BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ
  • ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ
  • ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ
  • ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಆಚರಣೆ
  • ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ
  • ವಾಗ್ವಾದವಿಲ್ಲದೆ ೬೦ ವಿಷಯಗಳಿಗೆ ಕ್ಷಿಪ್ರ ಒಪ್ಪಿಗೆ
  • ಕೋರಗೆರೆ ಬಳಿ ಭೀಕರ ಅಪಘಾತ: ಸೇತುವೆಗೆ ಕಾರು ಡಿಕ್ಕಿ, ವ್ಯಕ್ತಿ ಸಜೀವ ದಹನ
  • ಕಲೆಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನ: ಶಾಸಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅತಿಕ್ರಮಣ ಹಾಗೂ ಅಕ್ರಮ ಖಾತೆಯ ಪ್ರಕರಣ ಬೆಳಕಿಗೆ
Trending

ಅತಿಕ್ರಮಣ ಹಾಗೂ ಅಕ್ರಮ ಖಾತೆಯ ಪ್ರಕರಣ ಬೆಳಕಿಗೆ

By News Desk BenkiyabaleUpdated:January 25, 2020 7:07 pm

ಚಿಕ್ಕನಾಯಕನಹಳ್ಳಿ:

      ಸರ್ಕಾರಿ ಜಮೀನು ಒತ್ತುವರಿ, ನಕಲಿ ದಾಖಲೆ ಸೃಷ್ಠಿಸಿ ಭೂಕಬಳಿಕೆ ಮಾಡಿರುವವರ ವಿರುದ್ದ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂಬ ಸುತ್ತೋಲೆ ಜ.20 ರಂದು ಹೊರಡಿಸಿರುವ ಬೆನ್ನಲ್ಲೆ ತಾಲ್ಲೂಕಿನಲ್ಲೊಂದು ಅತಿಕ್ರಮಣ ಹಾಗೂ ಅಕ್ರಮ ಖಾತೆಯ ಪ್ರಕರಣ ಬೆಳಕಿಗೆ ಬಂದಿದೆ.

      ತಾಲ್ಲೂಕಿನ ಕಂದಿಕೆರೆ ಹೋಬಳಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸಾಲ್ಕಟ್ಟೆ ಗ್ರಾಮದ ಹರಿಜನ ಕಾಲೋನಿಯ ಪಕ್ಕದಲ್ಲಿರುವ ಸ.ನಂ. 104 ರಲ್ಲಿ 1.35 ಎಕರೆ ಸರ್ಕಾರಿ ಜಮೀನಿದೆ. ಈಜಾಗದಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ ಹಾಗೂ ಅಂಗನವಾಡಿ ಕಟ್ಟಡವಿದೆ.

       ಉಳಿದ ಸರ್ಕಾರಿ ಜಾಗದಲ್ಲಿ ಕಾಲೋನಿಯ ಸುಮಾರು 60ಕ್ಕೂ ಹೆಚ್ಚಿನ ಮಂದಿ ಹುಲ್ಲಿನ ಬಣವೆ, ತಿಪ್ಪೆಗುಂಡಿ ಹಾಗೂ ಕೊಪ್ಪಲುಗಳನ್ನು ಮಾಡಿಕೊಂಡಿದ್ದರು. ಆದರೆ ಮಳೆಗಾಲದಲ್ಲಿ ಮಳೆ ಬಂದಾಗ ಚರಂಡಿ ನೀರು ಶಾಲೆಯೆಡೆಯೇ ಹರಿದು ಬರುತ್ತಿತ್ತು, ಜೊತೆಗೆ ಸುತ್ತಮುತ್ತಲಿನ ಕಸಕಡ್ಡಿಗಳು ಗಾಳಿ ಬಂದಾಗ ಶಾಲೆಯ ಒಳಕ್ಕೆ ಬಂದು ಬೀಳುತ್ತಿತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಡಕುಂಟಾಗುತ್ತಿತ್ತು. ಇದಲ್ಲದೆ ಶಾಲೆಗೆ ಆಟದ ಮೈದಾನ ಅವಶ್ಯಕತೆಯಿದ್ದ ಕಾರಣ ಕಾಲೋನಿಯರೆಲ್ಲರೂ ಸೇರಿ ಕೊಪ್ಪಲು, ತಿಪ್ಪೆಗಳನ್ನು ಹಾಕಿಕೊಂಡಿರುವ ಎಲ್ಲರೂ ತೆರವುಗೊಳಿಸಿ ಶಾಲಾ ಮೈದಾನಕ್ಕೆ ಬಿಟ್ಟುಕೊಡಬೇಕೆಂಬ ಎಲ್ಲರ ತೀರ್ಮಾನಕ್ಕೆ ಒಪ್ಪಿ ಎಲ್ಲರೂ ತೆರವುಗೊಳಿಸಿದರು. ಆದರೆ ಅದೇ ಕಾಲೋನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರು ಮತ್ತು ಅವರ ಭಾವಮೈದುನ ಇಬ್ಬರು ಮಾತ್ರ ತಮ್ಮ ಒತ್ತುವರಿ ತೆರವುಗೊಳಿಸದೆ ಹಾಗೆ ಉಳಿಸಿದ್ದರು.

