BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ!!
Trending

ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ!!

By News Desk BenkiyabaleUpdated:July 21, 2020 6:43 pm

ತುಮಕೂರು:

      ತುಮಕೂರು ಗ್ರಾಮಾಂತರ ಹಾಲಿ ಜೆಡಿಎಸ್‍ನ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಜುಲೈ 18,2020 ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

      2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ವಿಮಾ ಪಾಲಿಸಿಗಳನ್ನ ಸ್ವತಃ ತಯಾರು ಮಾಡಿ ಆ ಕ್ಷೇತ್ರದ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸಿರುವ ಆರೋಪ ಕುರಿತು ಮೊಕದ್ದಮೆ ದಾಖಲು ಮಾಡಲಾಗಿದೆ.

       2018 ರ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ನಕಲಿ ಬಾಂಡ್ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‍ನ ಮುಖಂಡೆ ಗೌರಮ್ಮ ಎನ್ನುವವರಿಂದ ಬಾಂಡ್‍ಗಳನ್ನು ವಶಪಡಿಸಿಕೊಂಡು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಆ ಸಮಯದಲ್ಲಿಯೇ ದೂರು ದಾಖಲು ಮಾಡಲಾಗಿತ್ತು. ನಂತರ ತನಿಖೆಯ ಹಂತದಲ್ಲಿರುವಾಗ ಉಚ್ಛಾ ನ್ಯಾಯಾಲಯದಲ್ಲಿ ತನಿಖೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಥಮ ವರ್ತಮಾನ ವರದಿಯನ್ನ ರದ್ದುಗೊಳಿಸುವಂತೆ ಆರೋಪಿತರ ಪರವಾಗಿ ಉಚ್ಛಾನ್ಯಾಯಾಲಯದಲ್ಲಿ ಮನವಿ ಮಾಡಿ ಮಾನ್ಯ ಉಚ್ಛಾನ್ಯಾಯಾಲ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತ್ತು.

      ನಂತರ 2018ರ ಚುನಾಣೆಯಲ್ಲಿ ನಕಲಿ ಬಾಂಡ್‍ಗಳ ಆಮಿಷವೊಡ್ಡಿ ಮತದಾರರಿಗೆ ವಂಚಿಸಿ ಮತ ಪಡೆದಿರುವ ಕುರಿತು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‍ರವರ 2018 ರ ವಿಧಾನಸಭಾ ಸದಸ್ಯತ್ವವನ್ನು ವಜಾಗೊಳಿಸುವಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುತ್ತದೆ. ಈ ಎಲ್ಲಾ ಬೆಳವಣಿಗಗಳ ನಡುವೆ ಮತ್ತೆ ಮತ್ತೊಂದು ದೂರನ್ನ ದೂರುದಾರರಾದ ರಮೇಶ್ ಬೆಟ್ಟಯ್ಯ ಎನ್ನುವವರು ಕರ್ನಾಟಕದ ರಾಜ್ಯದ ಮುಖ್ಯಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳು, ಸಿಓಡಿ ಡಿಜಿಪಿ ರವರಿಗೆ ಮೇ 8, 2020 ರಂದು ದೂರು ನೀಡಿದ್ದು, ಇವರ ದೂರಿನನ್ವಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಳ ಆಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ತನಿಖೆಗೆ ಆದೇಶಿಸಿದ್ದು, ಅವರ ನಿರ್ದೇಶನದ ಮೇರೆಗೆ ಮತ್ತು ಒಳ ಆಡಳಿತ ಅಪರಮುಖ್ಯ ಕಾರ್ಯದರ್ಶಿಗಳು ಜೂನ್ 3 ರಂದು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರಿಗೆ ತನಿಖೆಗಾಗಿ ಆದೇಶಿಸಿ ಪತ್ರ ಕಳುಹಿಸಿರುತ್ತಾರೆ. ಅಪರ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಡಿಜಿ ಮತ್ತು ಐಜಿಪಿರವರು ಜುಲೈ 12 ರಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಿಗೆ ದೂರು ಮತ್ತು ಅಡಕಗಳನ್ನು ಲಗತ್ತಿಸಿ ಸದರಿ ವಿಚಾರವನ್ನು ಪ್ರತ್ಯೇಕವಾಗಿ ತನಿಖೆ ಮಾಡುವಂತೆ ನಿರ್ದೇಶಿಸಿರುತ್ತಾರೆ.

