
ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ, ಸೂರಿಲ್ಲದ ನಿರ್ಗತಿಕರಾದ ಶಂಕರಮ್ಮನವರಿಗೆ ಶ್ರೀ ಕ್ಷೇತ್ರದ ವತಿಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬೆಂಚ್ ಡೆಸ್ಕ್ಗಳ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.
ಮತ್ತಿಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಮ್.ಸುದರ್ಶನ್ ಮಾತಾನಾಡಿ ಧರ್ಮಸ್ಥಳ ಕ್ಷೇತ್ರದಿಂದ ನಾನಾ ಕಾರ್ಯಗಳು ನೆಡೆಯುತ್ತಿದ್ದು, ಕೆರೆಗಳಲ್ಲಿ ಮಣ್ಣು ತೆಗೆಯುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಹಸ್ತಾಂತರಗೊ0ಡ ಕೆರೆಯನ್ನು ಉಸ್ತುವಾರಿ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಮಾತ್ರ ಮಾಡಿದ ಕಾರ್ಯಕ್ಕೆ ಬೆಲೆಸಿಗುತ್ತದೆ ಎಂದರು.
ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿತರಣಾ ಕಾರ್ಯಕ್ರಮವನ್ನು ತಾಲ್ಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ರವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.ಮೊದಲಿಗೆ ಯೋಜನೆಯ ವತಿಯಿಂದ ಮಾಶಾಸನ ಪಡೆಯುತ್ತಿರುವ ಸೂರಿಲ್ಲದ ಶಂಕರಮ್ಮರವರಿಗೆ ವಿಧಿವಿದಾನಗಳ ಪ್ರಕಾರ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಶುಭಕೋರಲಾಯಿತು.
ತುಮಕೂರು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಗ್ರಾಮಾ ಭಿವೃದ್ಧಿ ಯೋಜನೆಯ ಸೇವೆ ತಿಪಟೂರು ತಾಲ್ಲೂಕಿನಲ್ಲಿ ಪ್ರಾರಂಭ ಗೊಂಡ ೧೨ ವರ್ಷದಲ್ಲಿ ಕೃಷಿ, ಜ್ಙಾನವಿಕಾಸ, ಕೆರೆ ಪುನಶ್ಚೇತನ, ರೈತಕ್ಷೇತ್ರ ಪಾಠಶಾಲೆ, ಅದ್ಯಯನ ಪ್ರವಾಸ, ಮಾಶಾಸನ, ವಾತ್ಸಲ್ಯ ಮನೆ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸುಜ್ಙಾನನಿಧಿ ಶಿಷ್ಯವೇತನ, ಸಮುದಾಯ ಭವನಗಳ ನಿರ್ಮಾಣ, ಹಾಲಿನ ಡೈರಿ ನಿರ್ಮಾಣ, ಮಠ ಮಂದಿರ ಮಸೀದಿ ಚರ್ಚ್ ದೇವಸ್ಥಾನಗಳ ಜೀರ್ಣೋದ್ಧಾರ, ಜ್ಞಾನದೀಪ ಶಿಕ್ಷಕರ ನೇಮಕ, ಶಾಲಾ ಮಕ್ಕಳಿಗೆ ಬೆಂಚು ಡೆಸ್ಕ್ ವಿತರಣೆ, ಟ್ಯೂಷನ್ ಕ್ಲಾಸ್ ಶೌಚಾಲಯಗಳ ನಿರ್ಮಾಣ, ಹಿಂದೂ ರುದ್ರಭೂಮಿ ಪುನಶ್ಚೇತನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನ ಶಿಬಿರ ಇನ್ನು ಹತ್ತು ಹಲವಾರು ಸೇವೆಗಳಿಗೆ ಸರಿಸುಮಾರು ೮೦ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಡವರ ಏಳಿಗಿಗಾಗಿ ವಿನಿಯೋಗಿಸಿದೆ ಎಂದು ತಿಳಿಸಿದರು.
