ತುಮಕೂರು: ಇತಿಹಾಸ ಪ್ರಸಿದ್ಧ ನಗರದ ಹೊರಪೇಟೆ ಮುಖ್ಯ ರಸ್ತೆಯ ದೇವಸ್ಥಾನದ ನೀಲಕಂಠೇಶ್ವರ ಸ್ವಾಮಿಯ ೧೦೬ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ವೈಭವದಿಂದ ನೆರವೇರಿತು. ನೇಯ್ಗೆ ಹಾಗೂ ಬಟ್ಟೆ ವ್ಯಾಪಾರದ ಕುಲಕಸುಬಿನ ಕುರುಹಿನ ಶೆಟ್ಟಿ ಸಮಾಜದವರ ಕುಲದೈವವಾದ ಈ ನೀಲಕಂಠೇಶ್ವರ ಸ್ವಾಮಿ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗದ ಕುಲಬಾಂಧವರು ಆಗಮಿಸಿ ಪೂಜೆ ಸಲ್ಲಿಸಿದರು.
ಶನಿವಾರ ಸಂಜೆ ನಡೆದ ಜಾತ್ರಾ ಮಹೋತ್ಸವವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಉದ್ಘಾಟಿಸಿದರು. ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾದ ನೀಲಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯ ಉತ್ಸವವು ಪೂರ್ಣಕುಂಭದೊAದಿಗೆ ಮಂಗಳ ವಾದ್ಯ, ಕಲಾತಂಡಗಳ ಪ್ರದರ್ಶನದೊಂದಿಗೆ ಹೊರಪೇಟೆ ರಸ್ತೆ, ಬಾರ್ಲೈನ್ ರಸ್ತೆ, ಎಂ.ಜಿ.ರಸ್ತೆ, ಗುಂಚಿ ವೃತ್ತ, ಶ್ರೀರಾಮನಗರ ಮಾರ್ಗದಲ್ಲಿ ಸಂಚರಿಸಿತು.
ಶ್ರೀ ನೀಲಕಂಠೇಶ್ವರಸ್ವಾಮಿ ಸೇವಾ ಟ್ರಸ್ಟ್ ಜಾತ್ರೋತ್ಸವದ ಅಂಗವಾಗಿ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಶುಕ್ರವಾರ ಲೋಕಕಲ್ಯಾಣಾರ್ಥ ಗಿರಿಜಾ ಕಲ್ಯಾಣೋತ್ಸವ, ಶ್ರೀಚಕ್ರ ಅನಾವರಣ ನಡೆಯಿತು. ಭಾನುವಾರ ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ಸಂಜೆ ಓಕಳಿ ಸೇವೆ, ನಂತರ ಉಯ್ಯಾಲೋತ್ಸವ, ರಾತ್ರಿ ಶಯನೋತ್ಸವ ಕಾರ್ಯಕ್ರಮಗಳನ್ನು ಶಾಸ್ತೊçÃಕ್ತವಾಗಿ ಏರ್ಪಡಿಸಲಾಗಿದೆ ಎಂದು ಸೇವಾ ಟ್ರಸ್ಟ್ನ ಟ್ರಸ್ಟಿ ಡಾ.ಎನ್.ವೆಂಕಟೇಶ್ ಹೇಳಿದರು.
