BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ
  • ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು
  • ‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’
  • ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ
  • ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು
  • ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ
  • ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ
  • ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ
ಅಂಕಣಗಳು

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

By News Desk BenkiyabaleUpdated:November 04, 2022 4:36 pm

ಭಾಷೆ ಮಾನವನಿಗೆ ಅವನ ಉಸಿರಿನಷ್ಟೇ ಅನಿವಾರ್ಯ. “ಮಾತೆಂಬ ಜ್ಯೋತಿ ಬೆಳಗದಿದ್ದರೆ ಲೋಕವೆಲ್ಲ ಕತ್ತಲೆಯಿಂದ ತುಂಬಿರುತ್ತಿತ್ತು. ಅಂಧಕಾರದಲ್ಲಿಯೇ ತೊಳಲುತ್ತಿತ್ತು ಎಂದಿದ್ದಾನೆ” ಮಹಾಕವಿ ದಂಡಿ.
ಪ್ರಪಂಚದಾದ್ಯಂತ ಸುಮಾರು 6000 ಭಾಷೆಗಳಿವೆಯೆಂದು ಭಾಷೆ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಭಾರತದಲ್ಲೇ ಸುಮಾರು 3000 ಭಾಷೆಗಳಿವೆ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಭಾಷೆಯು ಮೂಲತಃ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದು ದಕ್ಷಿಣ ಭಾರತದ ತಮಿಳು, ತೆಲುಗು, ಮಲೆಯಾಳಂ, ತುಳು ಭಾಷೆಗಳೊಂದಿಗೆ ಸೇರಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಕಾಲಕ್ರಮೇಣ ಒಂದು ಸ್ವತಂತ್ರ ಭಾಷೆಯಾಗಿ ರೂಪುಗೊಂಡಿದ್ದನ್ನು ಗುರುತಿಸಲಾಗಿದೆ.
ಭಾಷೆ ಸೊಗಸು :
ಕನ್ನಡ ಲಿಪಿಯನ್ನು ವಿನೋಭಾ ಭಾವೆ ಅವರು ‘ಲಿಪಿಗಳ ರಾಣಿ’ ಎಂದು ಕರೆದಿರುವುದು ಕನ್ನಡದ ಹೆಮ್ಮೆಯ ಸಂಗತಿ. ಕನ್ನಡ ಲಿಪಿಯು ಬ್ರಾಹ್ಮಿ ಲಿಪಿಯಿಂದ ರೂಪುಗೊಂಡಿದೆ.
ವಿದೇಶಿಯರೊಬ್ಬರು ಕನ್ನಡದ ಪದಕೋಶ ರಚನೆ ಮಾಡಿರುವುದು (ಸುಮಾರು 70,000 ಪದಗಳಿಗೆ ಅರ್ಥ ನೀಡಿಕೆ) ಇಡೀ ದೇಶದಲ್ಲಿಯೇ ಮೊದಲು. ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಈ ಕಾರ್ಯ ಸಾಧಕರು.
ಕರ್ನಾಟಕ ಏಕೀಕರಣ :
ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದ್ದು 1890 ರಲ್ಲಿ.
ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಪ್ರಯತ್ನದ ಫಲವಾಗಿ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
ಮೈಸೂರು ರಾಜ್ಯ ರಚನೆಯಾಗಿದ್ದು 1956 ರ ನವೆಂಬರ್ 1. ಕರ್ನಾಟಕವೆಂದು ನಾಮಕರಣಗೊಂಡಿದ್ದು 1973 ರ ನವೆಂಬರ್ 1.
ಪುರಾಣ – ಪೂರ್ವ ಇತಿಹಾಸ :
ರಾಮಾಯಣದ ದಂಡಕಾರಣ್ಯ ಪ್ರದೇಶವೇ ಕರ್ನಾಟಕ ಎಂದು ಹೇಳಲಾಗುತ್ತದೆ. ಹಂಪಿಯ ಕೆಲ ಭಾಗ, ದೇವರಾಯನದುರ್ಗ ಸೇರಿ ಕೆಲ ಪ್ರದೇಶಗಳು ರಾಮಾಯಣಕ್ಕೆ ಸಾಕ್ಷಿಯಾಗಿವೆ.
ಮಹಾಭಾರತದಲ್ಲಿ ಕರ್ನಾಟಕ ಎಂಬ ಹೆಸರಿನ ಉಲ್ಲೇಖವಿದೆ. ಅದು ಕರ್ನಾಟಕದ ಮಹತ್ವವನ್ನು ವಿವರಿಸುತ್ತದೆ. ಮಹಾಭಾರತದ ಸಭಾ ಪರ್ವದಲ್ಲಿನ ಕರ್ಣಾಟ ಎಂಬ ಪದ ಬಳಕೆ ಜೊತೆಗೆ ಮತ್ಸ್ಯ ಪುರಾಣ, ಸ್ಕಂದ ಪುರಾಣ, ಮಾರ್ಕಂಡೇಯ ಪುರಾಣ, ನಾಗವರ್ಮನ ಬಾಣ ಕಾದಂಬರಿಯಲ್ಲಿ ಬರುತ್ತದೆ.
ಶಾಸನ – ಶಿಲಾಯುಗ :
ಹಲ್ಮಿಡಿಗಿಂತ ಹಳೆಯದಾದ ಶಾಸನ ಶಿಕಾರಿಪುರದ ತಾಳಗುಂದದಲ್ಲಿ ಸಿಕ್ಕಿದೆ.
ಚಿತ್ರದುರ್ಗದ ಬ್ರಹ್ಮಗಿರಿ, ಮಸ್ಕಿ ಹೊಸ ಶಿಲಾಯುಗಕ್ಕೆ, ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗವು ಕಬ್ಬಿಣ ಶಿಲಾಯುಗಕ್ಕೆ ಸಾಕ್ಷಿ.
ನೆಲದ ಸೊಬಗು :
ಕರುನಾಡು ಎಂದು ಕರೆಯಲಾಗುತ್ತದೆ. ಕಪ್ಪು ಮಣ್ಣಿನ ನಾಡು ಎಂದರ್ಥ. ಎತ್ತರದ ಭೂಮಿ ಎಂದು ಸಹ ಕರೆಯಲಾಗುತ್ತದೆ.
ರಾಜ್ಯವು ಕರಾವಳಿ, ಮಲೆನಾಡು, ಬಯಲುಸೀಮೆ ಎಂಬ ಮೂರು ಭೌಗೋಳಿಕ ಪ್ರದೇಶಗಳನ್ನು ಒಳಗೊಂಡಿದೆ.
ನಮ್ಮ ಹಿರಿಮೆ :
ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡಿಗರು ಡಾ. ಸರ್. ಎಂ. ವಿಶ್ವೇಶ್ವರಯ್ಯ, ಭೀಮಸೇನ ಜೋಶಿ, ಸಿ.ಎನ್.ಆರ್. ರಾವ್.
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ರಾಜ್ಯದ ಕನ್ನಡಿಗರು ಕುವೆಂಪು, ರಾಜಕುಮಾರ್, ಎಸ್. ನಿಜಲಿಂಗಪ್ಪ, ಸಿ.ಎನ್.ಆರ್.ರಾವ್, ಭೀಮಸೇನ ಜೋಷಿ, ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ, ದೇ. ಜವರೇಗೌಡ, ಡಿ. ವೀರೇಂದ್ರ ಹೆಗ್ಗಡೆ, ಪುನೀತ್ ರಾಜ್‍ಕುಮಾರ್.
ಸೇನೆಯಲ್ಲಿ ಪಂಜಾಬಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕೊಡಗಿನವರು. ಅತ್ಯುನ್ನತ ಹುದ್ದೆಗೆ ಹೋದವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ.
ಸಾಹಿತ್ಯ – ಶಿಕ್ಷಣ :
ಕರ್ನಾಟಕ ಸಂಗೀತ ಉಗಮ ರಾಜ್ಯದಲ್ಲೇ ಆಯಿತು. ಅದಕ್ಕೆ ಕಾರಣ ಪುರಂದರದಾಸರು. ಮುಂಡಿಗೆಗಳು, ತ್ರಿಪದಿಗಳು, ವಚನಗಳು ರಾಜ್ಯದ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ.
ರಾಜ್ಯದಲ್ಲಿ 26 ವಿಶ್ವವಿದ್ಯಾಲಯಗಳಿವೆ. ಅದರಲ್ಲೂ ಕನ್ನಡ, ಕೃಷಿ, ಮಹಿಳಾ, ಮುಕ್ತವಿಶ್ವವಿದ್ಯಾಲಯ, ಜಾನಪದ, ತೋಟಗಾರಿಕೆ, ಪಶುವೈದ್ಯಕೀಯ ಹೀಗೆ ವಿಶಿಷ್ಠ ವಿಶ್ವವಿದ್ಯಾಲಯಗಳು ಇರುವುದು ವಿಶೇಷ.
ಜ್ಞಾನಪೀಠ ಪ್ರಶಸ್ತಿ ಪಡೆದವರು ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ.
ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲಿಗರು ಕೆ.ವಿ. ಸುಬ್ಬಣ್ಣ.
ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಪಾತ್ರರಾದವರು ಡಾ. ಎಸ್.ಎಲ್. ಭೈರಪ್ಪ, ಡಾ. ಎಂ. ವೀರಪ್ಪ ಮೊಯ್ಲಿ.
ಮೈಸೂರು ವಿಶ್ವವಿದ್ಯಾಲಯದ ಜಾನಪದ
ವಸ್ತು ಸಂಗ್ರಹಾಲಯ ಏಷ್ಯಾದಲ್ಲಿಯೇ ಅತಿ ದೊಡ್ಡ ವಸ್ತು ಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.

