BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಂಜೂರಾದ ಅನುದಾನಕ್ಕನುಗುಣವಾಗಿ ಭೌತಿಕ ಪ್ರಗತಿ ಸಾಧಿಸಲು ಸೂಚನೆ
  • ಮೀಸಲಾತಿಯ ಗೊಂದಲಗಳ ನಿವಾರಣೆಗಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ :ಕೆ ಎಂ ರಾಮಚಂದ್ರಪ್ಪ
  • ಗ್ರಾರಂಟಿ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಅನುಕೂಲ: ಡಾ. ಜಿ.ಪರಮೇಶ್ವರ
  • ಸೆ.೧೦ ರಂದು ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಪ್ರತಿಭಟನೆ
  • ಧರ್ಮಸ್ಥಳದ ಸುತ್ತಮುತ್ತ ಅಸಹಜ ಸಾವ ಪ್ರಕರಣ: ಸಮರ್ಪಕ ತನಿಖೆ ನಡೆದು, ಸತ್ಯ ಹೊರಬರಬೇಕೆಂದು ಎಪಿಸಿಆರ್‌ನ ಒತ್ತಾಯ
  • ಆ. ೦೬ ರಿಂದ ನೀರು ಸರಬರಾಜು ನೌಕರರು ಅನಿರ್ಧಿಷ್ಠಾವಧಿ ಮುಷ್ಕರ
  • ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ
  • ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಆಗ್ರಹ
ಇತರೆ ಸುದ್ಧಿಗಳು

ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಆಗ್ರಹ

By News Desk BenkiyabaleUpdated:October 11, 2022 4:42 pm

ತುಮಕೂರು

ತಾಲ್ಲೂಕಿನ ವಿವಿಧ ವಸತಿ ನಿಲಯಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ (ಎಐಯುಟಿಯುಸಿ) ವತಿಯಿಂದ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹಾಸ್ಟೆಲ್ ಕಾರ್ಮಿಕರಿಗೆ ಕಳೆದ 2-3 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಇಎಸ್‍ಐ, ಪಿಎಫ್ ಹಣ ಕಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ವೇತನ ಆಯಾ ತಿಂಗಳಲ್ಲಿ ಬಿಡುಗಡೆಯಾಗಿದೆ. ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇತ್ತೀಚೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹೊರಡಿಸಿದ ಸುತ್ತೊಲೆಯಂತೆ ಹಾಸ್ಟೆಲ್ ಕಾರ್ಮಿಕರಿಗೆ ತಿಂಗಳ ವೇತನ ಆಯಾ ತಿಂಗಳ 5ನೇ ತಾರೀಖಿನ ಒಳಗೆ ತಲುಪಿಸಬೇಕು, ವೇತನ ಚೀಟಿ ನೀಡಬೇಕು, ಇಎಸ್‍ಐ, ಪಿಎಫ್ ಜಮಾ ಆಗಿರುವ ಬಗ್ಗೆ ಸಂಬಂಧಪಟ್ಟವರಿಂದ ದಾಖಲಾತಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಕೆ.ವಿ. ಭಟ್ ಮಾತನಾಡಿ, ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಬರುವ ಅಲ್ಪ ವೇತನಕ್ಕೂ ತಿಂಗಳು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿ ನಿಲಯವನ್ನು ತಮ್ಮ ಮನೆಯಷ್ಟೇ ಪ್ರೀತಿಸುವ ಗುಣ ಕಾರ್ಮಿಕರಲ್ಲಿ ಇದೆ. ಹಾಗಾಗಿ ಅವರು ನಿಯಮದಂತೆ 8 ಗಂಟೆಗೂ ಅಧಿಕವಾಗಿ ಕೆಲಸ ಮಾಡುವರು. ಆದ್ದರಿಂದ ವಿವಿಧ ವಿದ್ಯಾರ್ಥಿನಿಲಯಗಳ ಬಾಕಿ ಇರುವ ವೇತನವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು ಮತ್ತು ಅವರ ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಮಸ್ಯೆಗಳ ಇತ್ಯರ್ಥಕ್ಕೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ವಸತಿನಿಲಯ, ವಸತಿ ಶಾಲೆ/ ಕಾಲೇಜು / ಆಶ್ರಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ. ಗ್ರೂಪ್ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಖಾಯಂಗೊಳಿಸಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಏಜೆನ್ಸಿಗಳಿಂದ ನೇಮಕಾತಿ ಪತ್ರ, ಸಮವಸ್ತ್ರ ಮತ್ತು ಗುರುತಿನ ಚೀಟಿ ಕೊಡಿಸಬೇಕು. ಕಾನೂನು ಬದ್ಧವಾಗಿ ನೀಡಲೇಬೇಕಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆಗಳನ್ನು ನೀಡಬೇಕು. ಒಂದು ವೇಳೆ ರಜೆಯ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯ ಅನ್ವಯ ವೇತನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ. ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ವಿದ್ಯಾರ್ಥಿನಿಲಯ, ವಸತಿ ಶಾಲೆಗಳ ಗುತ್ತಿಗೆ ಆಧಾರದ ನೌಕರರು ಪಾಲ್ಗೊಂಡಿದ್ದರು.