ಈ ದೇವಸ್ಥಾನವನ್ನು ೫೨೫ ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಗಿದೆ. ಶ್ರೀಶೈಲದಲ್ಲಿ ಬಟ್ಟೆ ವ್ಯಾಪಾರ ಮಾಡವ ವ್ಯವಹಾರ ಮಾಡುತ್ತಿದ್ದ ಕುರುಹಿನಶೆಟ್ಟಿ ಸಮಾಜದವರು ಆಗ ಮೊಘಲರ ದಾಳಿಯಾದಾಗ ತಮ್ಮ ದೇವರನ್ನು ರಕ್ಷಿಸಿಕೊಳ್ಳಲು, ಅಲ್ಲಿ ಆರಾಧಿಸುತ್ತಿದ್ದ ಶಿವಲಿಂಗುವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತುಮಕೂರಿಗೆ ಬಂದು ಇಲ್ಲಿ ದೇವಸ್ಥಾನ ನಿರ್ಮಿಸಿ ನೀಲಕಂಠೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿದರು. ಆಗಿನಿಂದಲೂ ಇಲ್ಲಿ ಪೂಜಾ ಕೈಂಕರ್ಯಗಳು ಮುಂದುವರೆದಿವೆ ಎಂದು ಸೇವಾ ಟ್ರಸ್ಟ್ನ ಕಾರ್ಯಾಧ್ಯಕ್ಷ ಟಿ.ಪಿ.ನರಸಿಂಹಮೂರ್ತಿ ಹೇಳಿದರು.
೧೯೧೮ರಿಂದ ನಿರಂತರವಾಗಿ ಪ್ರತಿ ವರ್ಷ ನೀಲಕಂಠೇಶ್ವರಸ್ವಾಮಿಯ ಜಾತ್ರೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕಿರಿದಾಗಿದ್ದ ದೇವಸ್ಥಾನವನ್ನು ಸುಸಜ್ಜಿತವಾಗಿ ೧೯೭೪ರಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ನೂತನ ದೇವಸ್ಥಾನವನ್ನು ಆಗ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಜಗತ್ತಿನಲ್ಲಿರುವ ಎಲ್ಲಾ ಕುರುಹಿನ ಶೆಟ್ಟಿ ಸಮಾಜದವರಿಗೆ ಈ ನೀಲಕಂಠೇಶ್ವರ ಸ್ವಾಮಿ ಕುಲದೇವರು. ಹೀಗಾಗಿ ವಿವಿಧೆಡೆ ಇರುವ ಕುಲಬಾಂಧವರು ಇಲ್ಲಿ ಬಂದು ಪೂಜೆ, ಹರಕೆ ಸಲ್ಲಿಸುತ್ತಾರೆ ಎಂದರು.
ನೀಲಕAಠೇಶ್ವರಸ್ವಾಮಿ ಸೇವಾ ಟ್ರಸ್ ಅಧ್ಯಕ್ಷ ಜಿ.ಸೋಮಶೇಖರ್, ಕಾರ್ಯಾಧ್ಯಕ್ಷ ಟಿ.ಪಿ.ನರಸಿಂಹಮೂರ್ತಿ, ಉಪಾಧ್ಯಕ್ಷ ಎಸ್.ಎನ್.ಬಸವರಾಜು, ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ರಾಮಚಂದ್ರ, ಖಜಾಂಚಿ ಬಿ.ಕಮಲಾಕರ್, ಟ್ರಸ್ಟಿಗಳಾದ ಡಾ.ಎನ್.ವೆಂಕಟೇಶ್, ಟಿ.ಹೆಚ್.ಶಿವಾನಂದ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡ ಧನಿಯಾಕುಮಾರ್, ಕುರುಹಿನ ಶೆಟ್ಟಿ ಸಮಾಜದ ಜಿಲ್ಲಾಧ್ಯಕ್ಷ ಟಿ.ಹೆಚ್.ಯೋಗಾನಂದ್, ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಪಿ.ನಾಗವೇಣಿ, ಯುವಕರ ಸಂಘದ ಅಧ್ಯಕ್ಷ ಶ್ರೇಯಸ್ ಮಣಿಕಂಠ ಸೇರಿದಂತೆ ಪದಾಧಿಕಾರಿಗಳು, ಸಮಾಜದ ಮುಖಂಡರು ಜಾತ್ರೋತ್ಸವದ ನೇತೃತ್ವ ವಹಿಸಿದ್ದರು.
(Visited 1 times, 1 visits today)