BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ
  • ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ
  • ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ
  • ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ
  • ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ
  • ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ
  • ದಾಖಲೆ ಸಮೇತ ಗ್ರಾಮಸ್ಥರ ಆರೋಪ
  • ಬೆಳಗಾವಿಯಲ್ಲಿ ತುಮಕೂರು ಗ್ರಾಮಾಂತರ ಅಭಿವೃದ್ಧಿಯ ಕುರಿತು ಸಿಎಂ ಗಮನ ಸೆಳೆದ ಶಾಸಕ ಸುರೇಶ್ ಗೌಡ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದೇವಾಲಯಗಳ ಆವರಣದಲ್ಲಿ ದರ್ಗಾ ನಿರ್ಮಾಣಕ್ಕೆ ಸಜ್ಜು : ಗ್ರಾಮಸ್ಥರಿಂದ ವಿರೋಧ
ಇತರೆ ಸುದ್ಧಿಗಳು

ದೇವಾಲಯಗಳ ಆವರಣದಲ್ಲಿ ದರ್ಗಾ ನಿರ್ಮಾಣಕ್ಕೆ ಸಜ್ಜು : ಗ್ರಾಮಸ್ಥರಿಂದ ವಿರೋಧ

By News Desk BenkiyabaleUpdated:September 08, 2022 5:30 pm

ತುರುವೇಕೆರೆ :


