BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ
  • ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ
  • ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ
  • ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ
  • ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ
  • ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ
  • ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ
  • ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಾಜ್ಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೨೦೦ ಮೀಟರ್ ಪುತ್ಥಳಿ ಸ್ಥಾಪನೆ
ಇತರೆ ಸುದ್ಧಿಗಳು

ರಾಜ್ಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೨೦೦ ಮೀಟರ್ ಪುತ್ಥಳಿ ಸ್ಥಾಪನೆ

By News Desk BenkiyabaleUpdated:April 10, 2025 4:34 pm

ತುಮಕೂರು: ರಾಜ್ಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೨೦೦ ಮೀಟರ್ ಪುತ್ಥಳಿ ಸ್ಥಾಪನೆ, ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಎಲ್ಲಾ ಜಾತಿ, ಜನಾಂಗದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಉಚಿತ ಕೋಚಿಂಗ್ ಸೆಂಟರ್ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನಿಟ್ಟುಕೊಂಡು ಬೀದರನಿಂದ ಭೀಮ ಪ್ರಜಾ ಸಂಘ(ರಿ) ವತಿಯಿಂದ ಹೊರಟಿರುವ ಸ್ವಾಭಿ ಮಾನಿಗಳ ಕಾಲ್ನೆಡಿಗೆ ಜಾಥಾ ಇಂದು ತುಮಕೂರು ತಲುಪಿದ್ದು,ಅಂಬೇಡ್ಕರ್ ಅನುಯಾ ಯಿಗಳು, ಜಾಥವನ್ನು ಬರಮಾಡಿಕೊಂಡು ಬಿಳ್ಕೋಟ್ಟರು.
ತುಮಕೂರು ನಗರಕ್ಕೆ ಸ್ವಾಭಿಮಾನಿ ಕಾಲ್ನೇಡಿಗೆ ಜಾಥಾ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮ ಪ್ರಜಾ ಸಂಘ(ರಿ),ನ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈಟ್‌ಪೀಲ್ಡ್ ಮುರುಗೇಶ್,ದೇಶದಲ್ಲಿ ಹಲವು ಗಣ್ಯರ ಪತ್ರಿಮೆಗಳಿವೆ. ಗುಜರಾತ್‌ನಲ್ಲಿರುವ ಸರದಾರ್ ವಲ್ಲಬಾಯಿ ಪಟೇಲ್ ಪತ್ರಿಮೆ ದೇಶ ದಲ್ಲಿ ದೊಡ್ಡ ಪ್ರತಿಮೆಯಾಗಿದೆ.ಆದರೆ ಇಂದು ದೇಶ ನಡೆಯುತ್ತಿರುವುದು ಬಾಬಾ ಸಾಹೇಬರ ಸಂವಿ ಧಾನದಿಂದ.ಹಾಗಾಗಿಯೇ ಬಾಬಾ ಸಾಹೇಬರ ೨೦೦ ಮಿಟರ್ ಪ್ರತಿಮೆ ಸ್ಥಾಪಿಸುವ ಮೂಲಕ ಬಾಬಾ ಸಾಹೇಬರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮಾಡಬೇಕೆಂಬುದು ಭೀಮ ಪ್ರಜಾ ಸಂಘದ ಒತ್ತಾ ಯವಾಗಿದೆ ಎಂದರು.
ಕಳೆದ ಮಾರ್ಚ ೦೨ ರಿಂದ ಬೀದರ್‌ನಿಂದ ಹೊರಟ ಸ್ವಾಭಿಮಾನಿ ಕಾಲ್ನೇಡಿಗೆ ಜಾಥಾ ಏಪ್ರಿಲ್ ೧೪ ರಂದು ಬೆಂಗಳೂರು ತಲುಪಬೇಕಾಗಿತ್ತು. ಆದರೆ ಇದಕ್ಕೆ ಬದಲಾಗಿ ಏ.೧೭ ರಂದು ಬೆಂಗಳೂರು ತಲುಪಿ, ಅಂದೇ ಪ್ರೀಡಂ ಪಾರ್ಕಿನಲ್ಲಿ ಮುಕ್ತಾಯಗೊಳ್ಳಲಿದೆ. ಬಾಬಾ ಸಾಹೇಬರು ಹೇಳಿದಂತೆ ಶಿಕ್ಷಣವೊಂದೇ ಮನುಷ್ಯ ಗುಲಾಮಿತನದಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ.ಹಾಗಾಗಿ ಜಾತಿ, ಧರ್ಮ ನೋಡದೆ ಎಲ್ಲ ವರ್ಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ, ಎಲ್ಲ ವರ್ಗದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸುವAತಾಗಲು ಸರಕಾರ ಪ್ರತಿ ಜಿಲ್ಲೆಯಲ್ಲಿಯೂ ಉಚಿತವಾಗಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ಭೀಮ ಪ್ರಜಾ ಸಂಘದ ಆಶಯವಾಗಿದೆ.ಅಲ್ಲದೆ ಪ್ರತಿ ಗ್ರಾಮದಲ್ಲಿಯೂ ಸ್ಮಶಾ ನಕ್ಕಾಗಿ ಕನಿಷ್ಠ ೨ ಎಕರೆ ಜಾಗವನ್ನು ಮೀಸಲಿ ಡಬೇಕು.ಸಾವಿನಲ್ಲಿಯಾದರೂ ಜನರು ನೆಮ್ಮದಿಯನ್ನು ಕಾಣುವಂತಾಗಲಿ ಎಂದರು.
