ಕೊರಟಗೆರೆ: ತಾಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳ ೪೪ ನೇ ಜನ್ಮವರ್ದಂತಿ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಸಂಘ ಸಂಸ್ಥೆಗಳು, ಮಠದ ವಿಧ್ಯಾರ್ಥಿಗಳು, ಗುರುಕುಲ ಸಾಧಕರಿಂದ ಗುರವಂಧನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಶ್ರೀಗಳ ೪೪ ನೇ ಜನ್ಮವರ್ದಂತಿ ಕಾರ್ಯಕ್ರಮದ ಅಂಗವಾಗಿ ಪ್ರಾತಕಾಲ ೬ ಗಂಟೆಯಿAದ ಶ್ರೀ ಕ್ಷೇತ್ರಧಿಪತಿ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀಮಠದ ಕರ್ತೃ ಶ್ರೀ ಜಗದ್ಗುರು ರೇಣುಕಾಚಾರ್ಯರು, ಗಣಪತಿ ಮತ್ತು ವೀರಭದ್ರಸ್ವಾಮಿ ಅವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ನಡೆಯಿತು, ನಂತರ ೧೧ ಗಂಟಗೆ ಗುರುವಂದನಾ ಕಾರ್ಯಕ್ರಮದಲ್ಲಿ ಏಲೆರಾಂಪುರ ಕುಂಚಿಟಿಗೆ ಮಹಾಸಂಸ್ಥಾನ ಮಠದ ಡಾ,ಹನುಮಂತನಾಥಸ್ವಾಮೀಜಿ, ರಾಮಮೂರ್ತಿಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಗಳ ಮಠಾಧೀಶ್ವರರು, ಹರ ಗುರು ಚರಮೂರ್ತಿಗಳ ಸಾನಿದ್ಯದಲ್ಲಿ ತುಮಕೂರು ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಸೇರಿದಂತೆ ವಿವಿಧ ಪಕ್ಷಗಳು ಮುಖಂಡರುಗಳು, ಸಂಘಸAಸ್ಥೆಗಳ ಪಧಾದಿಕಾರಿಗಳು, ಶ್ರೀಮಠದ ಭಕ್ತರು ಭಾಗವಹಿಸಿ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿಗಳ ಪಾದಪೂಜೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳಿಂದ ಜನ್ಮವರ್ಧಂತಿ ಆಚರಿಸಿದರು.
ಶ್ರೀಗಳ ೪೪ ನೇ ಜನ್ಮವರ್ಧಂತರಿ ಅಂಗವಾಗಿ ಶ್ರೀಮಠಕ್ಕೆ ಬಂದ ಎಲ್ಲಾ ಭಕ್ತರಿಗೂ ಶ್ರೀಮಠದ ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆಯೊಂದಿಗೆ ವಿಶೇಷ ಪ್ರಸಾದ ವವ್ಯಸ್ಥೆ ಮಾಡಲಾಗಿತ್ತು, ಶ್ರೀ ಮಠಕ್ಕೆ ಆಗಮಿಸಿದ ಡಾ,ಹನುಮಂತನಾ ಥಸ್ವಾಮೀಜಿ, ರಾಮಮೂರ್ತಿಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಭಕ್ತಕರು, ಪತ್ರಕರ್ತರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಶ್ರೀಗಳಿಗೆ ಹುಟ್ಟುಹಬ್ಬದ ಶುಭಕೋರಿ ಆಶ್ರೀರ್ವಾದ ಪಡೆದರು.
ಶುಭಕೋರಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್;- ರಾಜ್ಯದ ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಶ್ರೀಗಳ ೪೪ ನೇ ಜನ್ಮವರ್ದಂತಿಗೆ ಶುಭಹಾರೈಸಿ ಗ್ರಾಮೀಣ ಜನರಿಗೆ ಧಾರ್ಮೀಕವಾಗಿ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

(Visited 1 times, 1 visits today)