ಶಿರಾ


ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಕೆಂಚಗಾನಹಳ್ಳಿ ಗ್ರಾಮದ ಸ.ಕಿ.ಪ್ರಾ.ಪಾಠಶಾಲೆಯಲ್ಲಿ ಸೋಮವಾರದಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಶಾಲೆಯ ಸಹಶಿಕ್ಷಕಿ ಹಾಗೂ ಕವಯಿತ್ರಿ ಅಶ್ವಿನಿ ಡಿ.ಎನ್. ಮಾತಾನಾಡಿ ಶಾಲೆಗಳಲ್ಲಿ ಹಬ್ಬಗಳನ್ನು ಆಚರಿಸುವ ಮೂಲಕ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಹೇಳಬೇಕು ಹಾಗೆಯೇ ಪ್ರತಿದಿನವೂ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸುವುದರಿಂದ ಹಾಗೂ ವಿಶೇಷ ಚಟುವಟಿಕೆಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ. ಟಿ.ವೈ, ಅಡುಗೆ ಸಿಬ್ಬಂದಿ ಭವ್ಯ ಉಪಸ್ಥಿತರಿದ್ದರು.

(Visited 9 times, 1 visits today)