ಪಾವಗಡ:

      ವಿದ್ಯಾರ್ಥಿಗಳು ಓದು-ಬರಹ ಕಲಿಯುವುದರ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಖ್ರತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಶಾಸಕ ವೆಂಕಟರವಣಪ್ಪ ತಿಳಿಸಿದರು

       ಶನಿವಾರ ಪಟ್ಟಣದ ಶ್ರೀವೆಂಕಟೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷನ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾ. ಮಟ್ಟದ ಪ್ರತಿಭಾಕಾರಂಜಿ/ ಕಲೋತ್ಸವ ಸಮಾರಂಭವನ್ನು ಉದ್ಗಾಟಿಸಿ ಮಾತನಾಡುತ್ತಾ, ಯಾವುದೆ ತಾರತಮ್ಯ ಎಸಗದೆ ವಿದ್ಯಾರ್ಥಿಗಳಿಗೆ ಕಲಿಸಬೇಕು,ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಶ್ರಮ ವಹಿಸಬೇಕು ಎಂದು ತಿಳಿಸಿದರು.

      ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿರವರು ಮಾತನಾಡಿ,ಮಕ್ಕಳು ಓದಿನ ಜೊತೆಯಲ್ಲಿ ಇತರೆ ಚಟುವಟಿಕೆಗಳಲ್ಲಿ ರಾರಾಜಿಸುವಂತೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು, ಖಡ್ಡಾಯ- ಹೆಚ್ಚವರಿ ವರ್ಗಾವಣೆ ಸಮಸ್ಯೆಯನ್ನು ಶಿಕಣ ಸಚಿವರ ಗಮನಕ್ಕೆ ತಂದಿದ್ದು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಪಡುವುದಾಗಿ ತಿಳಿಸಿದರು.

      ತಾ.ಪಂ. ಅದ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ವಿದ್ಯಾರ್ಥಿಗಳು ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಪುರಾತನ ಕಲೆಗಳು ಇನ್ನೂ ಜೀವಂತವಾಗಿವೆ ಎಂದು ತಿಳಿಸಿದರು.

      ಜಿ.ಪಂ. ಸದಸ್ಯ ಚೆನ್ನಮಲ್ಲಯ್ಯ, ಬಿ.ಇ.ಒ. ಸಿದ್ದಗಂಗಯ್ಯ, ಶಿಕ್ಷಣ ಇಲಾಖೆಯ ತಿಪ್ಪಯ್ಯ, ಬಿ. ಆರ್.ಸಿ. ಪವನ್‍ಕುಮಾರರೆಡ್ಡಿ, ಮಾತನಾಡಿದರು.
ತಾ.ಪಂ. ಉಪಾಧ್ಯಕ್ಷ ಐ.ಜೆ.ನಾಗರಾಜು, ಕಾರ್ಯಕ್ರಮದ ನೊಡೆಲ್ ಆಧಿಕಾರಿ ಓ. ಧನುಂಜಯ,ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಆರ್.ಬಸವರಾಜು,ಸಹಾಯಕ ಅಕ್ಷರದಾಸೋಹ ನಿರ್ದೇಶಕ ಕೆ.ಎನ್.ಹನುಮಂತರಾಯಪ್ಪ,ಸಿ. ಆರ್.ಪಿ.ಸುವರ್ಣರೆಡ್ಡಿ, ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ, ಬಿ.ಆರ್.ಪಿ. ಮಾರುತೇಶ್,ಹಾಜರಿದ್ದರು.

 

(Visited 16 times, 1 visits today)