BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ವಿವಿಯಲ್ಲಿ ಟೆನಿಸ್ ಕೋರ್ಟ್ ಕಾಮಗಾರಿಗೆ ಡಾ. ಜಿ.ಪರಮೇಶ್ವರ ಚಾಲನೆ
  • ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಲಿ
  • ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ೧೯ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡುವಂತೆ ಶಾಸಕ ಬಿ ಸುರೇಶಗೌಡ ತಾಕೀತು
  • ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು
  • “ಮಾಸ್ಟರಿಂಗ್ ದ ಆರ್ಟ್ ಆಫ್ ರೆಸುಮ” ಕಾರ್ಯಗಾರ
  • ಅಧಿಕಾರಿಗಳು ಜನಸಾಮಾನ್ಯರು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ
  • ಜಿಲ್ಲೆಯಲ್ಲಿ ಮೇ ೨೦ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ
  • ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ  ದಾಖಲಿಸಿರುವ ದೂರನ್ನು ರದ್ದುಪಡಿಸಲು ಪ್ರಗತಿಪರ ಸಂಘಟನೆಗಳ ಆಗ್ರಹ
ಇತರೆ ಸುದ್ಧಿಗಳು

ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ  ದಾಖಲಿಸಿರುವ ದೂರನ್ನು ರದ್ದುಪಡಿಸಲು ಪ್ರಗತಿಪರ ಸಂಘಟನೆಗಳ ಆಗ್ರಹ

By News Desk BenkiyabaleUpdated:September 03, 2022 5:13 pm

ತುಮಕೂರು :

