
ಹುಳಿಯಾರು: ಜೇವರ್ಗಿಯಿಂದ ಚಾಮರಾಜನಗರ ರಾಷ್ಟಿçÃಯ ಹೆದ್ದಾರಿ ೧೫೦ ಎ ರಸ್ತೆಯ ಹುಳಿಯಾರು-ಚಿಕ್ಕನಾಯಕನಹಳ್ಳಿ ಮಾರ್ಗದಲ್ಲಿನ ಬಳ್ಳೆಯಕಟ್ಟೆ ಬಳಿ ಇತ್ತೀಚೆಗೆ ಆರ್.ಎಂ.ಸಿ ಪ್ಲಾಂಟ್ ತಲೆಎತ್ತಿದೆ. ತಿಮ್ಮನಹಳ್ಳಿಗೆ ಸಿಸಿ ರಸ್ತೆ ಮಾಡುವ ಸಲುವಾಗಿ ಗುತ್ತಿಗೆದಾರರು ತಮ್ಮ ಅನುಕೂಲಕ್ಕಾಗಿ ಈ ಪ್ಲಾಂಟ್ ಹಾಕಿಕೊಂಡಿದ್ದಾರೆ. ಆದರೆ, ಸರ್ಕಾರಿ ಕಾಮಗಾರಿಯ ಹೆಸರಿನಲ್ಲಿ ಆರಂಭದಿAದಲೂ ಒಂದಲ್ಲ ಒಂದು ನಿಯಮಗಳ ಉಲ್ಲಂಘನೆ ಇಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಧೂಳಿನ ಮಯ: ಹೆದ್ದಾರಿ ಪ್ರಯಾಣಿಕರ ಹೈರಾಣು: ಯಾವುದೇ ಆರ್.ಎಂ.ಸಿ ಪ್ಲಾಂಟ್ ಸ್ಥಾಪಿಸುವಾಗ ಸಿಮೆಂಟ್ ಮತ್ತು ಧೂಳು ಹೊರಗೆ ಹರಡದಂತೆ ತಡೆಯಲು ರಸ್ತೆಯ ಬದಿಯಲ್ಲಿ ಎತ್ತರದ ಶಾಶ್ವತ ತಡೆಗೋಡೆ ನಿರ್ಮಿಸುವುದು ಕಡ್ಡಾಯವಾಗಿದೆ. ಆದರೆ, ಇಲ್ಲಿ ಕೇವಲ ತಾತ್ಕಾಲಿಕವಾಗಿ ಶೆಡ್ ನೆಟ್ ಮೆಸ್ ಅಳವಡಿಸಿ ಕೈತೊಳೆದುಕೊಳ್ಳಲಾಗಿತ್ತು. ಅದು ಕೂಡ ಈಗ ಬಿರುಗಾಳಿಗೆ ಸಿಲುಕಿ ಸಂಪೂರ್ಣವಾಗಿ ಹರಿದು ಹೋಗಿದೆ. ಇದರಿಂದಾಗಿ ಪ್ಲಾಂಟ್ನಿAದ ಏಳುವ ಭಾರೀ ಪ್ರಮಾಣದ ಸಿಮೆಂಟ್ ಮಿಶ್ರಿತ ಧೂಳು ನೇರವಾಗಿ ರಾಷ್ಟಿçÃಯ ಹೆದ್ದಾರಿಗೆ ಆವರಿಸುತ್ತಿದ್ದು, ಪಾದಚಾರಿಗಳು, ಬೈಕ್ ಸವಾರರು ಕಣ್ಣು ಕಾಣಿಸದೆ, ಉಸಿರಾಡಲು ತೊಂದರೆಯಾಗಿ ರಸ್ತೆಯಲ್ಲಿ ಸಂಚರಿಸಲು ತೀವ್ರವಾಗಿ ಪರದಾಡುತ್ತಿದ್ದಾರೆ.
