂದಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಸೋಮಶೇಖರ್ ನಿರೂಪಿಸಿದರು.
ಭಾವಚಿತ್ರ
    ಬೆಂಗಳೂರಿನ ಸುಹಾಸ್ ಗ್ರಾಫಿಕ್ಸ್ ಪ್ರಕಟಿಸಿರುವ ಡಾ. ಡಿ.ಎನ್.ಯೋಗೀಶ್ವರಪ್ಪನವರು ತುಮಕೂರು ಜಿಲ್ಲೆ ಇತಿಹಾಸ ಕಲ್ಪಹಾಸ ಸಂಪುಟ-೦೧ ಕೃತಿಯನ್ನು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಡಾ. ದೇವರ ಕೊಂಡಾರೆಡ್ಡಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಟಿ.ಕೆ.ನಂಜುAಡಪ್ಪ, ಅರವಿಂದ ಜತ್ತಿ,  ಡಾ. ಚನ್ನಸ್ವಾಮಿ ಸೋಸಲೆ, ಡಾ. ಆಶ್ವತ್ಥನಾರಾಯಣ, ಕೆ.ಎಸ್.ಸಿದ್ದಲಿಂಗಪ್ಪ, ಡಾ. ಎಂ.ಕೊಟ್ರೇಶ್, ಮೇಲುಕೋಟೆ ಮುರುಳಿಧರ್,   ಡಾ. ಡಿ.ಎನ್.ಯೋಗೀಶ್ವರಪ್ಪ,  ಡಾ. ಚಂದ್ರಶೇಖರ್ ಇತರರಿದ್ದರು.
(Visited 1 times, 1 visits today)