ನಾಡೋಜ ಪ್ರ್ರೊ.ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ
ಕೊಟ್ಟಿರುವ ದೂರನ್ನು ರದ್ದು ಪಡಿಸುವಂತೆ ಒತ್ತಾಯಿಸಿ
ತುಮಕೂರು ಅಪರಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಪ್ರಗತಿಪರ
ಸಂಘಟನೆಗಳ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು.
ಪ್ರೊ.ಬರಗೂರುರಾಮಚಂದ್ರಪ್ಪನವರು ತಮ್ಮ ‘ಭರತನಗರಿ’ ಎಂಬ
ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ
ಮಾತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮ
ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯರಾದ(ಬಿ.ಜೆ.ಪಿ) ಶ್ರೀ
ರವಿಕುಮಾರ್ ಮತ್ತು ಶ್ರೀ ಚಲವಾದಿ ನಾರಾಯಣಸ್ವಾಮಿಯವರು ಪೊಲೀಸ್
ಆಯುಕ್ತರಿಗೆ ದೂರು ನೀಡಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಈ
ಸಂಬಂಧದಲ್ಲಿ ಪ್ರೊ.ಬರಗೂರುರಾಮಚಂದ್ರಪ್ಪನವರು ಕೂಡ
ಪತ್ರಿಕೆಗಳಲ್ಲಿ ಸ್ವಷ್ಟನೆ ನೀಡಿದ್ದಾರೆ.
ಪ್ರೊ.ಬರಗೂರುರಾಮಚಂದ್ರಪ್ಪನವರು ನಮ್ಮ ನಾಡು ಕಂಡ
ಸಾಂಸ್ಕøತಿಕ ಅನನ್ಯತೆಯನ್ನು ಪಡೆದ ಪ್ರಸಿದ್ಧ ಲೇಖಕರು. ರಾಜ್ಯ, ರಾಷ್ಟ್ರ
ಮತ್ತು ಅಂತರ್‍ರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು. ಜೊತೆಗೆ
ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ
ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು
ವ್ಯಕ್ತಿತ್ವವುಳ್ಳ ಪ್ರಜಾಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ
ಸತ್ಯಾಂಶವಿಲ್ಲ.ನಾಲ್ಕು ದಶಕಗಳ ಹಿಂದೆ ಬರೆದಿದ್ದ ಅದೊಂದು ರಾಜಕೀಯ
ವಿಡಂಬನೆಯ ರೂಪಕಾತ್ಮಕ ಕಾದಂಬರಿ. ಸೃಜನಶೀಲ ಕೃತಿಗಳನ್ನು ಕೇವಲ
ವಾಚ್ಯಾರ್ಥದಲ್ಲಿ ನೋಡಲಾಗದು. ಈ ಕಾದಂಬರಿಯಲ್ಲಿ ಅನೇಕ
ಮನೋಧರ್ಮದ, ಅನೇಕ ನಡವಳಿಕೆಯ ಪಾತ್ರಗಳು ಬರುತ್ತವೆ.
ಲೇಖಕರು ಆಯಾ ಪಾತ್ರದ ಮನೋಧರ್ಮಕ್ಕೆ ಅನುಗುಣವಾದ
ಮಾತುಗಳನ್ನು ಬರೆಯಬೇಕಾಗುತ್ತದೆ. ಅಂತೆಯೇ ಈ ಕಾದಂಬರಿಯ
ಒಂದು ಪಾತ್ರವು ರಾಷ್ಟ್ರಗೀತೆಯ ದಾಟಿಯಲ್ಲಿ ದೇಶದ ಸ್ಥಿತಿಯನ್ನು
ವಿಡಂಬಿಸುತ್ತದೆ. ಆದರೆ ರಾಷ್ಟ್ರಗೀತೆಯ ಆಶಯವನ್ನು ಎಲ್ಲಿಯೂ
ವಿರೋಧಿಸಿರುವುದಿಲ, ವಿಡಂಬಿಸುವುದಿಲ್ಲ. ಈ ಬಗ್ಗೆ ಪ್ರೊ.ಬರಗೂರರು
ಈಗಾಗಲೇ ಬಹಿರಂಗ ಸ್ಪಷ್ಟನೆ ನೀಡಿದ್ದು ಅಂಥ ಯಾವ ಉದ್ದೇಶವೂ
ತನಗಿಲ್ಲವೆಂದೂ ಜನರಿಗೆ ತಪ್ಪು ಭಾವನೆ ಉಂಟು ಮಾಡಿದ್ದರೆ
ವಿಷಾದಿಸುವುದಾಗಿಯೂ ಹೇಳಿದ್ದಾರೆ.
ಮುಖ್ಯ ವಿಷಯವೇನೆಂದರೆ- ಸುಮಾರು ಅರ್ಧಶತಮಾನ ಹಿಂದಿನ ಈ
ಕೃತಿಯು ಅಂದಿನ ಸಂದರ್ಭಕ್ಕೆ ಅನುಗುಣವಾಗಿತ್ತು. ಇಂದಿನ
ಸಂದರ್ಭವನ್ನೂ ಒಳಗೊಂಡಂತೆ ಸರ್ವಕಾಲಿಕ ಮೌಲ್ಯ ಪ್ರತಿಪಾದನೆ
ಮಾಡಬೇಕೆಂದು ಪ್ರೊ.ಬರಗೂರರು ಮೂಲ ಕೃತಿಗೆ ಹೊಸ ರೂಪ
ಕೊಟ್ಟಿದ್ದಾರೆ. ಹೊಸ ರೂಪದ ಕೃತಿ 2021ರಲ್ಲಿ ಅವರ ಸಮಗ್ರ ಸಾಹಿತ್ಯ
ಸಂಪುಟಗಳಲ್ಲಿದೆ. ಹೊಸದರಲ್ಲಿ ರಾಷ್ಟ್ರಗೀತೆಯ ದಾಟಿಯ ಬದಲು ಬೇರೆ
ಗೀತೆಯನ್ನು ಬರೆದಿದ್ದಾರೆ. ಹೊಸದು ಬಂದ ಮೇಲೆ ಹಳೆಯ ಕೃತಿ ಅಸ್ತಿತ್ವ
ಕಳೆದುಕೊಳ್ಳುತ್ತದೆ. ಆದ್ದರಿಂದ ಹಳೆಯ ಕೃತಿಯ ಮೇಲಿನ ದೂರು

