ತುಮಕೂರು:


ಲೈಂಗಿಕ ಅಲ್ಪಸಂಖ್ಯಾತರು,ಅAಗವಿಕಲರುಗಳನ್ನು ಒಳಗೊಂಡು ತುಮಕೂರು ಮಹಾನಗರಪಾಲಿಕೆ ಕೈಗೊಂಡಿರುವ ಈ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಎಲ್ಲಾ ಮಹಾನಗರಗಳಿಗೆ ವಿಸ್ತರಿಸಲು ಭಾರತ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಮಹಿಳಾ ಹೋರಾಟಗಾರತಿ ಹಾಗೂ ಭಾರತ ಚುನಾವಣಾ ಆಯೋಗದ ಸಲಹಾ ಸಮಿತಿ ಸದಸ್ಯೆ ಡಾ.ಅಕೈ ಪದ್ಮಶಾಲಿ ತಿಳಿಸಿದ್ದಾರೆ.
ನಗರದ ಟೌನಹಾಲ್ ಮುಂಭಾಗದಲ್ಲಿ ಭಾರತ್ ಚುನಾವಣಾ ಆಯೋಗದ ಸಲಹೆಯಂತೆ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸ್ವೀಪ್ ಕಮಿಟಿ ೧೩೨ನೇ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇದುವರೆಗೂ ಯಾರು ತಲುಪಲಾಗದ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ದ್ವನಿಯಿಲ್ಲದ ಜನರು ಭಾಗವಹಿಸುವಂತೆ ಮಾಡುವ ಮೂಲಕ ಸಂವಿಧಾನದ ಆಶಯ ಮತ್ತು ಸಂಸತ್ತಿನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಗ್ರಾಮೀಣ ಭಾಗಕ್ಕಿಂತ ನಗರದಲ್ಲಿ ಅತಿ ಕಡಿಮೆ ಮತದಾನವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.ವಿದ್ಯಾವಂತರು ಮತದಾನದಿಂದ ದೂರವಾಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಒಂದು ಹಬ್ಬ. ಇದರಲ್ಲಿ ನಾವೆಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕಿದೆ.ಆ ಮೂಲಕ ನಮ್ಮ ಜನಪ್ರತಿನಿಧಿಯನ್ನು ನಾವೇ ಆಯ್ಕೆ ಮಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದು ಡಾ.ಅಕೈ ಪದ್ಮಶಾಲಿ ತಿಳಿಸಿದರು.
ಕಾರ್ಯಕ್ರಮದ ರೂವಾರಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ತುಮಕೂರು ನಗರಪಾಲಿಕೆ ಆಯುಕ್ತರಾದ ಅಶ್ವಿಜ ಮಾತನಾಡಿ,ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ೧೦೦ರಷ್ಟು ಮತದಾನ ವಾಗಬೇಕು ಎಂಬ ಆಶಯದೊಂದಿಗೆ ಸ್ವೀಪ್ ಕಮಿಟಿಯ ಸಹಯೋಗದಲ್ಲಿ ಪಾಲಿಕೆವತಿಯಿಂದ ವಿಶೇಷವಾದ ಸ್ತಬ್ದ ಚಿತ್ರ ತಯಾರಿಸಿ ಸುಮಾರು ೧ ತಿಂಗಳಿಗೂ ಹೆಚ್ಚು ಕಾಲ ಇಡೀ ನಗರದ ೩೫ ವಾರ್ಡುಗಳಲ್ಲಿಯೂ ಸಂಚರಿಸಿ,ಜನರಿಗೆ ಮತದಾನದ ಅರಿವು ಮೂಡಿಸುವ ಕೆಲಸವನ್ನು ಮಾಡಲು ತೀರ್ಮಾನಿಸಲಾಗಿದೆ.ವಿಶೇಷವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ೭೦ಕ್ಕಿಂತ ಕಡಿಮೆ ಮತದಾನವಾಗಿರುವ ಬೂತ್‌ಗಳಲ್ಲಿ ಹೆಚ್ಚು ಸಮಯ ಓಡಾಡುವ ಮೂಲಕ ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
ಮತದಾನ ಜಾಗೃತಿಗಾಗಿ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಇತರೆ ಸ್ವಯಂ ಸೇವಕರ ಜೊತೆಗೆ, ನಗರಪಾಲಿಕೆ ಮನೆ ಮನೆ ಕಸ ಎತ್ತುವ ಆಟೋಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಮೊದಲ ಬಾರಿ ಮತದಾನ ಮಾಡುತ್ತಿರುವ ಸುಮಾರು ೪೮೦೦ಕ್ಕು ಹೆಚ್ಚು ಮತದಾರರನ್ನು ಭೇಟಿಯಾಗಿ ಒಂದೊAದು ಗಿಡಗಳನ್ನು ನೀಡಿ,ಅವುಗಳನ್ನು ತಾವು ಮತದಾನ ಮಾಡುವ ಕೇಂದ್ರದಲ್ಲಿ ನೆಟ್ಟು ತಾವು ಮತದಾನ ಮಾಡಿದ ನೆನಪಿನ ಜೊತೆಗೆ,ಪರಿಸರ ಕಾಳಜಿಯನ್ನು ಮರೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.ಇದಕ್ಕಾಗಿ ನಗರಪಾಲಿಕೆಯ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಆಯುಕ್ತರಾದ ಆಶ್ವೀಜ ನುಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ,ಉಪ ಆಯುಕ್ತರಾದ ಸೋಮಶೇಖರ್, ಗಿರೀಶ್, ನಾಗಭೂಷಣ್,ಕೌನ್ಸಿಲ್ ಕಾರ್ಯದರ್ಶಿ ನಜ್ಮಾ,ಪರಿಸರ ಇಂಜಿನಿಯರ್ ಪೂರ್ಣೀಮ, ಇಇ ವಿನಯ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್,ನÀಗರಪಾಲಿಕೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಂತರಾಜು ಕೌತುಮಾರನಹಳ್ಳಿ ಅವರ ನೇತೃತ್ವದ ಧವನ ಭೂಮಿಕೆ ಬಳಗದ ಕಲಾವಿದರು ಮತದಾನ ಕುರಿತ ಕಿರು ನಾಟಕ ಪ್ರದರ್ಶಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಬಿಜಿಎಸ್ ವೃತ್ತದಲ್ಲಿ ಅಳವಡಿಸಿರುವ ಮತದಾನ ಜಾಗೃತಿಯ ಎಲ್.ಇ.ಡಿ ಸ್ಕಿçÃನ್ ಉದ್ಘಾಟಿಸಿದರು.ಎನ್.ಸಿ.ಸಿ, ಕೆಡೆಟ್‌ಗಳು,ಅಂಗವಿಕಲರ ತ್ರಿಚಕ್ರವಾಹನ ಚಾಲಕರಿಗೆ ಅರಂಭವಾದ ಮತದಾನ ಜಾಗೃತಿ ಜಾಥಾ ಅಶೋಕ ರಸ್ತೆ, ಚರ್ಚ್ ಸರ್ಕಲ್, ಜಿಲ್ಲಾಧಿಕಾರಿಗಳ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಗುಂಚಿ ಚೌಕ, ಎಂ.ರಸ್ತೆಯ ಮೂಲಕ ಬಾಲಭವನ ತಲುಪಿ ಮುಕ್ತಾಯಗೊಂಡಿತ್ತು.

(Visited 1 times, 1 visits today)