ತುಮಕೂರು: ನಗರದ ಹನುಮಂತಪುರದಲ್ಲಿ ಪೇಟೆ ಮಾತೆ ಕೊಲ್ಲಾಪುರದಮ್ಮ ಹಾಗೂ ಕರುಗಲ್ಲಮ್ಮ ದೇವರ ಐದು ದಿನಗಳ ಜಾತ್ರಾ ಮಹೋತ್ಸವ ಏರ್ಪಾಟಾಗಿದೆ. ಆಗಸ್ಟ್ ೩ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀರಾಮ ನಗರದ ಆದಿಸ್ಥಾನ ಮುದ್ರೆ ಗೋಣಿ ಮರದ ಪೂಜೆ, ಮಧ್ಯಾಹ್ನ ೩ ಗಂಟೆಗೆ ಕೋಟೆ ಕೊಲ್ಲಾಪುರದಮ್ಮ ಹಾಗೂ ಕರುಗಲ್ಲಮ್ಮ ದೇವಸ್ಥಾನದಿಂದ ದೇವರುಗಳನ್ನು ಮಂಗಳವಾದ್ಯ, ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಹನುಮಂತಪುರ ದೇವಸ್ಥಾನಕ್ಕೆ ಕರೆತರಲಾಗುವುದು.
ನಂತರ ನಡೆಯುವ ಸಮಾರಂಭದಲ್ಲಿ ತಿಪಟೂರು ತಾಲ್ಲೂಕು ಆಲುಬೂರು ಕ್ಷೇತ್ರದ ಸೋಮಶೇಖರ ಸ್ವಾಮೀಜಿ ಸಾನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರೆ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಎಸ್.ಆರ್.ಶ್ರೀನಿವಾಸ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್. ನಾಗಣ್ಣ ಅತಿಥಿಗಳಾಗಿ ಭಾಗವಹಿಸುವರು.
ಆಗಸ್ಟ್ ೪ರಂದು ಸಂಜೆ ೫ ಗಂಟೆಗೆ ಆರತಿ ಅಗ್ನಿಕೊಂಡವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ ಭಾಗವಹಿಸುವರು. ಇದೇ ದಿನ ಸಂಜೆ ೬ ಗಂಟೆಗೆ ಕಂಬದ ರಂಗಯ್ಯ ಮತ್ತು ತಂಡದವರಿAದ ಸಂಗೀತ ಸಂಜೆ ಏರ್ಪಾಟಾಗಿದೆ. ಆ.೪ರಂದು ಸಂಜೆ ೫ ಗಂಟೆಗೆ ದೇವರುಗಳಿಗೆ ಆರತಿ ಇದೆ. ಆಕರ್ಷಕವಾಗಿ ಆರತಿಯನ್ನು ಅಲಂಕರಿಸಿ ತರುವವರಿಗೆ ಬಹುಮಾನ ನೀಡಲಾಗುವುದು ಎಂದು ತಿಗಳ ಸಮಾಜದ ಹಿರಿಯರಾದ ಟಿ.ಎಲ್. ಕುಂಭಯ್ಯ ತಿಳಿಸಿದ್ದಾರೆ.
ಆ.೫ರಂದು ಮಧ್ಯಾಹ್ನ ೨ ಗಂಟೆಗೆ ಬಿ.ಎ. ಗುಡಿಪಾಳ್ಯದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶ್ರೀ ಬಯಲು ಆಂಜನೇಯ ಕಲಾ ಟ್ರಸ್ಟ್ ಕಲಾವಿದರಿಂದ ಕುರುಕ್ಷೇತ್ರ ನಾಟಕ ಹಾಗೂ ೬ರಂದು ಇದೇ ಟ್ರಸ್ಟ್ನಿಂದ ಇದೇ ಜಾಗದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ.
ಆಗಸ್ಟ್ ೭ರಂದು ಕೊಲ್ಲಾಪುರದಮ್ಮ, ಕರುಗಲ್ಲಮ್ಮ ದೇವರಿಗೆ ಮಡ್ಲಕ್ಕಿ ಪೂಜೆ ರಾತ್ರಿ ೮ ಗಂಟೆಗೆ ಎಲ್ಲೆ ಕಲ್ಲಿನ ಬಳಿ ಅಮ್ಮನವರ ಪೂಜಾ ಕಾರ್ಯಕ್ರಮ ಹಾಗೂ ಶ್ರೀರಾಮನಗರ ದೇವಸ್ಥಾನದವರೆಗೆ ದೇವರ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು ಎಂದು ಟಿ.ಎಲ್. ಕುಂಭಯ್ಯ ತಿಳಿಸಿದ್ದಾರೆ.

(Visited 1 times, 1 visits today)