BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ವಿ. ಸೋಮಣ್ಣ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮನವರ ೨೦೧ನೇ ವಿಜಯೋತ್ಸವಕ್ಕೆ ಚಾಲನೆ
  • ಸಾಮಾಜಕ್ಕೆ ನೀನಾಸಂ ನಿಂದ ಸಂದೇಶ
  • ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ: ನಹೀದಾ ಜಮ್ ಜಮ್ ಹೇಳಿಕೆ
  • ವೃದ್ಧಿ ಕಾಮತ್ ರಂಗಪ್ರವೇಶ
  • ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಪ್ರತಿಷ್ಠಾಪನೆ
  • ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುತ್ತದೆ
  • ಹುಳಿಯಾರು ಬಂದ್‌ಗೆ ಕರೆ ಕೊಡಲು ನಿರ್ಧಾರ
  • ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾವು ಕಾಲೇಜು ಮುಚ್ಚುಸುವುದಿಲ್ಲ, ಉಳಿಸುತ್ತೇವೆ-ಸಚಿವ ಜೆ.ಸಿ.ಮಾಧುಸ್ವಾಮಿ
Trending

ನಾವು ಕಾಲೇಜು ಮುಚ್ಚುಸುವುದಿಲ್ಲ, ಉಳಿಸುತ್ತೇವೆ-ಸಚಿವ ಜೆ.ಸಿ.ಮಾಧುಸ್ವಾಮಿ

By News Desk BenkiyabaleUpdated:January 24, 2020 6:57 pm

ಚಿಕ್ಕನಾಯಕನಹಳ್ಳಿ :

       ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಬಾಬು ಜಗಜೀವನರಾಂಭವನ ನಿರ್ಮಾಣದ ಕುರಿತು ಸ್ಪಷ್ಟನೆ ನೀಡುತ್ತಾ ವಿವಾದಕ್ಕೆಡೆಯಾಗಿದ್ದ ಪ್ರಕರಣಕ್ಕೆ ತೆರೆ ಎಳೆದರು.

       ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಬಾಬು ಜಗಜೀವನರಾಂ ಭವನ ನಿರ್ಮಾಣ ಕಾಲೇಜು ಪರಿಸರದಲ್ಲಿ ಮಾಡಲೇಬೇಕೆಂಬ ಹಠ ನಮ್ಮದಲ್ಲ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 5 ಎಕೆರೆ ಆವರಣದಲ್ಲಿ ಈ ಹಿಂದೆ ಕಟ್ಟಿರುವ ಕಟ್ಟಡಗಳು ಅವೈಜ್ಞಾನಿಕವಾಗಿದೆ. ಸರಿಯಾದ ಪ್ಲಾನ್ ಇಲ್ಲದೆ ಕಟ್ಟಿದ ಕಟ್ಟಡಗಳಿಂದ ಕಾಲೇಜಿಗೆ ಸೇರಿದ ಜಾಗ ಉಪಯೋಗಕ್ಕೆ ಬಾರದಂತಾಗಿ, ಅತಿಕ್ರಮಣಕ್ಕೆ ದಾರಿಮಾಡಿದಂತಾಗಿದೆ. ಇದನ್ನು ತಪ್ಪಿಸಿ ಕಾಲೇಜಿಗೆ ಸೇರಿದ ಜಾಗದ ಒಂದು ಕೊನೆಯಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಭವ್ಯ ಜಗಜೀವನರಾಂ ಭವನಕ್ಕೆ ನಿರ್ಮಿಸಿ, ಅದಕ್ಕೆ ಬೇರೆ ಮಾರ್ಗವನ್ನೂ ಮಾಡಬಹುದೆಂಬ ಆಲೋಚನೆ ನಮ್ಮದಾಗಿತ್ತು ಅಷ್ಟೆ, ಇದರಿಂದ ಜಾಗ ಒತ್ತುವರಿ ಸಮಸ್ಯೆಗೆ ಪರಿಹಾರವಾಗಬಹುದೆಂಬ ನಮ್ಮ ಉದ್ದೇಶವಿತ್ತು, ಇದಕ್ಕಾಗಿ ಜಾಗ ನೋಡಿದ್ದನ್ನೆ ದೊಡ್ಡ ವಿವಾದವೆಬ್ಬಿಸಿ ಅಲ್ಲಿನ ಕೆಲ ಉಪನ್ಯಾಸಕರು ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆ ಮಾಡಿಸಿದ್ದಾರೆ. ಅವರ ಹೇಳಿಕೆಯಂತೆ ಈಗ ಸಮುದಾಯ ಭವನದಲ್ಲಿ ವರ್ಷಾನುಕಾಲ ಮದುವೆ, ಮುಂಜಿ ಮಾಡಿಕೊಂಡು, ಡ್ರಂ, ನಗಾರಿ, ಬ್ಯಾಂಡ್‍ಸೆಟ್ ಬಾರಿಸಿಕೊಂಡು ಕೂರುವುದಿಲ್ಲವೆಂದರು.

