ತುಮಕೂರು: ಮನುಷ್ಯನಿಗೆಗುರಿ ಮತ್ತು ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ ಎಂದು ಮಾಜಿ ಸಚಿವ, ಮಧುಗಿರಿ ಕ್ಷೇತ್ರದ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ(ರಿ), ಶಬರಿ ಮಹಿಳಾ ಪತ್ತಿನ ಸಹಕಾರ ಸಂಘ, ನಿ. ತುಮಕೂರು ವಾಲ್ಮೀಕಿ ಸಹಕಾರ ಸಂಘ(ರಿ).ನಿ, ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘ(ರಿ), ಮತ್ತು ಜಿಲ್ಲಾ ನಾಯಕ ಮಹಿಳಾ ಸಮಾಜ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ೪ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಶಿಕ್ಷಣದ ಮೂಲಕ ಯಾರ ಮೇಲೂ ಅವಲಂಬನೆಯಾಗದೆ, ಆತ್ಮಸ್ಥೆöÊರ್ಯದಿಂದ ಬದುಕುವ ವಾತಾವರಣವನ್ನು ಸಮುದಾಯದ ಯುವಜನರು ರೂಢಿಸಿಕೊಳ್ಳಬೇಕೆಂದರು.
ಸಮುದಾಯದ ಸಂಘಟನೆಗೆ ಪ್ರತಿಭಾ ಪುರಸ್ಕಾರವೆಂಬುದು ಒಂದು ಕಾರಣ. ಪ್ರತಿಭೆ ಪ್ರೋತ್ಸಾಯಿಸುವುದು ಒಂದು ಕಡೆಗೆ ಹೆಮ್ಮೆ ಮತ್ತು ಮತ್ತೊಂದು ಕಡೆಗೆ ಜವಾಬ್ದಾರಿ ಕೂಡ ಆಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿ ತಾಲೂಕು ಹಂತದಲ್ಲಿಯೂ ನಡೆದರೆ ಸಮುದಾಯದ ಸಂಘಟನೆಗೆ ಹೆಚ್ಚು ಪೂರಕವಾಗಲಿದೆ. ಅಲ್ಲದೆ ಉನ್ನತ ಸ್ಥಾನದಲ್ಲಿರುವ ಹಿರಿಯರ ಮಾರ್ಗದರ್ಶನ ಕಿರಿಯರಿಗೆ ದೊರೆತು, ಅವರು ಸಹ ಉನ್ನತ್ತಿಯತ್ತ ಚಲಿಸಲು ಸಹಕಾರಿಯಾಗಲಿದೆ ಎಂದು ಕೆ.ಎನ್.ರಾಜಣ್ಣ, ನಾನು ಹುಟ್ಟತ್ತಲೇ ನಾಯಕ ಎಂಬ ಆಹಂನ್ನು ಬಿಟ್ಟು, ಎಲ್ಲಾ ಸಮುದಾಯದ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಳಿಸುವ ಮೂಲಕ ಜನ ನಾಯಕರಾಗುವತ್ತ ಚಿತ್ತ ಹರಿಸಬೇಕು. ಹಾಗೆಯೇ ಉನ್ನತ ಸ್ಥಾನದಲ್ಲಿರುವ ಸಮುದಾಯದ ವ್ಯಕ್ತಿಗಳು ಜನರ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡಿ, ಸಣ್ಣ-ಪುಟ್ಟ ಸಮುದಾಯಗಳಿಗೆ ಅಧಿಕಾರ ನೀಡುವ ಮೂಲಕ ಅವರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೊಗುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಮೀಸಲಾತಿ ಇದೆ ಎಂಬ ಕಾರಣಕ್ಕೆ ಸಮುದಾಯದ ಯುವಜನರು, ರಾಜಕಾರಣಿಗಳು ನಿರ್ಲಕ್ಷ ತಾಳಬಾರದು. ಒಂದೇ ಸಮುದಾಯದ ಜನರಿಗೆ ಗೆಲುವು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಸಮುದಾಯದ ಜನರ ವಿಶ್ವಾಸಗಳಿಸಬೇಕು.ತುಮಕೂರು ಕ್ಷೇತ್ರದಲ್ಲಿ ಪಕ್ಷೇತರರು ಗೆಲ್ಲುವುದು ಹೋಗಲಿ, ನಾಲ್ಕು ಅಂಕಿ ದಾಟಿದ ಉದಾಹರಣೆಯಿಲ್ಲ. ಆದರೆ ೧೯೯೪ರಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸಿದಾಗ ನನ್ನ ನಿರೀಕ್ಷೆಗೂ ಮೀರಿ ೨೬ ಸಾವಿರ ಮತ ನೀಡಿದರು. ಹಾಗಾಗಿ ನಾನು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ನಂಬಿಕೆ ಮೂಡಲು ಕಾರಣವಾಯಿತು.ಆದೇ ನಂಬಿಕೆಯಲ್ಲಿ ಸಾಮಾನ್ಯ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸಿ ಮೂರು ಬಾರಿ ಶಾಸಕನಾಗಿ ಮಂತ್ರಿಯೂ ಅದೆ. ಮೀಸಲು ಕ್ಷೇತ್ರವೆಂದು ನಂಬಿ ಕುಳಿತಿದ್ದರೇ, ಶಾಸಕರು ಆಗುತ್ತಿರಲಿಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ಇಂದಿನ ರಾಜಕೀಯ ವ್ಯವಸ್ಥೆಯನ್ನು ಜನರ ಮುಂದಿಟ್ಟರು.
ಕೂಡ್ಲಿಗಿ ಶಾಸಕ ಹಾಗೂ ಕಣ್ಣಿನ ತಜ್ಞ ವೈದ್ಯರಾದ ಡಾ.ಶ್ರೀನಿವಾಸ್ ಮಾತನಾಡಿದರು.
ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ(ರಿ), ನ ಅಧ್ಯಕ್ಷರಾದ ಶಾಂತಲಾ ರಾಜಣ್ಣ ಮಾತನಾಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಜಕುಮಾರ್, ವೈದ್ಯರಾದ ಡಾ.ಅನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯ, ಅವುಗಳ ಬಳಕೆ, ಭವಿಷ್ಯವನ್ನು ಎದುರಿಸುವ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೆಚ್.ಜಿ.ಪುರುಷೋತ್ತಮ್ ವಹಿಸಿದ್ದರು. ಮಾಜಿ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಟೂಡಾ ಆಯುಕ್ತ ಉಮೇಶ್ ಚಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಜಿ.ಆರ್, ಎಇಇ ಹನುಮಂತರಾಯಪ್ಪ, ಹೆಚ್.ಓಬಳೇಶ್, ಇಇ ಎನ್.ಅನಿಲ್ ಕುಮಾರ್, ಕೆ.ರಂಗನಾಥ್, ದೊಡ್ಡರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)