ತುಮಕೂರು: ೮೦ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಸಾಮರಸ್ಯ, ರಾಷ್ಟçಭಕ್ತಿ ಸಾರಲು ಭಗತ್ ಕ್ರಾಂತಿ ಸೇನೆಯಿಂದ ಶುಕ್ರವಾರ ರಾತ್ರಿ ನಗರದಲ್ಲಿ ಅಖಂಡ ಭಾರತ ಜಾಗೃತಿ ದಿವಸ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಡಿ.ಡಿ.ಪಿ.ಐ. ಕಛೇರಿ ಬಳಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ರಾಷ್ಟçಭಕ್ತಿ ಸಾರಲು, ಸಾಮರಸ್ಯ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ವಿಶೇಷವಾಗಿ ಯುವ ಜನರಲ್ಲಿ ರಾಷ್ಟಾçಭಿಮಾನ ಬೆಳೆಯಬೇಕು. ದೇಶದ ರಕ್ಷಣೆ, ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಭಾರತ ಸ್ವಾತಂತ್ರö್ಯಕ್ಕಾಗಿ ತ್ಯಾಗ ಮಾಡಿದ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ, ಅವರ ಕೊಡುಗೆ ಸ್ಮರಿಸಬೇಕು. ಸ್ವಾತಂತ್ರö್ಯ ದಿನಾಚರಣೆಯನ್ನು ದೇಶದ ಐಕ್ಯತೆಯ ಸಂಕೇತವಾಗಿ ಸಂಭ್ರಮದಿAದ ಆಚರಿಸಬೇಕು ಎಂದರು.
ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಅತಿಥಿಯಾಗಿ ಭಾಗಹಿಸಿದ್ದರು. ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಪಂಜು ಬೆಳಗಿಸಿಕೊಂಡು ಮೆರವಣಿಗೆ ಸಾಗಿ ಸೋಮೇಶ್ವರ ಮುಖ್ಯರಸ್ತೆ, ಕೆಂಪಣ್ಣನ ಅಂಗಡಿ ಸರ್ಕಲ್ ಮುಖಾಂತರ ದೋಭಿ ಘಾಟ್ ರಸ್ತೆ, ಅಶೋಕ ನಗರ, ಬಿ.ಹೆಚ್. ರಸ್ತೆ, ಎಸ್.ಎಸ್. ಸರ್ಕಲ್ ಮೂಲಕ ತುಮಕೂರು ವಿಶ್ವವಿದ್ಯಾಲಯ ಬಳಿ ಬಂದರು.
ವಿಶ್ವವಿದ್ಯಾಲಯ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರು, ಕನ್ನಡ ಉಪನ್ಯಾಸಕರಾದ ಡಾ.ಕೇಶವ ಬಂಗೇರ ಮಾತನಾಡಿ, ಹಿಂದೆ ಇದ್ದ ಭವ್ಯ ಭಾರತ ತುಂಡಾಗಿದ್ದು ಯಾವ ಆಧಾರದ ಮೇಲೆ ಎಂಬುದು ಹಾಗೂ ಯಾವ ತಪ್ಪು ನಿರ್ಧಾರಗಳ ಮೇಲೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅಂದರೆ ಅಂದಿನ ನಮ್ಮ ರಾಷ್ಟ್ರ ನಾಯಕರ ತಪ್ಪು ನಿರ್ಧಾರಗಳ ಕಾರಣದಿಂದ ನಮ್ಮ ದೇಶ ಅಖಂಡವಾಗಿದ್ದ ಭಾರತ, ತ್ರಿಖಂಡವಾಗಿ ಎರಡು ಶತ್ರು ರಾಷ್ಟ್ರಗಳು ಉಗಮವಾದವು ಹಾಗೇ ನಮ್ಮ ದೇಶದ ಶಾಂತಿ, ನೆಮ್ಮದಿಗಳು ಭಂಗಗೊAಡವು ಎಂದರು.
ಭಯ, ಆತಂಕ, ಅಭದ್ರತೆಗಳು ಇಂದಿಗೂ ನಮ್ಮನ್ನು ಕಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆಂತರಿಕವಾಗಿ ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡುವಂತಹ ಕೆಲಸಗಳು ದೇಶವಾಸಿಗಳಿಂದಲೇ ಹವ್ಯಾಹತವಾಗಿ ನಡೆಯುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ದೇಶ ವಿರೋಧಿ ಚಟುವಟಿಕೆಗಳನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವವರನ್ನು ಸಹ ನಾವು ಕಾಣುತ್ತಿದ್ದೇವೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ವಿಕೃತ ದೇಶದ್ರೋಹಿ ಮನಸ್ಥಿತಿಗಳು ಹೆಚ್ಚುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿಯೂ ಕೂಡ ಇಂದಿನ ನಮ್ಮನ್ನಾಳುವ ನಾಯಕರುಗಳು, ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿಲ್ಲ. ಇಂದಿಗೂ ದೇಶದ ರಕ್ಷಣೆಯ ಬಗ್ಗೆ, ಶಾಂತಿಯ ಬಗ್ಗೆ ನಿರ್ಲಕ್ಷ ಧೋರಣೆಯನ್ನು ತಾಳುತ್ತಿದ್ದಾರೆ. ಈ ಧೋರಣೆಗಳು ಮುಂದುವರಿದರೆ ಈ ದೇಶ ಮತ್ತೊಮ್ಮೆ ತುಂಡಾಗುವ ಹಂತ ತಲುಪುವ ಅಪಾಯವಿದೆ ಹಾಗೂ ದೇಶವಾಸಿಗಳು ಶಾಶ್ವತವಾಗಿ ಶಾಂತಿ-ನೆಮ್ಮದಿಯನ್ನು ಕಳೆದುಕೊಂಡು ಆಂತರಿಕ ಭಯದಿಂದ ಬದುಕಬೇಕಾದ ಕಾಲ ಬರುವ ಸೂಚನೆಗಳು ಗೋಚರಿಸುತ್ತಿವೆ ಎಂದು ತಿಳಿಸಿದರು.
ಮಾಜಿ ಸೈನಿಕ ಮಂಜುನಾಥ್ ಅರಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ನಗರ ಪಾಲಿಕೆ ಪೌರ ಕಾರ್ಮಿಕರಾದಎನ್.ಡಿ.ಬಸವರಾಜು, ರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಗತ್ ಕ್ರಾಂತಿ ಸೇನೆ ಮುಖಂಡರಾದ ಆರಾಧ್ಯ ಮಂಚಲದೊರೆ, ಚೇತನ್, ಶ್ರೀನಿವಾಸಗೌಡ, ಹೇಮಂತ್, ರಾಕೇಶ್, ವಿನಯ್, ರಘು, ಅಜಯ್, ಪ್ರತೀಕ್, ಕೆಂಪರಾಜು, ಸತೀಶ್, ಮದನ್ ಪಟೇಲ್, ಅಭಿ, ಮಿಥುನ್, ಶಾಮಣ್ಣ, ಮುಖಂಡರಾದ ರವಿ ಚೆಂಗಾವರ, ನಿಸರ್ಗ ರಮೇಶ್, ಬಂಬೂ ಮೋಹನ್, ಪ್ರತಾಪ್, ಕಿರಣ್, ಕೇಬಲ್ ಬಸವರಾಜು ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)