      ಕಾಲೇಜೊಳಗಿನ ಕೆಲವರು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿ, ವಿವಾದ ಸೃಷ್ಠಿಸಲಾಗಿದೆ. ಜನ ನಮ್ಮನ್ನು ಆಯ್ಕೆ ಮಾಡಿ ಜವಾಬ್ದಾರಿ ಹೊರೆಸಿದ್ದಾರೆ. ಯಾವುದನ್ನು ಮಾಡಬೇಕು, ಬೇಡ ಎನ್ನುವುದು ನಮಗೆ ಗೊತ್ತಿದೆ. ಸೋತಾಗ ನಾವು ಯಾವುದಕ್ಕೂ ಮೂಗು ತೂರಿಸದೆ ಸುಮ್ಮನಿರುತ್ತೇವೆ. ಆದರೆ ಈಗ ಯಾರು ಇದರಲ್ಲಿ ಭಾಗಿಗಳಾಗಿದ್ದಾರೋ ಅವರೆಲ್ಲರಿಗೂ ದಾರಿ ತೋರಿಸುತ್ತೇವೆ ಎಂದು ಖಡಕ್ಕಾಗಿ ತಿಳಿಸಿದರು.

       ಈಚೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಫಲಿತಾಂಶದ ಬಗ್ಗೆ ಕಾಲೇಜು ಅಭಿವೃದ್ದಿ ಸಭೆಯಲ್ಲಿ ಮಾಹಿತಿ ಕೇಳಿದಾಗ ಪ್ರಾಂಶುಪಾಲರಾದಿಯಾಗಿ ಯಾರಿಗೂ ಮಾಹಿತಿಯಿರಲಿಲ್ಲ. ಪಟ್ಟುಹಿಡಿದು ಸಮಗ್ರ ಫಲಿತಾಂಶದ ಮಾಹಿತಿ ತರಿಸಿದಾಗ ಕಳೆದ ಸಾಲಿನಲ್ಲಿ ಬಿಕಾಂ ನಲ್ಲಿ ಕೇವಲ 6 ಮಂದಿ ತೇರ್ಗಡೆಯಾಗಿರುವ ಸತ್ಯ ಹೊರಬಿದ್ದಿತು. ಇಷ್ಟೊಂದು ಕಳಪೆಸಾಧನೆ ಕಂಡು ನನಗೆ ನಿಜಕ್ಕೂ ಸಿಟ್ಟುಬಂದಿದ್ದೂ ನಿಜ, ಅವರಿಗೆ ತರಾಟೆ ತೆಗೆದುಕೊಂಡಿದ್ದೂ ಸತ್ಯ. ಪ್ರತಿಯೊಬ್ಬ ಉಪನ್ಯಾಸಕರ ಸಬ್ಜೆಕ್ಟ್‍ವೈಸ್ ಫಲಿತಾಂಶದ ಮಾಹಿತಿ ಪಡೆಯುತ್ತಿದ್ದಂತೆ ಎಲ್ಲರ ಕಳಪೆ ಸಾಧನೆ ಬಟಬಯಲಾಯಿತು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಆಸೆಯಿಂದ ಸರ್ಕಾರಿ ಕಾಲೇಜಿಗೆ ಬರುತ್ತಾರೆ. ಆದರೆ ಇಲ್ಲಿನ ಸಿಬ್ಬಂದಿ ತಮಗೆ ಬೇಕಾದ ಕೋರ್ಸಗಳನ್ನುಳಿಸಿಕೊಂಡು ಬಿಬಿಎಂ, ಮೇಜರ್ ಇಂಗ್ಲೀಷ್, ಇನ್ನೂ ಹಲವು ಕೋರ್ಸ್‍ಗಳನ್ನು ಕಾಲೇಜು ಸಮಿತಿಯ ಗಮನಕ್ಕೆ ತಾರದೆ ಮುಚ್ಚಿದ್ದಾರೆ. ಬಿಕಾಂನಿಂದಾಗಿ ಕಾಲೇಜು ಉಳಿದಿದೆ, ಈಗಿನ ಫಲಿತಾಂಶ ಮುಂದುವರೆದರೆ ಕಾಲೇಜು ಮುಚ್ಚಬೇಕಾಗುತ್ತದೆ. ನಾವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ವರ್ಗಾವಣೆ ನಿಬಂಧನೆಗಳು ಬದಲಾಗಿವೆ ಪ್ರಾಂಶುಪಾಲರಾದಿಯಾಗಿ ಸ್ಟಾಫ್ ಸಮೇತ ಎಲ್ಲರನ್ನೂ ಕಳಿಸುತ್ತೇವೆ ಕಾಲೇಜನ್ನು ಉಳಿಸುತ್ತೇವೆ ಎಂದರು.

