ಪಾವಗಡ: ಹೆಸರಾಂತ ಮಕ್ಕಳ ನೇತ್ರ ತಜ್ಞರಾದ ಡಾ.ವಸುಧಾ ನರೇಶ್ ರವರು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಿದರು. ಈ ಶಿಬಿರಕ್ಕೆ ಬಹು ದೂರ ದೂರದಿಂದ ಮಕ್ಕಳು ಬಂದಿದ್ದು ವಿಶೇಷತೆಯಾಗಿತ್ತು. ಕಲ್ಯಾಣದುರ್ಗ, ಅನಂತಪುರ, ಹಿಂದೂಪುರ, ಶಿರಾ, ಚಳ್ಳಕೆರೆ, ಮಧುಗಿರಿ ಭಾಗಗಳಿಂದ ಪುಟ್ಟ ಪುಟ್ಟ ಮಕ್ಕಳು ಹಾಗೂ ನವಜಾತ ಶಿಶುಗಳು ಬಂದಿದ್ದನ್ನು ಕಾಣಬಹುದಾಗಿತ್ತು. ಸುಮಾರು ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಲಾಯಿತು. ಆಧುನಿಕ ಯಂತ್ರೋಪಕರಣಗಳು ಹಾಗೂ ಇತ್ತೀಚಿನ ತಂತ್ರಜ್ಞಾನದೊAದಿಗೆ ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ತೃಪ್ತಿಯಾಗುವಂತೆ ತಪಾಸಣೆ ನಡೆಸಿ ಔಷಧೋಪಚಾರಗಳನ್ನು ನೀಡಲಾಯಿತು. ಇದರಲ್ಲಿ ಸರಿಸುಮಾರು ೮ ಮಕ್ಕಳಿಗೆ ಅತಿ ಸೂಕ್ಷಾ÷್ಮತಿಸೂಕ್ಷ÷್ಮವಾದ ಶಸ್ತç ಚಿಕಿತ್ಸೆಗಳಿಗೆ ವ್ಯವಸ್ಥೆ ಮಾಡಲಾಯಿತು. ಈ ಎಲ್ಲ ಕಾರ್ಯಗಳು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ನೀಡಲಾಗುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಾಡಿನ ಹೆಸರಾಂತ ಮಕ್ಕಳ ತಜ್ಞರಾದ ಡಾ.ವಸುಧಾ ನರೇಶ್ ರವರೊಂದಿಗೆ ಹಿರಿಯ ಆಪ್ಟೋಮೆಟ್ರಿಸ್ಟ್ ಆಗಿರುವ ಶ್ರೀ ಅನೀಶ್ ರವರು ಸಹಕಾರ ನೀಡಿ ಪ್ರತಿಯೊಬ್ಬ ಮಗುವಿಗೂ ಪೂರ್ಣ ಪ್ರಮಾಣದ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲು ಸಹಕರಿಸಿದರು. ಒಟ್ಟಿನಲ್ಲಿ ಪ್ರತೀ ತಿಂಗಳು ನಡೆಯುವ ಈ ಮಕ್ಕಳ ನೇತ್ರ ತಪಾಸಣಾ ಶಿಬಿರ ದಿನೇ ದಿನೇ ಹೆಚ್ಚಿನ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಅವರ ದೃಷ್ಟಿಯನ್ನು ಹಾಗೂ ನೇತ್ರಕ್ಕೆ ಸಂಬAಧಪಟ್ಟ ಇತರ ನ್ಯೂನತೆಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡುತ್ತಿರುವ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಬಂದAತಹ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಪೂರ್ಣ ಪ್ರಮಾಣದಲ್ಲಿ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದರು. ಎಲ್ಲರಿಗೂ ಮಧ್ಯಾನ್ಹದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಮೂರ್ತಿಗಳಾದ ಶ್ರೀ ವಿ.ಮಾದೇಶ ರವರು ಹಾಗೂ ಮತ್ತೊಬ್ಬ ನ್ಯಾಯಮೂರ್ತಿಗಳಾದ ಶ್ರೀಮತಿ ಸಿ.ಎನ್.ಮುನಿರತ್ನಮ್ಮ ರವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆಗಳನ್ನು ಕೂಲಂಕುಶವಾಗಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ನೇತ್ರ ತಪಾಸಣಾ ಶಿಬಿರವು ನಡೆಯುತ್ತಿರುವುದನ್ನು ಕಂಡು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹಾಗೂ ಶಿಶುಗಳನ್ನು ಮತ್ತು ಪೋಷಕರನ್ನು ಕಂಡು ಅತ್ಯಂತ ಸಂತೋಷಪಟ್ಟರು. ಸಂಸ್ಥೆಯ ಸೇವಾ ಯಜ್ಞವನ್ನು ಕಂಡು ಆಶ್ಚರ್ಯಚಕಿತರಾದರು. ಎಲ್ಲ ಶಸ್ತçಚಿಕಿತ್ಸೆ ಪಡೆದಿದ್ದ ರೋಗಿಗಳನ್ನು ಕಂಡು ಅವರನ್ನು ಮಾತನಾಡಿಸಿ ಅವರೊಂದಿಗೆ ಛಾಯಾಚಿತ್ರವನ್ನು ತೆಗೆಯಲಾಯಿತು. ಸಂಸ್ಥೆಯ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ವೀಕ್ಷಿಸಿದರು.
ಗೌರವಾನ್ವಿತ ನ್ಯಾಯಮೂರ್ತಿಗಳು ಪೂಜ್ಯ ಸ್ವಾಮಿ ಜಪಾನಂದಜೀ ರವರೊಂದಿಗೆ ಮಾತನಾಡಿ ತಮ್ಮ ನ್ಯಾಯಾಲಯದ ಎಲ್ಲ ಸದಸ್ಯರುಗಳ ಸಹಕಾರದಿಂದ ಸದ್ಯದಲ್ಲಿಯೇ ಗ್ರಾಮಾಂತರ ವಿಭಾಗದಲ್ಲಿ ನೇತ್ರ ತಪಾಸಣಾ ಶಿಬಿರ ಹಾಗೂ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದಲ್ಲಿ ತಾವುಗಳು ಖಂಡಿತವಾಗಿ ಭಾಗವಹಿಸಿ ಗ್ರಾಮಾಂತರ ಜನರಿಗೆ ಸಂಸ್ಥೆ ಸಲ್ಲಿಸುವ ಸೇವಾ ಯಜ್ಞದಲ್ಲಿ ಭಾಗವಹಿಸಲು ಉತ್ಸಾಹಭರಿತರಾಗಿದ್ದೇವೆ ಎಂದು ತಿಳಿಸಿದರು. ಒಟ್ಟಿನಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಅಹರ್ನಿಷಿ ನಡೆಯುತ್ತಿರುವ ನಾನಾ ರೀತಿಯ ಸೇವಾ ಯಜ್ಞಗಳ ಬಗ್ಗೆ ಮಾಹಿತಿಯನ್ನು ತಾವು ಸದಾ ಪಡೆಯುತ್ತಿದ್ದು ಸಂಸ್ಥೆಗೆ ಭೇಟಿ ನೀಡಲು ಅತೀವ ಸಂತೋಷವಾಗುತ್ತದೆ ಎಂದು ತಿಳಿಸಿದರು.
(Visited 1 times, 1 visits today)





