ಕೊರಟಗೆರೆ:
        ಚಿರತೆಯೊಂದು ದಾಳಿ ಮಾಡಿ  ಹೊಲದಲ್ಲಿ  ಮೇಯುತ್ತಿದ್ದ ಮೇಕೆಯನ್ನು  ಕೊಂದು ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
        ತಾಲೂಕಿನ ಕೋಳಾಲ ಸಮೀಪದ ಗೋಪೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ರೈತ ವಸಂತಕುಮಾರ್ ಎಂಬುವರ ಜಮೀನಿನಲ್ಲಿ ಮೇಕೆ ಮೇವು ತಿನ್ನುವಾಗ ದಿಡೀರನೆ ದಾಳಿ ನಡೆಸಿದ ಚಿರತೆ ಮೇಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಸಾಯಿಸಿದೆ. ಇದನ್ನು ಕಂಡ ರೈತರು ಬಯದಿಂದಲೇ ಕೂಗಾಟ ನಡೆಸಿ ಚಿರತೆಯನ್ನು ಅಟ್ಟಿದ್ದಾರೆ.
      ಇದರಿಂದ ಗಾಬರಿಗೊಂಡಿರುವ ರೈತರು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆ ಹಾವಳಿಯನ್ನು ತಪ್ಪಿಸುವಂತೆ ಒತ್ತಾಯಿಸಿದ್ದು ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
(Visited 169 times, 1 visits today)