(Visited 2 times, 1 visits today)
tumkur
Previous Articleಶಾಲಾ ದತ್ತು ಯೋಜನೆ : ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ
Next Article ಸಾಲ ಕೊಡಿಸುವುದಾಗಿ ನಂಬಿಸಿ ಲಂಚ ಪಡೆದು ಪರಾರಿ
News Desk Benkiyabale

Related Posts

ಮಂಜೂರಾದ ಅನುದಾನಕ್ಕನುಗುಣವಾಗಿ ಭೌತಿಕ ಪ್ರಗತಿ ಸಾಧಿಸಲು ಸೂಚನೆ

September 10, 2025 3:23 pm ತುಮಕೂರು

ಮೀಸಲಾತಿಯ ಗೊಂದಲಗಳ ನಿವಾರಣೆಗಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ :ಕೆ ಎಂ ರಾಮಚಂದ್ರಪ್ಪ

September 10, 2025 3:21 pm ತುಮಕೂರು

ಗ್ರಾರಂಟಿ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಅನುಕೂಲ: ಡಾ. ಜಿ.ಪರಮೇಶ್ವರ

September 10, 2025 3:20 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಮಂಜೂರಾದ ಅನುದಾನಕ್ಕನುಗುಣವಾಗಿ ಭೌತಿಕ ಪ್ರಗತಿ ಸಾಧಿಸಲು ಸೂಚನೆ

September 10, 2025 3:23 pm
ತುಮಕೂರು

ಮೀಸಲಾತಿಯ ಗೊಂದಲಗಳ ನಿವಾರಣೆಗಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ :ಕೆ ಎಂ ರಾಮಚಂದ್ರಪ್ಪ

September 10, 2025 3:21 pm
ತುಮಕೂರು

ಗ್ರಾರಂಟಿ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಅನುಕೂಲ: ಡಾ. ಜಿ.ಪರಮೇಶ್ವರ

September 10, 2025 3:20 pm
ತುಮಕೂರು

ಸೆ.೧೦ ರಂದು ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಪ್ರತಿಭಟನೆ

September 08, 2025 3:57 pm
ತುಮಕೂರು

ಧರ್ಮಸ್ಥಳದ ಸುತ್ತಮುತ್ತ ಅಸಹಜ ಸಾವ ಪ್ರಕರಣ: ಸಮರ್ಪಕ ತನಿಖೆ ನಡೆದು, ಸತ್ಯ ಹೊರಬರಬೇಕೆಂದು ಎಪಿಸಿಆರ್‌ನ ಒತ್ತಾಯ

September 08, 2025 3:30 pm
ತುಮಕೂರು

ಆ. ೦೬ ರಿಂದ ನೀರು ಸರಬರಾಜು ನೌಕರರು ಅನಿರ್ಧಿಷ್ಠಾವಧಿ ಮುಷ್ಕರ

September 08, 2025 3:22 pm
Our Youtube Channel
Our Picks

ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ

September 08, 2025 3:08 pm

ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ

August 25, 2025 2:24 pm

ಕೆ.ಎನ್.ರಾಜಣ್ಣ ವಜಾ ಖಂಡಿಸಿ ಧರಣಿ ಸತ್ಯಾಗ್ರಹ

August 25, 2025 2:14 pm

ಸೆ.೨೨ ರಿಂದ ದಸರಾ ಉತ್ಸವ

August 20, 2025 3:26 pm

ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಬಡ ಜನರ ಆಶಾಕಿರಣ ಡಿ. ದೇವರಾಜು ಅರಸು

August 20, 2025 3:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಮಂಜೂರಾದ ಅನುದಾನಕ್ಕನುಗುಣವಾಗಿ ಭೌತಿಕ ಪ್ರಗತಿ ಸಾಧಿಸಲು ಸೂಚನೆ

By News Desk BenkiyabaleSeptember 10, 2025 3:23 pm

ತುಮಕೂರು: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಮಂಜೂರಾದ ಅನುದಾನಕ್ಕೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸುವತ್ತ ವಿಶೇಷ ಗಮನ ನೀಡುವಂತೆ…

ಮೀಸಲಾತಿಯ ಗೊಂದಲಗಳ ನಿವಾರಣೆಗಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ :ಕೆ ಎಂ ರಾಮಚಂದ್ರಪ್ಪ

September 10, 2025 3:21 pm

ಗ್ರಾರಂಟಿ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಅನುಕೂಲ: ಡಾ. ಜಿ.ಪರಮೇಶ್ವರ

September 10, 2025 3:20 pm

ಸೆ.೧೦ ರಂದು ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಪ್ರತಿಭಟನೆ

September 08, 2025 3:57 pm
News by Date
September 2025
M T W T F S S
1234567
891011121314
15161718192021
22232425262728
2930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.