BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವ
  • ಲಂಚ ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಲೋಕಾಯಕ್ತರ ಬಲೆಗೆ
  • ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ
  • ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ
  • ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ
  • ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ
  • ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ
  • ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾವೂ ರೈತರು ಎಂದು ಹೇಳಿಕೊಳ್ಳಬೇಕು – ಇಲ್ಲದಿದ್ದರೆ ಉಳಿಗಾಲವಿಲ್ಲ :  ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ
Trending

ನಾವೂ ರೈತರು ಎಂದು ಹೇಳಿಕೊಳ್ಳಬೇಕು – ಇಲ್ಲದಿದ್ದರೆ ಉಳಿಗಾಲವಿಲ್ಲ :  ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ

By News Desk BenkiyabaleUpdated:December 08, 2018 4:42 pm

ತುಮಕೂರು:

       ದೇಶದಲ್ಲಿರುವ ಎಲ್ಲ ವರ್ಗದ ಜನರೂ ನಾವೆಲ್ಲ ರೈತರು ಎಂದು ಹೇಳಿಕೊಳ್ಳಬೇಕಾದ ಅಗತ್ಯ ಒದಗಿಬಂದಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲವಾಗಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

      ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದ ಮಾಕಂ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 8ರಂದು ನಡೆದ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ವಿಷಯ ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ರೈತ ವರ್ಗವನ್ನು ವಿಸ್ತರಿಸಬೇಕಾಗಿದೆ. ರೈತರು ಎಂಬ ಪದದ ವ್ಯಾಪ್ತಿಯಲ್ಲಿ ಭೂರಹಿತರೈತರು, ಗೇಣಿರೈತರು, ಭೂಮಿ ಇರುವ ರೈತರು, ರೈತ ಮಹಿಳೆಯರು, ಆದಿವಾಸಿ ರೈತರು, ಕೂಲಿ ಮಾಡುವ ರೈತರು ಹೀಗೆ ರೈತರ ನೆಲೆಯನ್ನು ವಿಸ್ತರಿಸುತ್ತ ಹೋಗಬೇಕು. ಆಮೂಲಕ ರೈತರಿಗೆ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ತಿಳಿಸಿದರು.

      ವಿದ್ಯಾರ್ಥಿಗಳು ಬರಹಗಾರರು, ವೈದ್ಯರು ಸಾಹಿತಿಗಳ ಎದುರು ಹಲವಾರು ಸವಾಲುಗಳು ಇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅಭಿವ್ಯಕ್ತಿಗೆ ಆತಂಕ ಸೃಷ್ಟಿಯಾಗಿದೆ. ಲೇಖಕರನ್ನು ಹತ್ಯೆ ಮಾಡುವಂತಹ ಕೆಲಸ ನಡೆದಿದೆ. ದಾಬೋಲ್ಕರ್, ಪನ್ಸಾರೆ, ಎಂಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ದುಷ್ಟಶಕ್ತಿಗಳು ಹತ್ಯೆಮಾಡಿವೆ. ಸ್ವಚ್ಛಂದವಾಗಿ ಅಭಿವ್ಯಕ್ತಿಸಲು ಸವಾಲು ಎದುರಾಗಿದೆ ಎಂದರು.

      ಕಾರ್ಪೋರೇಟ್ ಸಂಸ್ಥೆಗಳ ಬದಲು ಲಾಭರಹಿತ ಸಂಸ್ಥೆಗಳನ್ನು ಬೆಂಬಲಿಸಬೇಕಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಒಡೆತನ ಕೆಲವೇ ವ್ಯಕ್ತಿಗಳಿಗೆ ಸೇರಿದೆ. ಹಾಗಾಗಿ ನಾವು ಕಾರ್ಪೋರೇಟ್ ಅಲ್ಲದ ಸಂಸ್ಥೆಗಳನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಅಭಿಪ್ರಾಯಪಟ್ಟರು.

      ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದೊದಗಿದೆ. ಸ್ವಾತಂತ್ರ್ಯ ನಮ್ಮ ಕೈಯಲ್ಲಿ ಇಲ್ಲವಾಗಿದೆ. ಖಾಸಗೀತನವು ಇಲ್ಲವಾಗಿದೆ. ಎಲ್ಲವೂ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದೆ. ಆಧಾರ್ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕಾರ್ಫೋರೇಟ್ ಶಕ್ತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಹಿಡಿತಕ್ಕೆ ತೆಗೆದುಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.Displaying DSC_9997.JPG

      ಮಹತ್ವದ ಮಾಧ್ಯಮ ಮತ್ತು ಒಳ್ಳೆಯ ಮಾಧ್ಯಮವೆಂದು ಎರಡು ಬಗೆಗಳಿವೆ. ಜನರ ಕಷ್ಟ ಸುಖಗಳನ್ನು, ಜನರ ನಾಡಿ ಮಿಡಿತವನ್ನು ಪ್ರತಿನಿಧಿಸುವುದೇ ಈ ಮಾಧ್ಯಮದ ಕೆಲಸವಾಗಿದೆ. ಇದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಉದಾಹರಣೆಯಾಗಿದ್ದಾರೆ ಎಂದು ವಿವರಿಸಿದರು. ಒಳ್ಳೆಯ ಮಾಧ್ಯಮ ಸಮಾಜದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ. ದೌರ್ಬಲ್ಯಗಳನ್ನು ಜನರ ಮುಂದಿಡುತ್ತದೆ. ಆಗ ಜನರ ಸಮಸ್ಯೆಗಳೇನೆಂಬುದು ಜನರಿಗೆ ತಿಳಿಯುತ್ತದೆ ಎಂದರು.

      ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ನಾಡೋಜ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ ಎಲ್ಲವೂ ಉದ್ಯಮವಾಗಿ ಪರಿವರ್ತನೆಯಾಗಿದೆ. ಚಲನಚಿತ್ರೋದ್ಯಮ, ಪತ್ರಿಕೋದ್ಯಮ, ಪುಸ್ತಕೋದ್ಯಮವಾಗಿರುವುದರಿಂದ ಸಮಸ್ಯೆ ತಲೆದೋರಿದೆ ಎಂದರು.

      ಬಂಡಾಯ ಎಂದರೆ ವಿರೋಧವಲ್ಲ. ಬಂಡಾಯವೆಂದರೆ ಪ್ರತಿಭಟನೆಯಲ್ಲ. ಆಡಂಬರವೂ ಅಲ್ಲ. ಬಂಡಾಯವೆಂದರೆ ಬದಲಾವಣೆ. ಸಮಾಜದಲ್ಲಿ ಬದಲಾವಣೆಯನ್ನು ಬಯಸುವುದೇ ಬಂಡಾಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಜನಪರ ಚಿಂತಕ ಕೆ.ದೊರೈರಾಜ್ ಮತ್ತು ಲೇಖಕಿ ಬಾ.ಹ.ರಮಾಕುಮಾರಿ ಹಾಜರಿದ್ದರು. ಜಿಲ್ಲಾ ಸಂಚಾಲಕ ಡಾ.ಓ.ನಾಗರಾಜ್ ಸ್ವಾಗತಿಸಿ, ಡಾ.ನಾಗಭೂಷನ್ ಬಗ್ಗನಡು ನಿರೂಪಿಸಿದರು. ಪ್ರಾಧ್ಯಾಪಕ ತಿಪ್ಪೇಸ್ವಾಮಿ ವಂದಿಸಿದರು.

Displaying DSC_9979.JPG

      ಮೊದಲ ಗೋಷ್ಠಿ ನಡೆಯಲಿಯಲ್ಲಿ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಹೊಣೆ ವಿಷಯ ಕುರಿತು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಉಪನ್ಯಾಸ ನೀಡಿ ಮಾತನಾಡಿ ಮಾಧ್ಯಮ ಸಂಸ್ಥೆಗಳು ಬೇರೆ ಬೇರೆ ಹೆಸರುಗಳನ್ನು ಹೊಂದಿದ್ದರೂ ಅವೆಲ್ಲವೂ ಒಬ್ಬ ವ್ಯಕ್ತಿಯ ಒಡತನಕ್ಕೆ ಸೇರಿವೆ. ಕಾರ್ಪೋರೇಟ್ ಸಂಸ್ಥೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯೇ ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲು ಹೂಡಿಕೆ ಮಾಡಿದ್ದಾರೆ. ಇದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.

      ದೀಪಿಕಾ ಪಡುಕೋಣೆ ಸೌಂದರ್ಯ, ಅವರ ಊಟ, ಉಡುಪು ಸುದ್ದಿಯಾಗುತ್ತದೆ. ರೈತರ ಸಮಸ್ಯೆಗಳ ಕುರಿತು ಸುದ್ದಿಯಾಗುವುದಿಲ್ಲ. ಟಿಆರ್‍ಪಿ ಹೆಸರಲ್ಲಿ ಜನರಿಗೆ ಬೇಡವಾದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದನ್ನು ಯಾಕೆ ಪ್ರಸಾರ ಮಾಡುತ್ತಿದ್ದೀರಿ,. ಇದರಿಂದ ಯಾರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಪ್ರತಿದಿನ ಬೆಳಗ್ಗೆ ಯಾವ ಟಿವಿಗಳನ್ನು ನೋಡಿದರೂ ಜ್ಯೋತಿಷ್ಯದ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಬಿಗ್‍ಬಾಸ್ ಪ್ರಸಾರವಾಗುತ್ತದೆ. ಇದನ್ನು ಜನರು ಅನಿವಾರ್ಯವಾಗಿ ನೋಡಬೇಕಾಗಿದೆ. ಇದೆಲ್ಲವೂ ಟಿಆರ್‍ಪಿ ಮತ್ತು ಹಣ ಮಾಡುವ ಉದ್ದೇಶವಾಗಿದೆ ಎಂದರು.

