ತುಮಕೂರು:

      ತುರುವೇಕೆರೆ ತಾಲೂಕು ದಬ್ಬೆಘಟ್ಟ ಹೋಬಳಿ ಕೋಡಿಪುರ ಮಜರೆ ಮುದಿಗೆರೆ ಗ್ರಾಮದ ಶ್ರೀ ಕೋಡಿರಂಗನಾಥಸ್ವಾಮಿ ದೇವಾಲಯದಲ್ಲಿಂದು ವೈಕುಂಠ ಏಕಾದಶಿಯ 10ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

      ಪೂಜಾ ಕಾರ್ಯಕ್ರಮದ ಪ್ರಯುಕ್ತ ಸ್ವಾಮಿಗೆ ಅಂದು ಬೆಳಿಗ್ಗೆ 5 ಗಂಟೆಯಿಂದ ವಿಶೇಷ ಅಭಿಷೇಕ, ಅಲಂಕಾರ, ಹೋಮ, ಮಹಾ ಮಂಗಳಾರತಿ ಸೇವೆಗಳು ಜರುಗಿದವು.

      ನಂತರ 11 ಗಂಟೆಯಿಂದ ಭಕ್ತಾದಿಗಳು ಪ್ರಮುಖ ಬೀದಿಯಲ್ಲಿ ಸ್ವಾಮಿಯ ತೇರನ್ನು ಎಳೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ತೇರಿನೊಂದಿಗೆ ವಿವಿಧ ಜಾನಪದ ಕಲಾತಂಡಗಳು ಕೋಲಾಟ, ಗೊಂಬೆ ಕುಣಿತ, ಪ್ರದರ್ಶನ ನೀಡಿದವಲ್ಲದೆ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸಂಜೆ ಸುಗಮ ಸಂಗೀತ ಕಾರ್ಯಕ್ರಮ, ದೀಪೋತ್ಸವ, ಕಾಮಧೇನು ಉತ್ಸವ, ಮಹಾ ಪ್ರಸಾದ ಸೇವೆಗಳು ಜರುಗಿದವು.

(Visited 21 times, 1 visits today)