ಅಪ್ರಸ್ತುತವಾಗುತ್ತದೆ.ಈಗ ದೂರು ಕೊಡುವುದು
ಕಾನೂನಾತ್ಮಕವಾಗಿಯೂ, ನೈತಿಕವಾಗಿಯೂ ಸರಿಯಿಲ್ಲವೆಂಬುದು ನಮ್ಮ
ಭಾವನೆಯಾಗಿದೆ. ಕರ್ನಾಟಕದ ಹೆಸರಾಂತ ಲೇಖಕರೂ, ಸಂಸ್ಕøತಿ
ಚಿಂತಕರೂ, ಚಲನಚಿತ್ರ ನಿರ್ದೇಶಕರೂ ಆದ ಪ್ರೊ.ಬರಗೂರರಿಗೆ
ವಿನಾಕಾರಣ ಮಾನಸಿಕ ಹಿಂಸೆ ಕೊಡುವ ದುರುದ್ದೇಶವನ್ನು ಈ ದೂರಿನ ಹಿಂದೆ
ಕಾಣಬಹುದಾಗಿದೆ. ಈ ಎಲ್ಲಾ ವಿಷಯಗಳ ಆಧಾರದ ಮೇಲೆ ಪ್ರೊ.ಬರಗೂರರ
ವಿರುದ್ಧ ಬಂದಿರುವ ದೂರನ್ನು ರದ್ದುಗೊಳಿಸಬೇಕೆಂದು ಪ್ರಗತಿಪರ
ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸುತ್ತೇವೆ.
ಈ ಸಂದರ್ಬದಲ್ಲಿ ಹಿರಿಯ ದಲಿತ ಮುಖಂಡರಾದ ನರಸೀಯಪ್ಪ. ಸಿಐಟಿಯು
ಜಿಲ್ಲಾಧ್ಯಕ್ಷರಾದ ಸೈಯದ್‍ಮುಜೀಬ್, ಎನ್.ಕೆ ಸುಬ್ರಮಣ್ಯ, ಕಟ್ಟಡ ಕಾರ್ಮಿಕ
ಸಂಘಟನೆಯ ಬಿ.ಉಮೇಶ್, ತುಮಕೂರು ಕೊಳಗೇರಿ ಹಿತರಕ್ಷಣಾ
ಸಮಿತಿಯ ಅರುಣ್, ದಲಿತ ಮುಖಂಡ ಜಿ.ಸಾಗರ್,ಗೋವಿಂದಪ್ಪ ಬಿ.ಎಸ್.ಪಿ ಜಿಲ್ಲಾ
ಕಾರ್ಯದರ್ಶಿ ರಂಗಧಾಮಯ್ಯ, ವಕೀಲರಾದ ಪಾವಗಡ ಶ್ರೀರಾಮುಲು,
ಎಸ್.ಎಫ್.ಐನ ಶಿವಣ್ಣ, ಮೊದಲಾದವರು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಹೆಚ್ಚು ಯುವ ಸಂಪತ್ತನ್ನು ಹೊಂದಿರುವ ದೇಶ ಭಾರತ
Next Article ಇಂಜಿನಿಯರಿಂಗ್ ಪದವೀಧರರಿಗೆ ಉಜ್ವಲ ಭವಿಷ್ಯ ರೂಪಿಸಲು ಕರೆ : ಡಾ.ಎಂ.ಆರ್.ಹುಲಿನಾಯ್ಕರ್
News Desk Benkiyabale

Related Posts

ತುಮಕೂರು ವಿವಿಯಲ್ಲಿ ಟೆನಿಸ್ ಕೋರ್ಟ್ ಕಾಮಗಾರಿಗೆ ಡಾ. ಜಿ.ಪರಮೇಶ್ವರ ಚಾಲನೆ

May 17, 2025 4:03 pm ತುಮಕೂರು

ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಲಿ

May 17, 2025 4:01 pm ತುಮಕೂರು

ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ೧೯ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡುವಂತೆ ಶಾಸಕ ಬಿ ಸುರೇಶಗೌಡ ತಾಕೀತು

