ತುಮಕೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನೀನಾಸಂ ತಂಡ ನಾಟಕದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇ ತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಎರಡು ದಿವಸಗಳ ಜಿಲ್ಲಾ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ತುಮಕೂರಿನಲ್ಲಿ ಕುರುಕ್ಷೇತ್ರ, ರಾಮಾಯಣ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಆದರೆ ನೀನಾಸಂ ಪ್ರಯೋಗಾತ್ಮಕ ನಾಟಕಗಳಿಗೆ ಹೆಸರು ವಾಸಿಯಾಗಿದೆ. ಸಂಭಾಷಣೆಗೆ ಹೆಚ್ಚು ಒತ್ತು ಕೊಡದೆ ಕ್ರಿಯೆಗೆ ಒತ್ತು ನೀಡುವ ನಾಟಕಗಳನ್ನು ನೀನಾಸಂ ಪ್ರದರ್ಶಿಸುತ್ತಾ ಬಂದಿದೆ ಎಂದರು.
ಹಲವಾರು ದಶಕಗಳಿಂದ ನೀನಾಸಂ ಸದಭಿರುಚಿ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡುತ್ತಿದೆ. ಶಿಸ್ತು ಬದ್ಧ ತಂಡವಾದ ನೀನಾಸಂ ಹಲವಾರು ಜನಪ್ರಿಯ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರು ವುದು ಖುಷಿಯ ಸಂಗತಿ ಎಂದರು.
ನೀನಾಸ0 ಕೇವಲ ರಂಗ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ಬದಲಿಗೆ ಕಲಾ ಶಿಕ್ಷಣ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ತುಮಕೂರು ಯಾವತ್ತೂ ಕೂಡ ಕಲೆಯ ತವರೂರು, ಗುಬ್ಬಿ ವೀರಣ್ಣರಿಂದ ಆರಂಭವಾದ ರಂಗ ಪರಂಪರೆ ಇಲ್ಲಿಯವರೆಗೂ ಮುಂದುವರೆದುಕೊ0ಡು ಬಂದಿದೆ. ಕಲೆ ಬೀಡಾದ ತುಮಕೂರಿನಲ್ಲಿ ಮತ್ತಷ್ಟು ನಾಟಕ ಪ್ರಯೋಗಗಳು ಕಾಣುವಂತಾಗಲಿ ಎಂದರು.
ಒಳ್ಳೆಯ ದೇಶ ಕಟ್ಟುವ, ಸಮಾಜ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ನೀನಾಸಂ ನಾಟಕ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ವರ್ಷಪೂರ್ತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಾಟಕ ಪ್ರದರ್ಶಿಸುತ್ತಾ ಬಂದಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ನಾಟಕ ಪ್ರದರ್ಶನ ಏರ್ಪಾಟಾಗಿದ್ದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿ ಹೆಚ್.ಜಿ. ಚಂದ್ರಶೇಖರ್ ಮಾತನಾಡಿ ಕಲೆ ಮತ್ತು ಸಾಮಾಜಿಕ ಬದ್ಧತೆಯನ್ನು ಸಂಯೋಜಿಸುವಲ್ಲಿ ನೀನಾಸಂ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು. ನೀನಾಸಂನ ತಿರುಗಾಟ ತಂಡ ಗ್ರಾಮೀಣ ಭಾಗಗಳಿಗೆ ತೆರಳಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಇದು ಸಾಂಪ್ರದಾಯಿಕ ರಂಗ ಭೂಮಿಯನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.
ಮ್ಯಾಗ್ಸಸೇ ಪ್ರಶಸ್ತಿ ಪುರಸ್ಕೃತ ಕೆ.ವಿ. ಸುಬ್ಬಣ್ಣನವರು ಸ್ಥಾಪಿಸಿದ ಒಂದು ರಂಗಕಲಾ ಸಂಘ ನೀನಾಸಂ.೧೯೪೯ ರಲ್ಲಿ ಆರಂಭಗೊ0ಡ ನೀನಾಸಂ ಇಲ್ಲಿಯವರೆಗೂ ನಿರಂತರವಾಗಿ ರಂಗಪ್ರಯೋಗಗಳನ್ನು ಮಾಡುತ್ತಾ ಬಂದು ನಾಡಿನಲ್ಲೇ ಮನೆ ಮಾತಾಗಿದೆ ಎಂದರು
ಸಿನಿಮಾ ರಸಗ್ರಹಣ ಶಿಬಿರ ಸೇರಿದಂತೆ ಹಲವಾರು ರಚನಾತ್ಮಕ ಕೆಲಸಗಳನ್ನು ನೀನಾಸಂ ಮಾಡುತ್ತಾ ಬಂದಿದೆ. ಸುಬ್ಬಣ್ಣನವರ ದೂರದರ್ಶಿತ್ವ ನಿಜಕ್ಕೂ ಮೆಚ್ಚುವಂತದ್ದು ರಂಗ ಕಮ್ಮಟಗಳು ಸೇರಿದಂತೆ ನಿರಂತರವಾಗಿ ನೀನಾಸಂ ಜನಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ಅಕಾಡೆಮಿಯು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ನಾಟಕೋತ್ಸವ ಮಾಡಲು ಆಯೋಜಿಸಿದ್ದು ರಾಜ್ಯದ ೩೧ ಜಿಲ್ಲೆಗಳಲ್ಲಿ ಜಿಲ್ಲಾ ನಾಟಕೋತ್ಸವ ನಡೆಯಲಿದೆ. ಇದರ ಭಾಗವಾಗಿ ತುಮಕೂರಿನಲ್ಲೂ ಸಹ ನಾಟಕೋತ್ಸವ ಆಯೋ ಜಿಸಲಾಗಿದೆ. ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಿದೆ. ತುಮಕೂರಿನಲ್ಲಿ ನರಸಿಂಹರಾಜು ನೆನಪಿನ ನಾಟಕೋತ್ಸವ, ಶರಣರ ನಾಟಕಗಳನ್ನು ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಬಸವರಾಜು ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಅವತರಣಮ್, ಭ್ರಾಂತಾಲಾಯಮ್ ನಾಟಕ ಪ್ರದರ್ಶಿಸಲಾಯಿತು.
(Visited 1 times, 1 visits today)