ಪಾವಗಡ: ಸುತ್ತಮುತ್ತಲಿನ ಪರಿಸರದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದಂತೆ ಪಾವಗಡ ಪುರಸಭಾಧ್ಯಕ್ಷ ಸುದೇಶ್ ಬಾಬು ಕರೆ ನೀಡಿದರು
ಗುರುವಾರ ಮಧ್ಯಾಹ್ನ ೧೨ ಗಂಟೆಯಲ್ಲಿ ಪಟ್ಟಣದ ಪುರಸಭೆಯ ಆವರಣದಲ್ಲಿ ಹಮ್ಮಿ ಕೊಂಡಿದ್ದು ವಿಶ್ವ ಪರಿಸರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಾವು ಪರಿಸರವನ್ನು ರಕ್ಷಿಸಿದರೆ ನಮ್ಮನ್ನು ಪರಿಸರ ರಕ್ಷಿಸುತ್ತದೆ, ಈ ಒಂದು ನಿಯಮವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಮನೆಗಳ ಲ್ಲಿಯೂ ತಯಾರಾಗುವ ಕಸವನ್ನು ಪುರಸಭೆಯ ವಾಹನಕ್ಕೆ ನೀಡಿ ಸ್ವಚ್ಛತೆಯನ್ನು ಕಾಪಾಡಬೇಕು, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆAದು ಕರೆ ನೀಡಿದರು,
ವಿಜ್ಞಾನ ಕೇಂದ್ರದ ಅಧ್ಯಕ್ಷರು ನಿವೃತ್ತ ಶಿಕ್ಷಕರು ಆದ ಎಂ. ಗಂಗಾಧರ್ ಅವರು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತ ವನ್ನಾಗಿ ಮಾಡಲು ಎಲ್ಲರೂ ಪಣತೊಡಬೇಕು, ಪ್ಲಾಸ್ಟಿಕ್ ನಿಂದ ಜೀವ ಹಾನಿಯೇ ಹೊರತು ಪ್ಲಾಸ್ಟಿಕ್ ಇಂದ ಉಪಯೋಗವಿಲ್ಲ, ಪ್ಲಾಸ್ಟಿಕ್ ವಸ್ತುಗಳನ್ನು ನಾವು ಕೂಡಾ ಖಂಡಿತವಾಗಿ ನಿರಾಕರಿಸಬೇಕು, ಮತ್ತು ಪ್ಲಾಸ್ಟಿಕ್ ನ ಮರುಬಳಕೆಯ ವಸ್ತುಗಳನ್ನು ಮಾರಾಟ ಮಾಡಬೇಕು, ಅಲ್ಲದೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಸ್ಕರಿಸಬಹುದಾಗಿದೆ, ಆದ್ದರಿಂದ ಪ್ಲಾಸ್ಟಿಕ್ ಅನ್ನು ಎಲ್ಲರೂ ತ್ಯಜಿಸಬೇಕೆಂದು ನೆರದಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರೀಫ್ ಮಾತನಾಡಿ ಈ ಬಾರಿಯ ಪರಿಸರ ದಿನಾಚರಣೆಯನ್ನು ಪ್ಲಾಸ್ಟಿಕ್ ಮಾಲಿನ್ಯವನ್ನು ಜಾಗತಿಕವಾಗಿ ಕೊನೆಗೊಳಿಸೋಣ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸುತ್ತಿದ್ದೂ ಪ್ರತಿ ಯೊಬ್ಬರೂ ಇದನ್ನು ಪಾಲಿಸಬೇಕೆಂದರು,
ಪಟ್ಟಣದ ಇಂದಿರಾ ಕ್ಯಾಂಟೀನ್ ಅವರಣ ದಲ್ಲಿ ಶ್ರೀ ಶಕ್ತಿ ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳು ತಮ್ಮ ತಮ್ಮ ತಾಯಿಯ ಹೆಸರಲ್ಲಿ ಗಿಡಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷೆ ಮಾಲೀನ್ ತಾಜ್, ಮಾಜಿ ಪುರಸಭಾಧ್ಯಕ್ಷ ಪಿ ಎಚ್ ರಾಜೇಶ್, ವೇಲುರಾಜು, ಸದಸ್ಯರಾದ ವೆಂಕಟರಮಣಪ್ಪ, ಗೊರ್ತಿ ನಾಗರಾಜು, ಬಾಲಸುಬ್ರಮಣ್ಯಂ, ನಾಗಭೂಷಣ್ ರೆಡ್ಡಿ, ಭಾರತಿ ವಿಜ್ಞಾನ ಕೇಂದ್ರದ ಎಂ ಗಂಗಾಧರಪ್ಪ, ಪುರಸಭೆಯ ಸಿಎಓ ಭಾಗ್ಯಮ್ಮ ಹಿರಿಯ ಆರೋಗ್ಯ ನಿರೀಕ್ಷಕ ಶಂಸುದ್ದೀನ್,ನಾಮಿನಿ ಸದಸ್ಯರಾದ ಶ್ರೀನಿವಾಸ್,ಗಂಗಾಧರ್, ಮುಖಂಡರಾದ ಅಲಿ, ಪೋಟ್ಟು ಗೋವಿಂದಪ್ಪ, ಕಿರಣ್, ಸೇರಿದಂತೆ ಹಲವರು ಹಾಜರಿದ್ದರು..
(Visited 1 times, 1 visits today)