ತುಮಕೂರು: ಶಿರಾ ತಾಲ್ಲೂಕು ಗಾಣದ ಹುಣಸೆಯಲ್ಲಿರುವ ಸತ್ಯ ಸಾಯಿ ಕಾರುಣ್ಯನಿಕೇತನಂ ಗುರುಕುಲದ ಶಿಕ್ಷಣವನ್ನು ಪಿಯುಸಿ ತನಕ ವಿಸ್ತರಿಸುವ ಉದ್ದೇಶ ಇದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ನಗರದಲ್ಲಿ ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಅನಿರುದ್ಧ ಜಟ್ಕರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ವಿವರಿಸಿದರು.
ತುಮಕೂರು ಜಿಲ್ಲೆಯೊಂದಿಗೆ ನಮ್ಮ ಒಡನಾಟ ಮೂಡಿದ್ದು ದೈವಸಂಕಲ್ಪ. ಒಂದು ಶಾಲೆ ಕಟ್ಟಲೆಂದು ಆರಂಭವಾದ ಪ್ರಯತ್ನದಲ್ಲಿ ಜೊತೆಯಾದ ಕೊಡುಗೈ ದಾನಿಗಳು ಮುಂದೆ ವಿಶ್ವವಿದ್ಯಾಲಯ ನಿರ್ಮಾಣಕ್ಕೂ ಸಹಾಯ ಮಾಡಿದರು ಎಂದು ಹೇಳಿದರು.
ಮಗು ಕೇವಲ ಒಂದು ಕುಟುಂಬದ ಜವಾಬ್ದಾರಿ ಅಲ್ಲ. ಮಗುವಿನ ಪಾಲನೆಯು ಇಡೀ ಸಮಾಜದ, ದೇಶದ, ಜಗತ್ತಿನ ಜವಾಬ್ದಾರಿ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಐಪಿ ಎಂದರೆ ಅತ್ಯಂತ ಮುಗ್ಧ ವ್ಯಕ್ತಿಗಳು. ಮಕ್ಕಳು ಹೀಗೆ ಇರುತ್ತಾರೆ. ಹೀಗಾಗಿ ಅವರನ್ನು ಸಮಾಜ ಕಾಳಜಿ ಮಾಡಬೇಕು ಎಂದು ಸಲಹೆ ಮಾಡಿದರು.
ನಾನು ಮಕ್ಕಳ ಮೇಲೆ ವೆಚ್ಚ ಮಾಡುತ್ತಿಲ್ಲ. ನಾನು ದೇಶದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದೇನೆ. ಇನ್ನೊಬ್ಬರ ಸಹಾಯದಿಂದ ಬೆಳೆದೆ ಎನ್ನುವ ಭಾವನೆ ಮಕ್ಕಳಲ್ಲಿ ಬಂದರೆ ಅವರು ಖಂಡಿತ ಇತರರಿಗಾಗಿ ಮಿಡಯುತ್ತಾರೆ. ಇದು ನನ್ನ ಉದ್ದೇಶ ಎಂದು ತಮ್ಮ ಆಲೋಚನೆಯನ್ನು ಹಂಚಿಕೊAಡರು.
ಭಾರತದ ಶ್ರೇಷ್ಠ ಸಂತ: ಸಿದ್ದಗಂಗಾ ಮಠದ ಕಿರಿಯ ಪೀಠಾಧಿಪತಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಆಶೀರ್ಚನ ನೀಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಾರತದ ಓರ್ವ ಶ್ರೇಷ್ಠ ಸಂತ. ಅವರ ನೇತೃತ್ವದಲ್ಲಿ ಹಲವು ಮಹತ್ವದ ಯೋಜನೆಗಳು ನಡೆಯುತ್ತಿವೆ. ಪೂಜ್ಯರ ಎಲ್ಲ ಶುಭಸಂಕಲ್ಪಗಳಿಗೆ ಸಿದ್ದಗಂಗಾ ಮಠದ ಗುರುಪರಂಪರೆಯ ಹಾರೈಕೆ ಇರುತ್ತದೆ ಎಂದು ಶ್ಲಾಘಿಸಿದರು.
ಇಡೀ ಜಗತ್ತನ್ನು ಒಂದುಗೂಡಿಸಲು ಸತ್ಯ ಸಾಯಿ ಗ್ರಾಮದ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸಂಸ್ಥೆ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿ ಬಿಲ್ ಕೌಂಟರ್ ಇಲ್ಲದ ಒಂದೇ ಒಂದು ಆಸ್ಪತ್ರೆ ಮುದ್ದೇನಹಳ್ಳಿಯಲ್ಲಿದೆ. ಅದು ಮಧುಸೂದನ ಸಾಯಿ ಅವರ ಆಸ್ಪತ್ರೆ. ಇದು ನಮ್ಮೆಲ್ಲರ ಹೆಮ್ಮೆ. ಆರೋಗ್ಯಯುತ ಜನಸಮುದಾಯ ನಿರ್ಮಾಣವಾದರೆ ಬಲಿಷ್ಠ ರಾಷ್ಟç ನಿರ್ಮಾಣವಾಗುತ್ತದೆ ಎಂದು ನುಡಿದರು.