(Visited 1 times, 1 visits today)
tumkur
Previous Articleಆರೋಗ್ಯ ಸಚಿವರ ರಾಜೀನಾಮೆಗೆ ಸಿಪಿಐಎಂ ಅಗ್ರಹ
Next Article ನೂತನ ನಿಯಮ : ವಿಮಾ ರಂಗಕ್ಕೆ ತೀವ್ರ ಮಾರಕ
News Desk Benkiyabale

Related Posts

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm ಇತರೆ ಸುದ್ಧಿಗಳು

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm ಇತರೆ ಸುದ್ಧಿಗಳು

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm
ಇತರೆ ಸುದ್ಧಿಗಳು

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm
ಇತರೆ ಸುದ್ಧಿಗಳು

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm
ಇತರೆ ಸುದ್ಧಿಗಳು

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm
ಇತರೆ ಸುದ್ಧಿಗಳು

ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು

September 20, 2025 2:45 pm
ಕಲೆ-ಸಾಹಿತ್ಯ

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

September 12, 2025 4:13 pm
Our Youtube Channel
Our Picks

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm

ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು

September 20, 2025 2:45 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

By News Desk BenkiyabaleSeptember 26, 2025 3:30 pm

ತುಮಕೂರು: ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿ ಗಣೇಶೋತ್ಸವ ಆಚರಿಸಿಕೊಂಡು ಹಿಂದೂ ಸಮಾಜ ಪೋಷಣೆ ಮಾಡುತ್ತಾ, ಧಾರ್ಮಿಕ…

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.