ತುಮಕೂರು: ಪಿಡಿಎಫ್ ನೋಟ್ಸ್ಗಳಿಗೆ ಸೀಮಿತವಾಗದೆ, ನಿರಂತರವಾಗಿ ಪುಸ್ತಕ ಓದಿ ಜ್ಞಾನ ಸಂಪಾದಿ. ಹೋರಾಟದ ಬದುಕಿನಿಂದ ಭವಿಷ್ಯದ ಜೀವನ ರೂಡಿಸಿಕೊಳ್ಳಿ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿಗಳು ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಸ್ಎಸ್ಐಬಿಂ ಕಾಲೇಜಿನ ಬಿಕಾಂ ಎಂಕಾA ಮತ್ತು ಎಂ.ಎಸ್.ಡಬ್ಲ್ಯೂ ಪದವಿ ತರಗತಿಗಳ ೨೦೨೬-೨೭ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿದ ವಿರೇಶಾನಂದ ಸರಸ್ವತಿ ಸ್ವಾಮೀಜಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣಭೀಷ್ಮ ಎಂ ಗಂಗಾಧರಯ್ಯ ನವರ ತ್ಯಾಗದ ಫಲವಾಗಿ ಸಮೃದ್ಧಿಯಾದ ಶಿಕ್ಷಣ ಸಂಸ್ಥೆ ನೆಲೆ ನಿಂತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ನೆಲೆಸಿ ಸಂಸ್ಥೆಯನ್ನು ಅಜರಾಮರ ಗೊಳಿಸಿದ್ದಾರೆ. ಇವರೆಲ್ಲರೂ ಕೇವಲ ಆಸೆ ಪಟ್ಟವರಲ್ಲ ಕಠಿಣ ಪರಿಶ್ರಮ ಹಾಕಿ ಗೆಲುವು ಸಾಧಿಸಿದವರು ಎಂದು ಸ್ವಾಮೀಜಿ ಹೇಳಿದರು.
ನಿಮ್ಮ ಮೇಲೆ ಋಣ ಸಂದಾಯದ ಭಾರ ಇದೆ. ತಂದೆ-ತಾಯಿ ಮತ್ತು ಸಮಾಜ ದೇಶದ ಒಳಿತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಯೋಚಿಸಿ-ಯೋಜಿಸಿ ಮುನ್ನಡೆದರೆ ಗೆಲುವು ನಿಮ್ಮದಾಆಗುತ್ತದೆ ಎಂದು ಪ್ರಿಯ ವಿದ್ಯಾರ್ಥಿಗಳಿಗೆ ವಿರೇಶಾನಂದ ಸರಸ್ವತಿ ಸ್ವಾಮೀಜಿಗಳು ಸಂದೇಶ ನೀಡಿದರು.
ಸಮಾರಂಭದಲ್ಲಿ ಶ್ರೀ ಸಿದ್ದಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಡ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಉತ್ತಮ ಆಹಾರ ಮತ್ತು ವ್ಯಾಯಾಮದಿಂದ ಸದೃಢರಾಗಿ ವಿದ್ಯಾರ್ಥಿ ಜೀವನ ನಡೆಸಿ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಮಮತಾ ಅವರು ಉತ್ತಮ ವಿದ್ಯೆಯನ್ನು ಪಡೆದು ಸಮಾಜದಲ್ಲಿ ಕೀರ್ತಿವಂತರಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಂ.ಎಸ್.ಡಬ್ಲ್ಯೂ ವಿಭಾಗದ ಮುಖ್ಯಸ್ಥರಾದ ಪಿಕೆ ರಘು ಅವರ ಸ್ವಾಗತಿದರೆ ಎಂಕಾA ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಗೀತಾ ವಂದನಾರ್ಪಣೆ ಮಾಡಿದರು. ಕನ್ನಡ ವಿಭಾಗದ ಡಾ. ರೇಣುಕಾ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಎಂಕಾA ವಿದ್ಯಾರ್ಥಿನಿ ಕುಸುಮ ಅವರು ಪ್ರಾರ್ಥನೆ ಸಲ್ಲಿಸಿದರು.
(Visited 1 times, 1 visits today)





