BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ
  • ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ
  • ದಾಬಸ್‌ಪೇಟ್-ರಾಯದುರ್ಗ ರಾ. ಹೆದ್ದಾರಿಗೆ ಸಿದ್ದತೆ
  • ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಒತ್ತು ನೀಡಲಿ: ಉಪಮುಖ್ಯಮಂತ್ರಿ
  • ಚಿಕಿತ್ಸೆ ಸಹಾಯಕ್ಕೆ ತುರ್ತು ರೋಗಿಗಳಿಗೆ ನೆರವಾಗಲು ನೂತನ ಆಂಬುಲೆನ್ಸ್ ಸೇವೆ
  • ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ
  • ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು
  • ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಕ್ರಮ ಭೂ ಕಬಳಿಕೆಗೆ ಕಡಿವಾಣ
ಇತರೆ ಸುದ್ಧಿಗಳು

ಅಕ್ರಮ ಭೂ ಕಬಳಿಕೆಗೆ ಕಡಿವಾಣ

By News Desk BenkiyabaleUpdated:November 26, 2022 4:13 pm

ಕೊರಟಗೆರೆ


ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಾಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನುಸಿಳಿ ಬೇಲಿ ಹಾಕಿಕೊಂಡಿರುವ ಬೆಂಗಳೂರಿನ ಮೂಲದವರಿಗೆ ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡುವುದಿಲ್ಲ, ಅದನ್ನು ತಾಲ್ಲೂಕಿನ ರೈತರಿಗೆ ಕೊಡಿಸುವುದು ಶತ ಸಿದ್ದ ಮಾಜಿ ಡಿಸಿಎಂ ಹಾಗೂ ಶಾಸಕ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ಹಾಗೂ ಸಂದೇಶ ನೀಡಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕಂದಾಯ ಇಲಾಖಾ ವತಿಯಿಂದ ಕೊರಟಗೆರೆ ತಾಲ್ಲೂಕಿನ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಪಹಣಿ, ಹಕ್ಕು ಪತ್ರ ದಾಖಲಾತಿಗಳು ಹಾಗೂ ಪಿಂಚಣಿ ಮಾಸಾಶನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಕಂದಾಯ ಇಲಾಖೆಯು 1951 ರಿಂದ ಉಳುವವನಿಗೆ ಭೂಮಿ ಎನ್ನುವ ಆದೇಶ ತಂದು
ಜಮೀನಿಲ್ಲದ ರೈತರಿಗೆ ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ದೇವರಾಜು ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ ಲಕ್ಷಾಂತರ ರೈತರು ಇದರ ಉಪಯೋಗ ಪಡೆದು ವ್ಯವಸಾಯ ಮಾಡುತ್ತಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಶನಿವಾರ 121 ಸಾಗುವಳಿ ಹಕ್ಕುಪತ್ರ, 30 ಸಾಗುವಳಿ ಪತ್ರ, 162 ಪಿಂಚಣಿ ಮಾಸಾಶನಗಳ ಪತ್ರಗಳನ್ನು ವಿತರಿಸಲು ತಾಲ್ಲೂಕು ದಂಡಾಧಿಕಾರಿಗಳ ಜೊತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಕಮಿಟಿಯ ಸದಸ್ಯರುಗಳ ಸಹಕಾರದಿಂದ ತಾಲೂಕಿನ ರೈತರು ಇಂದು ನೆಮ್ಮದಿಯಿಂದ ಇರುವಂತಹ ಸಮಯ ಒದಗಿ ಬಂದಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.