ಸರಕಾರದ ಲಾಂಚನದಲ್ಲಿ ಸತ್ಯ ಮೇವ ಜಯತೆ ಎಂಬ ಸಂಸ್ಕೃತ ಪದವನ್ನು ಹಿಂದಿಯಲ್ಲಿ ಬರೆಸಲಾಗಿದೆ.ಅದಕ್ಕೆ ಬದಲಾಗಿ ಕನ್ನಡ ಭಾಷೆಯ ಲ್ಲಿಯೇ ಸತ್ಯ ಮೇವ ಜಯತೆ ಬರೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.ಇದಕ್ಕಾಗಿ ಹತ್ತಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವೈಟ್‌ಫೀಲ್ಡ್ ಮುರುಗೇಶ ನುಡಿದರು.
ಏಪ್ರಿಲ್ ೧೭ ರಂದು ಪ್ರೀಡಂ ಪಾರ್ಕಿನಲ್ಲಿ ನಡೆಯು ವ ಕಾಲ್ನೇಡಿಗೆ ಜಾಥಾದ ಮುಕ್ತಾಯ ಸಮಾರಂಭದಲ್ಲಿ ಬೋದಿ ದತ್ತ ಬಂತೇಜಿ, ಡಿಸಿಪಿ ಸಿದ್ದರಾಜು, ರಾಜ್ಯದ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸಾರ್ವಜನಿಕರು, ಬಾಬಾ ಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುರುಗೇಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮ ಪ್ರಜಾ ಸೇನೆ ಜಿಲ್ಲಾ ಧ್ಯಕ್ಷ ಹಾಗೂ ಜಿಲ್ಲಾ ಆಟ್ರಾಸಿಟಿ ಕಮಿಟಿ ಸದಸ್ಯ ಕೋರ ರಾಜಣ್ಣ, ದಸಂಸ ಜಿಲ್ಲಾಧ್ಯಕ್ಷ ಪಿಎನ್.ರಾಮಯ್ಯ, ಅಖಿಲ ಭಾರತ ಅಂಬೇಡ್ಕ್ರ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರು, ದಲಿತ ಸ್ವಾಭಿಮಾನಿ ಸಂಘಟನೆಯ ಜಿಲ್ಲಾಧ್ಯಕ್ಷ ಬಂಡೆಕುಮಾರ್, ಬ್ರಹ್ಮಸಂದ್ರ ಮುನಿರಾಜು, ರಾಕೇಶ್, ಸಂಘಸೇವಕ ಬಂತೇಜಿ, ನಾಗರಾಜು, ಗಜ ಉಪಸ್ಥಿತರಿದ್ದರು.

(Visited 1 times, 1 visits today)
Ambedkar tumkur
Previous Articleಏ.೧೨ರಂದು ಡಾ.ರಾಜಕುಮಾರ್ ಪುಣ್ಯಸ್ಮರಣೆ
Next Article Next Post
News Desk Benkiyabale

Related Posts

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm news

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm news

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm news
ತಾಜಾ ಸುದ್ಧಿಗಳು
news

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm
news

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm
news

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm
news

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm
news

ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ

July 24, 2026 5:20 pm
news

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

July 24, 2026 4:03 pm
Our Youtube Channel
Our Picks

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm

ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ

July 24, 2026 5:20 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

By News Desk BenkiyabaleJuly 25, 2026 6:11 pm

ತುಮಕೂರು: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ…

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.