      ಇದನ್ನು ಪ್ರಶ್ನಿಸಿದ ಊರಿನವಿವರಿಗೆ ಹಾಲಿ ಸದಸ್ಯರು ಧಮಿಕಿ ಹಾಕಿದ್ದಾರೆ.ತಮಗೆ ಸಚಿವರ ಬೆಂಬಲವಿದೆ ಎಂದು ಎಲ್ಲರನ್ನೂ ಹೆದರಿಸಿ ಕಳುಹಿಸಿದ್ದಾರೆ. ಹಾಲಿ ಸದಸ್ಯ ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 30*40 ಅಳತೆಯ ಎರಡು ಜಾಗಗಳನ್ನು ತಮ್ಮ ಹೆಸರಿಗೆ ಹಾಗೂ ತಮ್ಮ ಭಾವಮೈದುನನ ಹೆಸರಿಗೆ ಅಕ್ರಮಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

       ಈ ಬಗ್ಗೆ ಪಂಚಾಯಿತಿಗೆ , ತಹಸೀಲ್ದಾರ್‍ರಿಗೆ ಗ್ರಾಮಸ್ಥರೆಲ್ಲರೂ ಸಹಿ ಹಾಕಿ ದೂರು ನೀಡಿದಾಗ ಹೊಸದಾಗಿ ಸರ್ವೆ ಮಾಡಿ ಇದು ಸಂಪೂರ್ಣ ಸರಕಾರಿ ಜಾಗವೆಂದು ಧೃಡಪಟ್ಟಿದ್ದರೂ ಅಕ್ರಮ ಖಾತೆಯನ್ನು ರದ್ದುಗೊಳಿಸಿಲ್ಲ. ಸರ್ಕಾರಿ ಅಧಿಕಾರಿಗಳೂ ಅಕ್ರಮ ಖಾತೆಯಾಗಲು ಸಹಕರಿಸಿರುವ ಕಾರಣ ತಮ್ಮ ಹುಳುಕುಗಳೂಸಹ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕೆ ಜಾಣಮೌನವಹಿಸಿದ್ದಾರೆ. ಕಾನೂನು ಸಚಿವರ ಕ್ಷೇತ್ರದಲ್ಲಿಯೇ ಕಾನೂನು ಬಾಹಿರ ಕೃತ್ಯಗಳು ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾತ್ರಕ್ಕೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲು ಅವಕಾಶವಿದಯೇ ಎಂದು ಗ್ರಾಮಸ್ಥರು ಪ್ರಶ್ನಿಸಿ, ಇದು ಅಕ್ರಮವೇ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

      ಸರ್ಕಾರಿ ಜಾಗ ಶಾಲೆಯ ಆಟದ ಮೈದಾನಕ್ಕೆ ಅನುಕೂಲವಾಗಲಿ ಎಂದು ಎಲ್ಲರೂ ಒಮ್ಮತದಿಂದ ತಮ್ಮ ಒತ್ತುವರಿಯನ್ನು ತೆರವುಗೊಳಿಸಿದ್ದರೂ, ನನಗೆ ಅಧಿಕಾರಿಗಳ ಹಾಗೂ ಶಾಸಕರ ಬೆಂಬಲವಿದೆ ಎಂಬ ಕಾರಣಕ್ಕೆ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ತನ್ನ ಒತ್ತುವರಿ ತೆರವುಗೊಳಿಸದೆ ಅಕ್ರಮ ಖಾತೆ ಮಾಡಿಸಿಕೊಂಡು ಜಪ್ಪಯ್ಯ ಎಂದು ಪಟ್ಟುಹಿಡಿದು ಕೂತಿದ್ದಾರೆ. ಈ ಇಬ್ಬರ ಒತ್ತುವರಿ ಹಾಗೂ ಅಕ್ರಮ ಖಾತೆ ರದ್ದುಗೊಳಿಸಿ ತಪ್ಪಿತಸ್ಥರನ್ನು ಶಿಕ್ಷಿಸದಿದ್ದರೆ ನಾವುಸಹ ಉಳಿದ ಜಾಗದಲ್ಲಿ ಮತ್ತೆ ಕೊಟ್ಟಿಗೆ, ಕೊಪ್ಪಲುಗಳನ್ನು ಹಾಕಿಕೊಳ್ಳುತ್ತೇವೆ ಎಂದು ಅಲ್ಲಿನ ಕಾಲೋನಿ ನಿವಾಸಿಗಳು ಹೇಳಿಕೆಯಿತ್ತಿದ್ದಾರೆ.