ಇಂದು ಶ್ರೀ ಕ್ಷೇತ್ರದ ವತಿಯಿಂದ ರಾಜ್ಯಾದ್ಯಂತ ೧೦೫೩ಕ್ಕೂ ಅಧಿಕ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಲಕ್ಷಾಂತರ ರೈತರ ಕೃಷಿಭೂಮಿಗೆ ಜೀವ ಜಲಾದಾರೆಯನ್ನು ಸಮರ್ಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇಷ್ಟಲ್ಲದೆ ತುಮಕೂರು ಜಿಲ್ಲೆಯ ಒಟ್ಟು ೨೦೫ ಶಾಲೆಗಳಿಗೆ ೧೫೪೦ ಜೊತೆ ಬೆಂಚು ಡೆಸ್ಕ್ ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ, ಇದರೊಟ್ಟಿಗೆ ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ೬೬ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ೧೫ ವಾತ್ಸಲ್ಯ ಮನೆ ನಿರ್ಮಿಸಲಾಗಿದೆ ಇಷ್ಟಲ್ಲದೇ ತುಮಕೂರು ಜಿಲ್ಲೆಯಲ್ಲಿ ೧೦೨ ಕೆರೆಗಳನ್ನು ಹಾಗೂ ತಿಪಟೂರು ತಾಲ್ಲೂಕಿನಲ್ಲಿ ೧೫ ಕೆರೆಗಳಿಗೆ ಪುನಶ್ಚೇತನದ ಭಾಗ್ಯ ಶ್ರೀ ಕ್ಷೇತ್ರದ ವತಿಯಿಂದ ದೊರೆತಿದ್ದು ಈ ಎಲ್ಲಾ ಸೇವೆಗಳ ಜೊತೆಗೆ ಇನ್ನಷ್ಟು ಸೇವೆಗಳು ದೊರೆತು ತುಮಕೂರು ಜಿಲ್ಲೆ ಹಾಗೂ ತಿಪಟೂರು ತಾಲ್ಲೂಕಿನ ಬಡತನ ನಿರ್ಮೂಲನೆಗೊಂಡು ಸಂಪತ್ಬರಿತವಾಗಿ ಮಾರ್ಪಾಡುಗೊಂಡಿದೆ
ಸAದರ್ಭದಲ್ಲಿ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉದಯ್.ಕೆ, ಗ್ರಾಮದ ಪಟೇಲರಾದ ಜಯಣ್ಣ, ಕೆರೆ ಸಮಿತಿ ಅದ್ಯಕ್ಷರಾದ ಹರೀಶ್ಕುಮಾರ್ ಹಾಗೂ ಉಪಾದ್ಯಕ್ಷರಾದ ಶ್ರೀಕಂಠಪ್ಪ, ನಿವೃತ್ತ ಶಾಲಾ ಶಿಕ್ಷಕರಾದ ಸೋಮಶೇಖರ್, ಜಿಲ್ಲಾ ಜನಜಾಗೃತಿ ವೇಧಿಕೆ ಸದಸ್ಯರಾದ ಶ್ರೀಮತಿ ರೇಖಾ ಹಾಗೂ ಮಲ್ಲಿಗಪ್ಪಾಚಾರ್. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉದಯ್.ಕೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರೇಣುಕಮ್ಮಓಂಕಾರಮೂರ್ತಿ, ಕೃಷಿ ಅಧಿಕಾರಿ ಪ್ರಮೋದ್ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಮೇಲ್ವಿಚಾರಕ ಮನೀಷ್, ಸೇವಾಪ್ರತಿನಿಧಿಗಳಾದ ಕಮಲಮ್ಮ, ಮೀನಾಕ್ಷಿ ಗ್ರಾಮದ ಮುಖಂಡರಾದ ಪರಮೇಶಪ್ಪ, ಓಂಕಾರಮೂರ್ತಿ, ಪ್ರೇಕ್ಷಾ ಶಾಮಿಯಾನ ಸಿದ್ದಪ್ಪ, ಜೆಸಿಬಿ ಗಣೇಶ್, ಲಿಂಗರಾಜು, ವಜ್ರಮುನಿ, ಸತೀಶ್, ಪುನೀತ್, ರಂಜಿತ್, ನವೀನ್, ಜಯಣ್ಣ, ಪ್ರೇಮಾ, ಮಹದೇವಮ್ಮ, ಕಾಂತಮ್ಮ, ಜ್ಯೋತಿ. ಕಮಲಮ್ಮ, ರಾಣೀ, ಉಷಾ, ಶಾರದಮ್ಮ, ರತ್ನಮ್ಮ, ಸೇರಿದಂತೆ ಧರ್ಮಸ್ಥಳ ಸಂಘದ ಪಾಲುದಾರ ಹಾಜರಿದ್ದರು.





