BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ
  • ೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ
  • ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು
  • ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್
  • ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ
  • ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ
  • ಬಸ್ ತಡೆದಿದ್ದಕ್ಕೆ ವಿದ್ಯಾರ್ಥಿಗಳು ಪೊಲೀಸರ ನಡುವೆ ವಾಗ್ವಾದ
  • ಎಸ್‌ಐಆರ್: ಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ
news

೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲೆದೂರಿದ ಭೀಕರ ಬರ
By News Desk BenkiyabaleUpdated:August 20, 2026 4:50 pm

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಹಾಗೂ ಹೈನುಗಾರಿಕೆಯ ಜೀವನಾಡಿಯಾಗಿರುವ ಕೆರೆಗಳು ಬರಿದಾಗುತ್ತಿವೆ. ಸಣ್ಣ ನೀರಾವರಿ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ತಾಲೂಕಿನಲ್ಲಿ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಡುವ ೩೮ ಕೆರೆಗಳ ಪೈಕಿ ೨೩ ಪ್ರಮುಖ ಕೆರೆಗಳು ಪ್ರಸ್ತುತ ಸಂಪೂರ್ಣ ಖಾಲಿ ನೀರಿನ ಮಟ್ಟಕ್ಕೆ ತಲುಪಿವೆ.
ಮುಂಗಾರು ಅವಧಿಯಲ್ಲೂ ಕೆರೆಗಳು ಕೋಡಿ ಹರಿಯುವ ಬದಲು ಒಣಗಿ ನಿಂತಿರುವುದು ತಾಲೂಕಿನ ರೈತಾಪಿ ವರ್ಗದಲ್ಲಿ ತೀವ್ರ ಆತಂಕ ಮೂಡಿಸಿದೆ. ಉಳಿದ ಹತ್ತದಿನೈದು ಕೆರೆಗಳಲ್ಲೂ ಶೇ.೭೦ ರಷ್ಟು ನೀರು ಖಾಲಿಯಾಗಿವೆ. ಹೀಗೆ ಜೀವನಾಡಿ ಎನಿಸಿರುವ ಕೆರೆಗಳು ಬರಿದಾಗುತ್ತಿರುವುದರಿಂದಾಗಿ ಕೊಳವೆಬಾವಿಗಳೂ ಬತ್ತುತ್ತಿದ್ದು, ಮುಂದೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹತ್ತನ್ನೆರಡು ವರ್ಷಗಳ ಹಿಂದೆಯೇ ಹೇಮಾವತಿ ನದಿ ನೀರು ಹರಿಸುವ ಯೋಜನೆ ಮಂಜೂರಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳಲ್ಲಿಲ್ಲ. ಪರಿಣಾಮ ೨೬ ಕೆರೆಗಳಿಗೆ ಹರಿಯಬೇಕಿದ್ದ ನದಿ ನೀರು ಶೆಟ್ಟಿಕೆರೆ, ಸಾಸಲು, ತಿಮ್ಮಾಪುರ ಕೆರೆಗಳನ್ನು ಬಿಟ್ಟರೆ ಇನ್ನಾವುದೇ ಕೆರೆಗಳಿಗೆ ಹರಿಯಲಿಲ್ಲ. ಭದ್ರ ಯೋಜನೆ, ಎತ್ತಿನಹೊಳೆ ಯೋಜನೆ ಇನ್ನೂ ಕುಂಟುAತ ಸಾಗುತ್ತಿದೆ. ಹಾಗಾಗಿ ತಾಲೂಕಿನ ಎಲ್ಲಾ ಕೆರೆಗಳು ಈಗಲೂ ಮಳೆಯಾಶ್ರಿತ ಕೆರೆಗಳಾಗಿಯೇ ಉಳಿದಿವೆ.
ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಲಿಲ್ಲ, ಹಿಂಗಾರಿಗಾದರೂ ಮಳೆಯಾಗುತ್ತದೆಂದು ನಿರೀಕ್ಷಿಸಿಸಲಾಯಿತಾದರೂ ಮಳೆ ಮೋಡಗಳು ಆಗುತ್ತವೆ ವಿನಃ ಮಳೆ ಬರುತ್ತಿಲ್ಲ. ಪರಿಣಾಮ ತಾಲೂಕಿನಲ್ಲಿ ಜಲಸಂಕಷ್ಟ ಎದುರಾಗಿದೆ. ಕೆರೆಗಳಲ್ಲಿ ಹನಿ ನೀರಿಲ್ಲದೆ ಜಾನುವಾರು, ಪಕ್ಷಿಗಳು ಮತ್ತು ಕಾಡುಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದನಕರು, ಕುರಿಮೇಕೆ ಸಾಕುವವರು ಮೇವಿಗಾಗಿ ಪರದಾಡುತ್ತಿದ್ದಾರೆ.
ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ ೩೦೫.೧೦ ಹೆಕ್ಟೇರ್ ಅಚ್ಚುಕಟ್ಟು ಹೊಂದಿರುವ ಸಿದ್ಧನಕಟ್ಟೆ ಕೆರೆ ಸೇರಿದಂತೆ ೧೮೩.೪೬ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬಾವನಹಳ್ಳಿ ದುರ್ಗದ ಕೆರೆ, ೧೮೨.೬೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಬಾವನಹಳ್ಳಿ ಹೊಸಕೆರೆ, ೧೪೭.೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ನವಿಲೆಕೆರೆ, ೧೨೭.೫೨ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕಂದಿಕೆರೆ ನೊಣವಿನ ಕೆರೆ ಸೇರಿದಂತೆ ೨೩ ಕೆರೆಗಳು ಬರಿದಾಗಿರುವುದರಿಂದ ಸಾವಿರಾರು ಎಕರೆ ತೆಂಗು, ಅಡಿಕೆ ಹಾಗೂ ದಿನನಿತ್ಯದ ಬೆಳೆಗಳು ಒಣಗಿ ನಷ್ಟ ಅನುಭವಿಸುವಂತಾಗಿದೆ. ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ಪೆಟ್ಟು ನೀಡಿದೆ.
ಕೆರೆಗಳು ಬತ್ತಿ ಒಣಗಿ ನಿಂತಿರುವುದು ಕೇವಲ ಅಂಕಿ-ಅAಶಗಳ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ ಸಾವಿರಾರು ಎಕರೆ ಕೃಷಿ ಭೂಮಿಯ ಜೀವಸೆಲೆ ಕಡಿದುಹೋಗಿ, ರೈತರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಮುಂದಿನ ದಿನಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ತಾಲೂಕು ಆಡಳಿತ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ತಾಲೂಕಿಗೆ ಹರಿಯಬೇಕಿರುವ ಹೇಮಾವತಿ ನೀರನ್ನು ತಕ್ಷಣ ಹರಿಸಿದರೆ ಏಳೆಂಟು ಸಣ್ಣ ನೀರಾವರಿ ಕೆರೆಗಳು ಐದಾರು ಸಣ್ಣಪುಟ್ಟ ಕೆರೆಗಳು ತುಂಬುತ್ತವೆ. ಆಗ ತಾಲೂಕಿನ ಅರ್ಧ ಭಾಗದ ನೀರಿನ, ಮೇವಿನ ಸಮಸ್ಯೆ ಸುಲಭವಾಗಿ ಪರಿಹಾರ ಸಿಕ್ಕಂತಾಗುತ್ತದೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿದೆ. ಸಾಲ ಸೋಲ ಮಾಡಿ ಬೆಳೆ ಇಟ್ಟಿರುವ ತಾಲೂಕಿನ ರೈತ ಕುಲವನ್ನು ಉಳಿಸಲು ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