      ಯಾವುದೇ ಸಂಸ್ಥೆಗಳನ್ನು ಆರಂಭಿಸಬೇಕಾದರೆ ಹಣ ಮುಖ್ಯವಾಗಿದೆ. ಹಣವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತು.ಆದರೆ ನಾವು ಯಾರ ಪರವಾಗಿ ಸುದ್ದಿಗಳನ್ನು ಕೊಡುತ್ತಿದ್ದೇವೆ ಎಂಬ ಬಗ್ಗೆಯೂ ಆಲೋಚನೆ ಮಾಡಬೇಕಾಗಿದೆ. ಪತ್ರಕರ್ತರು ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸುವ ಜೊತೆಗೆ ಪತ್ರಕರ್ತರು ಸುದ್ದಿ ವಾಸನೆ ಹಿಡಿಯದಂತಾಗಿದ್ದಾರೆ. ಯಾರೂ ನಿಜವಾದ ಸುದ್ದಿ ಯಾವುದು ಎಂಬ ವಾಸನೆಯೇ ಪತ್ರಕರ್ತರಿಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ಇದೆ ಎಂದು ವಿಷಾದಿಸಿದರು.

      ಮಾಧ್ಯಮಲೋಕ ರಾತ್ರೋರಾತ್ರಿ ಬದಲಾವಣೆಯಾಗಿದೆ. ಕ್ರಾಂತಿಕಾರಕ ಬದಲಾವಣೆಯಿಂದ ಪತ್ರಕರ್ತರು ಸವಾಲು ಎದುರಿಸುವಂತೆ ಆಗಿದೆ. ಕಾಪೋರೇಟ್ ಸಂಸ್ಕøತಿಯಿಂದ ನಿಜವಾದ ಸುದ್ದಿಗಳಿಗೆ ಜಾಗವೇ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳು ಒಳಪುಟಗಳ ಯಾವುದೋ ಮೂಲೆಯಲ್ಲಿ ಬರುತ್ತಿವೆ. ಮಾಧ್ಯಮ ಸಂಸ್ಥೆಗಳು ಮುಖಪುಟದಲ್ಲಿ ಜಾಹಿರಾತು ಪ್ರಕಟಿಸುತ್ತಿವೆ ಎಂದು ಮಾಧ್ಯಮಲೋಕದ ವಿವರ ನೀಡಿದರು.

     ಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಬಿ.ರಾಜಶೇಖರಮೂರ್ತಿ ಮತ್ತು ಸಾಹಿತಿ ಮಲ್ಲಿಕಾರ್ಜುನ ಮಾನ್ಪಡೆ ಸಹಸ್ಪಂದನ ವ್ಯಕ್ತಪಡಿಸಿದರು. ಉಪನ್ಯಾಶಕಿ ಶ್ವೇತಾರಾಣಿ ಸ್ವಾಗತಿಸಿ ನಿರೂಪಿಸಿದರು. ಅಮರ್ ಹಫೀಜ್ ವಂದಿಸಿದರು.

(Visited 30 times, 1 visits today)
Previous Articleಕನ್ನಡದಂತಹ ಸುಂದರ ಭಾಷೆ ಮತ್ತೊಂದಿಲ್ಲ – ನಾಡೋಜ ಪಾಟೀಲಪುಟ್ಟಪ್ಪ ನುಡಿ
Next Article ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಬ್ರಹ್ಮ ರಥೋತ್ಸವ ಕಾರ್ಯಕ್ರಮ
News Desk Benkiyabale

Related Posts

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವ

December 12, 2025 3:51 pm
ಇತರೆ ಸುದ್ಧಿಗಳು

ಲಂಚ ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಲೋಕಾಯಕ್ತರ ಬಲೆಗೆ

December 12, 2025 3:50 pm
ತುಮಕೂರು

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm
ಇತರೆ ಸುದ್ಧಿಗಳು

ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ

December 12, 2025 3:30 pm
ಇತರೆ ಸುದ್ಧಿಗಳು

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

December 12, 2025 3:29 pm
ಇತರೆ ಸುದ್ಧಿಗಳು

ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ

December 12, 2025 3:27 pm
Our Youtube Channel
Our Picks

ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವ

December 12, 2025 3:51 pm

ಲಂಚ ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಲೋಕಾಯಕ್ತರ ಬಲೆಗೆ

December 12, 2025 3:50 pm

ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ

December 12, 2025 3:30 pm

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

December 12, 2025 3:29 pm

ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ

December 12, 2025 3:27 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವ

By News Desk BenkiyabaleDecember 12, 2025 3:51 pm

ಪಾವಗಡ: ಪಟ್ಟಣದ ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಮಾತಾ ಶಾರದಾದೇವಿ ಜಯಂತ್ಯೋತ್ಸವದ ಅಂಗವಾಗಿ ಏರ್ಪ ಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಸಿದ್ದ ನಂಜನಗೂಡು…

ಲಂಚ ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಲೋಕಾಯಕ್ತರ ಬಲೆಗೆ

December 12, 2025 3:50 pm

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm

ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ

December 12, 2025 3:30 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.