ಹಿಂದೂ ದೇವಾಲಯಗಳ ಸಮುಚ್ಚಯದ ಆವರಣದಲ್ಲಿ ಕೆಲ ಮುಸ್ಲಿಂ ಯುವಕರು ದರ್ಗಾ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ವಿರೊಧಿಸುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ತುರುವೇಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ತಾವರೆಕೆರೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಚೌಡೇಶ್ವರಿದೇವಿ, ಚಿಕ್ಕಮ್ಮದೇವಿ, ಆಂಜನೇಯಸ್ವಾಮಿ, ತುಳಸಮ್ಮ ದೇವಿಯ ಹಿಂದೂ ದೇವಾಲಯಗಳಿದ್ದು, ದೇವಾಲಯ ಆವರಣದಲ್ಲಿನ ಖಾಲಿ ಜಾಗದಲ್ಲಿ ರಾತ್ರೊ ರಾತ್ರಿ ದರ್ಗಾ ನಿರ್ಮಿಸಲು ಮಸ್ಲಿಂ ಯುವಕರು ಮುಂದಾದಾಗ ಇದನ್ನು ಕಂಡ ಗ್ರಾಮಸ್ಥರು ಯಾವದೇ ಕಾರಣಕ್ಕೂ ದೇವಗಳ ಜಾಗದಲ್ಲಿ ದರ್ಗಾ ನಿರ್ಮಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದನ್ನು ವಿರೋಧಿಸಿದ ಮುಸ್ಲಿಂ ಯುವಕರು ನಾವು ದರ್ಗಾ ನಿರ್ಮಿಸಿಯೇ ತೀರುತ್ತೇವೆಂದು ಮುಂದಾದಾಗ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಗ್ರಾಮದ ಮುಖಂಡ ಬೋರೆಗೌಡ ಮಾತನಾಡಿ ಬಹುಸಂಖ್ಯಾತ ಹಿಂದುಗಳ ಮೇಲೇಯೇ ದಬ್ಬಾಳಿಕೆಯ ಪ್ರವೃತ್ತಿ ಮುಂದುವರೆಸುತ್ತಿರುವ ಮುಸ್ಲಿಂ ಯುವಕರ ದೌರ್ಜನ್ಯ ಖಂಡನೀಯ ಪುರಾತನ ಕಾಲದಿಂದಲೂ ಇಲ್ಲಿನ ಹಿಂದೂ ದೇವಾಲಯಗಳಿವೆ ಹಾಗೂ ವರ್ಷಕ್ಕೊಮ್ಮೆ ಅದ್ದೂರಿ ಜಾತ್ರ ಮಹೋತ್ಸವವನ್ನು ಸುತ್ತಲಿನ ಹತ್ತು ಹಳ್ಳಿ ಗ್ರಾಮಸ್ಥರು ಎಲ್ಲರೂ ಸೇರಿ ಮಾಡುತ್ತೇವೆ ಆದರೆ ಅರಳೀಕಟ್ಟೆ ಹಾಗೂ ನವಗ್ರಹ ದೇವಾಲಯದ ಮದ್ಯೆ ಏಕಾ ಏಕಿ ಗ್ರಾಮಸ್ಥರಿಗೆ ಗೊತ್ತಿಲ್ಲದೆ ರಾತ್ರೊ ರಾತ್ರಿ ದರ್ಗಾ ನಿರ್ಮಿಸಲು ಮುಂದಾಗಿರುವ ಮುಸ್ಲಿಂ ಯುವಕರಾದ ಫೈರೋಜ್, ಇಮ್ರಾನ್, ಫಾರೂಕ್, ನಡೆ ಖಂಡನೀಯವಾಗಿದ್ದೂ, ಕೂಡಲೇ ತಾಲ್ಲೂಕು ಆಡಳಿತ ಮದ್ಯಪ್ರವೇಶಿಸಿ ದರ್ಗಾ ನಿರ್ಮಿಸಲು ಅನುಮತಿ ನೀಡಬಾರದು ಹಾಗೂ ಹಿಂದೂ-ಮುಸ್ಲಿಂ ಬಾಂದ್ಯವ್ಯಕ್ಕೆ ಕೊಳ್ಳಿ ಹಿಡುತ್ತಿರುವ ಯುವಕರನ್ನು ಕಾನೂನಾತ್ಮಕವಾಗಿ ಭಂದಿಸಬೇಕು ಇಲ್ಲದಿದ್ದರೆ ಸಹಸ್ರಾರು ಹಿಂದೂ ಭಾಂದವರು ಸೇರಿ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಮುಖಂಡ ಕೃಷ್ಣಮೂರ್ತಿ ಮಾತನಾಡಿ ಗ್ರಾಮದಲ್ಲಿ ಸಾಮರಸ್ಯದಿಂದ ಕೂಡಿರುವ ನಮ್ಮಗಳ ಮದ್ಯ ಕೆಲ ಯುವಕರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ ದರ್ಗಾ ನಿರ್ಮಿಸಲು ನಮಗೆ ವಿರೋಧವಿಲ್ಲ ಆದರೆ ದೇವಾಲಯಗಳ ಆವರಣದಲ್ಲಿ ದರ್ಗಾ ಬೇಡ ಇದು ಹಿಂದುಗಳ ಭಾವನೆಗೆ ದಕ್ಕೆ ತರುವ ವಿಚಾರವಾಗಿದೆ, ದರ್ಗಾ ನಿರ್ಮಿಸಲು ಮುಂದಾಗಿರುವ ಯುವಕರು ತಮ್ಮ ಚಿಂತನೆಯನ್ನು ಕೈಬಿಡಲಿ ಎಂದರು.
ಸ್ಥಳಕ್ಕೆ ಆಗಮಿಸಿದ ಲೋಕಮ್ಮನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶಾರದಮ್ಮ ಮಾತನಾಡಿ ದರ್ಗಾ ನಿರ್ಮಿಸಲು ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಏಕಾಏಕಿ ಕಡ್ಡಡಕ್ಕೆ ಪಾಯಾ ತಗೆದಿರುವುದು ಗಮನಕ್ಕೆ ಬಂದಿದ್ದು ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವವರಿಗೆ ನೋಟೀಸ್ ನೀಡಲಾಗುವುದು ಹಾಗೂ ಇದು ಸೂಕ್ಷ್ಮ ವಿಚಾರವಾಗಿದ್ದು ಯಥಾಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದರು.
ಗ್ರಾಮಸ್ಥರುಗಳಾದ ಎಸ್.ಕೃಷ್ಣಪ್ಪ, ಶ್ರೀನಿವಾಸ್, ಚೌಡೇಗೌಡ, ಗಂಗಣ್ಣ, ಕುಮಾರ್, ಬಾಬಣ್ಣ, ಟಿ.ಡಿ.ಯೋಗೀಶ್, ಗಂಗಾಧರ್, ಉಮೇಶ್, ಇತರರು ಇದ್ದರು.

(Visited 1 times, 1 visits today)
tumkur turuvekere
Previous Articleವಿಶ್ವ ಭೌತಚಿಕಿತ್ಸಾ ದಿನಾಚರಣೆ
Next Article ಕೌಶಲ್ಯಗಳನ್ನು ಕಲಿಯುವ ಮೂಲಕ ಆರ್ಥಿಕವಾಗಿ ಸಬಲರಾಗಿ
News Desk Benkiyabale

Related Posts

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm
ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm
ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm
ಇತರೆ ಸುದ್ಧಿಗಳು

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
ಇತರೆ ಸುದ್ಧಿಗಳು

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
ಇತರೆ ಸುದ್ಧಿಗಳು

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ

December 16, 2025 4:06 pm
Our Youtube Channel
Our Picks

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

By News Desk BenkiyabaleDecember 16, 2025 4:12 pm

ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ…

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.