ತುಮಕೂರು:

      ಸಿದ್ದಗಂಗಾ ಶ್ರೀಗಳಿಗೆ ಉಸಿರಾಟದ ಸಮಸ್ಯೆ ಇದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.

      ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಜಂಟಿಯಾಗಿ ಶ್ರೀಗಳ ತಪಾಸಣೆ ಮಾಡಿ, ಮಾಹಿತಿ ಪಡೆದಿದ್ದೇವೆ ಎಂದರು.

      ಶ್ರೀಗಳ ಹೃದಯಬಡಿತ, ರಕ್ತದೊತ್ತಡ ಎಲ್ಲವೂ ಕೂಡ ಸಹಜವಾಗಿದೆ. ಶ್ರೀಗಳ ಶಕ್ತಿ ಕ್ಷೀಣಿಸಿದೆ. ಸ್ವತಹ ಉಸಿರಾಟದ ಶಕ್ತಿಯ ಕೊರತೆ ಇದೆ. ಆದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರೆಸಿದ್ದೇವೆ ಎಂದು ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.

(Visited 40 times, 1 visits today)