ತುರುವೇಕೆರೆ: ರೋಟರಿ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದು ಈ ವರ್ಷ ಸುಮಾರು ೧೨೦೦ ಹೆಚ್ಚು ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ರೋಟರಿ ಕ್ಲಬ್ ನೂತನ ಅದ್ಯಕ್ಷ ಸಂತೋಷ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ೨೦೨೬-೨೭ ನೇ ಸಾಲಿನ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರೋಟರಿ ಕ್ಲಬ್ ಸ್ಥಾಪನೆಯಾಗಿ ೧೨ವರ್ಷ ಪೂರೈಸಿದ್ದು ಅದರ ಸವಿನೆನಪಿಗಾಗಿ ೧೨ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ತುರ್ತು ವೈದ್ಯಕೀಯ ಹೆಚ್ಚಿನ ತುರ್ತು ಚಿಕಿತ್ಸೆ ಸಹಾಯಕ್ಕೆ ತುರ್ತು ರೋಗಿಗಳಿಗೆ ನೆರವಾಗಲು ನೂತನ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ನೂತನ ಆಂಬುಲೆನ್ಸ್ ನ್ನು ಖ್ಯಾತ ಹೃದಯ ರೋಗ ತಜ್ಞ ಹಾಗೂ ಸಂಸದರಾದ ಡಾ. ಸಿಎನ್ ಮಂಜುನಾಥ್ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಸಾದನೆ ಮಾಡಿದ ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬಸ್ ಸ್ಟಾ÷್ಯಂಡ್ ಅಥವಾ ಕಾಲೇಜುಗಳ ಆವರಣದಲ್ಲಿ ರಿಯಾಯಿತಿ ದರದಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿAಗ್ ಮಷೀನ್ ಗಳನ್ನು ಅಳವಡಿಸುವುದು. ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಎರಡು ಪ್ರೌಢಶಾಲೆಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ, ಪಟ್ಟಣದಲ್ಲಿ ಪ್ರತಿ ದಿನ ದಿನಪತ್ರಿಕೆಗಳನ್ನು ಹಂಚುವರಿಗೆ ಹಾಗೂ ಗ್ಯಾಸ್ ವಿತರಿಸುವ ಕಾರ್ಮಿಕರಿಗೆ ಉಚಿತ ಜರ್ಕಿನ್ ವಿತರಣೆ ಜೊತಗೆ ಹಲವು ಕಾರ್ಯಕ್ರಮ ಮಾಡಲಾಗುವುದು ಎಂದರು.
ರೋಟರಿ ಸಂಸ್ಥೆಯ ೨೦೨೬-೨೭ ನೇ ಸಾಲಿನ ನೂತನ ಅದ್ಯಕ್ಷ ಡಿ ಸಂತೋಷ್ ಮತ್ತು ಅವರ ತಂಡದ ಪದಗ್ರಹಣ ಪಟ್ಟಣದ ಚೌದ್ರಿ ಕನ್ವೇಷನ್ ಹಾಲ್ ನಲ್ಲಿ ಜೂಲೈ೧೬ ಗುರುವಾರ ಸಂಜೆ ೫ ಗಂಟೆಗೆ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಖ್ಯಾತ ಹೃದಯ ತಜ್ನ ಹಾಗೂ ಸಂಸದ ಡಾ.ಮಂಜುನಾಥ್ ಶಾಸಕ ಎಂ ಟಿ ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ್, ರೋಟರಿ ಕ್ಲಬ್ ನ ರಾಜ್ಯ ಜಿಲ್ಲಾ ಮಟ್ಟದ ಮುಖಂಡರು ಆಗಮಿಸಲಿದ್ದಾರೆ ಎಂದು ನಿಕಟಪೂರ್ವ ಅದ್ಯಕ್ಷ ಬಿ.ಎಂ.ಎಸ್ ಉಮೇಶ್ ತಿಳಿಸಿದರು..
ಗೋಷ್ಠಿಯಲ್ಲಿ ರೋಟರಿ ಟ್ರಸ್ಟ್ ಅದ್ಹಕ್ಷ ಸಾ.ಶಿ.ದೇವರಾಜು, ಮಾಜಿ ಅದ್ಯಕ್ಷರಾದ ಗ್ಯಾಸ್ ಫ್ರಭು, ಜಯರಾಮ್, ಕಾರ್ಯದರ್ಶಿ ಉಪೇಂದ್ರ, ರೊ.ಬಸವರಾಜು, ಸತ್ಯನಾರಾಯಣ, ಶಿವರಾಜ್, ಮೇಘನಾಸಂತೋಷ್, ಶೋಭಾ ಉಮೇಶ್, ಪವಿತ್ರ, ಕುಸುಮ, ನೇತ್ರ ಸಿದ್ದಲಿಂಗ ಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

(Visited 1 times, 1 visits today)