ಅಕ್ರಮ ವಿದ್ಯುತ್ ಮತ್ತು ನೀರಿನ ಬಳಕೆ: ಸ್ಥಳೀಯ ನೈಸರ್ಗಿಕ ಮೂಲದ ನೀರು ಬಳಳಸಲು ಸಣ್ಣ ನೀರಾವರಿ ಇಲಾಖೆಯ ಎನ್ಒಸಿ ಪಡೆಯಬೇಕೆಂಬ ನಿಯಮವಿದೆ. ಆದರೆ ಈ ಭಾಗದ ಕೃಷಿಕರಿಗೆ ತೋಟಗಳಿಗೆ ಹಾಗೂ ಕುಡಿಯಲು ನೀರಿಲ್ಲದೆ ತೊಂದರೆಯಾಗುತ್ತಿರುವಾಗ, ಆರ್.ಎಂ.ಸಿ ಪ್ಲಾಂಟ್ಗೆ ಚಾನೆಲ್ ನೀರನ್ನು ರಾಜಾರೋಷವಾಗಿ ಬಳಕೆ ಮಾಡಲಾಗುತ್ತಿದೆ ಎಂಬುದು ಸ್ಥಳೀಯರು ಆರೋಪವಾಗಿದೆ. ಇಷ್ಟೇ ಅಲ್ಲದೆ, ವಿದ್ಯುತ್ ಇಲಾಖೆಯಿಂದ ವಾಣಿಜ್ಯ ಬಳಕೆಯ ಅಧಿಕೃತ ಸಂಪರ್ಕ ಪಡೆಯಬೇಕು. ಆದರೆ ಬೆಸ್ಕಾಂನ ಅಧಿಕೃತ ಮಾಹಿತಿಯ ಪ್ರಕಾರ ತಾತ್ಕಾಲಿಕ ಮೀಟರ್ಗೆ ಅರ್ಜಿ ಹಾಕಿದ್ದಾರೆ. ಆದರೆ ಇನ್ನೂ ಆರ್ಆರ್ ನಂಬರ್ ಬಂದಿಲ್ಲ. ಆದರೂ ತಾತ್ಕಾಲಿಕ ಮೀಟರ್ ಹೆಸರಿನಲ್ಲಿ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಬಳಕೆ ಮಾಡಲಾಗುತ್ತಿದೆ
ಪಂಚಾಯಿತಿ ಪರವಾನಗಿಯೇ ಇಲ್ಲ!: ಸ್ಥಳೀಯವಾಗಿ ಇಂತಹ ಪ್ಲಾಂಟ್ ಆರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆ, ಕೃಷಿ ಭೂಮಿಯಾಗಿದ್ದರೆ ವಿಶೇಷ ಅನುಮತಿ, ಕಾರ್ಮಿಕ ಇಲಾಖೆ ಅನುಮತಿ, ಮರಳು, ಜಲ್ಲಿಗೆ ರಾಯಲ್ಟಿ ಕಟ್ಟಿರುವ ದಾಖಲೆ, ಬಹುಮುಖ್ಯವಾಗಿ ಸಂಬAಧಪಟ್ಟ ಗ್ರಾಮ ಪಂಚಾಯಿತಿಯಿAದ ನಿರಕ್ಷೇಪಣಾ ಪತ್ರ ಪಡೆಯಬೇಕು. ಆದರೆ ಬಳ್ಳೆಯಕಟ್ಟೆಯ ಈ ಆರ್.ಎಂ.ಸಿ ಪ್ಲಾಂಟ್ಗೆ ಪಂಚಾಯಿತಿಯ ಯಾವುದೇ ಪರವಾನಗಿ ಪಡೆದಿಲ್ಲ ಎಂಬ ಮಾಹಿತಿ ಜೊತೆಗೆ ಅನೇಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಅಧಿಕಾರಿಗಳೇ ಎಚ್ಚರಗೊಳ್ಳಿ!: ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಾರ್ವಜನಿಕರ ಅನುಕೂಲಕ್ಕೆ ಇರಬೇಕೇ ಹೊರತು, ಅದೇ ಸಾರ್ವಜನಿಕರ ಆರೋಗ್ಯ ಮತ್ತು ಜೀವಕ್ಕೆ ಕಂಟಕವಾಗಬಾರದು. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಸ್ಕಾಂ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಆರ್.ಎಂ.ಸಿ ಪ್ಲಾಂಟ್ನ ಅಕ್ರಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಹೆದ್ದಾರಿ ಪ್ರಯಾಣಿಕರ ಹಿತದೃಷ್ಟಿಯಿಂದ ತಕ್ಷಣವೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