May 17, 2025 3:17 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತುಮಕೂರು ವಿವಿಯಲ್ಲಿ ಟೆನಿಸ್ ಕೋರ್ಟ್ ಕಾಮಗಾರಿಗೆ ಡಾ. ಜಿ.ಪರಮೇಶ್ವರ ಚಾಲನೆ

May 17, 2025 4:03 pm
ತುಮಕೂರು

ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಲಿ

May 17, 2025 4:01 pm
ತುಮಕೂರು

ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ೧೯ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡುವಂತೆ ಶಾಸಕ ಬಿ ಸುರೇಶಗೌಡ ತಾಕೀತು

May 17, 2025 3:17 pm
ತುಮಕೂರು

ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು

May 17, 2025 3:15 pm
ತುಮಕೂರು

“ಮಾಸ್ಟರಿಂಗ್ ದ ಆರ್ಟ್ ಆಫ್ ರೆಸುಮ” ಕಾರ್ಯಗಾರ

May 17, 2025 3:13 pm
ತುಮಕೂರು

ಅಧಿಕಾರಿಗಳು ಜನಸಾಮಾನ್ಯರು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ

May 17, 2025 3:11 pm
Our Youtube Channel
Our Picks

ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿ ಶಿಕ್ಷಣಕ್ಕೆ ನನ್ನ ಸಂಪೂರ್ಣ ಸಹಕಾರ ಸದಾಕಾಲವಿರುತ್ತದೆ: ಶಾಸಕ

May 14, 2025 4:37 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

“ತಿರಂಗ ಯಾತ್ರೆ” ನಮ್ಮ ನಡೆ ದೇಶದ ರಕ್ಷಣೆ ಕಡೆ

May 16, 2025 3:40 pm

ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ

May 15, 2025 4:09 pm

ಬಣ್ಣದ ಶಿಬಿರದಲ್ಲಿ ನಾಟಕ ಪ್ರಯೋಗ

May 14, 2025 4:39 pm

ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿ ಶಿಕ್ಷಣಕ್ಕೆ ನನ್ನ ಸಂಪೂರ್ಣ ಸಹಕಾರ ಸದಾಕಾಲವಿರುತ್ತದೆ: ಶಾಸಕ

May 14, 2025 4:37 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

“ತಿರಂಗ ಯಾತ್ರೆ” ನಮ್ಮ ನಡೆ ದೇಶದ ರಕ್ಷಣೆ ಕಡೆ

May 16, 2025 3:40 pm

ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ

May 15, 2025 4:09 pm

ಬಣ್ಣದ ಶಿಬಿರದಲ್ಲಿ ನಾಟಕ ಪ್ರಯೋಗ

May 14, 2025 4:39 pm

ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿ ಶಿಕ್ಷಣಕ್ಕೆ ನನ್ನ ಸಂಪೂರ್ಣ ಸಹಕಾರ ಸದಾಕಾಲವಿರುತ್ತದೆ: ಶಾಸಕ

May 14, 2025 4:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತುಮಕೂರು ವಿವಿಯಲ್ಲಿ ಟೆನಿಸ್ ಕೋರ್ಟ್ ಕಾಮಗಾರಿಗೆ ಡಾ. ಜಿ.ಪರಮೇಶ್ವರ ಚಾಲನೆ

By News Desk BenkiyabaleMay 17, 2025 4:03 pm

ತುಮಕೂರು: ಜಿಲ್ಲಾಡಳಿತ ಹಾಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ…

ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಲಿ

May 17, 2025 4:01 pm

ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ೧೯ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡುವಂತೆ ಶಾಸಕ ಬಿ ಸುರೇಶಗೌಡ ತಾಕೀತು

May 17, 2025 3:17 pm

ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು

May 17, 2025 3:15 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.