      ಈಗ ಸರ್ಕಾರ ಹೊಸ ಸುತೋಲೆಯನ್ನು ಹೊರಡಿಸಿ ಎಲ್ಲಿ ಸರ್ಕಾರಿ ಜಮೀನು ಕಬಳಿಕೆಯಾಗಿದೆಯೂ ಅದೆಲ್ಲವನ್ನು ನಿಧ್ರ್ಯಾಕ್ಷಣ್ಯವಾಗಿ ಕ್ರಮ ಜರುಗಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ. ಈಗಲಾದರೂ ಸಾಲ್ಕ್ಟಟ್ಟೆ ಕಾಲೋನಿಯಲ್ಲಿ ನಡೆದಿರುವ ಭೂ ಅಕ್ರಮದ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಇಲ್ಲವೇ ಎಲ್ಲರೂ ಸೇರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಗ್ರಾಮಸ್ಥರು ಹೇಳಿಕೆಯಿತ್ತಿದ್ದಾರೆ.
 

(Visited 28 times, 1 visits today)
Previous Articleತಿಪಟೂರಿನ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸಂಘ ಜಿಲ್ಲೆಯಿಂದ ಆಯ್ಕೆ!
Next Article ತುಮಕೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಿಕ್ಷಣ ಸಚಿವರ ಭೇಟಿ
News Desk Benkiyabale

Related Posts

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

April 03, 2026 4:39 pm ತುಮಕೂರು ಜಿಲ್ಲಾ ಸುದ್ಧಿಗಳು

ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ

April 03, 2026 4:37 pm ತುಮಕೂರು ಜಿಲ್ಲಾ ಸುದ್ಧಿಗಳು

ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ

April 02, 2026 4:11 pm ತುಮಕೂರು ಜಿಲ್ಲಾ ಸುದ್ಧಿಗಳು
ತಾಜಾ ಸುದ್ಧಿಗಳು
ತುಮಕೂರು ಜಿಲ್ಲಾ ಸುದ್ಧಿಗಳು

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

April 03, 2026 4:39 pm
ತುಮಕೂರು ಜಿಲ್ಲಾ ಸುದ್ಧಿಗಳು

ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ

April 03, 2026 4:37 pm
ತುಮಕೂರು ಜಿಲ್ಲಾ ಸುದ್ಧಿಗಳು

ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ

April 02, 2026 4:11 pm
ತುಮಕೂರು ಜಿಲ್ಲಾ ಸುದ್ಧಿಗಳು

ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಆಚರಣೆ

April 02, 2026 3:59 pm
ಇತರೆ ಸುದ್ಧಿಗಳು

ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ

April 02, 2026 3:56 pm
ತುಮಕೂರು ಜಿಲ್ಲಾ ಸುದ್ಧಿಗಳು

ವಾಗ್ವಾದವಿಲ್ಲದೆ ೬೦ ವಿಷಯಗಳಿಗೆ ಕ್ಷಿಪ್ರ ಒಪ್ಪಿಗೆ

April 02, 2026 3:55 pm
Our Youtube Channel
Our Picks

ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ

April 02, 2026 3:56 pm

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

March 28, 2026 4:00 pm

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm

ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ

March 27, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು ಜಿಲ್ಲಾ ಸುದ್ಧಿಗಳು

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

By News Desk BenkiyabaleApril 03, 2026 4:39 pm

ತುಮಕೂರು: ಏಪ್ರಿಲ್ ೧ರಿಂದ ಆರಂಭವಾ ಗಿರುವ ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ಭಾಗ ವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ…

ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ

April 03, 2026 4:37 pm

ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ

April 02, 2026 4:11 pm

ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಆಚರಣೆ

April 02, 2026 3:59 pm
News by Date
April 2026
M T W T F S S
 12345
6789101112
13141516171819
20212223242526
27282930  
« Mar    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.