(Visited 1 times, 1 visits today)
Chikkanayakanahalli kannada news karnataka local news tumkur news ಚಿಕ್ಕನಾಯಕನಹಳ್ಳಿ ತುಮಕೂರು: ಹುಳಿಯಾರು
Previous Articleಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು
Next Article ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ
News Desk Benkiyabale

Related Posts

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

August 20, 2026 4:51 pm news

ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು

August 20, 2026 4:49 pm news

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm news
ತಾಜಾ ಸುದ್ಧಿಗಳು
news

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

August 20, 2026 4:51 pm
news

೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ

August 20, 2026 4:50 pm
news

ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು

August 20, 2026 4:49 pm
news

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm
news

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm
news

ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ

August 19, 2026 5:37 pm
Our Youtube Channel
Our Picks

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

August 20, 2026 4:51 pm

೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ

August 20, 2026 4:50 pm

ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು

August 20, 2026 4:49 pm

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜನ್ಮದಿನಾಚರಣೆ

By News Desk BenkiyabaleAugust 20, 2026 4:51 pm

ಪಾವಗಡ: ತಾಲ್ಲೂಕು ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಮಹಾನ್ ನೇತಾರ ಡಿ. ದೇವರಾಜ…

೩೮ ಕೆರೆಗಳ ಪೈಕಿ ೨೩ ಕೆರೆಗಳು ಸಂಪೂರ್ಣ ಖಾಲಿ

August 20, 2026 4:50 pm

ಸಂವಿಧಾನದ ಆಶಯಗಳನ್ನು ಮೂರ್ತ ರೂಪಕ್ಕೆ ತಂದ ಮಹಾನ್ ಚೇತನ ಡಿ.ದೇವರಾಜು ಅರಸು

August 20, 2026 4:49 pm

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.