ರೈತರಿಗೆ ಸಾಗುವಳಿಯೊಂದಿಗೆ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ರಾಜ್ಯದಲ್ಲೇ ಕೊರಟಗೆರೆ ತಾಲ್ಲೂಕಿನಲ್ಲಿ ವಿನೂತನವಾಗಿ ಮಾಡುತ್ತಿದ್ದೇವೆ, ಇದರಿಂದ ಸಾಗುವಳಿ ಪಡೆದ ರೈತರು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅಲೆಯುವುದು ತಪ್ಪಿದಂತೆ ಆಗುತ್ತದೆ. ಆ ಕೆಲಸವನ್ನು ನನ್ನ ಅಧ್ಯಕ್ಷತೆಯಲ್ಲಿ ಬಗರ್ ಹುಕ್ಕುಂ ಸಮಿತಿ, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ, ಅದರೆ ರೈತರು ತಮಗೆ ಮಂಜೂರಾದ ಜಮೀನನ್ನು 25 ವರ್ಷಗಳ ಕಾಲ ಪರಭಾರೆ ಮಾಡುವಂತ್ತಿಲ್ಲ ಎಂದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಾಜಿಹಳ್ಳಿ ಗ್ರಾಮ ಸರ್ಕಾರಿ ಜಮೀನಿನಲ್ಲಿ ಬೆಂಗಳೂರು ಮೂಲದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಎಕರೆ ಜಮೀನನ್ನು ನಮ್ಮ
ರೈತರಿಂದ ತಪ್ಪಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿದ್ದಾರೆ. ಅವರಿಗೆ ಸಾಗುವಳಿ ಪತ್ರ ಮಾಡಿಕೊಡುವಂತೆ ನನ್ನ ಮೇಲೆ ಮತ್ತು ಅಧಿಕಾರಿಗಳ ಮೇಲೆ ಹಲವು ಒತ್ತಡಗಳನ್ನು ಹಾಕಿದ್ದಾರೆ. ಆದರೆ ಅವುಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕು ಬೆಂಗಳೂರು ಮೂಲದವರಿಗೆ ಸಾಗುವಳಿ ಜಮೀನನ್ನು ನೀಡುವುದಿಲ್ಲ ಎಂದು ಜಮೀನು ಕಬಳಿಸಿರುವ ಬೆಂಗಳೂರು ಮೂಲದವರಿಗೆ ಕಡಕ್ ಎಚ್ಚರಿಕೆ ನೀಡಿದರು.
ರೈತರಿಗೆ ಜಮೀನು ನೀಡುವ ಜೊತೆಗೆ ಬೆಳೆದಂತ ಬೆಳೆಗೆ ಬೆಂಬಲ ಬೆಲೆ, ಅವರ ದವಸ ಧಾನ್ಯಗಳನ್ನು ಖರೀದಿಸಿದ ಸರ್ಕಾರದ ಸಂಸ್ಥೆಗಳು ಅವರಿಗೆ ಶೀಘ್ರ ಹಣಪಾವತಿ ಮಾಡುವ ಕೆಲಸ ಮಾಡಿದರೆ ರೈತರಿಗೆ ಅನುಕೂಲ ಮಾಡಿದಂತಾಗುತ್ತದೆ. ಇಲ್ಲದಿದ್ದಲ್ಲಿ ವ್ಯವಸಾಯ ಮಾಡಲು ಮುಂದೆ ಯಾರೊಬ್ಬರು ಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್, ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ, ಅರಣ್ಯ ಅಧಿಕಾರಿ ಸುರೇಶ್, ಕೃಷಿ ಅಧಿಕಾರಿ ನಾಗರಾಜು, ಎಇಇ ರವಿಕುಮಾರ್, ಬಗರ್ ಹುಕ್ಕುಂ ಸಮಿತಿಯ ಸದಸ್ಯರಾದ ಹೇಮಲತಾ, ಹನುಮಂತರಾಜು, ದೇವರಾಜು ಉಪತಹಶೀಲ್ದಾರ್‍ಗಳಾದ ಮಧುಚಂದ್ರ, ಎ.ಜಿ. ರಾಜು, ಮಹೇಶ್, ಕಂದಾಯ
ಇಲಾಖಾಧಿಕಾರಿಗಳಾದ ಪ್ರತಾಪ್, ಅರುಣ್‍ಕುಮಾರ್, ಜಯಪ್ರಕಾಶ್, ಪವನ್‍ಕುಮಾರ್, ಬಸವರಾಜು, ರಾಖೇಶ್, ರಘು, ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಪ.ಪಂ ಸದಸ್ಯ ಎ ಡಿ ಬಲರಾಮಯ್ಯ, ಸೇರಿದಂತೆ ಇತರರು
ಹಾಜರಿದ್ದರು.