      ಸದರಿ ನಿರ್ದೇಶನದ ಪ್ರತಿಯಲ್ಲಿಯೇ ಅಡ್ವೋಕೇಟ್ ಜನರಲ್‍ರವರ ನೀಡುವ ಅಭಿಪ್ರಾಯದ ಪ್ರತಿಯನ್ನು ಲಗತ್ತಿಸಿ ಕೂಡಲೇ ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆದೇಶ ನೀಡಿರುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣಾರವರ ನಿರ್ದೇಶನದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದೇ ಜುಲೈ 18 ರ ಸಂಜೆ ತುಮಕೂರು ಗ್ರಾಮಾಂತರ ಠಾಣೆಯ ಅಪರಾಧ ಸಂಖ್ಯೆ ; 128/2020ರಂತೆ ಐಪಿಸಿ ಸೆಕ್ಷನ್ 1860(U/S-120ಃ, 406, 409, 420, 465, 468, 471) ರೀತ್ಯ ಪಿಎಸ್‍ಐ ಲಕ್ಷ್ಮಯ್ಯ ಪ್ರಕರಣ ದಾಖಲು ಮಾಡಿರುತ್ತಾರೆ. ಸದರಿ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿ ಜೆಡಿಎಸ್‍ನ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮತ್ತು ಎರಡನೇ ಆರೋಪಿಯಾಗಿ ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಡಿವಿಷಿನಲ್ ಮ್ಯಾನೇಜರ್ ದೇವೇಂದ್ರ ಪ್ರಸಾದ್, ಮೂರನೇ ಆರೋಪಿಯನ್ನಾಗಿ ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ, ನಾಲ್ಕನೇ ಆರೋಪಿಯನ್ನಾಗಿ ಒನ್ ರುಪಿ ಚಾರಿಟಬಲ್ ಟ್ರಸ್ಟ್‍ನ ಕಿಶೋರ್, ಐದನೇ ಆರೋಪಿಯಾಗಿ ಮೆಡಿ ಅಸಿಸ್ಟೇಂಟ್ ಇನ್ಷುರೆನ್ಸ್ ಕಂಪನಿಯಾ ಆಫೀಸರ್‍ರವರನ್ನ ಹಾಗೂ ಆರನೇ ಆರೋಪಿಯಾಗಿ ಇನ್ನೀತರರು ಎಂದು ಗ್ರಾಮಾಂತರ ಠಾಣೆಯಲ್ಲಿ ಎಫ್‍ಐಆರ್ ರಿಜಿಸ್ಟರ್ ಆಗಿದ್ದು, ಈ ಯಾವುದೇ ಆರೋಪಿಗಳ ಬಂಧನ ಮಾಡಿರುವುದಿಲ್ಲ.
ದೂರುದಾರ ರಮೇಶ್ ಬೆಟ್ಟಯ್ಯ ತಿಳಿಸಿರುವ ದೂರಿನಂತೆ ಮೇಲ್ಕಂಡ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ದೂರಿನ ಸಾರಾಂಶ:

      2018ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಡಿ.ಸಿ.ಗೌರಿಶಂಕರ್ ಮತ್ತು ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಮ್ಯಾನೇಜರ್ ದೇವೇಂದ್ರ ಪ್ರಸಾದ್, ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ ಎಲ್ಲಾ ಪದಾಧಿಕಾರಿಗಳು, ಒನ್ ರೂಪಿ ಚಾರಿಟಬಲ್ ಟ್ರಸ್ಟ್‍ನ ಕಿಶೋರ್ ಹಾಗೂ ಟ್ರಸ್ಟ್‍ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮೆಡಿ ಅಸಿಸ್ಟೆಂಟ್ ಕಂಪನಿಯ ಅಧಿಕಾರಿಗಳು ಮತ್ತು ಇತರರು ಗ್ರೂಪ್ ಇನ್ಷುರೆನ್ಸ್ ಪಾಲಿಸಿಗಳನ್ನು ಚುನಾವಣಾ ಸಮಯದಲ್ಲಿ ವಿತರಣೆ ಮಾಡಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬರುವ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡಿದ್ದು, ಸದರಿ ಪಾಲಿಸಿಗಳು IRDAI Act ಪ್ರಕಾರ ವಂಚಿಸುವ ದುರದ್ದೇಶದಿಂದ ಸೃಷ್ಠಿ ಮಾಡಿದ ನಕಲಿ ಪಾಲಿಸಿ ಬಾಂಡ್‍ಗಳಾಗಿದ್ದು ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ಈಗಾಗಲೇ ದೂರು ನೀಡಿರುತ್ತೇನೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲೆಯ ಸುಮಾರು 40 ವಿದ್ಯಾರ್ಥಿಗಳಿಗೆ ಇನ್ಷುರೆನ್ಸ್ ಮಾಡಿಸಿರುವುದಾಗಿ ತಿಳಿದುಬಂದಿದ್ದು, ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯರವರ ಮಾಹಿತಿಯಂತೆ 50 ಶಾಲೆಗಳ ಸುಮಾರ್ 16000 ಮಕ್ಕಳಿಗೆ ಗ್ರೂಪ್ ಇನ್ಷುರೆನ್ಸ್ ಮಾಡಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಆದರೆ, ತನಿಖೆಯ ಸಂದರ್ಭದಲ್ಲಿ IRDAI Act ಪ್ರಕಾರ ಅವರು ನೀಡಿರುವ ಗುಂಪು ವಿಮಾ ಪಾಲಿಸಿಗಳು ನಕಲಿ ಎಂದು ತಿಳಿದುಬಂದಿದ್ದು, ಈ ಎಲ್ಲಾ ನಕಲಿ ವಿಮಾ ಪಾಲಿಸಿಗಳ ಬಾಂಡ್‍ಗಳು ಒಂದೇ ವಿಮಾ ಪಾಲಿಸಿ ನಂಬರ್ ಹೊಂದಿರುವುದರಿಂದ ಈ ಎಲ್ಲಾ ಗ್ರೂಪ್ ಇನ್ಷುರೆನ್ಸ್‍ಗಳನ್ನು Iಖಆಂ ರದ್ದು ಮಾಡಿರುತ್ತದೆ.

