ಪಾವಗಡ: ಶಿಕ್ಷಣಕ್ಕೆ ಒತ್ತು ಕೊಟ್ಟು ಶಿಕ್ಷಕ ರನ್ನು ಪುರಸ್ಕರಿಸಿದ ಮಾಜಿಶಾಸಕ ಕೆ.ಎಂ. ತಿಮ್ಮರಾಯಪ್ಪ. ತಾಲೂಕಿನ ನಾಯ್ಡುಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರಾರ್ಜಿದೇಸಾಯಿ ವಸತಿ ಶಾಲೆ ಕೋಡಿಗೆಹಳ್ಳಿ ಇಲ್ಲಿ ನಿಡಗಲ್ ಹೋಬಳಿ ನ್ಯಾಯದಗುಂಟೆ ಗ್ರಾಮ ಪಂಚಾಯಿತಿ ನಾಗರಿಕ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೧೦೦% ಫಲಿತಾಂಶ ಜಿಲ್ಲೆಯಲ್ಲಿ ದ್ವಿತೀಯ ತಾಲೂಕಿನ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿದರು.
ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಅವರು, ವಿದ್ಯಾರ್ಥಿಗಳು ಮೊಬೈ ಲ್ ಗೀಳಿನಿಂದ ದೂರವಿದ್ದು ಶಿಕ್ಷಣದ ಕಡೆ ಹೆಚ್ಚು ಗಮನಹರಿಸಿ, ಪೋಷಕರ ಕನಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎನ್ ಎ ಈರಣ್ಣ ಮಾತನಾಡುತ್ತಾ ನಿಡಗಲ್ ಹೋಬಳಿಗೆ ಮುರಾರ್ಜಿ ಕಾಲೇಜಿನ ಅವಶ್ಯಕತೆ ಇದೆ ಎಂದು ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಈ ನಮ್ಮ ಶಾಲೆ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ ಶಿಕ್ಷಕರು ಮತ್ತು ಪ್ರಾಂಶುಪಾಲರ ಶ್ರಮದಿಂದ ಉತ್ತಮ ಸಾಧನೆ ಮಾಡಲಾಗಿದೆ ಎಂದು ಪ್ರಶಂಶಿಸಿದರು ಇನ್ನು ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೆ ಏರಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದರು ಈ ಒಂದು ಫಲಿತಾಂಶಕ್ಕೆ ಪ್ರಾಂ ಶುಪಾಲರು ಮತ್ತು ಶಿಕ್ಷಕರೇ ಮೂಲ ಕಾರಣವಾಗಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮ ಉದ್ದೇಶಿಸಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಶಾಲೆ ೨೦೨೪- ೨೫ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಸಾಧಿಸಿದ್ದು, ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಉತ್ತಮ ಫಲಿತಾಂಶ ಸಾಧಿಸಲು ಕ್ರೈಸ್ಟ್ ನ ಕೇಂದ್ರ ಕಚೇರಿಯ ಮಾರ್ಗದರ್ಶನದಂತೆ ಯೋಜನೆಯನ್ನು ರೂಪಿಸಿಕೊಳ್ಳಲಾಯಿತು ಎಂದರು.
ನಂತರ ಜೆಡಿಎಸ್ ಹಿರಿಯ ಮುಖಂಡ ತಿಮ್ಮರೆಡ್ಡಿ ಜಯಶೀಲ್ ರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ , ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರಿಜಮ್ಮ ಶಿವಣ್ಣ, ಉಪಾಧ್ಯಕ್ಷರಾದ ರಾಧಮ್ಮ ಶಿವಪ್ಪ, ಮಾಜಿ ಅಧ್ಯಕ್ಷ ಬೀರ್ ಲಿಂಗಪ್ಪ ಹಾಗೂಸದಸ್ಯರು ಮುಖಂಡರುಗಳಾದ ಕೃಷ್ಣಪ್ಪ, ಸಿದ್ದಪ್ಪ, ಆನಂದಪ್ಪ, ಗಿರಿಯಪ್ಪ, ಪಾಂಡಪ್ಪ, ಪ್ರಕಾಶ್ ರೆಡ್ಡಿ, ವಿಎಸ್ಏನ್ ಅಧ್ಯಕ್ಷ ನಾಗಪ್ಪ ,ಶಿವಲಿಂಗಪ್ಪ, ರಾಮಕೃಷ್ಣಪ್ಪ, ತಿಪ್ಪೇಸ್ವಾಮಿ ಸಿಟಿ ಹಟ್ಟಿ ,ನಾಗಲಿಂಗಪ್ಪ ಸಿಟಿ ಹಟ್ಟಿ, ಪಾಲಯ್ಯ ,ರಾಜಪ್ಪ, ಶಾಲಾ ಸಿಬ್ಬಂದಿ ಶಿಕ್ಷಕರಾದ ಉಪ ಪ್ರಾಂಶುಪಾಲರಾದ ನರಸಿಂಹಮೂರ್ತಿ, ಕನ್ನಡ ಶಿಕ್ಷಕರಾದ ಪ್ರಹಲ್ಲಾದ್ ಹಿಂದಿ ಶಿಕ್ಷಕರಾದ ಜಿ ನಾಗೇಂದ್ರ ಯ, ಇಂಗ್ಲಿಷ್ ಶಿಕ್ಷಕರಾದ ಮಂಜುನಾಥ, ಸಮಾಜ ವಿಜ್ಞಾನ ಶಿಕ್ಷಕರಾದ ಕೇಶವಮೂರ್ತಿ, ದೈಹಿಕ ಶಿಕ್ಷಕ ಸುಬ್ರಮಣಿ, ಕಂಪ್ಯೂಟರ್ ಶಿಕ್ಷಕಿ ಪೂಜಿತ, ಪ್ರಥಮ ದರ್ಜೆ ಸಹಾಯಕಿ ಪುಷ್ಪಲತಾ, ಶುಶ್ರೂಷಕಿ ಕಾವ್ಯ ಹಾಜರಿದ್ದರು.
(Visited 1 times, 1 visits today)