ಸಂಕುಚಿತ ಮನೋಭಾವ ಇಲ್ಲದ ಸ್ವಾಮಿ: ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಪೂಜ್ಯ ಶಿವಕುಮಾರ ಸ್ವಾಮೀಜಿ ಅವರಂತೆ ಯಾವುದೇ ಸಂಕುಚಿತ ಮನೋಭಾವ ಇಲ್ಲದ ಮತ್ತೋರ್ವ ಸಂತ ಎಂದರೆ ಸದ್ಗುರು ಶ್ರೀ ಮಧುಸೂದನ ಸಾಯಿ. ಧ್ವನಿ-ಆಸರೆ ಇಲ್ಲದವರಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಕೇವಲ ೧೫ ವರ್ಷಗಳಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ತನ್ನದೇ ಆದ ಸಂದೇಶ ಕೊಡುವ ಮಟ್ಟಕ್ಕೆ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮಾನವ ಸೇವೆಯೇ ಮಾಧವ ಸೇವೆ’ ಎನ್ನುವ ಸತ್ಯ ಸಾಯಿ ಬಾಬಾ ಅವರ ಸಂದೇಶವನ್ನು ಸದ್ಗುರುಗಳು ಕೇವಲ ಬೋಧಿಸುತ್ತಿಲ್ಲ. ಅದನ್ನು ಅವರು ಅಕ್ಷರಶಃ ಅನುಸರಿಸುತ್ತಿದ್ದಾರೆ. ಜಾತಿ, ಮತ, ಭಾಷೆ ಗಡಿಗಳನ್ನು ಮೀರಿ ಎಲ್ಲರ ಸೇವೆ ಮಾಡುತ್ತಿದ್ದಾರೆ. ನನಗೆ ನೆಮ್ಮದಿ ಸಿಗುವ ಸ್ಥಳವೆಂದರೆ ಅದು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮ ಎಂದು ಹೆಮ್ಮೆಯಿಂದ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ‘ಪ್ರಪಂಚದಲ್ಲಿ ಯಾರೂ ಮಾಡಲು ಸಾಧ್ಯವಾಗದ ಪ್ರಯತ್ನವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಕೆಲಸಗಳನ್ನು ನೋಡಿದರೆ ಒಂದು ಪವಾಡದಂತೆ ಭಾಸವಾಗುತ್ತದೆ’ ಎಂದು ಹೇಳಿದರು.
ಇಂಗ್ಲಿಷ್ ಭಯ ಹೋಗಿದೆ: ತನ್ನ ಬದುಕಿನ ಕಥನ ಹಂಚಿಕೊAಡ ಶಿರಾ ತಾಲ್ಲೂಕು ಗೊಲ್ಲರಹಟ್ಟಿ ಗ್ರಾಮದ ಯಶವಂತ್, ಸತ್ಯ ಸಾಯಿಕಾರುಣ್ಯ ನಿಕೇತನಂ ಕ್ಯಾಂಪಸ್‌ನ ವಿದ್ಯಾಭ್ಯಾಸ ಕ್ರಮ ತನ್ನಲ್ಲಿ ಇಂಗ್ಲಿಷ್ ಮಾತನಾಡುವ, ಅಭ್ಯಾಸ ಮಾಡುವ ಧೈರ್ಯ ಮೈಗೂಡಿದ ಬಗ್ಗೆ ವಿವರಿಸಿದರು.
ಸ್ವಾಗತ ಭಾಷಣ ಮಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಕರ್ನಾಟಕದ ೧೯ ಜಿಲ್ಲೆಗಳಿಗೆ ತುಮಕೂರು ಹೆಬ್ಬಾಗಿಲು. ಇಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರ ಆರಂಭಿಸಿ. ಶಿರಾ ತಾಲ್ಲೂಕು ಗಾಣದ ಹುಣಸೆಯಲ್ಲಿರುವ ಶಿಕ್ಷಣ ಸಂಸ್ಥೆಯನ್ನು ವಿಸ್ತರಿಸಿ, ತುಮಕೂರು-ನೆಲಮಂಗಲ ಪ್ರದೇಶದಲ್ಲಿ ಇನ್ನೊಂದು ಶಿಕ್ಷಣ ಸಂಸ್ಥೆ ಆರಂಭಿಸಿ ಎಂದು ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿದರು.
ಟಿ.ಸಿ.ಪ್ರವೀಣ್ ಕುಮಾರ್ ನಿರೂಪಿಸಿದರು. ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ ಹುಲಿನಾಯ್ಕರ್, ಶಾಸಕ ಜ್ಯೋತಿ ಗಣೇಶ್, ಪ್ರಜಾ ಪ್ರಗತಿ ದಿನಪತ್ರಿಕೆಯ ಸಂಪಾದಕ ನಾಗಣ್ಣ, ಡ್ಯಾಶ್ ಪ್ರೆöÊವೇಟ್ ಟೆಕ್ನಾಲಜಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಎನ್. ರೆಡ್ಡಿ , ಉದ್ಯಮಿಗಳಾದ ವೆಂಕಟೇಶ್ ಲಾಡ್, ಸತ್ಯ ನಾರಾಯಣ ಎಚ್.ಜಿ., ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

(Visited 1 times, 1 visits today)