ಡಾ. ಜಿ ಪರಮೇಶ್ವರ್, ಶಾಸಕ

ರೈತರಿಗೆ ಸಾಗುವಳಿಯೊಂದಿಗೆ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ರಾಜ್ಯದಲ್ಲೇ ಕೊರಟಗೆರೆ ತಾಲ್ಲೂಕಿನಲ್ಲಿ ವಿನೂತನವಾಗಿ ಮಾಡುತ್ತಿದ್ದೇವೆ, ಇದರಿಂದ ಸಾಗುವಳಿ ಪಡೆದ ರೈತರು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅಲೆಯುವುದು ತಪ್ಪಿದಂತೆ ಆಗುತ್ತದೆ. ಆ ಕೆಲಸವನ್ನು ನನ್ನ ಅಧ್ಯಕ್ಷತೆಯಲ್ಲಿ ಬಗರ್ ಹುಕ್ಕುಂ ಸಮಿತಿ, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ, ಅದರೆ ರೈತರು ತಮಗೆ ಮಂಜೂರಾದ ಜಮೀನನ್ನು 25 ವರ್ಷಗಳ ಕಾಲ ಪರಭಾರೆ ಮಾಡುವಂತ್ತಿಲ್ಲ.

(Visited 4 times, 1 visits today)
Koratagere tumkur
Previous Articleಡಿ.1 : ತುಮಕೂರಿಗೆ ಪಂಚರತ್ನ ರಥಯಾತ್ರೆ
Next Article ಕೇಂದ್ರ ಚುನಾವಣಾ ಆಯೋಗ ತಂಡ ತುಮಕೂರು ಜಿಲ್ಲೆಗೆ ಭೇಟಿ
News Desk Benkiyabale

Related Posts

ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ

July 13, 2026 6:02 pm news

ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ

July 13, 2026 5:59 pm news

ದಾಬಸ್‌ಪೇಟ್-ರಾಯದುರ್ಗ ರಾ. ಹೆದ್ದಾರಿಗೆ ಸಿದ್ದತೆ

July 13, 2026 5:57 pm news
ತಾಜಾ ಸುದ್ಧಿಗಳು

ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ

July 13, 2026 6:02 pm

ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ

July 13, 2026 5:59 pm

ದಾಬಸ್‌ಪೇಟ್-ರಾಯದುರ್ಗ ರಾ. ಹೆದ್ದಾರಿಗೆ ಸಿದ್ದತೆ

July 13, 2026 5:57 pm

ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಒತ್ತು ನೀಡಲಿ: ಉಪಮುಖ್ಯಮಂತ್ರಿ

July 13, 2026 5:56 pm

ಚಿಕಿತ್ಸೆ ಸಹಾಯಕ್ಕೆ ತುರ್ತು ರೋಗಿಗಳಿಗೆ ನೆರವಾಗಲು ನೂತನ ಆಂಬುಲೆನ್ಸ್ ಸೇವೆ

July 13, 2026 5:54 pm

ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ

July 11, 2026 5:21 pm
Our Youtube Channel
Our Picks

ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ

July 13, 2026 6:02 pm

ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ

July 13, 2026 5:59 pm

ದಾಬಸ್‌ಪೇಟ್-ರಾಯದುರ್ಗ ರಾ. ಹೆದ್ದಾರಿಗೆ ಸಿದ್ದತೆ

July 13, 2026 5:57 pm

ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಒತ್ತು ನೀಡಲಿ: ಉಪಮುಖ್ಯಮಂತ್ರಿ

July 13, 2026 5:56 pm

ಚಿಕಿತ್ಸೆ ಸಹಾಯಕ್ಕೆ ತುರ್ತು ರೋಗಿಗಳಿಗೆ ನೆರವಾಗಲು ನೂತನ ಆಂಬುಲೆನ್ಸ್ ಸೇವೆ

July 13, 2026 5:54 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ

By News Desk BenkiyabaleJuly 13, 2026 6:02 pm

ತುಮಕೂರು: ಐರೋಪ್ಯ ರಾಷ್ಟçಗಳು ನಾ ಮುಂದು, ತಾ ಮುಂದು ಎಂದು ಅಳವಡಿಸಿಕೊಳ್ಳುತ್ತಿರುವ ಭಾರತೀಯ ಶಾಸ್ತಿçÃಯ ಸಂಗೀತ, ನೃತ್ಯ ಪರಂಪರೆಯಿAದ ಭಾರತದ…

ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ

July 13, 2026 5:59 pm

ದಾಬಸ್‌ಪೇಟ್-ರಾಯದುರ್ಗ ರಾ. ಹೆದ್ದಾರಿಗೆ ಸಿದ್ದತೆ

July 13, 2026 5:57 pm

ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ಒತ್ತು ನೀಡಲಿ: ಉಪಮುಖ್ಯಮಂತ್ರಿ

July 13, 2026 5:56 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.