ಮಧುಗಿರಿ :

      ಧಾರ್ಮಿಕ ಆಚರಣೆಗಳಿಂದ ಮಾತ್ರ ಸಮಾಜದ ಸರ್ವರನ್ನು ಒಗ್ಗೂಡಿಸಲು ಸಾಧ್ಯ ಎಂದು ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

      ತಾಲ್ಲೂಕಿನ ಹೊಸಕೆರೆ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಮತ್ತು ಶ್ರೀ ವೀರನಾಗಮ್ಮ ದೇವಾಲಯಗಳಲ್ಲಿ ಕಾರ್ತಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ದಾನ, ಧರ್ಮ, ಸತ್ಕಾರ್ಯ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನ ಸಾರ್ಥಕವಾಗಬೇಕಾದರೆ ಸರ್ವೇಜನ ಸುಖಿನೋ ಭವಂತು ಎನ್ನುವ ರೀತಿ ಎಲ್ಲರ ಹಿತ ಚಿಂತನೆ ಮಾಡಬೇಕು. ಭಕ್ತಿಯಲ್ಲಿ ಧಾರ್ಮಿಕತೆಯಲ್ಲಿ ಭೇದ ಭಾವ ಮಾಡಬಾರದು. ಸ್ವಾರ್ಥ ಅಳಿಸಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಮಾನವೀಯ ಮೌಲ್ಯಗಳು ಪ್ರಕಾಶಿಸುತ್ತವೆ ಎಂದರು.

      ಅರ್ಚಕ ನಾಗರಾಜು, ದೇವಾಲಯ ಸಮಿತಿ ಪದಾಧಿಕಾರಿಗಳಾದ ಎಚ್.ಬಿ.ವೀರಣ್ಣ, ಬೊಮ್ಮಲಿಂಗಯ್ಯ, ದಿನೇಶ್, ಕೃಷ್ಣ, ಬೊಮ್ಮಣ್ಣ, ವೀರಣ್ಣ, ರಾಮಕೃಷ್ಣ ಮುಂತಾದವರು ಇದ್ದರು.

(Visited 36 times, 1 visits today)