      ಇನ್ಷುರೆನ್ಸ್‍ಗಳು ರದ್ದಾಗಿದ್ದರು ಸಹಾ ತಾವೇ ಸ್ವತಃ ಮುದ್ರಿಸಿದ ನಕಲಿ ವಿಮಾ ಪಾಲಿಸಿಗಳನ್ನು 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ದುರುದ್ದೇಶದಿಂದ ಹಂಚಿರುತ್ತಾರೆ. ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಬಡ ಮಕ್ಕಳಿಗೆ ನಕಲಿ ಬಾಂಡ್ ವಿತರಿಸಿ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಆರೋಪಿಸಿರುತ್ತಾರೆ.

      ಅಧಿಕೃತವಾಗಿ ಈ ಮೆಡಿ ಅಸಿಸ್ಟೆಂಟ್ ವಿಮಾ ಪಾಲಿಸಿಗಳನ್ನು ನೀಡುವ ಸಂದರ್ಭದಲ್ಲಿ ಪಾಲಿಸಿದಾರರ ಪೋಟೋ ಮತ್ತು ವಿಳಾಸ ಎಲ್ಲವೂ ಇರುವ ಇ-ಕಾರ್ಡ್‍ಗಳನ್ನು ನೀಡುತ್ತದೆ. ಕಂಪನಿಯ ಅಧಿಕೃತ ಕಾರ್ಡ್‍ಗಳನ್ನು ನೀಡದೆ ಅಂದಿನ ಜೆಡಿಎಸ್‍ನ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದ ಗೌರಿಶಂಕರ್ ಮತ್ತು ನ್ಯೂ ಇಂಡಿಯಾ ಇನ್ಷುರೆನ್ಸ್ ಕಂಪನಿಯ ಮ್ಯಾನೇಜರ್ ಹಾಗೂ ಒನ್ ರುಪಿ ಚಾರಿಟಬಲ್ ಟ್ರಸ್ಟ್ ನ ಕಿಶೋರ್ ಹಾಗೂ ಪದಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿರುತ್ತಾರೆ. ಈ ಸಂಬಂಧ ದೂರು ದಾಖಲಾಗಿರುತ್ತದೆ.

      ಇದೀಗ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದು ತನಿಖೆಯಾದರೆ ನಿಸ್ಪಕ್ಷಪಾತ ತನಿಖೆ ನಡೆಯುವುದಿಲ್ಲ. ಹಾಲಿ ಶಾಸಕರ ಅಧೀನದಲ್ಲಿ ಬರುವ ಅಧಿಕಾರಿಗಳು ತನಿಖೆ ನಡೆಸುವುದರಿಂದ ದೂರುದಾರರ ದೂರಿಗೆ ನ್ಯಾಯ ದೊರಕುವುದಿಲ್ಲ. ಹಾಗಾಗಿ ಸದರಿ ಪ್ರಕರಣವನ್ನ ಸಿಓಡಿ ತನಿಖೆಗೆ ಒಳಪಡಿಸಬೇಕೆಂಬುದು ಆ ಕ್ಷೇತ್ರದ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

(Visited 9 times, 1 visits today)
Previous Articleಸರ್ಕಾರದ 20ಲಕ್ಷ ಅನುದಾನ : 10 ಸಾವಿರ ಮಾಸ್ಕ್ ಎಲ್ಲಿ..? – ಪರಂ ಆಗ್ರಹ!!
Next Article ತುಮಕೂರು : 37 ಮಂದಿಗೆ ಕೋವಿಡ್-19 ಸೋಂಕು!!
News Desk Benkiyabale

Related Posts

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm news
ತಾಜಾ ಸುದ್ಧಿಗಳು
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
Our Youtube Channel
Our Picks

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

By News Desk BenkiyabaleAugust 07, 2026 5:05 pm

ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು…

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.