(Visited 14 times, 1 visits today)
Previous Articleಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಕಾನೂನು ಅತ್ಯವಶ್ಯಕ – ನ್ಯಾ||ರಾಘವೇಂದ್ರ ಶೆಟ್ಟಿಗಾರ್
Next Article ತಿಪಟೂರಿನ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸಂಘ ಜಿಲ್ಲೆಯಿಂದ ಆಯ್ಕೆ!
News Desk Benkiyabale

Related Posts

ಹುಳಿಯಾರು ಬಂದ್‌ಗೆ ಕರೆ ಕೊಡಲು ನಿರ್ಧಾರ

October 18, 2025 1:53 pm ತುಮಕೂರು

ಜಿಲ್ಲೆಯಲ್ಲಿ ನೀರಿನ ಜೈವಿಕ ಪರೀಕ್ಷೆ

October 17, 2025 12:04 pm ತುಮಕೂರು

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

October 16, 2025 1:03 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಚಿವ ವಿ. ಸೋಮಣ್ಣ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮನವರ ೨೦೧ನೇ ವಿಜಯೋತ್ಸವಕ್ಕೆ ಚಾಲನೆ

October 23, 2025 4:42 pm
ಇತರೆ ಸುದ್ಧಿಗಳು

ಸಾಮಾಜಕ್ಕೆ ನೀನಾಸಂ ನಿಂದ ಸಂದೇಶ

October 23, 2025 4:41 pm
ಇತರೆ ಸುದ್ಧಿಗಳು

ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ: ನಹೀದಾ ಜಮ್ ಜಮ್ ಹೇಳಿಕೆ

October 23, 2025 4:39 pm
ಇತರೆ ಸುದ್ಧಿಗಳು

ವೃದ್ಧಿ ಕಾಮತ್ ರಂಗಪ್ರವೇಶ

October 23, 2025 4:37 pm
ಇತರೆ ಸುದ್ಧಿಗಳು

ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಪ್ರತಿಷ್ಠಾಪನೆ

October 23, 2025 2:46 pm
ಇತರೆ ಸುದ್ಧಿಗಳು

ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುತ್ತದೆ

October 18, 2025 1:54 pm
Our Youtube Channel
Our Picks

ಸಚಿವ ವಿ. ಸೋಮಣ್ಣ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮನವರ ೨೦೧ನೇ ವಿಜಯೋತ್ಸವಕ್ಕೆ ಚಾಲನೆ

October 23, 2025 4:42 pm

ಸಾಮಾಜಕ್ಕೆ ನೀನಾಸಂ ನಿಂದ ಸಂದೇಶ

October 23, 2025 4:41 pm

ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ: ನಹೀದಾ ಜಮ್ ಜಮ್ ಹೇಳಿಕೆ

October 23, 2025 4:39 pm

ವೃದ್ಧಿ ಕಾಮತ್ ರಂಗಪ್ರವೇಶ

October 23, 2025 4:37 pm

ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಪ್ರತಿಷ್ಠಾಪನೆ

October 23, 2025 2:46 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಚಿವ ವಿ. ಸೋಮಣ್ಣ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮನವರ ೨೦೧ನೇ ವಿಜಯೋತ್ಸವಕ್ಕೆ ಚಾಲನೆ

By News Desk BenkiyabaleOctober 23, 2025 4:42 pm

ತುಮಕೂರು/ನವದೆಹಲಿ: ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ…

ಸಾಮಾಜಕ್ಕೆ ನೀನಾಸಂ ನಿಂದ ಸಂದೇಶ

October 23, 2025 4:41 pm

ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ: ನಹೀದಾ ಜಮ್ ಜಮ್ ಹೇಳಿಕೆ

October 23, 2025 4:39 pm

ವೃದ್ಧಿ ಕಾಮತ್ ರಂಗಪ್ರವೇಶ

October 23, 2025 4:37 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.